ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಹಿಂದಿ ಭಾಷೆಯನ್ನು ನಿಷೇಧಿಸಲಿದೆ, ಈ ನಿಟ್ಟಿನಲ್ಲಿ ಮಸೂದೆಯನ್ನು ಮಂಡಿಸಲು ಸರ್ಕಾರ ಸಜ್ಜಾಗಿದೆ ಎಂಬ ಸುದ್ದಿಗಳ ನಡುವೆ ತಮಿಳುನಾಡು ಸರ್ಕಾರ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ. ಹಿಂದಿ ಭಾಷೆ ನಿಷೇಧ ಮಾಡಲಾಗುತ್ತದೆ ಎಂಬ ಸುದ್ದಿಯು “ಸಂಪೂರ್ಣವಾಗಿ ಸುಳ್ಳು” ಎಂದು ಎಂ ಕೆ ಸ್ಟಾಲಿನ್ ಸ್ಪಷ್ಟಪಡಿಸಿದೆ.
ಈ ಬಗ್ಗೆ ತಮಿಳುನಾಡು ಸರ್ಕಾರ ಎಕ್ಸ್ನಲ್ಲಿ ಮಾಹಿತಿ ನೀಡಿದೆ. “ತಮಿಳುನಾಡಿನಲ್ಲಿ ಹಿಂದಿ ಭಾಷೆಯನ್ನು ನಿಷೇಧಿಸಲಾಗುತ್ತದೆ ಎಂಬ ವದಂತಿ ಹಬ್ಬುತ್ತಿದೆ. ತಮಿಳುನಾಡಿನಲ್ಲಿ ಎಲ್ಲಾ ರೀತಿಯಲ್ಲಿ ಹಿಂದಿ ಭಾಷೆಯ ಬಳಕೆಯನ್ನು ನಿಷೇಧಿಸಲು ಮುಖ್ಯಮಂತ್ರಿ ಸ್ಟಾಲಿನ್ ಅವರ ತಮಿಳುನಾಡು ಸರ್ಕಾರ ಹೊಸ ಮಸೂದೆಯನ್ನು ಜಾರಿಗೊಳಿಸಲು ಮುಂದಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಹಿಂದಿಗೆ ನಿಷೇಧ | ತಮಿಳುನಾಡು ಸರ್ಕಾರದ ಹೊಸ ಮಸೂದೆ ರಾಜ್ಯದಲ್ಲಿ ಫಲಕ, ಸಿನಿಮಾ, ಹಾಡುಗಳಿಗೆ ತಡೆ
“ಈ ಸುದ್ದಿಯು ಸಂಪೂರ್ಣವಾಗಿ ಸುಳ್ಳು. ಈ ಬಗ್ಗೆ ಸರ್ಕಾರದ ಕಾರ್ಯದರ್ಶಿ ಸ್ಪಷ್ಟನೆಯನ್ನು ನೀಡಿದ್ದಾರೆ. ‘ಈ ರೀತಿಯ ಮಸೂದೆಯನ್ನು ಮಂಡಿಸುವ ಯಾವುದೇ ಪ್ರಸ್ತಾಪವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಯಾವುದೇ ವದಂತಿಯನ್ನು ಹಬ್ಬಬೇಡಿ” ಎಂದು ಎಕ್ಸ್ ಪೋಸ್ಟ್ನಲ್ಲಿ ತಿಳಿಸಲಾಗಿದೆ.
Rumor about Hindi language ban bill in Tamil Nadu Assembly
— TN Fact Check (@tn_factcheck) October 15, 2025
Fake News:
It is being claimed that the Tamil Nadu government, led by the Honorable Chief Minister, is planning to introduce a bill in the Legislative Assembly to ban the Hindi language in all forms.
Truth:
This claim…
ಹಿಂದಿ ಹೇರಿಕೆ ವಿರುದ್ಧವಾಗಿ ನಿರಂತರವಾಗಿ ಪ್ರತಿಭಟಿಸುತ್ತಾ ಬಂದ ದಕ್ಷಿಣ ಭಾರತ ರಾಜ್ಯಗಳಲ್ಲಿ ತಮಿಳುನಾಡು ಕೂಡಾ ಒಂದು. ಈ ರಾಜ್ಯದಲ್ಲಿ ಹಿಂದಿ ನಿಷೇಧಿಸಲಾಗುತ್ತದೆ ಎಂಬುದು ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರ ಎಕ್ಸ್ ಪೋಸ್ಟ್ನಿಂದಾಗಿ ಹರಡಿದೆ.
“ಆಂಧ್ರಪ್ರದೇಶ ಮುಖ್ಯಮಂತ್ರಿ: ವಿಶಾಖಪಟ್ಟಣದಲ್ಲಿ ಸುಮಾರು 15 ಬಿಲಿಯನ್ ಡಾಲರ್ನ ಎಐ ಡೇಟಾ ಸೆಂಟರ್ ಅನ್ನು ಸ್ಥಾಪಿಸುವ ನಿಟ್ಟಿನಲ್ಲಿ ಗೂಗಲ್ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ತಮಿಳುನಾಡು ಮುಖ್ಯಮಂತ್ರಿ: ನಮ್ಮ ರಾಜ್ಯದಲ್ಲಿ ಹಿಂದಿ ನಿಷೇಧ ಮಾಡೋಣ, ಅದಕ್ಕಾಗಿ ಮಸೂದೆ ಜಾರಿ ಮಾಡೋಣ” ಎಂದು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಮಾತನಾಡಿಕೊಂಡಂತೆ ಅಣ್ಣಾಮಲೈ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಹಾಗೆಯೇ “ಡಿಎಂಕೆ ಮತ್ತು ಅದರ ಅಸಹ್ಯ ರಾಜಕೀಯ, ಯದ್ವಾತದ್ವವಾದ ಆದ್ಯತೆ” ಎಂದೂ ಬರೆದುಕೊಂಡಿದ್ದರು.
AP CM: Signed a landmark agreement with Google to set up a $15 billion AI Data Centre in Visakhapatnam.
— K.Annamalai (@annamalai_k) October 15, 2025
TN CM: Let's table a bill & Ban Hindi in our State. Yo!
DMK and their Pathetic politics & misplaced priorities, sigh!
ಇದಕ್ಕೆ ಡಿಎಂಕೆ ಸಂಸದ ಪಿ ವಿಲ್ಸನ್ ಅವರೂ ಪ್ರತಿಕ್ರಿಯಿಸಿದ್ದರು. “ಒಬ್ಬರು ಅಂಧಭಕ್ತರಾದರೆ(ತಮಿಳುನಾಡಿನ ಸಂಘಿಗಳ ಅಭಿಲಾಷೆಯಂತೆ ಹಿಂದಿ ಪದ ಬಳಕೆ) ನಡೆಯುವುದು ಹೀಗೆ” ಎಂದು ಟೀಕಿಸಿದ್ದಾರೆ.





