ಅಂಬಾನಿಯವರು 1 ಲಕ್ಷ ಕೋಟಿ ರೂಪಾಯಿ ಲಾಭ ಮಾಡಿಕೊಟಿದ್ದಾರೆ. ಅಂಬಾನಿ ದೇಶಕ್ಕೆ ಏನು ಮಾಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರಲ್ಲಿ ಬಿಎಸ್ ಎನ್ ಎಲ್ನಲ್ಲಿ 35 ಸಾವಿರ ಟವರ್ ಗಳು ಇತ್ತು. ಬಿಎಸ್ ಎನ್ ಎಲ್ ಟಾಪ್ ಶ್ರೇಣಿಯಲ್ಲಿತ್ತು. ಜಿಯೊ ಬಂತು, 35 ಸಾವಿರ ಟವರ್ ಗಳನ್ನು ಅಂಬಾನಿಯವರಿಗೆ ಕೊಟ್ಟುಬಿಟ್ಟಿದ್ದಾರೆ. ಜಿಯೋ ಬಂದ ಮೇಲೆ ಬಿಎಸ್ ಎನ್ ಎಲ್ ಎಲ್ಲಿಗೆ ಹೋಯ್ತು, ಇದಕ್ಕೆ ಯಾರು ಉತ್ತರ ಕೊಡ್ತಾರೆ ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಅಮೆರಿಕ-ಇರಾನ್ ಯುದ್ಧದ ಕಾರ್ಮೋಡ; ಭಾರತದ ಆರ್ಥಿಕತೆ, ಭದ್ರತೆಗೇನು ಸವಾಲು?
ಪ್ರಧಾನಿಯವರು ಪುಟಿನ್ ಕರೆದಿಕೊಂಡು ಬಂದು ಫೋಟೋ ತೆಗೆಸಿಕೊಂಡ್ರೆ ಏನು ಲಾಭ ಬಂತು. ಅಮೆರಿಕ ಇರಾನ್ನಿಂದ ಆಯಿಲ್ ತಗೋಬಾರದು, ಅಂದ್ರು ರಷ್ಯಾದಿಂದ ತಗೊಬಾರ್ದು ಅಂತಾ ಷರತ್ತು ಹಾಕಿದ್ದಾರೆ. ದೇಶ ಮುಖ್ಯ ಅಂತಾ ಹೇಳಿ ಏನು ಮಾಡ್ತಿದ್ದೀರೆ. ದಿನ ಬೆಳಗ್ಗೆ ಎದ್ದರೆ ಭಾರತ್ ಮಾತಾ ಕಿ ಜೈ ಅಂತಾ ಹೇಳಿಕೊಂಡು ಓಡಾಡಿಬಿಟ್ರೆ ಸಾಕಾ ಎಂದು ಪ್ರಧಾನಿ ವಿರುದ್ಧ ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸದ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ಬಿಜೆಪಿ ಸರ್ಕಾರ ಮಾಡುವಾಗ ಅವರ ಶಾಸಕರು ಎಲ್ಲಿಗೆ ಹೋಗಿದ್ದರು. ಅವರ ಪ್ರವಾಸದ ಬಗ್ಗೆ ಹೇಳಬೇಕಾ? ವಿದೇಶಕ್ಕೆ ಹೋಗಿರುವ ನಮ್ಮ ಹತ್ತಿಪ್ಪತ್ತು ಶಾಸಕರಿಂದ ಅಲ್ಲಿ ಹೋಗಿ ರಾಜಕಾರಣ ಮಾಡಲು ಸಾಧ್ಯವೇ? ಅವರೇನೂ ಅಲ್ಲಿಗೆ ಹೋಗಿ ಮತಗಳನ್ನು ಹಾಕುತ್ತಾರಾ? ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ವಿದೇಶ ಪ್ರವಾಸಕ್ಕೆ ಹೋಗಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.





