ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಅವರ 19 ವರ್ಷದ ಮಗ ಕ್ರಿಶ್ ಅನ್ಸಾರಿ ರಾಂಚಿಯ ಆಸ್ಪತ್ರೆಯಲ್ಲಿ ‘ಪರಿಶೀಲನೆ’ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ವಿವಾದಕ್ಕೀಡಾಗಿದೆ. ವಿಡಿಯೋದಲ್ಲಿ ಸಚಿವರ ಮಗ ಆಸ್ಪತ್ರೆಯನ್ನು ಪರಿಶೀಲಿಸುತ್ತಿರುವುದು, ರೋಗಿಗಳೊಂದಿಗೆ ಮಾತನಾಡುತ್ತಿರುವುದು, ಅವರಿಗೆ ಯಾವುದೇ ತೊಂದರೆಯಿದೆಯೇ ಎಂದು ಕೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಣ್ಣ ವಯಸ್ಸಿನ ಹುಡುಗ ಆಸ್ಪತ್ರೆಯಲ್ಲಿ ‘ಪರಿಶೀಲನೆ’ ನಡೆಸಲು ಮತ್ತು ಭೇಟಿ ನೀಡಲು ಯಾವ ಹಕ್ಕು ಮತ್ತು ಅಧಿಕಾರವನ್ನು ಹೊಂದಿದ್ದಾರೆ ಎಂದು ಬಿಜೆಪಿ ಪ್ರಶ್ನಿಸಿದೆ. ಆದರೆ ಸಚಿವರು ತಮ್ಮ ಮಗನ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. “ಇದು ದಯೆಯ ಕಾರ್ಯ” ಎಂದಿದ್ದಾರೆ. ಬಿಜೆಪಿ ಮಾತ್ರ ಸಚಿವರ ಪುತ್ರ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ್ ಸಚಿವರ ಬಂಧನ
ಇನ್ಸ್ಟಾಗ್ರಾಂನ ಈ ವಿಡಿಯೋದಲ್ಲಿ 19 ವರ್ಷದ ಕ್ರಿಶ್ ಅನ್ಸಾರಿ ತನ್ನ ಅಂಗರಕ್ಷಕ ಮತ್ತು ಸ್ನೇಹಿತರೊಂದಿಗೆ ಆಸ್ಪತ್ರೆ ಆವರಣದಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಹಾಗೆಯೇ ಆಸ್ಪತ್ರೆಗೆ ದಾಖಲಾದ ಕೆಲವು ರೋಗಿಗಳೊಂದಿಗೆ ಮಾತನಾಡುವುದು, ಏನಾದರು ಸಮಸ್ಯೆ ಇದೆಯೇ ಎಂದು ಕೇಳುವುದು ಕಂಡುಬಂದಿದೆ.
झारखंड के रील मंत्री के पुत्र भी अब सरकारी अस्पतालों का निरीक्षण कर रील बनाने लगे है #BJP #Jharkhand @yourBabulal pic.twitter.com/GYF0Nm2reK
— Ajay Sah (@ajaysahspeaks) July 19, 2025
ಕ್ರಿಶ್ ಅನ್ಸಾರಿ ಸ್ನೇಹಿತರು, “ಏನಾದರು ಸಮಸ್ಯೆಯಿದ್ದರೆ ಹೇಳಿ. ಸಚಿವರ ಹಿರಿಯ ಮಗ ಬಂದಿದ್ದಾರೆ” ಎಂದು ಹೇಳುತ್ತಿರುವುದೂ ವಿಡಿಯೋದಲ್ಲಿ ಕಾಣಬಹುದು. ಬಿಜೆಪಿ ಪ್ರತಿಕ್ರಿಯೆ ಬಳಿಕ ಅನ್ಸಾರಿ ಸಾಮಾಜಿಕ ಜಾಲತಾಣದಿಂದ ವಿಡಿಯೋವನ್ನು ತೆಗೆಯಲಾಗಿದೆ. ಆದರೆ ಸಚಿವರು ತಮ್ಮ ಮಗನನ್ನು ಸಮರ್ಥಿಸಿಕೊಂಡಿದ್ದಾರೆ. “ನನ್ನ ಮಗ ಕೇವಲ ಸಹಾಯ ಮಾಡುವ ಪ್ರಯತ್ನ ಮಾಡುತ್ತಿದ್ದಾನೆ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದರು.
बीजेपी संयम रखें। अच्छी सोच के साथ आगे बड़े. अगर आप को लड़ाई हमसे है तो हमसे लड़े। परिवार या बच्चों को शामिल न करें। मैंने अपने बच्चों को अच्छा संस्कार दिया है। चाहे वो मेरा बेटा हो, चाहे वो मेरा कार्यकर्ता हो। इंसानियत को मदद करेगा. लोगों का इलाज कराएगा उसकी जान बचाएगा.।… pic.twitter.com/DMn8AikwFV
— Dr. Irfan Ansari (@IrfanAnsariMLA) July 20, 2025
“ಬಿಜೆಪಿಯವರೇ ಸ್ವಲ್ಪ ಸಂಯಮವಿರಲಿ, ಸಕಾರಾತ್ಮಕ ಚಿಂತನೆಯಿರಲಿ. ನಮ್ಮೊಂದಿಗೆ ಜಗಳವಾಡಬೇಕೆಂದಿದ್ದರೆ ಜಗಳವಾಡಿ. ಕುಟುಂಬ ಅಥವಾ ಮಕ್ಕಳನ್ನು ಎಳೆದುತರಬೇಡಿ. ನಾನು ನನ್ನ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡಿದ್ದೇನೆ. ಅದು ನನ್ನ ಮಗನಾಗಿರಲಿ ಅಥವಾ ನನ್ನ ಕೆಲಸಗಾರನಾಗಿರಲಿ. ಅವರು ಮಾನವೀಯತೆಗೆ ಸಹಾಯ ಮಾಡುತ್ತಾರೆ. ಅವರು ಜನರಿಗೆ ಚಿಕಿತ್ಸೆ ಲಭಿಸುತ್ತಿದೆಯೇ ಎಂದು ನೋಡುತ್ತಾರೆ, ಅವರ ಜೀವಗಳನ್ನು ಉಳಿಸುತ್ತಾರೆ” ಎಂದು ಹೇಳಿದ್ದಾರೆ.
ತಮ್ಮ ಮಗನನ್ನು “ಪ್ರಸ್ತುತ ರಜೆಯಲ್ಲಿರುವ ವಿದ್ಯಾವಂತ ಮತ್ತು ಸೂಕ್ಷ್ಮ ಯುವ ವಿದ್ಯಾರ್ಥಿ” ಎಂದು ಕರೆದಿರುವ ಸಚಿವರು, “ಅಪ್ಪಾ, ಜನರಿಗೆ ಸಹಾಯ ಮಾಡುವುದು ಅಪರಾಧವೇ? ಎಂದು ಕ್ರಿಶ್ ನನ್ನನ್ನು ಕೇಳುತ್ತಲೇ ಇರುತ್ತಾನೆ. ಈ ಪ್ರಶ್ನೆ ನನ್ನನ್ನು ಒಳಗಿನಿಂದ ಕುಗ್ಗಿಸುತ್ತದೆ. ನನ್ನ ಮಗ ಯಾವುದೇ ಅಪರಾಧ ಮಾಡಿಲ್ಲ, ಅಥವಾ ದುರಹಂಕಾರ ಅಥವಾ ಅಧಿಕಾರದಿಂದ ವರ್ತಿಸಿಲ್ಲ. ಅವನು ಯಾರನ್ನು ಸಂಕಷ್ಟದಲ್ಲಿ ನೋಡಿದ್ದಾನೋ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾನೆ” ಎಂದು ಸಚಿವರು ಹೇಳಿದ್ದಾರೆ.





