ವಡೋದರಾ ಸೇತುವೆ ಕುಸಿತ: ಮೋದಿಗೇ ತಿರುಗು ಬಾಣವಾದ ‘ವಂಚನೆಯ ಕೃತ್ಯ’ ಹೇಳಿಕೆ

Date:

“ಇಷ್ಟು ದೊಡ್ಡ ಸೇತುವೆ ಕುಸಿದಿದೆ. ಆದರೆ, ಸರ್ಕಾರ ಏನು ಹೇಳಿತು. ಇದು ದೇವರ ಕೃತ್ಯ ಎಂದಿತು. ದೀದೀ, ಇದು ದೇವರ ಕೃತ್ಯವಲ್ಲ. ಇದು ವಂಚನೆ, ವಂಚನೆಯ ಕೃತ್ಯ” – ಇದು 2016ರ ಏಪ್ರಿಲ್ 7ರಂದು ಬಂಗಾಳದ ಬಿರ್ಪಾರಾದಲ್ಲಿ ಮೋದಿ ಅವರು ಅಬ್ಬರ ದನಿಯಲ್ಲಿ ಹೇಳಿದ್ದ ಹೇಳಿಕೆ. ಈಗ, ಗುಜರಾತ್‌ನ ವಡೋದರಾದಲ್ಲಿ ಸೇತುವೆ ಕುಸಿದುಬಿದ್ದ ಬಳಿಕ, ಇದೇ ಹೇಳಿಕೆ ಮೋದಿ ಅವರಿಗೆ ತಿರುಗು ಬಾಣವಾಗಿದೆ. ಮೋದಿ ಅವರನ್ನು ಅವರದ್ದೇ ಹೇಳಿಕೆಯ ಮೇಲೆ ವಿಪಕ್ಷಗಳು ಟೀಕೆ ಮಾಡುತ್ತಿವೆ.

2016ರ ಮಾರ್ಚ್‌ 31ರಂದು ಕೋಲ್ಕತ್ತಾದಲ್ಲಿ ಫ್ಲೈಓವರ್ ಕುಸಿತು ಬಿದ್ದಿತ್ತು. ಘಟನೆಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಆಗ ನಿರ್ಮಾಣ ಕಂಪನಿಯ ಅಧಿಕಾರಿಯೊಬ್ಬರು ‘ಇದು ದೇವರ ಕೃತ್ಯ’ ಎಂದಿದ್ದರು. ಆ ದುರಂತ ಘಟನೆ ಮತ್ತು ಅಧಿಕಾರಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಮೋದಿ, “ಇದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ‘ವಂಚನೆಯ ಕೃತ್ಯ'” ಎಂದಿದ್ದರು. ಮಾತ್ರವಲ್ಲದೆ, “ಇದು ದೇವರ ಸಂದೇಶ. ತೃಣಮೂಲ ಕಾಂಗ್ರೆಸ್ (TMC) ಆಡಳಿತದಿಂದ ಬಂಗಾಳವನ್ನು ರಕ್ಷಿಸಲು ಜನರಿಗೆ ದೇವರು ನೀಡಿರುವ ಎಚ್ಚರಿಕೆ” ಎಂದೂ ಜನರ ಸಾವಿನ ಕುರಿತು ವಿಕೃತಿ ಮರೆದಿದ್ದರು.

ಇದೀಗ, ಮೋದಿ ಅವರ ತವರು, ಬಿಜೆಪಿಯೇ ಅಧಿಕಾರದಲ್ಲಿರುವ ಗುಜರಾತ್‌ನ ವಡೋದರಾ ಜಿಲ್ಲೆಯ ಪಾದರಾ ಬಳಿ ಮಹಿಸಾಗರ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದಿದೆ. ದುರಂತದಲ್ಲಿ ಈವರೆಗೆ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದುರಂತ ಘಟನೆಗೆ ಬಿಜೆಪಿ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿರುವ ಬಂಗಾಳದ ಆಡಳಿತಾರೂಢ ಪಕ್ಷ ಟಿಎಂಸಿ, ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. 2016ರಲ್ಲಿ ಮೋದಿ ನೀಡಿದ್ದ ‘ವಂಚನೆಯ ಕೃತ್ಯ’ ಹೇಳಿಕೆಯನ್ನು ನೆನಪಿಸಿದೆ.

‘ಎಕ್ಸ್‌’ನಲ್ಲಿ 20 ಟ್ವೀಟ್ ಮಾಡಿರುವ ಟಿಎಂಸಿ, 2022ರ ಅಕ್ಟೋಬರ್ 30ರಂದು ಗುಜರಾತ್‌ನ ಮೋರ್ಬಿಯಲ್ಲಿ ಸೇತುವೆ ಕುಸಿದು ಬಿದ್ದು, ಕನಿಷ್ಠ 141 ಜನರು ಸಾವನ್ನಪ್ಪಿದ್ದ ಸಂದರ್ಭದ ಚಿತ್ರ ಮತ್ತು ಪ್ರಸ್ತುತ ಕುಸಿದುಬಿದ್ದಿರುವ ವಡೋದರಾ ಸೇತುವೆಯ ಚಿತ್ರಗಳನ್ನು ಹಂಚಿಕೊಂಡಿದೆ. “ಡಬಲ್ ಎಂಜಿನ್ – ಡಬಲ್ ಡಿಸಾಸ್ಟರ್ (ಡಬಲ್ ಎಂಜಿನ್ ಸರ್ಕಾರ – ಡಬಲ್ ವಿನಾಶ). ಇದು ದೇವರ ಕೃತ್ಯ ಅಥವಾ ವಂಚನೆಯ ಕೃತ್ಯ” ಎಂದು ಹೇಳಿದೆ.

ಸದ್ಯ, ವಡೋದರಾದಲ್ಲಿ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ.

ಅಹಮದಾಬಾದ್ ಮೂಲದ ಹಿರಿಯ ಪತ್ರಕರ್ತ ದೀಪಲ್ ತ್ರಿವೇದಿ ಅವರು, “ಗುಜರಾತ್ ಮಾದರಿ ಬಗ್ಗೆ ಮಾತನಾಡುವ ಸರ್ಕಾರಗಳು ಈವರೆಗೆ ಏನನ್ನೂ ಮಾಡಿಲ್ಲ. ಸರ್ಕಾರ ಈಗ ಮಾಡಬಹುದಾದ ಏಕೈಕ ಕೆಲಸ ಮತ್ತೊಬ್ಬರ ಮೇಲೆ ಹೊಣೆ ಹೊರಿಸಿ, ಅವರನ್ನು ಶಿಕ್ಷಿಸುವುದು. ಈ ಗುಜರಾತ್ ಮಾದರಿಯ ಅಭಿವೃದ್ಧಿ, ವಿಕಾಸ ಎಂಬುದುತೀರಾ ಕಳಪೆಯಾಗಿದೆ:” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...