ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿ ಜೆ, ದ್ವೇಷಭಾಷಣ ಎಷ್ಟು ಸರಿ?

Date:

ಮೆರವಣಿಗೆ ಹೆಸರಿನಲ್ಲಿ ನಡೆಸುವ ಡಿ ಜೆ, ಅಶ್ಲೀಲ ನೃತ್ಯ, ದ್ವೇಷದ ಭಾಷಣಗಳು, ಕುಡಿದು ಕುಣಿಯುವುದು, ಜನರ ನಂಬಿಕೆಯನ್ನು ಅಣಕಿಸುವ ಕ್ರಿಯೆ ಆಗುತ್ತದೆ ಮತ್ತು ಧರ್ಮದ ಅವಹೇಳನ ಎನಿಸುತ್ತದೆ.

ಇತ್ತೀಚಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿ ಜೆ ಹಾವಳಿ ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ, ಅದು ಒಳ್ಳೆಯ ಬೆಳವಣಿಗೆ ಮತ್ತು ಸ್ವಾಗತಾರ್ಹ. ಆದರೆ ಕೆಲವರು ಅದನ್ನು ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕತ್ರಯರು ಅಧಿವೇಶನದಲ್ಲೂ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಸಾರ್ವಜನಿಕ ಆಚರಣೆ ಎಂದರೆ ಅಲ್ಲಿಗೆ ಸೇರುವ ಎಲ್ಲರೂ ದೇವರ ಎದುರು ಒಂದೇ ಮತ್ತು ಅಲ್ಲಿ ಸೇರುವ ನಮಗೆ ದೇವರು ಒಂದೇ ಎಂಬ ಸಂದೇಶ ನೀಡುವುದಕ್ಕೆ. ಜೊತೆಗೆ ಆಯಾ ಪ್ರದೇಶದ ಸಾಂಸ್ಕೃತಿಕ ಸಂಗತಿಗಳ ಅನಾವರಣ, ಅದರ ಮೆರವಣಿಗೆ ಆಧ್ಯಾತ್ಮ ಸಂವಾದಕ್ಕೆ ತೆರೆದುಕೊಳ್ಳುವ ವೇದಿಕೆ ಆಗಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೆರವಣಿಗೆ ಹೆಸರಿನಲ್ಲಿ ನಡೆಸುವ ಡಿ ಜೆ, ಅಶ್ಲೀಲ ನೃತ್ಯ, ದ್ವೇಷದ ಭಾಷಣಗಳು, ಕುಡಿದು ಕುಣಿಯುವುದು, ಜನರ ನಂಬಿಕೆಯನ್ನು ಅಣಕಿಸುವ ಕ್ರಿಯೆ ಆಗುತ್ತದೆ ಮತ್ತು ಧರ್ಮದ ಅವಹೇಳನ ಆಗುತ್ತದೆ.

ಅಲ್ಲಿ ಸಂತ ಪರಂಪರೆಯ ಸಂಕೀರ್ತನೆಗಳ ಕುರಿತು, ಅವರವರ ಮತ, ಧರ್ಮದ ಅದರ ವೇದಾಂತದ, ಜೀವನ ಧರ್ಮದ, ಸಹನೆ ಸಹಬಾಳ್ವೆ, ಆದರ್ಶಗಳ ಕುರಿತು ಉಪನ್ಯಾಸ, ಮಾತುಗಳು, ಸಂವಾದಗಳು ನಡೆಯಬೇಕು. ಆದರೆ ಈ ಎಲ್ಲಾ ಧಾರ್ಮಿಕ ವೇದಿಕೆಗಳು ದ್ವೇಷ ಭಾಷಣ, ಅನ್ಯ ಧರ್ಮದ ಅವಹೇಳನಕ್ಕೆ ಬಳಕೆ ಆಗುತ್ತಿರುವುದು ದುರಂತ.

ದೇವಸ್ಥಾನ ಅಂದರೆ ಜನರು ನಂಬುವ ಅತೀತ ಶಕ್ತಿಯ ಪ್ರತಿಬಿಂಬವಾಗಿರುವ ಮೂರ್ತಿಯ ಎದುರು ಶರಣಾಗುವುದು. ನಾನು ಶ್ರೇಷ್ಠ, ಅವನು ಕನಿಷ್ಠ ಎಂಬುದನ್ನು ತೊರೆದು, ಪರಮ ಆತ್ಮದ ಜೊತೆಗೆ ಅನು ಸಂಧಾನ ಮಾಡುವುದು. ಅದನ್ನು ಬಿಟ್ಟು ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್‌ಗಳ ಅಂಗಳವನ್ನು ದ್ವೇಷದ ಬೀಜ ಬಿತ್ತುವುದು ಧರ್ಮಕ್ಕೆ ಮಾಡುವ ದೊಡ್ಡ ದ್ರೋಹ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಮಹೇಶ್‌ ಶೆಟ್ಟಿ ತಿಮರೋಡಿ ಬಂಧನ; ಜನರ ಪ್ರಶ್ನೆಗಳಿಗೆ ಸರ್ಕಾರದ ಉತ್ತರ ಏನು?

ಸಾರ್ವಜನಿಕ ಆಚರಣೆ ಅಂದರೆ, ಸಾರ್ವಜನಿಕ ಪಾಲ್ಗೊಳ್ಳುವಿಕೆಯೇ ಆಗಿದೆ. ಅದು ಸಂತೋಷಕ್ಕೆ, ಸಂಭ್ರಮಕ್ಕೆ. ಅದು ವಿಷ ಕಾರುವುದಕ್ಕೆ ಅಲ್ಲ, ರಾಜಕೀಯ ಮಾಡಲು ಅಲ್ಲ. ಧಾರ್ಮಿಕ ಭಾವನೆಯನ್ನೇ ಅವಲಂಬಿಸಿರುವ, ಅಭಿವೃದ್ಧಿ ರಾಜಕಾರಣ ಮಾಡಲು ಸಾಧ್ಯವಿಲ್ಲದವರು ಇಂತಹ ಸಂಗತಿಗಳನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಪ್ರಚೋದನೆ ಮಾಡುವುದನ್ನು ವಿರೋಧಿಸಬೇಕು.

ಜನರು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಂದನ್ನೂ ರಾಜಕೀಯಕ್ಕೆ, ಅಸಭ್ಯ ನಡವಳಿಕೆಗೆ ಬಳಸಿಕೊಳ್ಳುತ್ತ, ಅದರ ವಿರುದ್ಧ ಮಾತನಾಡುವವರನ್ನು ಧರ್ಮ ವಿರೋಧಿಗಳು ಎಂದು ವರಸೆ ತೆಗೆಯುವ ಜನರನ್ನು, ಪುಂಡು ಪುಢಾರಿಗಳನ್ನು ಧಿಕ್ಕರಿಸಬೇಕು.

yatnal 12
WhatsApp Image 2025 11 17 at 3.25.04 PM
ಎಂ ಜಿ ಹೆಗಡೆ, ಮಂಗಳೂರು
+ posts

ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಎಂ ಜಿ ಹೆಗಡೆ, ಮಂಗಳೂರು
ಎಂ ಜಿ ಹೆಗಡೆ, ಮಂಗಳೂರು
ಲೇಖಕ, ಜನಪರ ಹೋರಾಟಗಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...