ಭಾಷಾ ಪ್ರಚಾರ ಸಮಿತಿಯ ಅಧ್ಯಕ್ಷ RSS ಅನುಯಾಯಿ: ಕೇಂದ್ರ ವಿವಿ ಉಪಕುಲಪತಿಗಿಂತ ಹೆಚ್ಚಿನ ವೇತನ

Date:

2021ರ ನವೆಂಬರ್ 15ರ ಸಚಿವಾಲಯದ ಆದೇಶದಲ್ಲಿ ಗೌರವಾರ್ಥ ಸದಸ್ಯರು ಎಂದಿದ್ದು, 2023ರ ಡಿಸೆಂಬರ್‌ನಿಂದ ಸಚಿವಾಲಯವು ಶಾಸ್ತ್ರಿ ಅವರಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಪಾವತಿಸಲು ಪ್ರಾರಂಭಿಸಿದೆ.

ಕೇಂದ್ರವು 2021ರಲ್ಲಿ ಆರ್‌ಎಸ್‌ಎಸ್ ಅನುಯಾಯಿ ಚಾಮು ಕೃಷ್ಣಶಾಸ್ತ್ರಿ ಅವರನ್ನು ಭಾಷಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ. ಅವರ ಬಯೋ-ಡೇಟಾ ಕೋರಿ ‘ಟೆಲಿಗ್ರಾಫ್’ ಪತ್ರಿಕೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದು ಈ ಮಾಹಿತಿ ನೀಡಲು ಸಚಿವಾಲಯ ನಿರಾಕರಿಸಿದೆ ಎಂದು ವರದಿಯಾಗಿದೆ.

ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಮಾರ್ಗಗಳನ್ನು ಸೂಚಿಸಲು ಶಿಕ್ಷಣ ಸಚಿವಾಲಯವು 2021ರ ನವೆಂಬರ್‌ನಲ್ಲಿ ಭಾರತೀಯ ಭಾಷಾ ಸಮಿತಿ (ಬಿಬಿಎಸ್) ಸ್ಥಾಪಿಸಿದೆ. ಅದರ ಅಧ್ಯಕ್ಷರನ್ನಾಗಿ ಕರಾವಳಿ ಮೂಲದ ಬಂಟ್ವಾಳದ ಚಕ್ರಕೋಡಿ ಮೂಡಂಬೈಲು ಕೃಷ್ಣಶಾಸ್ತ್ರಿ ಎಂಬುವವರನ್ನು ನೇಮಿಸಲಾಗಿದೆ. ಇವರು 2023ರ ಡಿಸೆಂಬರ್‌ನಿಂದ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿಗಿಂತ ಹೆಚ್ಚಿನ ವೇತನವನ್ನು ಪಡೆಯುತ್ತಿದ್ದಾರೆ.

ಇದನ್ನು ಓದಿದ್ದೀರಾ? ಸಂವಿಧಾನಕ್ಕೆ ಅಪಾಯ ಎದುರಾಗಿರುವುದು ಆರ್‌ಎಸ್‌ಎಸ್‌ನವರಿಂದ: ಸಿದ್ದರಾಮಯ್ಯ ಕಿಡಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ವೇತನವನ್ನು ನಿರ್ಧರಿಸುವ ಸೂತ್ರವನ್ನು ಒದಗಿಸುವ ವಿನಂತಿಯನ್ನೂ ಸಚಿವಾಲಯವು ನಿರ್ಲಕ್ಷಿಸಿದೆ. ಕೃ‍ಷ್ಣಶಾಸ್ತ್ರಿ ಅವರು ಆರ್‌ಎಸ್‌ಎಸ್ -ಸಂಯೋಜಿತ ಸಂಸ್ಕೃತ ಭಾರತಿಯ ಸದಸ್ಯರಾಗಿದ್ದಾರೆ. ಇದು ಮಕ್ಕಳ ಶಿಬಿರಗಳನ್ನು ನಡೆಸುತ್ತದೆ. ಈ ಮೂಲಕ ಮಕ್ಕಳಿಗೆ ತಮ್ಮ ಸಿದ್ಧಾಂತದ ಪ್ರಚಾರ ಮಾಡುತ್ತದೆ.

ಬಿಬಿಎಸ್ ಇತರ ಇಬ್ಬರು ಸದಸ್ಯರನ್ನು ಹೊಂದಿದೆ. ಇಬ್ಬರೂ ಪದನಿಮಿತ್ತ: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನಿರ್ದೇಶಕರು ಮತ್ತು ನವದೆಹಲಿಯ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾರೆ.

ಎಲ್ಲಾ ಸದಸ್ಯರು ಗೌರವಾರ್ಥವಾಗಿ ಕೆಲಸ ಮಾಡುತ್ತಾರೆ ಎಂದು ಬಿಬಿಎಸ್ ಅನ್ನು ಸ್ಥಾಪಿಸಿದ 2021ರ ನವೆಂಬರ್ 15ರ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಸಚಿವಾಲಯವು 2023ರ ಡಿಸೆಂಬರ್‌ನಿಂದ ಶಾಸ್ತ್ರಿ ಅವರಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಪಾವತಿಸಲು ಪ್ರಾರಂಭಿಸಿದೆ. ಕೇಂದ್ರ ವಿಶ್ವವಿದ್ಯಾಲಯದ ಉಪ ಕುಲಪತಿ ಮಾಸಿಕ 2.1 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ. ಇದಕ್ಕಿಂತ ಅಧಿಕ ವೇತನವನ್ನು ಈ ಆರ್‌ಎಸ್ಎಸ್‌ನ ಅನುಯಾಯಿ ಪಡೆಯುತ್ತಿದ್ದಾರೆ.

ಇನ್ನು ಆರ್‌ಟಿಐ ಅರ್ಜಿಗೆ ದೊರೆತ ಪ್ರತಿಕ್ರಿಯೆಯಲ್ಲಿ ಕೃಷ್ಣಶಾಸ್ತ್ರಿ ಅವರಿಗೆ ಸರ್ಕಾರಿ ವಸತಿ ಒದಗಿಸುವ ಸಚಿವಾಲಯದ ನಿರ್ಧಾರವೂ ಬಹಿರಂಗವಾಗಿದೆ. ಬಿಬಿಎಸ್ ಅನ್ನು ಸ್ಥಾಪಿಸುವ ನವೆಂಬರ್ 15ರ ಆದೇಶ ಮತ್ತು 2023ರ ಡಿಸೆಂಬರ್ 28ರ ಅಧ್ಯಕ್ಷರ ಅಧಿಕಾರಾವಧಿಯನ್ನು ವಿಸ್ತರಿಸುವ, ಅವರಿಗೆ 2.5 ಲಕ್ಷ ರೂಪಾಯಿ ಮಾಸಿಕ ಪಾವತಿಯನ್ನು ಘೋಷಿಸುವ ಆದೇಶದ ಪ್ರತಿಯನ್ನು ಸಚಿವಾಲಯವು ಒದಗಿಸಿದೆ.

ಇದನ್ನು ಓದಿದ್ದೀರಾ? ಬಿಜೆಪಿಯಿಂದ ಮತ್ತೊಬ್ಬ ಯೋಗಿಗೆ ಸಿಎಂ ಪಟ್ಟ? ಯಾರೀತ ಬಾಬಾ ಬಾಲಕನಾಥ?

ಆದರೆ ಕೃಷ್ಣಶಾಸ್ತ್ರಿ ಅವರ ಬಯೋ-ಡೇಟಾದ ಪ್ರತಿಯನ್ನು ಒದಗಿಸಲು ಅಥವಾ ಅವರ ವೇತನವನ್ನು ಯಾವ ಆಧಾರದ ಮೇಲೆ ನಿಗದಿಪಡಿಸಲಾಗಿದೆ ಎಂಬುದನ್ನು ಸಚಿವಾಲಯ ವಿವರಿಸಿಲ್ಲ. ಬಯೋ-ಡೇಟಾದ ಪ್ರತಿ ಮತ್ತು ಇತರ ವಿವರಗಳನ್ನು ಕೋರಿ ಮಾಧ್ಯಮ ಮೇಲ್ಮನವಿ ಸಲ್ಲಿಸಿದ್ದು, ಈ ಮಾಹಿತಿ ಲಭ್ಯವಿಲ್ಲ ಎಂದು ಮೇಲ್ಮನವಿ ಪ್ರಾಧಿಕಾರದ ಸುಮನ್ ದೀಕ್ಷಿತ್ ಉತ್ತರಿಸಿದ್ದಾರೆ.

ಕೃಷ್ಣಶಾಸ್ತ್ರಿ ಅವರ ಸಂಶೋಧನಾ ಪ್ರಕಟಣೆಗಳ ವಿವರಗಳನ್ನು ಮತ್ತು ಅವರು ತಮ್ಮ ಬಯೋ-ಡೇಟಾವನ್ನು ಸರ್ಕಾರಕ್ಕೆ ಒದಗಿಸಿದ್ದಾರೆಯೇ ಎಂದು ಪ್ರಶ್ನಿಸಿ ಕೃಷ್ಣಶಾಸ್ತ್ರಿ ಅವರಿಗೆ ಇಮೇಲ್ ಅನ್ನೂ ಮಾಧ್ಯಮ ಸಂಸ್ಥೆ ಕಳುಹಿಸಿದೆ. ಆದರೆ ಕೃಷ್ಣಶಾಸ್ತ್ರಿ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...