ಗಾಂಧಿ ಮತ್ತು ಮಗನ ಪ್ರಶ್ನೆ

Date:

ಶಾಲೆಯ ಗಾಂಧಿ ಜಯಂತಿ ಆಚರಣೆಗೆಂದು ನಾನೇ ಬರೆದುಕೊಟ್ಟಿದ್ದ ಭಾಷಣವನ್ನು ಅಕ್ಷರಶಃ ಉರು ಹೊಡೆದು ಕಂಠಪಾಠ ಮಾಡಿಕೊಂಡ ಬಳಿಕ ನನ್ನ ಮಗ ಕೇಳಿದ, “ಅಪ್ಪಾ, ಗಾಂಧಿ ನಿಜಕ್ಕೂ ಎಷ್ಟು ಪವರ್‌ಫುಲ್ ಮನುಷ್ಯನಾಗಿದ್ದರು?”. ಕೊಡಬೇಕಿದ್ದ ಉತ್ತರದ ಬಗ್ಗೆ ನಾನು ಸ್ಪಷ್ಟವಾಗಿದ್ದೆ; ಆದರೆ ಅದನ್ನು ಯಾವ ರೀತಿ ನೀಡಬೇಕೆಂಬುದರ ಕುರಿತು ಕೊಂಚ ಗಲಿಬಿಲಿಗೊಂಡು ತಡಕಾಡಿದೆ.

ಯಾಕೆಂದರೆ, ಒಬ್ಬ ಮನುಷ್ಯನ ಶಕ್ತಿ, ಸಾಮರ್ಥ್ಯಗಳನ್ನು ಅಳೆಯುವ ಮಾನದಂಡ ಯಾವುದು? ಅದು, ಆ ವ್ಯಕ್ತಿಯ ಸಮಗ್ರ ಜೀವನವನ್ನು ಅರ್ಥ ಮಾಡಿಕೊಂಡಾಗ ಆತನ ಕುರಿತು ನಮ್ಮೊಳಗೇ ತಳೆಯುವ ಒಂದು ತೀರ್ಮಾನ; ಅಭಿಮಾನ; ಮತ್ತು ಗೌರವ. ಅದನ್ನು, ಆ ವ್ಯಕ್ತಿಯ ಬಗ್ಗೆ ಅಷ್ಟೇನು ಗೊತ್ತಿರದ ಮತ್ತೊಬ್ಬರ ಮುಂದೆ ಹೇಳುವಾಗ ಚುಟುಕಾಗಿ ಹೇಗೆ ನಿರೂಪಿಸುವುದು. ನನ್ನ ಸಮಸ್ಯೆ ಅದಾಗಿತ್ತು. ಮಗ ಕಾಯುತ್ತಲೇ ಇದ್ದ.

ಕೊನೆಗೂ ಒಂದು ದಾರಿ ತೋರಿತು, “ನೋಡು ಮಗನೇ, ಗಾಂಧಿಯನ್ನು ಕೊಂದದ್ದು ಗೋಡ್ಸೆ ಎಂಬ ಹಂತಕ. ಆ ಹಂತಕನಿಗೆ ಮನದೊಳಗೇ ಗುಡಿಕಟ್ಟಿ, ಆರಾಧಿಸಿ, ಜೈಕಾರ ಕೂಗುವ ಸಂತತಿಯವರನ್ನು ಕೂಡಾ; ಅಕ್ಟೋಬರ್ 2 ಬಂತೆಂದರೆ, ತಮ್ಮ ಸಮಾಧಿಯ ಬಳಿ ಕರೆಸಿಕೊಂಡು, ಅವರ ಕೈಗಳಿಂದಲೇ ಪುಷ್ಪ ನಮನ ಮಾಡಿಸಿಕೊಂಡು, ತಲೆಬಾಗಿಸಿ ನಿಲ್ಲುವಂತೆ ಮಾಡಿಸಿಕೊಳ್ಳುವಷ್ಟು ಪವರಲ್‌ಫುಲ್ ವ್ಯಕ್ತಿ, ನಮ್ಮ ಗಾಂಧಿ” ಎಂದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ನನ್ನ ಉತ್ತರದಿಂದ ಮಗನಿಗೆ ಎಷ್ಟುಮಾತ್ರ ತೃಪ್ತಿ ಸಿಕ್ಕಿತೋ ಗೊತ್ತಿಲ್ಲ, ಆದರೆ ನಾನಂತೂ ಮಗನ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟ ಖುಷಿಯಲ್ಲಿ ಬೀಗುತ್ತಿದ್ದೆ. ಅದೇ ಹೊತ್ತಿಗೆ, ಗಾಂಧಿಯ ಇಡೀ ಬದುಕಿನ ಸುಸ್ಪಷ್ಟ ಮೌಲ್ಯಗಳಾದ ಸತ್ಯ ಮತ್ತು ಅಹಿಂಸೆಗಳನ್ನು ಮುಂದಿನ ಪೀಳಿಗೆಯವರಿಂದ ಮರೆಮಾಚುವ ದುರುದ್ದೇಶವೇನೊ ಎಂಬಂತೆ, ಅವರನ್ನು ಕೇವಲ ಸ್ವಚ್ಛತೆಯ ಗೂಟಕ್ಕೆ ಬಿಗಿಯುವ ಪ್ರಯತ್ನದಲ್ಲಿ ಅದ್ಯಾರೋ ಟಿವಿ ಪರದೆಯ ಮೇಲೆ ಭಾಷಣ ಮಾಡುತ್ತಿದ್ದರು.

WhatsApp Image 2023 06 15 at 2.47.13 PM
ಗಿರೀಶ್ ತಾಳಿಕಟ್ಟೆ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಗಿರೀಶ್ ತಾಳಿಕಟ್ಟೆ
ಗಿರೀಶ್ ತಾಳಿಕಟ್ಟೆ
ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...