ಖರ್ಗೆ ಕುಟುಂಬದ ಮೇಲೆ ಮಾತನಾಡಿ ರಾತ್ರೋರಾತ್ರಿ ನಾಯಕರಾಗಲು ಹೊರಟಿದ್ದಾರೆ: ರಮೇಶ್‌ ಬಾಬು ಕಿಡಿ

Date:

ಸುಳ್ಳನ್ನೇ ಹಲವುಬಾರಿ ಪ್ರತಿಪಾದಿಸಿ ಸತ್ಯವೆಂದು ಬಿಂಬಿಸುವ ಪರಿಪಾಠವನ್ನು ಕರಗತಮಾಡಿಕೊಂಡಿರುವ ಬಿಜೆಪಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಿಂದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಹಂಚಿಕೆ ಆಗಿರುವ ನಾಗರೀಕ ನಿವೇಶನ ಕುರಿತು ಮತ್ತೆ ಮತ್ತೆ ಮೈ ಪರಚಿಕೊಳ್ಳುತ್ತಿದೆ ಎಂದು ಮಾಜಿ ಎಂಎಲ್‌ಸಿ ರಮೇಶ್‌ ಬಾಬು ಟೀಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ನಾಗರೀಕ ನಿವೇಶನದ ಹಂಚಿಕೆಯ ಕುರಿತು ಸಾಮಾನ್ಯ ಜ್ಞಾನವಿಲ್ಲದ ಬಿಜೆಪಿ ನಾಯಕರು ಪ್ರಿಯಾಂಕಾ ಖರ್ಗೆ ಮತ್ತು ಅವರ ಕುಟುಂಬದ ಮೇಲೆ ಆರೋಪ ಮಾಡಿ ರಾತ್ರೋರಾತ್ರಿ ನಾಯಕರಾಗಲು ಹೊರಟಿದ್ದಾರೆ” ಎಂದು ಕುಟುಕಿದರು.

“ಕೆಐಡಿಬಿ 07-02-2024 ರಲ್ಲಿ ಅಧಿಕೃತ ಜ್ಞಾಪನ ಪಾತ್ರದ ಮೂಲಕ ನಾಗರೀಕ ನಿವೇಶನಗಳನ್ನು ಹಂಚಿಕೆ ಮಾಡಲು ಕೆಲವು ನಿಯಮಾವಳಿಗಳನ್ನು ನೀಡಿರುತ್ತದೆ. ಇದಕ್ಕೆ ಪೂರಕವಾಗಿ ನಾಗರೀಕ ನಿವೇಶನಗಳಿಗೆ ಅರ್ಜಿಗಳನ್ನು ಕೋರಿ ಪತ್ರಿಕಾ ಜಾಹಿರಾತನ್ನು ನೀಡಿರುತ್ತದೆ ಮತ್ತು ತನ್ನ ವೆಬ್ಸೈಟ್ ನಲ್ಲಿ ಸಾರ್ವಜನಿಕ ಮಾಹಿತಿ ನೀಡಿರುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕೆಐಡಿಬಿ ಗೆ ಸೇರಿದ ಬೆಂಗಳೂರಿನ 3 ವಿಭಾಗ ಮತ್ತು ಇತರೆ 9 ನಗರಗಳ ಸುಮಾರು 193 ನಾಗರೀಕ ನಿವೇಶನಗಳಿಗೆ ಅರ್ಜಿಯನ್ನು ಕರೆದಿರುತ್ತದೆ. ಇದರ ಅನ್ವಯ ಬೆಂಗಳೂರಿನ 3 ವಲಯದಲ್ಲಿ ನಾಗರೀಕ ನಿವೇಶನಗಳಿಗೆ ಕ್ರಮವಾಗಿ 24,22 ಮತ್ತು 17 ಅರ್ಜಿಗಳು ಬಂದಿರುತ್ತದೆ. ಇವುಗಳಲ್ಲಿ ಹಲವು ಸಂಘ ಸಂಸ್ಥೆಗಳಿಗೆ ಸಿವಿಕ್ ನಿವೇಶನ ಹಂಚಿಕೆ ಆಗಿದ್ದು, ಅವುಗಳಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಸಹ ಒಂದಾಗಿದೆ” ಎಂದು ಹೇಳಿದರು.

“ನಾರಾಯಣಸ್ವಾಮಿ ಅವರು ವ್ಯಕ್ತಿಗತವಾಗಿ ಟೀಕೆ ಮಾಡುವ ಮೊದಲು ಮಾಹಿತಿ ಪಡೆದುಕೊಂಡು ಟೀಕೆ ಮಾಡಬೇಕು. ನಾರಾಯಣ ಸ್ವಾಮಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಬಿಡಿಎ ಉದಾಹರಣೆ ನೀಡಿದ್ದಾರೆ. ಅವರಿಗೆ ವಿಷಯದ ಕೊರತೆಯಿದೆ. 1983ರಲ್ಲಿ ತಂದ ತಿದ್ದುಪಡಿ ಪ್ರಕಾರ ಬಿಡಿಎ ಮೂಲೆ ನಿವೇಶನಗಳನ್ನು ಮಂಜೂರು ಮಾಡುವಂತಿಲ್ಲ ಹರಾಜು ಮಾಡಬೇಕು ಎನ್ನುವ ನಿಯಮ ತಿಳಿದು ಮಾಡನಾಡಬೇಕು. ಯಾವುದೇ ಕಾರಣಕ್ಕೂ ವ್ಯಕ್ತಿಗತವಾಗಿ ನಿವೇಶನಗಳನ್ನು ಪಡೆಯಲು ಆಗುವುದಿಲ್ಲ. ಇದನ್ನು ಸಂಘ, ಸಂಸ್ಥೆಗಳು ಮಾತ್ರ ಪಡೆಯಲು ಸಾಧ್ಯ” ಎಂದರು.

“ಪರಿಶಿಷ್ಟರ ಎಲ್ಲಾ ಸೌಲಭ್ಯಗಳನ್ನು ಖರ್ಗೆ ಅವರ ಕುಟುಂಬವೇ ಪಡೆದಿದೆ ಎನ್ನುವ ರೀತಿ ಮಾತನಾಡಿರುವುದು ಸರಿಯಿಲ್ಲ. ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಎರಡೂ ಕಡೆಯೂ ಒಂದಷ್ಟು ಕಡೆ ಅಧಿಕಾರ ಅನುಭವಿಸಿದರು. ಆಗ ಇವರು ಬೇಡ ಎಂದು ಹೇಳಬೇಕಿತ್ತು. ಮೈಸೂರು ಹಾಗೂ ಮಂಡ್ಯದಲ್ಲಿ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಈಗ ಅದನ್ನು ಹರಾಜು ಹಾಕಿದರೆ ಕೋಟ್ಯಂತರ ರೂಪಾಯಿ ಬರುತ್ತದೆ ಇದು ಯಾವ ಕೊಡುಗೆ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಪ್ರಶ್ನಿಸಿದರು.

“ದಲಿತ ನಾಯಕರಾಗಿ ಬೆಳೆಯುತ್ತಿರುವವರನ್ನು ದಲಿತ ನಾಯಕರನ್ನೇ ಇಟ್ಟುಕೊಂಡು ಹಣಿಯುವ ಕೆಲಸ ಮಾಡುತ್ತದೆ ಬಿಜೆಪಿ. ಕಸ ಪೊರಕೆಯಂತೆ ಬಳಸಿ ಬಿಸಾಡುತ್ತಾರೆ. ದಲಿತ ನಾಯಕರು ಬಿಜೆಪಿಗೆ ಹೋಗಿ ಬಲಿಯಾಗಬೇಡಿ. ಅಂಬೇಡ್ಕರ್ ಅನುಯಾಯಿಗಳು ಏಕೆ ಬಿಜೆಪಿಗೆ ಹೋಗಿ ನಾಶವಾಗುತ್ತಿದ್ದಾರೆ. ಇನ್ನಾದರೂ ನಾರಾಯಣಸ್ವಾಮಿಗಳು ಬುದ್ದಿ ಕಲಿಯಲಿ” ಎಂದು ವಾಗ್ದಾಳಿ ನಡೆಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...