ʼಈ ದಿನʼ ಕವಿತೆ | ರಂಜಾನ್ ತಿಂಗಳ ಒಂದು ಮಧ್ಯಾಹ್ನ!

Date:

ಇರುವಾಗ ದನಿಯಾಗದೆ
ಸತ್ತ ಮೇಲೆ ಕೊಂಡಾಡಿಸಿಕೊಳ್ಳುವ
ವಿಖ್ಯಾತ ಕವಿಗಳ ಲಘುಬಗೆಯ ಪ್ರೇಮ;
ಕವಿತೆಗಳು ಇಂದು ಸತ್ತು ಹೋದವು!

ರಂಜಾನ್ ತಿಂಗಳ ಮಧ್ಯಾಹ್ನ
ಆಲಿಕಲ್ಲು ಮಳೆ ಬಂತೆಂದು
ಶಾಲೆಯಿಂದ ಹೊರಬರಲು
ಸಂಭ್ರಮದಿಂದ ಕೂಗಿದ ಮಕ್ಕಳು
ರೆಪ್ಪೆ ಮಿಟುಕಿಸುವಷ್ಟರಲ್ಲಿ ಬೆಂಕಿ;
ಉಂಡೆಗಳಾಗಿ ಚಲ್ಲಾಪಿಲ್ಲಿಯಾದವು!

ಆಗ
ಆಕಾಶವೂ ಹೊಗೆಯಾಡಿ
ಸೂರ್ಯನಿಗೂ ಗ್ರಹಣ ಹಿಡಿಯಿತು!

ಉಪವಾಸವಿದ್ದ ನೂರಾರು ಜೀವಗಳು
ತಮಗರಿವಿಲ್ಲದೆ ಇನ್ಯಾರದ್ದೋ ಅಹಂ-
ಕ್ಯಾನಕ್ಕೆ ರಾತ್ರಿ ನಕ್ಷತ್ರಗಳಾದವು;
ಅಪ್ಪ-
ಅವ್ವಂದಿರ ಶಾಶ್ವತ ದುಃಖಿಗಳಾದರು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಾನವೀಯ ಚಿಂತನೆಗಳ ಅಪ್ಪಟ
ಜೀವನ ಪ್ರೇಮಿಗಳೀಗ ಯಾವ
ಹೂವಿನ ತೋಟದಲ್ಲಿ ನೀರು
ಹಾಕುತ್ತಿದ್ದಾರೋ ನಾಕಾಣೆ!

ಗಂಟೆಗಟ್ಟಲೆ ಭಾಷಣ ಹೊಡೆಯುವ
ವಿಶ್ವ ಶ್ರೇಷ್ಠ ನಾಯಕರು ಯಾವ
ಇಫ್ತಾರ್ ಕೂಟದಲಿ ತಿಂದು ಗಂಟಲಲಿ
ಗೋಲಿಸೋಡ ಇಳಿಸಿ ತೇಗುತ್ತಿದ್ದಾರೊ!

ಅವರನ್ನೆಲ್ಲಾ ಬಿಡಿ,
ಈ ರೌರವ ನರಕ ನೋಡಿದ
ಮೇಲೆಯೂ ಮೌನ‌ ಮುರಿಯದ
ದೇಶಕಟ್ಟುವ ಕವಿಗಳ ನಡೆಯೂ
ಮಾನವ ಕುಲದ ಅಂತ್ಯದ ಸಂಕೇತ!

ಈ ದಿನ
ಜಗತ್ತಿನಲ್ಲಿರುವ ಕವಿಗಳೆ
ಬೀದಿಗಿಳಿದು ಯುದ್ಧ ನಿಲ್ಲಿಸಿರೆಂದು
ಜೋರಾಗಿ ಕೂಗಾಡೋಣ ಬನ್ನಿ.

ಶಾಂತಿ ಬಿತ್ತುವ ಮಾತಿನ
ಬಾಂಬುಗಳನ್ನು ಕಂಡು ಹಿಡಿಯೋಣ!
ಎರಡೂ ಕಡೆ ಬಿಸಾಡಿ
ಕೂಗು ಮಾರಿಗಳ ಬಾಯಿ ಮುಚ್ಚಿಸೋಣ!
ಮಾನವನೆದೆಯಲಿ ಸಮತೆಯ
ಪರಂಜ್ಯೋತಿ ಬೆಳಗಿಸೋಣ.

-ಗೋಳೂರ ನಾರಾಯಣಸ್ವಾಮಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...