ಆಫ್ರಿಕಾದಿಂದ ಉತ್ತರ ಕರ್ನಾಟಕದವರೆಗೆ ‘ಅಳ್ಳಿ ಬವ್ವ’ ಸಂಸ್ಕೃತಿ ಪಥ; ಇದು ಮೊಹರಂ ವಿಶೇಷ

Date:

ಆಫ್ರಿಕಾದ ಕಡೆಯಿಂದ ವಲಸೆ ಬಂದ ಬುಡಕಟ್ಟು ಜನರು ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿ ತಮ್ಮದೇ ಆದ ಸಂಸ್ಕೃತಿ ಮತ್ತು ಆಚರಣೆಗಳನ್ನು ಇಲ್ಲಿ ಬೆರೆಸಿದರು. ವಿಶೇಷವಾಗಿ ಸೂಫಿ ಪರಂಪರೆ ಮತ್ತು ಮೊಹರಂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಈ ವಲಸಿಗರ ಪಾತ್ರ ಪ್ರಮುಖವಾಗಿತ್ತು.

ಪ್ರತಿಯೊಂದು ಧಾರ್ಮಿಕ ಆಚರಣೆಯ ಹಿಂದೆಯೂ ಇತಿಹಾಸ, ಸಂಸ್ಕೃತಿ ಹಾಗೂ ಮೌಲ್ಯಗಳ ಮಿಶ್ರಣವಿರುತ್ತದೆ. ಮೊಹರಂ ಹಬ್ಬವು ಕೂಡ ಅಂತಹದೇ ಒಂದು ಉದಾಹರಣೆ. ಇದು ಇಸ್ಲಾಂ ಧರ್ಮೀಯರ ಶೋಕಾಚರಣೆಯ ಹಬ್ಬವಾಗಿದ್ದರೂ, ಅದರೊಳಗಿನ ತಾತ್ಪರ್ಯ ಬಹುದೂರವರೆಗೆ ವ್ಯಾಪಿಸಿದೆ. ಮಾನವೀಯತೆ, ಧಾರ್ಮಿಕ ಸಹಿಷ್ಣುತೆ ಮತ್ತು ಭಾವೈಕ್ಯತೆಯ ದಿಕ್ಕಿನಲ್ಲಿ ಮೊಹರಂ ಸಾಗಿದೆ.

ಮೊಹರಂ ಹಬ್ಬದ ಕೇಂದ್ರಬಿಂದು ಕರ್ಬಲಾ ಎಂಬ ಸ್ಥಳ ಹಾಗೂ ಅಲ್ಲಿ ನಡೆದ ವೀರಗಾಥೆ. ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರು ನ್ಯಾಯ, ಸತ್ಯ ಮತ್ತು ಧರ್ಮಕ್ಕಾಗಿ ತಮ್ಮ ಜೀವವನ್ನೇ ಉಡಗಿಸಿದ ಸ್ಮರಣೆಯಾಗಿದೆ ಮೊಹರಂ. ಅವರ ಬಲಿದಾನವು ಕೇವಲ ಧಾರ್ಮಿಕವಷ್ಟೇ ಅಲ್ಲ, ನೈತಿಕತೆಯ ಮೇಲ್ವಿಚಾರಣೆಯೂ ಹೌದು. ಇಂದಿನ ಪೀಳಿಗೆಗೆ ಇದು ದೊಡ್ಡ ಪಾಠವಾಗಿದೆ.

ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬವು ಮತ್ತೊಂದು ವಿಶಿಷ್ಟ ಅರ್ಥವನ್ನೇ ಪಡೆದುಕೊಂಡಿದೆ. ಮೊಹರಂ ಹಬ್ಬವು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯದ ಬೆನ್ನೆಲುಬಾಗಿ ಕಾಣಿಸಿಕೊಂಡಿದೆ. ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಪರಸ್ಪರ ಭಾಗವಹಿಸುವಿಕೆ, ಮೆರವಣಿಗೆಗಳಿಗೆ ಸಹಕಾರ, ತಜಿಯಾ ನಿರ್ಮಾಣದಲ್ಲಿ ಶ್ರಮದ ಹರಿವು — ಇವೆಲ್ಲವೂ ನಾವೆಲ್ಲರೂ ಒಂದು ಎನ್ನುವ ಬಲವಾದ ಸಂದೇಶ ನೀಡುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಧರ್ಮಗಳ ಮಿತಿಯನ್ನು ಮೀರಿದ ಅಳ್ಳಿ ಬವ್ವ, ಕಳ್ಳಿ ಬವ್ವ (ಕರ್ಚಿಕಟಾ) ವೇಷಧಾರಿ ಆಚರಣೆ

ಮೊಹರಂ ಹಬ್ಬದ ದಿನಗಳಲ್ಲಿ ಹಿಂದೂ ಸಮುದಾಯದವರು ಹಾಕುವ ಅಳ್ಳಿಬವ್ವ, ಕರ್ಚಿಕಚಾ, ಕಳ್ಳಿಬವ್ವ, ಅಚೊಳ್ಳಿ-ಬಿಚೊಳ್ಳಿ, ಹುಲಿ ವೇಷಧಾರಿ ಸೋಗುಗಳು, ಹೆಜ್ಜೆ ಕುಣಿತ, ಕರ್ಬಲಾ ಪದಗಳು, ಹಿಂದೂ ಮುಸ್ಲಿಂ ಧರ್ಮದ ಸಹೋದರತ್ವಕ್ಕೆ ಸಾಕ್ಷಿಯಾಗಿ ನಿಂತಿವೆ.

ಇದನ್ನೂ ಓದಿರಿ: ಜಾತ್ಯತೀತತೆ, ಸಮಾಜವಾದದ ಪ್ರಖರ ಪ್ರತಿಪಾದಕ ಬುದ್ಧ; ಇದನ್ನು ಮರೆಮಾಚಲಾಗದು ಆರ್‌ಎಸ್‌ಎಸ್

ಈ ವೇಷಧಾರಿಗಳು ಮುಖಕ್ಕೆ ಕಪ್ಪು ಮಸಿ ಬಳಿದು, ಸೊಂಟಕ್ಕೆ ಗಂಟೆಯ ಗೆಜ್ಜೆ ಕಟ್ಟಿಕೊಂಡು, ತಲೆಗೆ ಲಾಲಿಕೆಯಾಕಾರದ ಅಲಂಕೃತ ಟೋಪಿ ಧರಿಸಿ ಮನೆಮನೆಗೆ ಹೋಗಿ ಅಕ್ಕಿ, ಜೋಳ, ಮತ್ತಿತರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಈ ಸಂಗ್ರಹಿತ ಧಾನ್ಯಗಳು ಮೊಹರಂ ಹಬ್ಬದ ಸಂದರ್ಭದಲ್ಲಿ ಸೇವೆಗಾಗಿ ಉಪಯೋಗವಾಗುತ್ತವೆ. ಈ ಆಚರಣೆಗಳಲ್ಲಿ ಯಾವುದೇ ಧಾರ್ಮಿಕ ಪ್ರತ್ಯೇಕತೆ ಇಲ್ಲದೆ, ಪರಸ್ಪರ ಸಹಕಾರ, ಗೌರವ ಮತ್ತು ಭಾವೈಕ್ಯತೆಯ ಭಾವನೆ ಕಾಣಿಸುತ್ತವೆ.

moharam 1

ಅಳ್ಳಿ ಬವ್ವ (ಕರ್ಚಿ ಕಟಾ) ವೇಷಧಾರಿ ವಿಶಿಷ್ಟ ಆಚರಣೆಗೆ ಐತಿಹಾಸಿಕ ಮಹತ್ವವಿದ್ದು, ಆಫ್ರಿಕಾದ ಕಡೆಯಿಂದ ವಲಸೆ ಬಂದ ಬುಡಕಟ್ಟು ಜನರು ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿ ತಮ್ಮದೇ ಆದ ಸಂಸ್ಕೃತಿ ಮತ್ತು ಆಚರಣೆಗಳನ್ನು ಇಲ್ಲಿ ಬೆರೆಸಿದರು. ವಿಶೇಷವಾಗಿ ಸೂಫಿ ಪರಂಪರೆ ಮತ್ತು ಮೊಹರಂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಈ ವಲಸಿಗರ ಪಾತ್ರ ಪ್ರಮುಖವಾಗಿತ್ತು. ಆಫ್ರಿಕಾ ಮೂಲದ ಕೆಲವು ಬುಡಕಟ್ಟು ಜನಾಂಗಗಳು ಮೊಹರಂ ಹಬ್ಬದಲ್ಲಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.

ಇದನ್ನು ಸಂಕೇತಿಸುವಂತೆ ಅವರು ಅಳ್ಳಿ ಬವ್ವ, ಕರ್ಚಿಕಟಾ, ಕಳ್ಳಿ ಬವ್ವ ಎಂಬ ಹೆಸರುಗಳೊಂದಿಗೆ ವೇಷಗಳನ್ನು ಧರಿಸಿ, ತಾವು ದೇವರಿಗೆ ಸಲ್ಲಿಸುವ ಸೇವೆಯನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಿದರು. ಕಪ್ಪು ಮಸಿ ಬಳಿದು, ಗೆಜ್ಜೆ, ಲಾಲಿಕೆ, ವಿಶಿಷ್ಟ ನೃತ್ಯ-ಚಾಲನೆಗಳಿಂದ ಕೂಡಿದ ಈ ವೇಷಧಾರಣೆಯು ಭಕ್ತಿಯ ಜೊತೆಗೆ ಕಲೆ, ಸಂಸ್ಕೃತಿಯ ಸಮ್ಮಿಲನವಾಗಿ ಕಾಣುತ್ತಾರೆ.

ಅಂದಿನಿಂದ ಇಂದಿನವರೆಗೂ ಈ ವಿಶಿಷ್ಟ ಸಂಸ್ಕೃತಿ, ತಾಳಮೇಳದ ಉತ್ಸವ ರೂಪವಾಗಿ, ವಿಭಿನ್ನ ನಂಬಿಕೆಗಳ ಹಬ್ಬವಾಗಿ ಜಾರಿಯಲ್ಲಿದೆ. ಹಿಂದೂ ಮುಸ್ಲಿಂ ಸಹಭಾವನೆಗೆ ಸಾಕ್ಷಿಯಾಗಿರುವ ಈ ಸಂಪ್ರದಾಯ, ಕರ್ನಾಟಕದ ವಿಶೇಷತೆಯಾಗಿ ಉಳಿದುಕೊಂಡಿದೆ.

ಅಹಂಕಾರದ ಸಂಕೇತ ಹುಲಿ ವೇಷ

ಮನುಷ್ಯನ ಜೀವನದಲ್ಲಿ ಅಹಂಕಾರ ಒಂದು ಭಯಾನಕ ಶತ್ರು. ಅದು ವ್ಯಕ್ತಿಯಲ್ಲಿನ ಮೌನ, ವಿನಮ್ರತೆ ಮತ್ತು ಸಹಜ ಮಾನವೀಯತೆಯನ್ನು ನಶಿಸುತ್ತದೆ. ಈ ಅಹಂಕಾರವನ್ನು ತೊಳೆದು ಹಾಕಬೇಕೆಂಬ ತೀವ್ರ ತಾತ್ವಿಕ ಮತ್ತು ಸಾಂಸ್ಕೃತಿಕ ಪ್ರತೀಕವಾಗಿ ಬಳಕೆಯಲ್ಲಿರುವುದು ಮೊಹರಂ ಹಬ್ಬದ ‘ಹುಲಿ ವೇಷ’ ಹಾಗೂ ‘ಅಳ್ಳಿ ಬವ್ವ’ ಅಥವಾ ‘ಕಳ್ಳಿಬವ್ವ’ ಎಂಬ ಪಾತ್ರಗಳು.

Moharam 2

ಮೊಹರಂ ಹಬ್ಬದ ಸಂದರ್ಭದಲ್ಲಿ ಹುಲಿ ವೇಷವನ್ನು ಧರಿಸುವುದು ಬಹುಶಃ ಅಲ್ಲಿನ ನಾಡು-ನುಡಿಗಳಲ್ಲಿ ಅಸ್ತಿತ್ವದಲ್ಲಿರುವ ಅನನ್ಯ ಸಂಸ್ಕೃತಿಯ ಸಂಕೇತ. ಈ ವೇಷವು ಶಕ್ತಿಯಲ್ಲಿಯೇ ಅಹಂಕಾರದ ಸಂಕೇತವಾಗಿದೆ. ಮೈಮೇಲೆ ಬಣ್ಣದ ಪಟ್ಟೆ, ಗಾಯನ- ವಾಯನಗಳೊಂದಿಗೆ ರಸ್ತೆಯಲ್ಲಿ ಪಥಸಂಚಲನೆ ಮಾಡುವ ಈ ಕಲಾತ್ಮಕ ಪ್ರದರ್ಶನವು, ಹೊರಗಿನಿಂದ ಕೇವಲ ಮೇಳವಾಹಿನಿಯಂತೆ ಕಾಣಬಹುದು. ಆದರೆ ಅದರ ಹಿಂದಿರುವ ಆಶಯ ಸಾಕಷ್ಟು ಗಂಭೀರ.

ಇದನ್ನೂ ಓದಿರಿ: ಹಾವೇರಿ | ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಸಂಭ್ರಮ!

ಈ ಹುಲಿಯನ್ನು ನುಂಗಲು ಕಳ್ಳಿ ಬವ್ವ (ಕರ್ಚಿಕಟಾ) ಬರುತ್ತದೆ. ಇದು ಅಹಂಕಾರದ ವಿರುದ್ಧದ ಪ್ರತಿರೋಧ ಶಕ್ತಿಯ ರೂಪಕ. ಈ ಸಂದರ್ಭದಲ್ಲಿ ಹುಲಿಗಳು ಒಟ್ಟುಗೂಡುತ್ತವೆ, ಕಳ್ಳಿ ಬವ್ವವನ್ನು ಓಡಿಸುತ್ತವೆ. ಇದರಿಂದಾಗಿ ಅಹಂಕಾರ ಸಂಪೂರ್ಣವಾಗಿ ನಾಶವಾಗುವುದಿಲ್ಲ ಎಂಬುದನ್ನು ಹಿರಿಯರು ಬೋಧಿಸುತ್ತಾರೆ. “ಅಹಂಕಾರದ ಹುಲಿ ನಾಶವಾಗದೆ ಮನುಷ್ಯನಲ್ಲಿ ಇನ್ನೂ ಇದೆ” ಎಂಬ ಅವರ ಮಾತು ಬಹಳ ಅರ್ಥಪೂರ್ಣವಾದ ಮಾತು.

ಮೊಹರಂ ಹಬ್ಬದ ಹೃದಯದಲ್ಲಿ ಇರುವ ಕರ್ಬಲಾ ಯುದ್ಧ, ಇಮಾಮ್ ಹುಸೇನ್ ಅವರ ಧೈರ್ಯ ಮತ್ತು ಧರ್ಮಪಾಲನೆಯ ಕಥೆ, ಕೇವಲ ಇಸ್ಲಾಂ ಧರ್ಮೀಯರ ಬಗೆಯಲ್ಲದೆ, ಎಲ್ಲರಿಗೂ ಸಮಾನವಾಗಿ ನೈತಿಕ ಪಾಠ ನೀಡುತ್ತದೆ. ಆದರೆ ಈ ಹಬ್ಬದ ಸೌಂದರ್ಯ ಅಲ್ಲಿಯೇ ನಿಲ್ಲುವುದಿಲ್ಲ – ವಿಶೇಷವಾಗಿ ಉತ್ತರ ಕರ್ನಾಟಕದ ನಾಡಿನಲ್ಲಿ ಮೊಹರಂ ಹಬ್ಬವು ಧರ್ಮಾತೀತ ಸಹಭಾಗಿತ್ವ, ಕಲಾತ್ಮಕ ಪರಂಪರೆ ಮತ್ತು ಮಾನವೀಯ ಸಹಜತೆಯ ಜಾತ್ರೆಯಾಗಿ ಪ್ರಭಾವ ಬೀರುತ್ತಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...