ರೈಲು ಅಪಘಾತ : ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಮೋದಿ ಸರ್ಕಾರದ ‘ಕವಚ್’ ತಂತ್ರಜ್ಞಾನ!

Date:

2023ರ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 296 ಮಂದಿ ಜೀವ ಕಳೆದುಕೊಂಡಿದ್ದರು. ಅದಾಗಿ ಒಂದು ವರ್ಷದಲ್ಲಿಯೇ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸೋಮವಾರ ಕಾಂಚನಜುಂಗಾ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್‌ ರೈಲು ಅಪಘಾತಕ್ಕೀಡಾಗಿದೆ.

ಈ ಎರಡೂ ಅಪಘಾತ ಪ್ರಕರಣಗಳಲ್ಲಿ, ಇಂತಹ ಅವಘಡಗಳನ್ನು ತಡೆಯುವ ಸಲುವಾಗಿಯೇ ನಿರ್ಮಿಸಲಾಗಿರುವ ಮೇಡ್ ಇನ್ ಇಂಡಿಯಾ ವ್ಯವಸ್ಥೆಯಾದ ‘ಕವಚ್’ ತಂತ್ರಜ್ಞಾನ ಇಲ್ಲದಿದ್ದದ್ದು ಈಗ ಚರ್ಚೆಗೆ ಬಂದಿದೆ. ಮೋದಿ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೊಂಡು, ಪ್ರಚಾರಗಿಟ್ಟಿಸಿಕೊಂಡಿದ್ದರು. ಈಗ ಅದೇ ‘ಕವಚ್’ ತಂತ್ರಜ್ಞಾನ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡು ರೈಲುಗಳು ಒಂದೇ ಹಳಿಯ ಮೇಲೆ ಸಾಗುತ್ತಿದ್ದರೆ, ರೈಲ್ವೆ ಪೈಲಟ್‌ಗಳಿಗೆ ಎಚ್ಚರಿಕೆ ರವಾನಿಸುವ ಮೂಲಕ ಅಪಘಾತಗಳನ್ನು ತಡೆಯುವ ವ್ಯವಸ್ಥೆ ಇದಾಗಿದೆ. ಆದರೆ ಡಾರ್ಜಿಲಿಂಗ್‌ನ ಈ ಮಾರ್ಗದಲ್ಲಿ ಕವಚ್ ವ್ಯವಸ್ಥೆ ಇರಲಿಲ್ಲ. ಕೋಲ್ಕತಾಕ್ಕೆ ತೆರಳುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ, ಅದೇ ಹಳಿಯಲ್ಲಿ ಬಂದ ಸರಕು ಸಾಗಣೆ ರೈಲು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಲೋಕೋ ಪೈಲಟ್ ಸೇರಿದಂತೆ 10 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2022ರ ಮಾರ್ಚ್‌ 4ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ತೆಲಂಗಾಣದ ಸಿಕಂದರಾಬಾದ್ ಬಳಿ ರೈಲು ಅಪಘಾತ ತಪ್ಪಿಸುವ ಸಲುವಾಗಿ ಜಾರಿಗೆ ತಂದಿದ್ದ ‘ಕವಚ್’ ತಂತ್ರಜ್ಞಾನವನ್ನು ಪರೀಕ್ಷೆ ಮಾಡಿದ್ದರು. ಸಚಿವರು ಕುಳಿತುಕೊಂಡಿದ್ದ ರೈಲಿನ ಇಂಜಿನ್ ಸಾಗುವ ಹಳಿಯಲ್ಲಿ ಬೇರೊಂದು ರೈಲಿನ ಇಂಜಿನ್ ಅನ್ನು ಉದ್ದೇಶಪೂರ್ವಕವಾಗಿ ತಂದು ನಿಲ್ಲಿಸಲಾಗಿತ್ತು. ಸಚಿವರಿದ್ದ ರೈಲು ಇಂಜಿನ್, ತಾನು ಸಾಗುತ್ತಿದ್ದ ಮಾರ್ಗದಲ್ಲಿ ಬೇರೊಂದು ಇಂಜಿನ್‌ ಅನ್ನು ಗುರುತಿಸಿದ ಕೂಡಲೇ ಸ್ವಯಂಚಾಲಿತವಾಗಿ ಸುಮಾರು ಅರ್ಧ ಕಿ.ಮೀ. ಮುಂಚಿತವಾಗಿಯೇ ನಿಂತು ಬಿಟ್ಟಿತು. ಪರೀಕ್ಷೆ ಯಶಸ್ವಿಯಾದ ನಂತರ ರೈಲ್ವೆ ಸಚಿವರು ಇನ್ನೂ ಮುಂದೆ ದೇಶದಲ್ಲಿ ರೈಲು ಅಪಘಾತ ಸಾಧ್ಯವೇ ಇಲ್ಲ ಅಂತ ಹೇಳಿಬಿಟ್ಟರು. ಆದರೆ ವಾಸ್ತವ ಮಾತ್ರ ಬೇರೆಯೇ ಇದೆ.

ಕವಚ್ ಪರೀಕ್ಷೆ ಮುಗಿದ ನಂತರವೂ ಈ ದೇಶದಲ್ಲಿ ಅತ್ಯಂತ ಭೀಕರ ರೈಲು ಅಪಘಾತಗಳು ಸಂಭವಿಸಿವೆ. ಅಕ್ಟೋಬರ್ 29, 2023ರಂದು ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದ ರೈಲು ಅಪಘಾತದಲ್ಲಿ 14 ಜನರು ಸಾವನ್ನಪ್ಪಿದ್ದರು. ಜೂನ್ 2, 2023ರಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ನಡೆದ ದುರಂತವನ್ನು ಮರೆಯೋಕೆ ಸಾಧ್ಯವೇ ಇಲ್ಲ. ದೇಶದ ಇತಿಹಾಸದಲ್ಲೇ ಅತಿ ದೊಡ್ಡ ರೈಲು ಅಪಘಾತ ಎಂದು ಕರೆಯುವ ಈ ದುರ್ಘಟನೆಯಲ್ಲಿ ಸುಮಾರು 300 ಜನರು ಪ್ರಾಣ ಕಳೆದುಕೊಂಡಿದ್ದರೆ, 1200 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಜೂನ್ 17, 2024ರಂದು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ರೈಲ್ವೆ ಅಪಘಾತದಲ್ಲಿ 15 ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.

ಇವುಗಳನ್ನು ನೋಡಿದ ಮೇಲೆ ನಮ್ಮಲ್ಲಿ ಬರುವ ಮೊದಲ ಪ್ರಶ್ನೆ ಅಂದರೆ, ಇಷ್ಟೆಲ್ಲಾ ಅವಘಡಗಳು ನಡೆಯುತ್ತಿದ್ದರೂ ರೈಲ್ವೆ ಸಚಿವರು 2022ರಲ್ಲಿ ಹೇಳಿದ್ದ ‘ಕವಚ್’ ತಂತ್ರಜ್ಞಾನ ಏನು ಮಾಡುತ್ತಿದೆ? ರೈಲ್ವೆ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಅಪಘಾತ ನಡೆದ ಈ ಸ್ಥಳಗಳಲ್ಲಿ ಕವಚ್ ತಂತ್ರಜ್ಞಾನವನ್ನು ಅಳವಡಿಸಿರಲಿಲ್ಲ. ರೈಲ್ವೆ ಸಚಿವರೇ ನೀಡಿರುವ ಮಾಹಿತಿಯಂತೆ ಇಲ್ಲಿಯವರೆಗೂ ಕೇವಲ 1500 ಕಿ.ಮೀ . ಉದ್ದದ ಮಾರ್ಗ ದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜನರ ಉಪಯೋಗಕ್ಕೆ ಬಾರದ ಕೆಲಸಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವ ಈ ಸರ್ಕಾರ ಜನರ ಪ್ರಾಣ ಉಳಿಸುವ ಈ ಯೋಜನೆ ಜಾರಿಗೆ ನಿರ್ಲಕ್ಷ್ಯ ಮಾಡುತ್ತಿರುವುದು ಏಕೆ?

ರೈಲ್ವೆ ಇಲಾಖೆಯ RDSO ಸಂಸ್ಥೆ ಸುಮಾರು 17 ಕೋಟಿ ರೂಪಾಯಿ ವೆಚ್ಚದಲ್ಲಿ ಈ ‘ಕವಚ’ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿತ್ತು. ರೈಲುಗಳ ಮಧ್ಯೆ ಮುಖಾಮುಖಿ ಆಗುವ ಡಿಕ್ಕಿಯನ್ನು ‘ಕವಚ್’ ತಪ್ಪಿಸುತ್ತದೆ. ರೈಲು ರೆಡ್ ಸಿಗ್ನಲ್ ದಾಟದಂತೆ ತಡೆಯುತ್ತದೆ. ಎದುರುಗಡೆಯಿಂದ ಮತ್ತೊಂದು ರೈಲು ಬರುತ್ತಿದ್ದರೆ, ಬೇರೆ ರೈಲು ಅದೇ ಹಳಿಯ ಮೇಲೆ ನಿಂತಿದ್ದರೆ ಅಥವಾ ರೈಲು ಹಳಿಯ ಮೇಲೆ ಮರದ ದಿಮ್ಮಿ, ಅನ್ಯ ವಾಹನಗಳು ನಿಂತಿದ್ದರೆ ಅದನ್ನು ಕವಚ್‌ನ ಸೆನ್ಸರ್‌ಗಳು ದೂರದಿಂದಲೇ ಗ್ರಹಿಸಿ, ತನ್ನಲ್ಲಿನ ಆಂತರಿಕ ನಿರ್ವಹಣಾ ವ್ಯವಸ್ಥೆಗೆ ಅಪಾಯದ ಸಿಗ್ನಲ್‌ಗಳನ್ನು ರವಾನಿಸುತ್ತದೆ. ಈ ಸಿಗ್ನಲ್‌ಗಳ ಸಹಾಯದಿಂದ ಆಂತರಿಕ ನಿರ್ವಹಣಾ ವ್ಯವಸ್ಥೆಯು ಆಟೋಮ್ಯಾಟಿಕ್ ಆಗಿ ರೈಲುಗಳ ಬ್ರೇಕ್‌ಗಳನ್ನು ಹಾಕುತ್ತದೆ.

ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆಯುವುದರಿಂದ ದೂರದಲ್ಲಿ ಹಳಿಯ ಮೇಲೆ ಅಡ್ಡವಾಗಿರುವ ವಾಹನಗಳು, ವಸ್ತುಗಳಿಂದ ಸುಮಾರು 380 ಮೀಟರ್‌ಗಳಷ್ಟು ದೂರದಲ್ಲೇ ರೈಲು ಆಟೋಮ್ಯಾಟಿಕ್ ಆಗಿ ನಿಂತುಬಿಡುತ್ತದೆ. ರೈಲ್ವೆ ಕ್ರಾಸಿಂಗ್ ಗೇಟ್ ಸಮೀಪಿಸುತ್ತಿದ್ದಂತೆಯೇ ಜೋರಾಗಿ ವಿಷಲ್ ಶಬ್ದ ಹೊಮ್ಮಿಸಿ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಲೊಕೊ ಪೈಲಟ್ ಓವರ್ ಸ್ಪೀಡಿಂಗ್ ತಪ್ಪಿಸಲು ನೆರವಾಗುತ್ತದೆ. ಅತ್ಯಂತ ದಟ್ಟವಾದ ಮಂಜಿನ ವಾತಾವರಣದಲ್ಲೂ ರೈಲು ಸುರಕ್ಷತೆಯಿಂದ ಚಲಿಸಲು ನೆರವಾಗುತ್ತದೆ ಅಂತ ಕವಚ್ ತಂತ್ರಜ್ಞಾನದ ರೈಲ್ವೆ ಇಲಾಖೆ ಹೇಳಿಕೊಂಡಿತ್ತು.

kavach

ದೇಶದಲ್ಲಿ 35,736 ಕಿ.ಮೀ . ಉದ್ದ ಮಾರ್ಗ ದಲ್ಲಿ ‘ಕವಚ’ ವ್ಯವಸ್ಥೆ ಅಳವಡಿಕೆಗೆ ಮಂಜೂರಾತಿ ನೀಡಲಾಗಿದೆ ಅಂತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಆದರೆ ಯೋಜನೆ ಪೂರ್ಣಗೊಳಿಸಲು ತಡ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಇಷ್ಟೆಲ್ಲಾ ಅಪಘಾತಗಳು ನಡೆಯುತ್ತಿದ್ದರೂ ರೈಲ್ವೆ ಸಚಿವರೂ ಮಾತ್ರ ನೈತಿಕ ಹೊಣೆ ಹೊರುತ್ತಲೇ ಇಲ್ಲ. ಅಪಘಾತದ ನಡುವೆಯೂ ಅವರ ಪಿಆರ್ ಸ್ಟಂಟ್‌ಗಳು ನಿಂತಿಲ್ಲ.

ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್‌ಗೆ ಸಿಎಂ ಸಿದ್ದರಾಮಯ್ಯ ಸಲಹೆ ಕೇಳಿದ ನಿರ್ಮಲಾ ಸೀತಾರಾಮನ್

ಕಳೆದ ಒಂದು ದಶಕದಿಂದ ರೈಲುಗಳ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಬಡ ಜನರ ಪ್ಯಾಸೆಂಜರ್ ರೈಲುಗಳಿಗೆ ಕತ್ತರಿ ಹಾಕಿ, ಶ್ರೀಮಂತರ ವಂದೇ ಭಾರತಕ್ಕೆ ಮಣೆ ಹಾಕಲಾಗಿದೆ. ಅದರ ಪರಿಣಾಮ ರೈಲುಗಳಲ್ಲಿ ಭಾರಿ ಜನದಟ್ಟಣೆ, ಅವ್ಯವಸ್ಥೆ ಕಾಣಿಸಿಕೊಳ್ಳತೊಡಗಿದೆ. ಜನಸಾಮಾನ್ಯರ ಆಕ್ರೋಶದ ಕಟ್ಟೆ ಒಡೆಯುವ ಮೊದಲೇ ಮೋದಿ ಸರ್ಕಾರ ರೈಲು ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಾ, ಅನ್ನೋದನ್ನು ಕಾದು ನೋಡಬೇಕಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...