ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ವಿನಾಶಕಾರಿ ನೀತಿ, ಭಾರತೀಯ ವಿಮಾನಯಾನಕ್ಕೆ ದುಃಸ್ವಪ್ನ

Date:

ಅಮೆರಿಕವು ತನ್ನ ಸ್ವಾರ್ಥ, ಸೇನಾ ನೆಲೆಗಳ ವಿಸ್ತರಣೆ ಮತ್ತು ದಬ್ಬಾಳಿಕೆಯ ನೀತಿಗಳಿಗಾಗಿ ಪಶ್ಚಿಮ ಏಷ್ಯಾವನ್ನು ರಣರಂಗವನ್ನಾಗಿ ಪರಿವರ್ತಿಸಿರುವುದು ಸ್ಪಷ್ಟ. ಅಮೆರಿಕದ ಈ ವಿನಾಶಕಾರಿ ನಡೆಗಳಿಂದಾಗಿ ಭಾರತದ ವಿಮಾನಯಾನ ವಲಯವು ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ

ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ಕೇವಲ ಆ ಎರಡು ರಾಷ್ಟ್ರಗಳಿಗೆ ಸೀಮಿತವಾಗಿಲ್ಲ; ಬದಲಾಗಿ ಇದು ಇಡೀ ವಿಶ್ವದ ಆರ್ಥಿಕತೆ ಹಾಗೂ ವಾಯುಯಾನ ವ್ಯವಸ್ಥೆಯ ಮೇಲೆ ತೀವ್ರ ಸ್ವರೂಪದ ಪೆಟ್ಟು ನೀಡುತ್ತಿದೆ. ಜಾಗತಿಕ ಶಾಂತಿಯ ಕಾವಲುಗಾರನಂತೆ ಬಿಂಬಿಸಿಕೊಳ್ಳುವ ಅಮೆರಿಕದ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳು, ಅಹಂಕಾರ ಮತ್ಗತು ಇಸ್ರೇಲ್‌ ಪರವಾದ ಪ್ರಚೋದನಕಾರಿ ಕುಮ್ಮಕ್ಕು ಇಡೀ ವಲಯವನ್ನು ಯುದ್ಧದ ಬೆಂಕಿಗೆ ತಳ್ಳಿವೆ. ತನ್ನ ಶಸ್ತ್ರಾಸ್ತ್ರ ವ್ಯಾಪಾರ ಮತ್ತು ತೈಲ ಸಂಪನ್ಯೂಲಗಳ ಮೇಲಿನ ಹಿಡಿತವನ್ನು ಉಳಿಸಿಕೊಳ್ಳಲು ಅಮೆರಿಕವು ಅನುಸರಿಸುತ್ತಿರುವ ಈ ವಿನಾಶಕಾರಿ ವಿದೇಶಾಂಗ ನೀತಿಯಿಂದಾಗಿ, ಜಾಗತಿಕ ವಾಯುಪ್ರದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟು ಪ್ರಸ್ತುತ ಭಾರತೀಯ ಏರ್‌ಲೈನ್ಸ್‌ಗಳಿಗೆ ಅಕ್ಷರಶಃ ದುಃಸ್ವಪ್ನವಾಗಿ ಪರಿಣಮಿಸಿದೆ.

ಅಮೆರಿಕದ ಬೆಂಬಲದೊಂದಿಗೆ ನಡೆಯುತ್ತಿರುವ ನಿರಂತರ ಬಾಂಬ್ ದಾಳಿಗಳು ಹಾಗೂ ಯುದ್ಧದ ಭೀತಿಯಿಂದಾಗಿ, ಇರಾನ್‌, ಇರಾಕ್‌, ಕುವೈತ್, ಯುಎಇ ಮತ್ತು ಬಹ್ರೇನ್‌ ಸೇರಿದಂತೆ ಅನೇಕ ರಾಷ್ಟ್ರಗಳ ವಾಯುಪ್ರದೇಶಗಳು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಆಕಾಶದಲ್ಲಿ ಸುಮಾರು 28 ಲಕ್ಷ ಚದರ ಕಿಲೋಮೀಟರ್‌ಗಳಷ್ಟು ಬೃಹತ್ ಶೂನ್ಯ ವಲಯ ಅಥವಾ ‘ನೋ ಫ್ಲೈ ಜೋನ್’ ಸೃಷ್ಟಿಯಾಗಿದೆ. ಇದರಿಂದಾಗಿ ಏರ್ ಇಂಡಿಯಾ ಮತ್ತು ಇಂಡಿಗೋದಂತಹ ಭಾರತೀಯ ವಿಮಾನಯಾನ ಸಂಸ್ಥೆಗಳ ಯುರೋಪ್‌ ಮತ್ತು ಅಮೆರಿಕಕ್ಕೆ ತೆರಳಲು ಅತಿಉದ್ದದ ಹಾಗೂ ಸುತ್ತುಬಳಕೆಯ ಮಾರ್ಗಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯುದ್ಧ ಪೀಡಿತ ಪ್ರದೇಶಗಳನ್ನು ತಪ್ಪಿಸಿ ವಿಮಾನಯಾನ ಮಾಡುವುದು ಸಂಸ್ಥೆಗಳ ಆರ್ಥಿಕತೆಯ ಬೆನ್ನುಮೂಳೆ ಮುರಿಯುತ್ತಿದೆ.  ವಿಮಾನಯಾನ ಸಂಸ್ಥೆಗಳ ಮೂಲಗಳ ಪ್ರಕಾರ, ಪಶ್ಚಿಮ ಏಷ್ಯಾಕ್ಕೆ ತೆರಳುವ ವೈಡ್‌-ಬಾಡಿ ವಿಮಾನಗಳ ವಿಮಾ ಕಂತು(ದೊಡ್ಡ ಅಂತಾರಾಷ್ಟ್ರೀಯ ವಿಮಾನಗಳಿಗೆ ಪಾವತಿಸಬೇಕಾದ ಹೆಚ್ಚುವರಿ ವಿಮಾ ಪಾವತಿ) ಪ್ರತಿ ರಿಟರ್ನ್ ಟ್ರಿಪ್‌ಗೆ ಮೂವತ್ತರಿಂದ ನಲವತ್ತು ಲಕ್ಷ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಪ್ರಸ್ತುತ ಯುದ್ಧದ ಉದ್ವಿಗ್ನತೆಯಿಂದಾಗಿ ಕೆಲವು ಸಂದರ್ಭಗಳಲ್ಲಿ ಈ ವಿಮಾ ಮೊತ್ತವು ತೊಂಬತ್ತು ಲಕ್ಷದಿಂದ ಒಂದು ಕೋಟಿ ರೂಪಾಯಿಗಳವರೆಗೂ ತಲುಪಿರುವುದು ಆತಂಕಕಾರಿ ಸಂಗತಿಯಾಗಿದೆ.

ಇದರ ಜೊತೆಗೆ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ವಿಮಾನಯಾನ ಇಂಧನ) ಬೆಲೆಯು ಕೇವಲ ಒಂದೇ ತಿಂಗಳಲ್ಲಿ ಶೇಕಡಾ 6ರಷ್ಟು ಭಾರಿ ಹೆಚ್ಚಳ ಕಂಡಿದೆ.  ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದು ಕಾರ್ಯಾಚರಣೆಯ ವೆಚ್ಚವನ್ನು ಇನ್ನಷ್ಟು ದುಪಟ್ಟು ಮಾಡಿದೆ. ಈ ಎಲ್ಲ ಆರ್ಥಿಕ ಹೊರೆಗಳು ಅಂತಿಮವಾಗಿ ಪ್ರಯಾಣಿಕರ ಮೇಲೆಯೇ ಬೀಳುತ್ತಿದ್ದು, ಕೇವಲ ಹೆಚ್ಚುವರಿ ವಿಮಾ ಪ್ರೀಮಿಯಂನಿಂದಾಗಿಯೇ  ಪ್ರತಿ ಪ್ರಯಾಣಿಕನ ಮೇಲೆ ಸರಾಸರಿ 20 ಸಾವಿರದಿಂದ 35 ಸಾವಿರ ರೂಪಾಯಿಗಳಷ್ಟು ಹೆಚ್ಚುವರಿ ವೆಚ್ಚದ ಹೊರೆ ಬೀಳುತ್ತಿದೆ. ಅಮೆರಿಕ ಪ್ರೇರಿತ ಈ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ ದಿನವೊಂದಕ್ಕೆ ಜಾಗತಿಕವಾಗಿ ಸರಾಸರಿ 700ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗುತ್ತಿವೆ. ಇದರಿಂದಾಗಿ ಟಿಕೆಟ್ ದರಗಳು ಸಾಮಾನ್ಯ ಜನರ ಕೈಗೆಟುಕದಷ್ಟು ದುಬಾರಿಯಾಗಿವೆ.

ಇದನ್ನು ಓದಿದ್ದೀರಾ? ಇರಾನ್ ವಿರುದ್ಧ ಅಮೆರಿಕದ ವಿನಾಶಕಾರಿ ಕುತಂತ್ರ; ತನ್ನ ಬೇಳೆ ಬೇಯಿಸಿಕೊಳ್ಳಲು ಕುರ್ಡಿಶ್ ಉಗ್ರರ ಕೈಗೆ ಅಸ್ತ್ರ!

ಟಿಕೆಟ್ ದರಗಳ ಏರಿಕೆಯ ಅಂಕಿ-ಅಂಶಗಳನ್ನು ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ. ಲಂಡನ್‌ನಿಂದ ಮುಂಬೈಗೆ ಬರುವ ಯುರೋಪಿಯನ್ ಏರ್‌ಲೈನ್ಸ್‌ನ ಎಕಾನಮಿ ಕ್ಲಾಸ್ ಟಿಕೆಟ್ ದರವು ಭಾರೀ ಏರಿಕೆ ಕಂಡು ಸುಮಾರು 2.9 ಲಕ್ಷ ರೂಪಾಯಿಗಳಿಗೆ ತಲುಪಿದ್ದರೆ, ಇದೇ ಮಾರ್ಗದ ಬಿಸಿನೆಸ್ ಕ್ಲಾಸ್ ದರ 9 ಲಕ್ಷ ರೂಪಾಯಿಗಳನ್ನು ಮುಟ್ಟಿದೆ.

ಹೈದರಾಬಾದ್‌ನಿಂದ ಲಂಡನ್‌ಗೆ ತೆರಳುವ ವಿಮಾನಗಳ ದರ 65 ಸಾವಿರದಿಂದ 90 ಸಾವಿರ ರೂಪಾಯಿಗಳಷ್ಟಾಗಿದ್ದು, ಇದು ಸಾಮಾನ್ಯ ದರಕ್ಕಿಂತ ಸಂಪೂರ್ಣ ದುಪ್ಪಟ್ಟಾಗಿದೆ. ಜರ್ಮನಿಯಂತಹ ಯುರೋಪಿಯನ್ ದೇಶಗಳಿಗೆ ಟಿಕೆಟ್ ದರ ಶೇಕಡಾ 200ರಿಂದ 300ರಷ್ಟು ಹೆಚ್ಚಾಗಿದೆ. ಇನ್ನು ಹೈದರಾಬಾದ್‌ನಿಂದ ನ್ಯೂಯಾರ್ಕ್‌ಗೆ ಇಥಿಯೋಪಿಯಾ ಮಾರ್ಗವಾಗಿ ತೆರಳುವ ವಿಮಾನದ ಟಿಕೆಟ್ ದರವು ಸುಮಾರು 1.5 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಸುಮಾರು 90 ಲಕ್ಷ ಭಾರತೀಯರು ನೆಲೆಸಿದ್ದು, ಅವರ ಸುರಕ್ಷತೆ ಮತ್ತು ಪ್ರಯಾಣ ಈಗ ಸಂಪೂರ್ಣವಾಗಿ ಅತಂತ್ರವಾಗಿದೆ. ಉದಾಹರಣೆಗೆ, ಹೈದರಾಬಾದ್‌ನ ಅಂತಾರಾಷ್ಟ್ರೀಯ ನಿಲ್ದಾಣವೊಂದರಲ್ಲೇ ಒಂದೇ ದಿನ 50ಕ್ಕೂ ಹೆಚ್ಚು ವಿಮಾನಗಳು ರದ್ದಾಗಿರುವುದು ಅಲ್ಲಿನ ಕನ್ನಡಿಗರು ಸೇರಿದಂತೆ ಅನಿವಾಸಿ ಭಾರತೀಯರ ಆತಂಕಕ್ಕೆ ಕಾರಣವಾಗಿದೆ.

ಅಮೆರಿಕವು ತನ್ನ ಸ್ವಾರ್ಥ, ಸೇನಾ ನೆಲೆಗಳ ವಿಸ್ತರಣೆ ಮತ್ತು ದಬ್ಬಾಳಿಕೆಯ ನೀತಿಗಳಿಗಾಗಿ ಪಶ್ಚಿಮ ಏಷ್ಯಾವನ್ನು ರಣರಂಗವನ್ನಾಗಿ ಪರಿವರ್ತಿಸಿರುವುದು ಸ್ಪಷ್ಟ. ಅಮೆರಿಕದ ಈ ವಿನಾಶಕಾರಿ ನಡೆಗಳಿಂದಾಗಿ ಭಾರತದ ವಿಮಾನಯಾನ ವಲಯವು ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಎಲ್ಲಿಯವರೆಗೆ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ನೀತಿಯನ್ನು ಕೈಬಿಟ್ಟು ಜಾಗತಿಕ ಶಾಂತಿಗೆ ಅವಕಾಶ ಮಾಡಿಕೊಡುವುದಿಲ್ಲವೋ, ಅಲ್ಲಿಯವರೆಗೆ ವಾಯುಯಾನ ಕ್ಷೇತ್ರ ಮತ್ತು ಮುಗ್ಧ ಪ್ರಯಾಣಿಕರು ಭಾರಿ ಬೆಲೆ ತೆರಲೇಬೇಕಾದ ದುರಂತ ಸ್ಥಿತಿ ಮುಂದುವರೆಯಲಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...