ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕಾರಣಕ್ಕೆ ಎರಡು ಕುಟುಂಗಳ ಮೇಲೆ ಹಲ್ಲೆ ನಡೆಸಿ, ಗ್ರಾಮವನ್ನೇ ತೊರೆಯಲು ಒತ್ತಡ ಹೇರಿದ ಘಟನೆ ಛತ್ತೀಸ್ಗಢದ ದಕ್ಷಿಣ ಬಸ್ತಾರ್ನ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ.
ಅಬುಜ್ಮಾರ್ನ ಇಕ್ನಾರ್ ಗ್ರಾಮದಲ್ಲಿ 18 ಮನೆಗಳಿದ್ದು, ಅವುಗಳಲ್ಲಿ ಎರಡು ಕುಟುಂಬಗಳು ಐದು ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿವೆ. ಆದರೆ ಈ ಮತಾಂತರಕ್ಕೆ ಕೆಲವು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮತಾಂತರವಾಗುವುದು ನಮ್ಮ ವೈಯಕ್ತಿಕ ಆಯ್ಕೆಯಾಗಿದೆ ಎಂದು ಈ ಎರಡೂ ಕುಟುಂಬಗಳು ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಒಡಿಶಾದಲ್ಲಿ ಕ್ರೈಸ್ತರ ಮೇಲೆ ಬಜರಂಗದಳದ ದಾದಾಗಿರಿ: ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರೇ ಗುರಿ
ಮತಾಂತರಗೊಂಡ ಕಾರಣಕ್ಕೆ ಥಳಿಸಿ, ಅವರ ವಸ್ತುಗಳನ್ನು ಮನೆಗಳಿಂದ ಹೊರಹಾಕಲಾಗಿದೆ, ಪಡಿತರವನ್ನು ಎಸೆಯಲಾಗಿದೆ, ಪ್ರಮುಖ ದಾಖಲೆಗಳನ್ನು ಸುಟ್ಟುಹಾಕಲಾಗಿದೆ ಎಂದು ಈ ಕುಟುಂಬಗಳು ಆರೋಪಿಸಿದೆ.
“ನಾವು ಚರ್ಚ್ಗೆ ಹೋಗುತ್ತಿದ್ದ ಕಾರಣಕ್ಕೆ ಗ್ರಾಮಸ್ಥರು ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಮನೆಗಳಿಗೆ ಹಾನಿಯಾಗಿದೆ. ನಮ್ಮನ್ನು ಗ್ರಾಮದಿಂದ ಹೊರಹೋಗುವಂತೆ ಹೇಳಲಾಗಿದೆ. ಗ್ರಾಮಸ್ಥರು ಅವರ ನಂಬಿಕೆಯನ್ನು ಪಾಲಿಸುತ್ತಿರುವಾಗ ನಮಗೂ ನಮ್ಮ ನಂಬಿಕೆಯನ್ನು ಪಾಲಿಸಲು ಬಿಡಬೇಕು” ಎಂದು ಮತಾಂತರಗೊಂಡ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಆದರೆ ಗ್ರಾಮಸ್ಥರು ಮಾತ್ರ ಮತಾಂತರಗೊಂಡ ಕುಟುಂಬಗಳು ಗ್ರಾಮದಲ್ಲಿ ಎಲ್ಲರೂ ಪಾಲಿಸುವ ಸಂಪ್ರದಾಯವನ್ನೇ ಅನುಸರಿಸಬೇಕು ಎಂದು ಎಚ್ಚರಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಎಫ್ಐಆರ್ ದಾಖಲಿಸಿಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ನಂತರ ಕ್ರೈಸ್ತರು… ಆನಂತರ?
ಸಂವಿಧಾನದ ವಿಧಿ 25ರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಇಷ್ಟದ ಧರ್ಮವನ್ನು ಮುಕ್ತವಾಗಿ ನಂಬಲು, ಅನುಸರಿಸಲು ಮತ್ತು ಪ್ರಚಾರ ಮಾಡುವ ಹಕ್ಕಿದೆ. ಹಾಗೆಯೇ ಮತಾಂತರ ಹೊಂದುವ ಹಕ್ಕೂ ಇದೆ. ಹಾಗೆಯೇ ಒಬ್ಬ ವ್ಯಕ್ತಿ ತನ್ನ ಸ್ವಂತ ಇಚ್ಛೆಯಿಂದ, ಯಾವುದೇ ಒತ್ತಡವಿಲ್ಲದೆ ಮತ್ತೊಂದು ಧರ್ಮಕ್ಕೆ ಬದಲಾಗುವುದು ಕಾನೂನುಬದ್ಧವಾಗಿದೆ. ಹಾಗೆಯೇ ಆಮಿಷ ಒಡ್ಡುವುದು, ಬೆದರಿಕೆ ಹಾಕುವುದು ಅಥವಾ ಬಲವಂತವಾಗಿ ಮತಾಂತರ ಮಾಡುವುದು ಕಾನೂನುಬಾಹಿರವಾಗಿದೆ.
ಆದರೆ ತಮ್ಮ ಇಚ್ಛೆಯಂತೆ ಮತಾಂತರವಾದರೂ ಬಿಜೆಪಿ, ಬಜರಂಗದಳದ ನಾಯಕರು ಮತಾಂತರಗೊಂಡ ಕುಟುಂಬದ ಮೇಲೆ ದಾಳಿ ನಡೆಸುವ ಪ್ರಕರಣ ಹೆಚ್ಚಳವಾಗಿದೆ. ಹಾಗೆಯೇ ಮತಾಂತರಗೊಳಿಸಿದ ಸುಳ್ಳು ಆರೋಪದಲ್ಲಿ ಕ್ರೈಸ್ತ, ಮುಸ್ಲಿಂ ಸಮುದಾಯದ ಮೇಲಿನ ದಾಳಿಯೂ ಅಧಿಕವಾಗುತ್ತಿದೆ.





