ಅಲ್ಲಮನ ಅನನ್ಯ ಪದಪ್ರಯೋಗಗಳು | ನಿಜವನರಿದ ನಿಶ್ಚಿಂತ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು... ಆಗಾಗ

ನಿಜವನರಿದ ನಿಶ್ಚಿಂತನೆ
ಮರಣವ ಗೆಲಿದ ಮಹಂತನೆ
ಘನವ ಕಂಡ ಮಹಿಮನೆ
ಪರವನೊಳಕೊಂಡ ಪರಿಣಾಮಿಯೆ
ಬಯಲಲೊದಗಿದ ಭರಿತನೆ
ಗುಹೇಶ್ವರಲಿಂಗ
ನಿರಾಳವನೊಳಕೊಂಡ ಸಹಜನೆ

ಪದಾರ್ಥ:
ನಿಜ = ಸತ್ಯ
ಅರಿದ = ತಿಳಿದ
ನಿಶ್ಚಿಂತ = ಶಾಂತ, ಪ್ರಶಾಂತ
ಘನ = ಪರಿಪೂರ್ಣತೆ
ಪರಿಣಾಮಿ = ಪರಮತೃಪ್ತ

ವಚನಾರ್ಥ:
ಶರಣ ವ್ಯಕ್ತಿತ್ವಕ್ಕೆ ಒಂದು ವ್ಯಾಖ್ಯೆಯನ್ನು ನೀಡುವ ಉದ್ದೇಶದಲ್ಲಿ ಈ ವಚನ ರಚನೆಯಾದಂತೆ ಕಂಡುಬರುತ್ತದೆ. ಶರಣ ವ್ಯಕ್ತಿತ್ವ ಹೇಗಿರುತ್ತದೆ ಎಂಬ ವಿವರಣೆಯನ್ನು ಆರು ತೆರನಾಗಿ ಅಲ್ಲಮ ವಿವರಿಸುತ್ತಾರೆ. ಶರಣನು ಅಂತಿಮ ಸತ್ಯವನ್ನು ಅರಿತವನಾಗಿದ್ದರಿಂದ ಜೀವನ್ಮಾರ್ಗ ಮಧ್ಯದಲ್ಲಿ ಬರುವ ಯಾವ ಸುಖ ದುಃಖಗಳ ಗೋಜಿಗೂ ಲೆಕ್ಕಿಸದೆ ನಿಶ್ಚಿಂತನಾಗಿರುತ್ತಾನೆ. ಆತ ಜನನ ಮರಣಗಳ ಚಕ್ರಕ್ಕೆ ಸಿಲುಕದ ಮರಣ ಭಯವನ್ನು ಮೀರಿ ನಿಂತ ಮಹಾ ಮನುಷ್ಯ. ಹಾಗಾಗಿ ಅವನು ಮಹಾಂತ. ಮೃತ್ಯುಂಜಯ. ಮರಣವನ್ನು ಗೆದ್ದು ನಿಂತ ಮನಸ್ಥಿತಿಯುಳ್ಳವ. ಜೀವನದ ಪ್ರತಿ ಘಟ್ಟದಲ್ಲೂ ಪರಿಪೂರ್ಣತೆಯನ್ನು ಕಂಡ ಅಥವಾ ಕಾಣಲೆತ್ನಿಸುವ ನಿರಂತರ ಸಾಧಕ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಘನ ಮಹಿಮ. ಪರ ಅಂದರೆ ಪರವಸ್ತುವನ್ನೇ ತನ್ನ ಅಂತರಂಗದೊಳಗೆ ಅಳವಡಿಸಿಕೊಂಡಿರುವ ಅದ್ವೈತಿ ಮತ್ತು ಅದರ ಅಪೂರ್ವ ಪರಿಣಾಮವನ್ನು ತನ್ನಲ್ಲಿಯೇ ತಾನು ಆನಂದಿಸುವ ಪರಿಣಾಮಿ ಅಂದರೆ ಆತ್ಮತೃಪ್ತ. ಕಡೆಗೊಂದು ದಿನ ವಿಶ್ವದ ಅನಂತ ವಿಸ್ತಾರದ ಬಯಲಿನಲ್ಲಿ ಒಂದಾಗಿ ಬಯಲಾಗುವ ಸಂಪದ್ಭರಿತ ಬಯಕೆಯುಳ್ಳ ಸಜ್ಜನ. ಆತನದು ನಿರಾಳತೆಯೇ ಸಾಕಾರಗೊಂಡ ಸರಳ ಸಹಜ ಸುಂದರ ಮನಸ್ಸು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪದಪ್ರಯೋಗಾರ್ಥ:
ನಿಜವನರಿದ ನಿಶ್ಚಿಂತ ಎಂಬ ಪದ ಪ್ರಯೋಗವೇ ಇಡೀ ವಚನಕ್ಕೆ ಕಳಸಪ್ರಾಯವಾಗಿದೆ. ಜೀವನದಲ್ಲಿ ನಿಶ್ಚಿಂತತೆ ಪ್ರಾಪ್ತವಾಗುವುದು ನಿಜವನ್ನು ಅರಿತರೆ ಮಾತ್ರ. ಇಲ್ಲದಿದ್ದಲ್ಲಿ ಸತ್ಯ ಅಸತ್ಯಗಳ ತಾಕಲಾಟದಲ್ಲಿ ಚಿಂತೆ ಆವರಿಸುತ್ತದೆ. ಜೀವನದಲ್ಲಿ ಚಿಂತೆ ಚಿತೆಯಾಗಿ ಕಾಡುವ ಬಗೆಯಿದು. “ನಿರ್ಣಯವನರಿಯದ ಮನವೇ ದುಗುಡವನೆ ಆಹಾರಗೊಂಡೆಯಲ್ಲ” ಎಂದು ಅಲ್ಲಮ ಇನ್ನೊಂದು ವಚನದಲ್ಲಿ ಪ್ರಶ್ನಿಸುವ ಪ್ರಸಂಗ ಬರುತ್ತದೆ. ಈ ವಚನದಲ್ಲಿ ಬರುವ ಆರೂ ಸಾಲುಗಳಲ್ಲಿ ಅಲ್ಲಮ ಮಾಡಿರುವ ಪದಪ್ರಯೋಗಗಳಿಗೆ ಅಪೂರ್ವವಾದ ಕಾವ್ಯಗುಣವಿದೆ. ಪ್ರಾಸಬದ್ಧತೆಯಿದೆ. ಶರಣರ ಕ್ಲಿಷ್ಟಕರ ವ್ಯಕ್ತಿತ್ವವನ್ನು ಸರಳವಾಗಿ ಪ್ರತಿಪಾದಿಸುವ ಅಲ್ಲಮನ ಪದತಂತ್ರಗಾರಿಕೆ ಅತ್ಯಂತ ನಿಖರವಾಗಿ ನಿರೂಪಣೆಯಾಗಿದೆ.

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...