ಅನಂತ್ ಅಂಬಾನಿಯ ಪಾದಯಾತ್ರೆ ಪ್ರಹಸನಕ್ಕೆ ಸನಾತನ ಧರ್ಮವೇ ಸರಕು!

Date:

ದೇಶದ ಪ್ರಧಾನಿ ಮೋದಿ(Modi) ಹಾಗೂ ದೇಶದ ಅತಿದೊಡ್ಡ ಶ್ರೀಮಂತ ಅಂಬಾನಿ(Ambani)- ಇಬ್ಬರೂ ಸನಾತನ ಧರ್ಮದ ಬಗ್ಗೆಯೇ ಮಾತನಾಡುತ್ತಾರೆ. ಅವರು ರಾಜಕಾರಣಿ, ಇವರು ಉದ್ಯಮಿ. ಇಬ್ಬರಿಗೂ ಅದರಿಂದ ಲಾಭವಿದೆ. ಇಬ್ಬರಿಗೂ ಅದೇ ಅಸ್ತ್ರ ಮತ್ತು ಗುರಾಣಿಯಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಅನಂತ್ ಅಂಬಾನಿಯವರು ಗುಜರಾತಿನ ಜಾಮ್ ನಗರದಿಂದ ದ್ವಾರಕೆಯವರೆಗೆ ಹಮ್ಮಿಕೊಂಡಿದ್ದ 140 ಕಿಲೋಮೀಟರ್ ದೂರದ ಆಧ್ಯಾತ್ಮಿಕ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.

ಅನಂತ್ ಅಂಬಾನಿ ದೇಶದ ಅತ್ಯಂತ ಶ್ರೀಮಂತ ಉದ್ಯಮಿಗಳಾದ ಮುಖೇಶ್ ಮತ್ತು ನೀತಾ ಅಂಬಾನಿಯವರ ಕಿರಿಯ ಪುತ್ರ. 30 ವರ್ಷಕ್ಕೇ 35 ಸಾವಿರ ಕೋಟಿಯ ಒಡೆಯ. ಇಂತಹ ಅನಂತ್ ಅಂಬಾನಿ, ಕೋಟಿಗಟ್ಟಲೆ ವ್ಯವಹಾರವನ್ನು ಬಿಟ್ಟು, ಆಧ್ಯಾತ್ಮಿಕ ಪಾದಯಾತ್ರೆ ಹಮ್ಮಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ. ಸನಾತನ ಧರ್ಮದತ್ತ ಒಲವು ತೋರಿದ್ದು ಕುತೂಹಲ ಕೆರಳಿಸಿದೆ.

ಜೊತೆಗೆ ಅನಂತ್ ಅಂಬಾನಿಯವರ ಆಧ್ಯಾತ್ಮಿಕ ಪಾದಯಾತ್ರೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹಿಂದುಳಿದ ಭಯಕ್ಕೆ ಬಿದ್ದ ಸುದ್ದಿ ಮಾಧ್ಯಮಗಳು, ಅನಂತ್ ಹೆಜ್ಜೆಗೆ ಹೆಜ್ಜೆ ಹಾಕಿವೆ. ಪ್ರತಿ ನಡೆಯನ್ನು ತೂಕದ ನಡೆಯನ್ನಾಗಿ ಚಿತ್ರಿಸಿವೆ, ಚಿತ್ರವತ್ತಾಗಿ ಬಣ್ಣಿಸಿ ದೇಶದ ಜನತೆಗೆ ಬಡಿಸಿವೆ. ಹಾಗಾಗಿ ಅದು ಅನಂತ್ ಮಾಡಿದ ಪಾದಯಾತ್ರೆಗಿಂತ, ಮಾಧ್ಯಮಗಳು ಮಾಡಿದ ಪಾದಯಾತ್ರೆ ಎಂದು ಮತ್ತೊಂದು ಸುದ್ದಿ ಮಾಡಬೇಕಾಗಿದೆ, ಇರಲಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಶಿಂದೆ ಟೀಕೆ ಪ್ರಕರಣ | ಎಫ್‌ಐಆರ್ ರದ್ದು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕುನಾಲ್ ಕಾಮ್ರಾ

ಅನಂತ್ ಅಂಬಾನಿಯವರ ಆರೋಗ್ಯ ಸ್ಥಿತಿ ಅಷ್ಟು ಸರಿ ಇಲ್ಲ. 108 ಕೆಜಿ ತೂಗುವ ಅಗಾಧ ದೇಹವನ್ನು ಹೊತ್ತುಕೊಂಡು ನಡೆಯಬೇಕಾದ ಅನಂತ್‌ ಅಂಬಾನಿಗೆ, ಅಪರೂಪದ ಹಾರ್ಮೋನ್ ಅಸ್ವಸ್ಥತೆಯಾದ ಕುಶಿಂಗ್ ಸಿಂಡ್ರೋಮ್ ಇದೆ. ಜೊತೆಗೆ ಭಾರೀ ಬೊಜ್ಜು, ಆಸ್ತಮಾ ಮತ್ತು ತೀವ್ರ ಶ್ವಾಸಕೋಶದ ಕಾಯಿಲೆಯಿಂದಲೂ ನರಳುತ್ತಿದ್ದಾರೆ. ದೇಹ ಮತ್ತು ಆರೋಗ್ಯದ ಸ್ಥಿತಿ ಹೀಗಿರುವಾಗ ಪಾದಯಾತ್ರೆಯ ಅಗತ್ಯವೇನು ಎಂಬುದು ಹಲವರ ಪ್ರಶ್ನೆಯಾಗಿತ್ತು.

ಏಪ್ರಿಲ್ 10ರಂದು ಜನಿಸಿದ ಅನಂತ್, ತಮ್ಮ 30ನೇ ಜನ್ಮದಿನವನ್ನು ದ್ವಾರಕೆಯ ಶ್ರೀ ದ್ವಾರಕಾಧೀಶ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಪೂಜೆ ಸಲ್ಲಿಸುವ ಮೂಲಕ ಆಚರಿಸಿಕೊಳ್ಳಬೇಕೆಂಬ ಹಂಬಲವನ್ನು ತಂದೆ ಮುಖೇಶ್, ತಾಯಿ ನೀತಾ ಬಳಿ ವ್ಯಕ್ತಪಡಿಸಿದ್ದರಂತೆ. ಅದಕ್ಕೆ ಅವರು ಅನಂತ್‌ರಿಗೆ ಝೆಡ್ ಸೆಕ್ಯುರಿಟಿಗಳಿಗೆ ಕೇಸರಿ ವಸ್ತ್ರ ತೊಡಿಸಿದ್ದರು. ಅವರ ಹಿಂದೆ ಹೆಜ್ಜೆ ಹಾಕಲು ಆಳುಗಳು, ವೈಭವೋಪೇತ ಕಾರುಗಳು, ಸಕಲ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದರು.

ಶ್ರೀಮಂತ ಉದ್ಯಮಿಯೊಬ್ಬರ ಪುತ್ರ ಸಾಮಾನ್ಯನಂತೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಸುಮ್ಮನಿರುವುದುಂಟೇ? ಅವರು ಶ್ರೀಮಂತರು, ಪ್ರಧಾನಿಯ ಹೆಗಲ ಮೇಲೆ ಕೈಹಾಕಿ ಮಾತನಾಡಿಸುವಷ್ಟು ಪ್ರಭಾವಿಗಳು. ಆ ಕಾರಣಕ್ಕೇ ಅವರನ್ನು ಕಾಣಲು, ಕೈ ಮುಗಿಯಲು, ಕಾಲಿಗೆ ಬೀಳಲು, ಫೋಟೋ ಕ್ಲಿಕ್ಕಿಸಲು, ಬೆನ್ನಿಗೆ ನಿಂತು ಬೆಂಬಲಿಸಲು ಜನ ಸಿದ್ಧರಾಗಿದ್ದರು. ಅದರಲ್ಲೂ ಅದು ದೇವರು-ಧರ್ಮಕ್ಕೆ ಸಂಬಂಧಿಸಿದ್ದರಿಂದ, ಅಪಸ್ವರವೆತ್ತುವವರು ಕೂಡ ತಲೆಮರೆಸಿಕೊಂಡಿದ್ದರು.

ಇದನ್ನು ಓದಿದ್ದೀರಾ?: ವಕ್ಫ್‌ ತಿದ್ದುಪಡಿ ಮಸೂದೆ 2025 | ತಾವೇ ಗೊಂದಲ ಸೃಷ್ಟಿಸಿ, ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಿದೆ ಮೋದಿ ಸರ್ಕಾರ!

ಪಾದಯಾತ್ರೆ ಮುಗಿಸುವುದನ್ನೇ ಕಾಯುತ್ತಿದ್ದ ಮಾಧ್ಯಮಗಳು, ಅನಂತ್ ಅಂಬಾನಿಗೆ ಮುಗಿಬಿದ್ದಿವು. ಅದಕ್ಕಾಗಿಯೇ ಕಾಯುತ್ತಿದ್ದ ನೂರರ ಗಡಿದಾಟಿದ ಹಿರಿಯನಂತೆ, ‘ನಾನು ನಮ್ಮ ಯುವಜನತೆಗೆ ಹೇಳುವುದೇನೆಂದರೆ, ಸನಾತನ ಧರ್ಮದ ಬಗ್ಗೆ ನಂಬಿಕೆ ಇಡಬೇಕು. ದೇವರನ್ನು ಭಕ್ತಿ-ಗೌರವದಿಂದ ಪೂಜಿಸಬೇಕು. ದೇವರಿರುವಾಗ, ಹೆದರುವ ಅಗತ್ಯವೇ ಇಲ್ಲ’ ಎಂಬ ಅಣಿಮುತ್ತುಗಳನ್ನು ಉದುರಿಸಿದರು.

ಅನಂತ್ ಹುಟ್ಟುವಾಗಲೇ ಚಿನ್ನದ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವರು. 30ನೇ ವಯಸ್ಸಿಗೇ 35 ಸಾವಿರ ಕೋಟಿ ಒಡೆಯರು. ಸಾಲದೆಂದು, ಅವರ ಅಪ್ಪ-ಅಮ್ಮ ಕೂಡ ಅದೆಷ್ಟೋ ಕೋಟಿಗಳ ಒಡೆಯರು. ಕುಬೇರನೇ ಅವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರುವಾಗ; ದೇಶದ ಪ್ರಧಾನಿಯೇ ನಡುಬಗ್ಗಿಸಿ ನಮಸ್ಕರಿಸುವಾಗ ಹೆದರಬೇಕಾದವರು ಯಾರು?

ಇನ್ನು ಅನಂತ್ ಅಂಬಾನಿ ಮಹಾನ್ ದೈವಭಕ್ತರು. ದೇಶದ ಧಾರ್ಮಿಕ ತಾಣಗಳಾದ ಬದ್ರಿನಾಥ, ಕೇದಾರನಾಥ, ಕಾಮಾಕ್ಯ, ನಾಥದ್ವಾರ, ಕಾಳಿಘಾಟ್ ಮತ್ತು ಕುಂಭಮೇಳದಲ್ಲಿ ಮುಳುಗೆದ್ದವರು. ತಮ್ಮ ಪಾದಯಾತ್ರೆಯುದ್ದಕ್ಕೂ ಹನುಮಾನ್ ಚಾಲೀಸಾ, ಸುಂದರಕಾಂಡ ಮತ್ತು ದೇವಿ ಸ್ತೋತ್ರವನ್ನು ಪಠಿಸುತ್ತಿದ್ದರು.

ಅನಂತ್ ಅಂಬಾನಿ ಆಡುವುದನ್ನು-ಮಾಡುವುದನ್ನು ಇಂದು ದೇಶದ ರಾಜಕಾರಣಿಗಳು, ಸನ್ಯಾಸಿಗಳು, ಮಠಾಧೀಶರು ಕೂಡ ಆಡುತ್ತಿದ್ದಾರೆ-ಮಾಡುತ್ತಿದ್ದಾರೆ. ಅದನ್ನು ಪತ್ರಕರ್ತರು ಕೂಡ ಅತಿರಂಜಿತವಾಗಿ ವರ್ಣಿಸುತ್ತಿದ್ದಾರೆ. ಏಕೆಂದರೆ ಸನಾತನ ಧರ್ಮಕ್ಕೆ ಸದ್ಯ ಮಾರ್ಕೆಟ್ ಇದೆ. ಅದನ್ನೇ ಮುಂದಿಟ್ಟು ಮತ್ತೊಂದು ಧರ್ಮದವರನ್ನು ಸದೆಬಡಿಯಬಹುದಾಗಿದೆ. ಅದರ ಬಲದಿಂದ ಅಧಿಕಾರಕ್ಕೆ ಏರಬಹುದಾಗಿದೆ. ಅಧಿಕಾರದ ಬಲದಿಂದ ಏನೆಲ್ಲ ಮಾಡಬಹುದೋ, ಅದೆಲ್ಲವನ್ನು ಮಾಡಲಾಗುತ್ತಿದೆ. ದೇಶದ ಜನತೆ ಸುಮ್ಮನೆ ನೋಡುತ್ತಿದೆ.

ಅನಂತ್ ಅಂಬಾನಿ1 1

ಹಾಗಾಗಿ ದೇಶದ ಪ್ರಧಾನಿಯಾದ ಮೋದಿ ಹಾಗೂ ದೇಶದ ಅತಿದೊಡ್ಡ ಶ್ರೀಮಂತ ಅಂಬಾನಿ- ಇಬ್ಬರೂ ಸನಾತನ ಧರ್ಮದ ಬಗ್ಗೆಯೇ ಮಾತನಾಡುತ್ತಾರೆ. ಸನಾತನ ಧರ್ಮವೇ ಶ್ರೇಷ್ಠ ಎನ್ನುತ್ತಾರೆ. ದೇವರನ್ನು ನಂಬಿ, ಒಳ್ಳೆಯದಾಗುತ್ತದೆ ಎನ್ನುತ್ತಾರೆ. ಆಚರಣೆಯನ್ನು ಆದಷ್ಟು ಸಾರ್ವಜನಿಕಗೊಳಿಸುತ್ತಾರೆ. ಅವರು ರಾಜಕಾರಣಿ, ಇವರು ಉದ್ಯಮಿ. ಇಬ್ಬರಿಗೂ ಅದರಿಂದ ಲಾಭವಿದೆ. ಇಬ್ಬರಿಗೂ ಅದೇ ಅಸ್ತ್ರ ಮತ್ತು ಗುರಾಣಿಯಾಗಿದೆ.

ಇಂತಹ ಸಂದರ್ಭದಲ್ಲಿ, ಬದುಕಲು ಕಲಿಯಿರಿ ಪಠ್ಯ ಅಳವಡಿಸಿಕೊಂಡಿರುವ ಇವತ್ತಿನ ಸುದ್ದಿ ಮಾಧ್ಯಮಗಳು ಪಾದಯಾತ್ರೆ ಮಾಡುವ ಅಂಬಾನಿಯನ್ನು ಹಾಡಿ ಹೊಗಳದೆ, ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಬಡ ಬೋರನ ಬಗ್ಗೆ ಬರೆಯುವುದುಂಟೇ? ಗವಿಯಲ್ಲಿ ಕೂತು ಧ್ಯಾನ ಮಾಡುವ ಮೋದಿಯನ್ನು ತೋರಿಸದೆ, ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತುವ ಹಳ್ಳಿ ಹೈದನನ್ನು ತೋರಿಸುವುದುಂಟೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...