’20 ರೂಪಾಯಿಯ ಆ್ಯಸಿಡ್‌ನಿಂದ ಹೆಣ್ಣುಮಕ್ಕಳ ಬದುಕೇ ಬರ್ಬಾದು’; ವಿಚಾರಣೆ ವಿಳಂಬ, ನ್ಯಾಯ ಬಿಸಿಲು ಕುದುರೆ

Date:

ಆ್ಯಸಿಡ್‌ ದಾಳಿ ಪ್ರಕರಣಗಳ ವಿಚಾರಣೆಯ ವಿಳಂಬವನ್ನು 'ಕಾನೂನು ವ್ಯವಸ್ಥೆಯ ಅಪಹಾಸ್ಯ' ಎಂದು ಸುಪ್ರೀಂ ಕೋರ್ಟ್‌ ಬಣ್ಣಿಸಿದೆ. ಅದಾದ ಬಳಿಕ "ಆರೋಪಿಗಳ ಆಸ್ತಿ ಮಾರಿ ಸಂತ್ರಸ್ತರಿಗೆ ಪರಿಹಾರ ನೀಡಬಾರದೇಕೆ?" ಎಂದೂ ಹೇಳಿದೆ. ಈ ಬೆಳವಣಿಗೆ ಸಂತ್ರಸ್ತರಲ್ಲಿ ನ್ಯಾಯದ ಭರವಸೆ ಮೂಡಿಸಿದೆ. ಆದರೆ ಇನ್ನಷ್ಟೂ ವಿಳಂಬ ಸಲ್ಲ. ವಿಚಾರಣೆ ವಿಳಂಬವಾದಷ್ಟೂ ನ್ಯಾಯ ಬಿಸಿಲು ಕುದುರೆ.

ಆ್ಯಸಿಡ್‌ ದಾಳಿ – ನೋಡುಗರಿಗೆ ಈ ದಾಳಿಯಲ್ಲಾದ ದೇಹದ ಗಾಯಗಳಷ್ಟೇ ಕಾಣುತ್ತದೆ. ಆದರೆ ಮನಸ್ಸಿಗಾದ ಗಾಯವನ್ನು ಗುಣಪಡಿಸಲಾಗದೆ ಒದ್ದಾಡುವುದು ಈ ದಾಳಿಗೆ ಒಳಗಾದ ಹೆಣ್ಣುಮಕ್ಕಳು ಮಾತ್ರ. ಇದು ಬರೀ ದೇಹದ ಮೇಲೆ ಮಾಡುವ ದಾಳಿಯಲ್ಲ, ಆತ್ಮಗೌರವ ಮತ್ತು ಬದುಕುವ ಹಕ್ಕಿನ ಮೇಲಿನ ದಾಳಿ. ಈ ದಾಳಿಗೆ ಒಳಗಾದವರು ಕಣ್ಣು ಕಳೆದುಕೊಳ್ಳುವುದಿದೆ, ಶಾಶ್ವತವಾಗಿ ಉಸಿರಾಟದ ಸಮಸ್ಯೆಯನ್ನು ಅನುಭವಿಸುವುದೂ ಇದೆ. ದಾಳಿಗೆ ಒಳಗಾದವರನ್ನೇ ತುಚ್ಛವಾಗಿ ಕಾಣುವ ಸಮಾಜವೂ ನಮ್ಮದು. ಇವೆಲ್ಲವುದರ ನಡುವೆಯೂ ನ್ಯಾಯಕ್ಕಾಗಿ ಸಂತ್ರಸ್ತೆ ಕೋರ್ಟ್‌ ಅಲೆದಾಡುವುದರಲ್ಲೇ ತಮ್ಮ ಜೀವನ ಸವೆಸುತ್ತಾರೆ.

ದೇಶದಲ್ಲಿ ಆ್ಯಸಿಡ್‌ ದಾಳಿ ಪ್ರಕರಣಗಳ ಸಂಖ್ಯೆಯು ಕಳೆದ ಮೂರು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ವರದಿಯ ಪ್ರಕಾರ, 2021ರಿಂದ 2023ರ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. 2021ರಲ್ಲಿ 176 ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 202 ಹಾಗೂ 2023ರಲ್ಲಿ 207 ಪ್ರಕರಣಗಳು ದಾಖಲಾಗಿವೆ. ಆದರೆ ಪ್ರಕರಣಗಳ ವಿಚಾರಣೆ ಮಾತ್ರ ತಡವಾಗುತ್ತಲೇ ಇದೆ.

ಇದನ್ನು ಓದಿದ್ದೀರಾ? ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ: ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2009ರಲ್ಲಿ 26 ವರ್ಷ ವಯಸ್ಸಿನ ಶಾಹೀನ್ ಮಲಿಕ್ ಅವರ ಮೇಲೆ ಹರಿಯಾಣದ ಪಾಣಿಪತ್‌ನಲ್ಲಿರುವ ಅವರ ಕಚೇರಿಯ ಹೊರಗೆ ಆ್ಯಸಿಡ್ ದಾಳಿಯಾಗಿದ್ದು, ಈವರೆಗೂ ನ್ಯಾಯ ಮಾತ್ರ ಸಿಕ್ಕಿಲ್ಲ. ಸಂತ್ರಸ್ತೆ ಶಾಹೀನ್ ಹೇಳುವಂತೆ “ಬರೀ 20 ರೂಪಾಯಿಯ ಆ್ಯಸಿಡ್‌ನಿಂದ ಹೆಣ್ಣುಮಕ್ಕಳ ಬದುಕೇ ಬರ್ಬಾದು ಆಗುತ್ತದೆ” ಇತ್ತ, ವಿಚಾರಣೆಯೂ ವಿಳಂಬ ಅತ್ತ ನ್ಯಾಯವೂ ಬಿಸಿಲು ಕುದುರೆ.

ಅಷ್ಟಕ್ಕೂ ಬಹುತೇಕ ಈ ದಾಳಿಗಳು ನಡೆದಿರುವುದು ದ್ವೇಷ, ಅಸೂಯೆ, ಪ್ರೇಮ ನಿರಾಕರಿಸಿದ ಕಾರಣಕ್ಕೆ. ಶಾಹೀನ್‌ಗೆ ಮೇಲೆ ದಾಳಿ ನಡೆದಿದ್ದು ಇದೇ ಕಾರಣಗಳಿಗೆ. ದಾಳಿ ನಡೆದು 16 ವರ್ಷಗಳಾಗಿವೆ. ಆದರೆ ಆರೋಪಿ ಇಂದಿಗೂ ಆರಾಮವಾಗಿ ಓಡಾಡಿಕೊಂಡಿದ್ದಾನೆ, ಇತ್ತ ಶಾಹೀನ್ ಮಾತ್ರ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಜತೆಗೆ ಇತರ ಆ್ಯಸಿಡ್‌ ದಾಳಿ ಸಂತ್ರಸ್ತರಿಗೂ ತಮ್ಮ ‘ಬ್ರೇವ್ ಸೋಲ್ಸ್ ಫೌಂಡೇಶನ್’ ಎಂಬ ಎನ್‌ಜಿಒ ಮೂಲಕ ಸಹಾಯ ಮಾಡುತ್ತಿದ್ದಾರೆ.

ಶಾಹೀನ್ ಕೋರ್ಟ್‌ಗೆ ಅರ್ಜಿಯ ಮೇಲೆ ಅರ್ಜಿ ಹಾಕಿದ ಕಾರಣದಿಂದಾಗಿ ಇದೀಗ ಸುಪ್ರೀಂ ಕೋರ್ಟ್ ಆ್ಯಸಿಡ್‌ ದಾಳಿ ಸಂತ್ರಸ್ತರತ್ತ, ವಿಚಾರಣೆಯಾಗದೆ ಬಾಕಿ ಉಳಿದಿರುವ ಪ್ರಕರಣಗಳತ್ತ ಕಣ್ಣಾಯಿಸಿದೆ. ಆ್ಯಸಿಡ್‌ ದಾಳಿ ಪ್ರಕರಣಗಳ ವಿಚಾರಣೆಯ ವಿಳಂಬವನ್ನು ‘ಕಾನೂನು ವ್ಯವಸ್ಥೆಯ ಅಪಹಾಸ್ಯ’ ಎಂದು ಸುಪ್ರೀಂ ಕೋರ್ಟ್‌ ಬಣ್ಣಿಸಿದೆ. ಅದಾದ ಬಳಿಕ “ಆರೋಪಿಗಳ ಆಸ್ತಿ ಮಾರಿ ಸಂತ್ರಸ್ತರಿಗೆ ಪರಿಹಾರ ನೀಡಬಾರದೇಕೆ?” ಎಂದೂ ಹೇಳಿದೆ. ಈ ಬೆಳವಣಿಗೆ ಸಂತ್ರಸ್ತರಲ್ಲಿ ನ್ಯಾಯದ ಭರವಸೆ ಮೂಡಿಸಿದೆ. ಆದರೆ ಇನ್ನಷ್ಟೂ ವಿಳಂಬ ಸಲ್ಲ. ವಿಚಾರಣೆ ವಿಳಂಬವಾದಷ್ಟೂ ನ್ಯಾಯ ಬಿಸಿಲು ಕುದುರೆ.

ಇದನ್ನು ಓದಿದ್ದೀರಾ? ಆರೋಪಿಗಳ ಆಸ್ತಿ ಮಾರಿ ಪರಿಹಾರ ನೀಡಬಾರದೇಕೆ? – ಆ್ಯಸಿಡ್ ದಾಳಿಕೋರರಿಗೆ ಕಠಿಣ ಶಿಕ್ಷೆ ವಿಧಿಸಲು ಸುಪ್ರೀಂ ಚಿಂತನೆ

ಶಾಹೀನ್ ಮಲಿಕ್ ಪ್ರಕರಣ ಮಾತ್ರವಲ್ಲ ದೇಶದಲ್ಲಿ ಹಲವು ಆ್ಯಸಿಡ್‌ ದಾಳಿ ಪ್ರಕರಣಗಳು ವಿಚಾರಣೆಗೆ ಒಳಗಾಗದೆ ಬಾಕಿಯಾಗಿದೆ. ಒಟ್ಟು ಪ್ರಕರಣಗಳಲ್ಲಿ ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ. 2023ರ ಎನ್‌ಸಿಆರ್‌ಬಿ ವರದಿಯ ಪ್ರಕಾರ ದೇಶದಲ್ಲೇ ಅಧಿಕ ಆ್ಯಸಿಡ್‌ ದಾಳಿ ಪ್ರಕರಣಗಳು ದಾಖಲಾಗಿರುವುದು ಪಶ್ಚಿಮ ಬಂಗಾಳದಲ್ಲಿ. ಶೇ.27.5ರಷ್ಟು ಪ್ರಕರಣಗಳು ಪಶ್ಚಿಮ ಬಂಗಾಳದಲ್ಲೇ ದಾಖಲಾಗಿದೆ. 2018ರಿಂದಲೂ ಪಶ್ಚಿಮ ಬಂಗಾಳದಲ್ಲಿ ಅಧಿಕ ಆ್ಯಸಿಡ್‌ ದಾಳಿಗಳು ಸಂಭವಿಸುತ್ತಿದೆ. ಜನವರಿ 2026ರ ವರದಿಯಂತೆ, ಪಶ್ಚಿಮ ಬಂಗಾಳದ ವಿವಿಧ ನ್ಯಾಯಾಲಯಗಳಲ್ಲಿ 160 ಆಸಿಡ್ ದಾಳಿ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿದೆ.

ಕಳೆದ 23 ವರ್ಷಗಳಿಂದ ಬಾಕಿ ಇರುವ ಪ್ರಕರಣಗಳೂ ಇವೆ! ಬಹುತೇಕ ಪ್ರಕರಣಗಳು ಎಫ್‌ಐಆರ್ ದಾಖಲಾಗುವಾಗ ವಿಳಂಬವಾದ ಕಾರಣ, ವಿಧಿವಿಜ್ಞಾನ ಪುರಾವೆಗಳ ಸಂಗ್ರಹಣೆಯಲ್ಲಿ ವೈಫಲ್ಯವಾದ ಕಾರಣ, ದೋಷಾರೋಪ ಪಟ್ಟಿ ಸಲ್ಲಿಕೆಯಲ್ಲಿ ವಿಳಂಬವಾದ ಕಾರಣದಿಂದಾಗಿ ನಡೆದಿದೆ. ಇನ್ನು 2021ರಲ್ಲಿ ಕೇವಲ 20% ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 2023ರಲ್ಲಿ ಬಾಕಿ ಇದ್ದ 703 ಪ್ರಕರಣಗಳಲ್ಲಿ ಕೇವಲ 16 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ.

ಈ ಹಿಂದಿನ ಲೇಖನದಲ್ಲಿ ತಿಳಿಸಿದಂತೆ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ. ಅದರೊಂದಿಗೆ ಸಂತ್ರಸ್ತರನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕಿದೆ. ಇಂದಿಗೂ ಅದೆಷ್ಟೋ ಕಡೆಗಳಲ್ಲಿ ಸಂತ್ರಸ್ತರನ್ನೇ ಇಡೀ ಪ್ರಕರಣದ ಹೊಣೆಗಾರರನ್ನಾಗಿ ನೋಡಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಕನಿಷ್ಠ ₹3 ಲಕ್ಷ ಪರಿಹಾರ ನೀಡಬೇಕು. ಆದರೆ ಅದರನ್ನು ಪಡೆಯಲೂ ಸಂತ್ರಸ್ತರು ಅಲೆದಾಡಬೇಕಾದ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ನಾವೂ ಸಂತ್ರಸ್ತರೊಂದಿಗೆ ಕೈಜೋಡಿಸುವುದು ಮುಖ್ಯ. ಅವರ ಜತೆಯಾಗಿ ನ್ಯಾಯಕ್ಕಾಗಿ ಹೋರಾಡುವುದು ಅತ್ಯಗತ್ಯ. ಅಷ್ಟಕ್ಕೂ ಆ್ಯಸಿಡ್‌ ದಾಳಿ ಸಂತ್ರಸ್ತರ ಮುಖ ವಿರೂಪವಲ್ಲ, ಅದು ಕೃತ್ಯ ಎಸಗಿದ ದುರುಳರ ನೀಚ ಮನಸ್ಥಿತಿಯ ಪ್ರತಿಬಿಂಬ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...