ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು... ಆಗಾಗ

ಧಾತು ಮಾತು ಪಲ್ಲಟಿಸಿದರೆ, ಗಮನವಿನ್ನೆಲ್ಲಿಯದೊ?
ಧ್ಯಾನ ಮೌನವೆಂಬುದು
ತನುಗುಣ ಸಂದೇಹವಯ್ಯಾ.
ಸುಜ್ಞಾನಭರಿತ, ಅನುಪಮಸುಖಿ
ಗುಹೇಶ್ವರಾ ನಿಮ್ಮ ಶರಣನು.

ಪದಾರ್ಥ:
ಧಾತು = ದೇಹ ಕ್ರಿಯೆ
ಪಲ್ಲಟ = ಬದಲಾಗು
ತನುಗುಣ = ದೇಹಗುಣ

ವಚನಾರ್ಥ:
ಧಾತು ಅಂದರೆ ನಡೆ ಮಾತು ಅಂದರೆ ನುಡಿ ಇವೆರಡರಲ್ಲಿ ಪಲ್ಲಟವಾದರೆ ಅಂದರೆ ವ್ಯತ್ಯಾಸವಾದರೆ ಗಮನ ಇನ್ನೆಲ್ಲಿಯದು ಅಂದರೆ ಅದು ಗುರಿಯಿರದ ಜೀವನಮಾರ್ಗ. ನುಡಿದಂತೆ ನಡೆಯದಿದ್ದರೆ ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯ ಎಂಬಂತೆ ಧಾತು ಮತ್ತು ಮಾತು ಒಂದಾಗಿ ಜೀವದಲ್ಲಿ ಮೇಳಯಿಸಬೇಕು. ದೇವ ಮೆಚ್ಚಬೇಕು. ನಡೆ ನುಡಿ ಒಂದಾಗದೆ ನಡೆಸುವ ಧ್ಯಾನ ಮೌನಗಳು ತನ್ನನ್ನು ತಾನೇ ಸಂದೇಹಿಸಿಕೊಳ್ಳುವ ವ್ಯಕ್ತಿತ್ವದ ತನುಗುಣವನ್ನು ತಂದೊಡ್ಡಬಲ್ಲವು. ಧಾತು ಮಾತು ಪಲ್ಲಟಗೊಳ್ಳದೆ ಮೌನದಲ್ಲಿ ಧ್ಯಾನಿಯಾಗಿ ನಿಜವನ್ನು ಅರಸುವ ದೇಹ ಗುಣವುಳ್ಳವ ಸದಾ ನಿಸ್ಸಂದೇಹಿ. ಅವನದು ಸುಜ್ಞಾನದಿಂದ ಭರಿತವಾದ ಬದುಕು. ಅಂತಹ ಸುಜ್ಞಾನದಿಂದ ಸಿದ್ದಿಸುವುದು ಅನುಪಮ ಸುಖ. ಅವನೇ ಶರಣ. ಅವನು ಅನುಗಾಲವೂ ಅನುಪಮಸುಖಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪದ ಪ್ರಯೋಗಾರ್ಥ:

ಅನನ್ಯವಾದ ಅನುಪಮವಾದ ಸುಖವನ್ನು ಅನುಭವಿಸುವವನು ಅನುಪಮಸುಖಿ. ದೈಹಿಕ ಮಾನಸಿಕ ಸುಖವನ್ನು ಹೊಂದಲು ಹಲವು ಮಾರ್ಗಗಳಿವೆ. ನೀಚ ಮತ್ತು ಉಚ್ಚ ಮಾರ್ಗಗಳು. ಇಲ್ಲಿ ಅಲ್ಲಮ ಉದಹರಿಸಿರುವುದು ಸರ್ವೋಚ್ಚ ಮಾರ್ಗ. ಸುಜ್ಞಾನಭರಿತ ಮಾರ್ಗ. ಆ ಮಾರ್ಗದಲ್ಲಿ ಚಲಿಸುವ ಶರಣ ಅನುಪಮಸುಖಿ. ಆ ಸುಖ ಕ್ಷಣಿಕವಾದದ್ದಲ್ಲ. ಅದು ನಿರಂತರವಾಗಿ ಉಕ್ಕುವ ಸುಖಧಾರೆ. “ಅನುಪಮಸುಖಿ” ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಬಳಕೆಯಾಗಿರುವ ಅತ್ಯಪೂರ್ವವಾದ ಪದಪುಂಜ. ಇಂಥ ಪದಸೃಷ್ಟಿ ಮಾಡಿದ ಅಲ್ಲಮ ಅಭಿನಂದನಾರ್ಹ.

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಕಾಲಮಾನ | ಇರಾನ್‌ ಮೇಲಿನ ಇಸ್ರೇಲ್, ಅಮೆರಿಕ ಯುದ್ಧ- ಈ ಮೌನ ಭಾರತಕ್ಕೆ ಶೋಭೆಯಲ್ಲ

ಏಷ್ಯಾ ಖಂಡದಲ್ಲಿ ಗುರುತಿಸಲ್ಪಡುವ ದೇಶಗಳಲ್ಲಿ ಭಾರತವೂ ಒಂದು. ಈ ಪ್ರದೇಶದ ಪ್ರಗತಿ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...