ಸಾಮಾಜಿಕ ನ್ಯಾಯದ ಕಗ್ಗೊಲೆಗೆ ಸಿದ್ಧವಾದ ಸಿದ್ದರಾಮಯ್ಯ ಸರ್ಕಾರ

Date:

ನಮ್ಮ ಸಂವಿಧಾನಬದ್ಧ ಹಕ್ಕು ಸಿಕ್ಕಿದೆ ಎಂದು ನಾವು ಸಂಭ್ರಮಿಸುತ್ತಿರುವ ಹೊತ್ತಲ್ಲೇ, ಸಿಕ್ಕ ನ್ಯಾಯವನ್ನು ಜಾರಿಗೆ ತರದಂತೆ ವ್ಯವಸ್ಥಿತವಾದ ಒಳಸಂಚು ನಡೆಯುತ್ತಿರುವುದು ಕ್ರೂರ ಅಸ್ಪೃಶ್ಯತೆಯ ಮತ್ತೊಂದು ರೂಪವೇ ಆಗಿದೆ.

ರಾಜ್ಯಪಾಲರು ಒಳಮೀಸಲಾತಿ ಬಿಲ್‌ಗೆ ಅಂಕಿತ ಹಾಕಿದ ಮೇಲೂ, ಸರ್ಕಾರ ಹಳೆಯ ಪದ್ಧತಿಯಲ್ಲೇ 56,432 ಹುದ್ದೆಗಳ ನೇಮಕಾತಿಗೆ ಮುಂದಾಗಿರುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ; ಇದು ಮಾದಿಗ ಮತ್ತು ಇತರ ಶೋಷಿತ ಸಮುದಾಯಗಳ ದಶಕಗಳ ಹೋರಾಟಕ್ಕೆ ಬಗೆದ ದ್ರೋಹ.

ಮಾನ್ಯ ಮುಖ್ಯಮಂತ್ರಿ ಹಾಗೂ ಸಚಿವರುಗಳೇ, ಕಣ್ಣೊರೆಸುವ ತಂತ್ರ ಬೇಡ. ಒಂದು ಕೈಯಲ್ಲಿ ‘ಒಳಮೀಸಲಾತಿ’ಯ ಹಕ್ಕು ಕೊಟ್ಟಂತೆ ಕೊಟ್ಟು,ನಟಿಸಿ, ಇನ್ನೊಂದು ಕೈಯಲ್ಲಿ ಸಾವಿರಾರು ಉದ್ಯೋಗಗಳನ್ನು ಹಳೆಯ ಪದ್ಧತಿಯಲ್ಲೇ ಭರ್ತಿ ಮಾಡಲು ಹೊರಟಿರುವುದು ಶೋಷಿತರ ಬದುಕಿನ ಜೊತೆ ಆಡುತ್ತಿರುವ ಕ್ರೂರ ಚೆಲ್ಲಾಟವೇ ಸರಿ. ನಿಮ್ಮ ಸರ್ಕಾರ ಕಾನೂನು ಮತ್ತು ಸಂವಿಧಾನವನ್ನು ಗೌರವಿಸುವುದೇ ಆಗಿದ್ದಲ್ಲಿ ಪ್ರತಿಯೊಂದು ನೇಮಕಾತಿಯಲ್ಲೂ ಒಳಮೀಸಲಾತಿ ಜಾರಿಯಾಗಲೇಬೇಕು. ಇಲ್ಲವಾದಲ್ಲಿ ಮಾದಿಗ ಸಮುದಾಯ ನಿಮ್ಮನ್ನು ಎಂದಿಗೂ ಕ್ಷಮಿಸಲಾರದು. ನಾಡಿನಾದ್ಯಂತ ನಿಮ್ಮ ರಾಜಕೀಯದ ಶಕ್ತಿಯನ್ನು ಕುಗ್ಗಿಸುವುದಕ್ಕೆ ಇಡೀ ಸಮುದಾಯವೇ ಶ್ರಮಿಸುತ್ತದೆ, ಎಚ್ಚರ‌!

ನಿಮ್ಮ ಸರ್ಕಾರಕ್ಕೆ ಕಿಂಚಿತ್ತಾದರೂ ನೈತಿಕ ಹೊಣೆಗಾರಿಕೆ ಇದೆಯೇ? ನಿಮಗೆ ಬದ್ಧತೆ ಇಲ್ಲವೇ? ನೀವೇ ತಂದ ಕಾನೂನನ್ನು ನೀವೇ ಜಾಣತನದಿಂದ ಕಡೆಗಣಿಸುತ್ತಿರುವುದು ಏಕೆ? ಕಾಗದದ ಮೇಲಷ್ಟೇ ನ್ಯಾಯವೇ? ಗೆಜೆಟ್‌ನಲ್ಲಿ ದಾಖಲಾದ ನ್ಯಾಯದ ಮಾತು ಕಡತದಿಂದ ಕಚೇರಿಯ ನೇಮಕಾತಿ ಪಟ್ಟಿಗೆ ಇಳಿಯದಿದ್ದರೆ ಆ ಮಾತಿಗೆ ಬೆಲೆ ಎಲ್ಲಿದೆ? ಇದು ಸಾಮಾಜಿಕ ನ್ಯಾಯದ ಹೆಸರಲ್ಲಿ ನಡೆಯುತ್ತಿರುವ ಅಕ್ಷರಶಃ ವಂಚನೆ.‌ ಶತಮಾನಗಳಿಂದ ತುಳಿತಕ್ಕೊಳಗಾದ ಸಮುದಾಯಕ್ಕೆ ಇಂದು ಸಿಕ್ಕ ಜಯವನ್ನು ‘ತಾಂತ್ರಿಕ ಕಾರಣ’ ನೀಡಿ ಕಸಿದುಕೊಳ್ಳಲಾಗುತ್ತಿದೆ. ನಮಗೆ ಬೇಕಿರುವುದು ಭರವಸೆಯ ಬಣ್ಣದ ಮಾತುಗಳಲ್ಲ, ಉದ್ಯೋಗಗಳಲ್ಲಿ ನಮ್ಮ ಪಾಲಿನ ಸಾಂವಿಧಾನಿಕ ಹಕ್ಕು. ನಿಮ್ಮಲ್ಲಿ ನಾವು ಬಿಕ್ಷೆ ಬೇಡುತ್ತಿಲ್ಲ, ನಮಗೆ ದಕ್ಕಬೇಕಾದ ನ್ಯಾಯಬದ್ಧ ಹಕ್ಕನ್ನು ಮಾತ್ರವೇ ಕೇಳುತ್ತಿದ್ದೇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾದಿಗ ಸಮುದಾಯದ ಬಂಧುಗಳೇ, ಇನ್ನೂ ನಾವು ಜಾಗೃತರಾಗದಿದ್ದರೆ ನಷ್ಟವಾಗುವುದು ನಮಗೇ, ನಮ್ಮ ಭವಿಷ್ಯಕ್ಕೇ, ನೆನಪಿರಲಿ! ಎಚ್ಚರಗೊಳ್ಳಿ, ಸರ್ಕಾರವು ಸಾಮಾಜಿಕ ನ್ಯಾಯಕ್ಕೆ ಬಗೆಯುತ್ತಿರುವ ದ್ರೋಹವನ್ನು ಕಂಡಕಂಡಲ್ಲಿ ಖಂಡಿಸಿ. ಹೋರಾಟದ ಹಾದಿಗೆ ಮತ್ತೆ ನಾವು ಸಿದ್ಧರಾಗಬೇಕಿದೆ, ನಮ್ಮ ಹಕ್ಕನ್ನು ನಾವು ಪಡೆದೇ ತೀರಬೇಕಿದೆ.

ಈ ಲೇಖನ ಓದಿದ್ದೀರಾ?: ದೆಹಲಿ vs ಹಿಮಾಚಲ ಪ್ರದೇಶ ಪೊಲೀಸ್: ಒಂದು ರಾಜ್ಯದ ಪೊಲೀಸರು ಮತ್ತೊಂದು ರಾಜ್ಯದ ಪೊಲೀಸರನ್ನು ಬಂಧಿಸಬಹುದೇ?

ನಮ್ಮ ಸಂವಿಧಾನಬದ್ಧ ಹಕ್ಕು ಸಿಕ್ಕಿದೆ ಎಂದು ನಾವು ಸಂಭ್ರಮಿಸುತ್ತಿರುವ ಹೊತ್ತಲ್ಲೇ, ಸಿಕ್ಕ ನ್ಯಾಯವನ್ನು ಜಾರಿಗೆ ತರದಂತೆ ವ್ಯವಸ್ಥಿತವಾದ ಒಳಸಂಚು ನಡೆಯುತ್ತಿರುವುದು ಕ್ರೂರ ಅಸ್ಪೃಶ್ಯತೆಯ ಮತ್ತೊಂದು ರೂಪವೇ ಆಗಿದೆ. 56,432 ಹುದ್ದೆಗಳು ಹಳೆಯ ಮೀಸಲಾತಿಯಡಿ ಭರ್ತಿಯಾದರೆ, ನಮ್ಮ ಯುವಕರ ಭವಿಷ್ಯ ಮತ್ತೆ ಇಪ್ಪತ್ತು ವರ್ಷಗಳ ಕಾಲ ಕಗ್ಗತ್ತಲಿಗೆ ಸರಿಯಲಿದೆ. ಈಗ ಎಚ್ಚೆತ್ತು ಧ್ವನಿ ಎತ್ತದಿದ್ದರೆ, ಮಾದಿಗರಿಗೆ ಸರ್ಕಾರದಿಂದ ಮರಣ ಶಾಸನ ಗ್ಯಾರಂಟಿ.

ಮಾನ್ಯ ಮುಖ್ಯಮಂತ್ರಿಗಳೇ , ಸಚಿವರುಗಳೇ, ಶಾಸಕರುಗಳೇ… ಸಮತೆ, ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ಬದ್ಧರಾಗಿದ್ದೇವೆ ಎಂದು ಉದ್ದುದ ಭಾಷಣ ಬಿಗಿಯುತ್ತೀರಿ! ಅದಕ್ಕೆ ತಕ್ಕುದಾದ ಬದ್ಧತೆ ಇರಬೇಕಾದದ್ದು ಬರೀ ಭಾಷಣದಲ್ಲಲ್ಲ, ನಿಮ್ಮ ನಡೆಯಲ್ಲೂ ಇರಬೇಕು. ರಾಜ್ಯಪಾಲರ ಅಂಕಿತದ ನಂತರವೂ ಹಳೆಯ ಪದ್ಧತಿಯನ್ನು ಅನುಸರಿಸುವುದು ಸಂವಿಧಾನದ ನಿಂದನೆ ಮಾತ್ರವಲ್ಲ, ಜನರ ನಂಬಿಕೆಗೆ ಮಾಡುವ ಅಪಚಾರ, ಮಾದಿಗ ಸಮುದಾಯಕ್ಕೆ ಎಸೆದ ಅತಿದೊಡ್ಡ ದ್ರೋಹ ಕೂಡ. ಹಾಗಾಗಿ, 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ಅಂಕಿತದ ಅನುಸಾರದಂತೆ ಒಳಮೀಸಲಾತಿಯನ್ನು ಜಾರಿಗೆ ತರುವಂತೆ ಶೀಘ್ರಾತಿಶೀಘ್ರದಲ್ಲಿ ಆದೇಶ ಹೊರಡಿಸಬೇಕು, ಇಲ್ಲವೇ, ಮಾದಿಗರ, ಮಾದಿಗ ಸಂಬಂಧಿತ ಎಲ್ಲ‌ ಜಾತಿಸಮುದಾಯಗಳ ಹಾಗೂ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲ ನಾಗರಿಕರ ಕಟು ವಿರೋಧಕ್ಕೆ- ನಿಮ್ಮ ಮುಂದಿನ‌ ಚುನಾವಣಾ ಭವಿಷ್ಯವನ್ನೇ ನಿರ್ಧರಿಸುವಂತಹ ನಿರ್ಣಾಯಕ ವಿರೋಧಕ್ಕೆ- ನೀವು‌ ಗುರಿಯಾಗಬೇಕು. ಆಯ್ಕೆ ನಿಮ್ಮದು.

ಪೋಸ್ಟ್ ಹಂಚಿಕೊಳ್ಳಿ:

ಗಂಗಾಧರ್ ಬಿ ಎಂ ಬಾಣಸಂದ್ರ
ಗಂಗಾಧರ್ ಬಿ ಎಂ ಬಾಣಸಂದ್ರ
ಸಂಶೋಧನಾ ವಿದ್ಯಾರ್ಥಿ, ತುಮಕೂರು ವಿಶ್ವವಿದ್ಯಾಲಯ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...