ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಆಡಿದ ವಿಚಾರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಭಾರತೀಯ ಕ್ರಿಕೆಟ್ ತಂಡವನ್ನು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಸೋಮವಾರ ಟೀಕಿಸಿದ್ದಾರೆ. “ನೈಜ ದೇಶಭಕ್ತರು ಪಾಕ್ ವಿರುದ್ಧದ ಪಂದ್ಯ ನೋಡಿಲ್ಲ” ಎಂದು ರಾವತ್ ಹೇಳಿದ್ದಾರೆ.
2025ರ ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಐದು ವಿಕೆಟ್ಗಳ ಜಯವನ್ನು ಸಾಧಿಸಿದೆ. ಆದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಪಡೆಯಲು ನಿರಾಕರಿಸಿ, ಟ್ರೋಫಿ ಇಲ್ಲದೆ ಟೀಮ್ ಇಂಡಿಯಾ ಸಂಭ್ರಮಿಸಿದೆ. ಈಗಾಗಲೇ ರಾಜಕೀಯ ವಿವಾದಕ್ಕೆ ನಾಂದಿ ಹಾಡಿರುವ ಈ ಪಂದ್ಯವು ಗೆಲುವಿನ ಬಳಿಕ ತಂಡದ ನಿರ್ಧಾರದಿಂದಾಗಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಓದಿದ್ದೀರಾ? ನಖ್ವಿಯಿಂದ ಟ್ರೋಫಿ ಸ್ವೀಕರಿಸದ ಭಾರತ ತಂಡ, ಕಪ್ ಇಲ್ಲದೇ ಸಂಭ್ರಮಿಸಿದ ಆಟಗಾರರು
ಈ ಬಗ್ಗೆ ಎಕ್ಸ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಸಂಜತ್ ರಾವತ್, “ಕೇವಲ 15 ದಿನಗಳ ಹಿಂದೆ, ಸರಣಿಯ ಆರಂಭದಲ್ಲಿ, ಅವರು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರೊಂದಿಗೆ ಫೋಟೋಗಾಗಿ ಕೈಕುಲುಕಿದ್ದು, ನಗುತ್ತಿದ್ದರು. ಆದರೆ ಈಗ” ಎಂದು ಪ್ರಶ್ನಿಸಿದ್ದಾರೆ.
“ಕ್ಯಾಮೆರಾಗಳಿಗಾಗಿ ಪೂರ್ಣ ಪ್ರಮಾಣದ ರಾಷ್ಟ್ರೀಯತಾವಾದಿಯ ನಾಟಕವಾಡಲಾಗುತ್ತಿದೆ. ದೇಶಭಕ್ತಿ ನಿಜವಾಗಿಯೂ ನಿಮ್ಮ ರಕ್ತದಲ್ಲಿದ್ದರೆ, ನೀವು ಪಾಕಿಸ್ತಾನದೊಂದಿಗೆ ಮೈದಾನಕ್ಕೆ ಕಾಲಿಡುತ್ತಿರಲಿಲ್ಲ. ಇದು ಬರೀ ನಾಟಕ. ಜನರೊಂದಿಗೆ ಆಟವಾಡಲಾಗುತ್ತಿದೆ” ಎಂದು ಸಂಜಯ್ ರಾವತ್ ಟೀಕಿಸಿದ್ದಾರೆ.
Just 15 days ago, at the start of the series, they were shaking hands and smiling for photos with Pakistan’s minister Mohsin Naqvi.
— Sanjay Raut (@rautsanjay61) September 29, 2025
And now? Full-on nationalist drama for the cameras!
If patriotism was truly in your blood, you wouldn’t have even stepped on the field with… pic.twitter.com/jX81sfdMx2
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಾವತ್, “ಬಿಜೆಪಿಯ ನಕಲಿ ದೇಶಭಕ್ತರು ಮತ್ತು ಭಕ್ತರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ನಿಜವಾದ ದೇಶಭಕ್ತರು ನಿನ್ನೆಯ ಪಂದ್ಯವನ್ನು ವೀಕ್ಷಿಸಲಿಲ್ಲ. ನೀವು ಪಿಸಿಬಿ ಮುಖ್ಯಸ್ಥ ನಖ್ವಿ ಅವರಿಂದ ಟ್ರೋಫಿಯನ್ನು ತೆಗೆದುಕೊಳ್ಳಲಿಲ್ಲ, ಆದರೆ ನಾನು ಭಾರತೀಯ ನಾಯಕ ಅವರೊಂದಿಗೆ ಕೈಕುಲುಕುವುದು, ಚಹಾ ಕುಡಿಯುವುದು ಮತ್ತು ಚಿತ್ರಗಳನ್ನು ಕ್ಲಿಕ್ ಮಾಡುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದೇನೆ. ಸಾರ್ವಜನಿಕರು ಮೂರ್ಖರು ಎಂದು ನೀವು ಭಾವಿಸುತ್ತೀರಾ” ಎಂದು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು “ಭಾರತೀಯ ಸೇನೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಮಡಿದ ಜನರಿಗೆ ಮಾಡಿದ ಅವಮಾನ” ಎಂದು ಕರೆದಿರುವ ರಾವತ್, “ನಮ್ಮ ಪ್ರಶ್ನೆ, ನೀವು ಪಾಕಿಸ್ತಾನದೊಂದಿಗೆ ಏಕೆ ಆಟವಾಡುತ್ತಿದ್ದೀರಿ? ಹುತಾತ್ಮರಾದ ಸೈನಿಕರನ್ನು ಮತ್ತು ಪಹಲ್ಗಾಮ್ನಲ್ಲಿ ಮಡಿದ ಜನರನ್ನು ನೀವು ಅವಮಾನಿಸಬಾರದು. ನೀವು ಟ್ರೋಫಿಯನ್ನು ತೆಗೆದುಕೊಳ್ಳಲಿಲ್ಲ. ಅವರ ನಾಯಕನೊಂದಿಗೆ ಕೈಕುಲುಕಲಿಲ್ಲ, ಆದರೆ ನಂತರ ನೀವು ಪಂದ್ಯವನ್ನು ಏಕೆ ಆಡಿದ್ದೀರಿ? ಈ ನಾಟಕವನ್ನು ನಿಲ್ಲಿಸಿ” ಎಂದು ಹೇಳಿದ್ದಾರೆ.
VIDEO | "It's all a stunt", says Shiv Sena (UBT) MP Sanjay Raut on Indian Team refusing to accept Asia Cup trophy from ACC Chairman Mohsin Naqvi.
— Press Trust of India (@PTI_News) September 29, 2025
(Full video available on PTI Videos – https://t.co/n147TvrpG7) pic.twitter.com/9ofG36mpa0
ಇದಲ್ಲದೆ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯ ವಕ್ತಾರ ಅತುಲ್ ಲೊಂಡೆ ಪಾಟೀಲ್ ಅವರೂ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಮತ್ತು ಅವರ ಮಗ ಜಯ್ ಶಾ ಅವರು ಪಾಕಿಸ್ತಾನ ತಂಡವನ್ನು ಏಕೆ ಹೊರಹಾಕಲಿಲ್ಲ ಎಂದು ಪ್ರಶ್ನಿಸಿದರು.
“‘ಆಪರೇಷನ್ ಸಿಂಧೂರ ಕೊನೆಗೊಂಡಿದೆಯೇ? ಸಂಬಂಧಗಳನ್ನು ಸಾಮಾನ್ಯಗೊಳಿಸಲು ಆಟವನ್ನು ಆಡುತ್ತಿದ್ದಾರೆಯೇ? ಅಥವಾ ಕಾರ್ಯಾಚರಣೆಯ ಮಧ್ಯದಲ್ಲಿ ಹೇಗೆ ಆಟವಾಡಿದರು? ಹಣಕ್ಕಾಗಿ ನಡೆಯುತ್ತಿದೆಯೇ? ಅಮಿತ್ ಶಾ ಇದನ್ನು ಐಸಿಸಿ ಆಯೋಜಿಸಿದೆ ಎಂದು ಹೇಳುತ್ತಾರೆ. ಹಾಗಾದರೆ ಐಸಿಸಿ, ಅವರ ಮಗನ ಅಧ್ಯಕ್ಷತೆಯಲ್ಲಿ, ಪಾಕಿಸ್ತಾನವನ್ನು ಏಕೆ ಹೊರಹಾಕಲು ಸಾಧ್ಯವಿಲ್ಲ” ಎಂದು ಕೇಳಿದ್ದಾರೆ.
ಏನಿದು ಏಷ್ಯಾ ಕಪ್ ಟ್ರೋಫಿ ವಿವಾದ?
2025ರ ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ, ಭಾರತ ತಂಡವು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ, ಪಿಸಿಬಿ ಅಧ್ಯಕ್ಷ ಮತ್ತು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದೆ. ಭಾನುವಾರ ದುಬೈನಲ್ಲಿ ನಡೆದ ಫೈನಲ್ನಲ್ಲಿ ಭಾರತ ಪಾಕಿಸ್ತಾನವನ್ನು ಐದು ವಿಕೆಟ್ಗಳಿಂದ ಸೋಲಿಸಿದೆ.





