ಸಂಭಲ್‌ ವಿವಾದ ಮತ್ತು ರಾಜಕೀಯ ನಾಯಕರ ದ್ವೇಷ ರಾಜಕಾರಣ

Date:

ಭಾರತದಲ್ಲಿ ಆಳ್ವಿಕೆ ನಡೆಸಿದ ಆಂಗ್ಲರ ಏಕೈಕ ಉದ್ದೇಶ ಹಿಂದೂ – ಮುಸ್ಲಿಮರ ನಡುವೆ ದ್ವೇಷವನ್ನುಂಟು ಮಾಡಿ ತಾವು ಸುಗಮವಾಗಿ ಆಳ್ವಿಕೆ ನಡೆಸುವುದಾಗಿತ್ತು. ಇಂದಿನ ಬಹುತೇಕ ರಾಜಕೀಯ ನಾಯಕರ ತತ್ವವು ಇದೇ ರೀತಿಯ ಆಶಯವನ್ನು ಹೊಂದಿದೆ. ಹೆಸರಿಗಷ್ಟೆ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಎಂದು ಹೇಳುತ್ತಾರೆ. ಆದರೆ ರಾಜಕಾರಣದಲ್ಲಿ ಮಾತ್ರ ಮತ್ಸರವನ್ನು ಉಂಟು ಮಾಡುವ ಕೆಲಸ ಮಾಡುತ್ತಾರೆ. ಸದ್ಯ ಸಂಭಲ್‌ ಉರಿಯುತ್ತಿದೆ.

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಕೋಟ್ ಗಾರ್ವಿ ಪ್ರದೇಶದಲ್ಲಿನ ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಸಮೀಕ್ಷೆ ವೇಳೆ ನಡೆದ ಘರ್ಷಣೆಯಲ್ಲಿ ಗಲಭೆಯುಂಟಾಗಿ ನಾಲ್ವರು ಸ್ಥಳೀಯರು ಮೃತಪಟ್ಟು, ಪೊಲೀಸರು ಸೇರಿ ಹಲವರು ಗಾಯಗೊಂಡರು. ನಾಲ್ವರ ಕ್ರೂರ ಹತ್ಯೆ ಮುಸ್ಲಿಂ ಸಮುದಾಯವನ್ನು ಬೆಚ್ಚಿಬೀಳಿಸಿದೆ. 75ನೇ ವರ್ಷದ ಸಂವಿಧಾನ ದಿನ ಸಂಭ್ರಮಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ, ವೈವಿಧ್ಯತೆಯಿಂದ ಕೂಡಿದ ಜಾತ್ಯತೀತ ಸಂಸ್ಕೃತಿಯನ್ನು ಹಾಳು ಮಾಡಲು ಹಲವು ರಾಜಕೀಯ ಆದೇಶಗಳು ಹೊರಬೀಳುತ್ತಿವೆ. ವಿಪರ್ಯಾಸವೆಂದರೆ, ನಾವು ಪ್ರತಿ ಜಾಗತಿಕ ವೇದಿಕೆಯಲ್ಲಿ ಜಾತ್ಯತೀತ, ವೈವಿಧ್ಯತೆ ಮತ್ತು ಸಂಸ್ಕೃತಿಯನ್ನು ಹೆಚ್ಚು ಪ್ರಚಾರ ಮಾಡುತ್ತೇವೆ. ಇತ್ತೀಚಿಗಿನ ನಮ್ಮ ಒಲಿಂಪಿಕ್ಸ್ ಆಯೋಜಿಸುವ ಬಿಡ್‌ನಲ್ಲಿ ಕೂಡ ಅದನ್ನು ಉಲ್ಲೇಖಿಸಿದ್ದೇವೆ. ಆದರೆ ದೇಶದೊಳಗೆ ಮಾತ್ರ ಅದು ಜಾರಿಯಾಗುತ್ತಲೇ ಇಲ್ಲ.

ಎರಡು ವರ್ಷಗಳ ಹಿಂದೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದ ಪ್ರತಿ ಮಸೀದಿಯ ಕೆಳಗೆ ಮಂದಿರವನ್ನು ಹುಡುಕುವುದು ಸರಿಯಲ್ಲ ಎಂಬ ಸಂವೇದನಾಶೀಲ ಹೇಳಿಕೆಯನ್ನು ಕೂಡ ಮರೆಯಲಾಗಿದೆ ಅಥವಾ ಈ ರೀತಿಯ ಮಾತುಗಳು ತಮ್ಮ ಸಂಘಟನೆಗೆ ಒಪ್ಪುವುದಿಲ್ಲ ಎಂಬುದನ್ನು ಸಂಘ ಪರಿವಾರದ ನಾಯಕರು ಭಾವಿಸಿದಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಚುನಾವಣಾ ಫಲಿತಾಂಶದ ಹುಮ್ಮಸ್ಸಿನಲ್ಲಿರುವ ಆರ್‌ಎಸ್‌ಎಸ್‌ ನಾಯಕರು ಹಾಗೂ ಬಿಜೆಪಿಯವರಿಗೆ ಬೇರೇನು ಕಾಣಿಸುತ್ತಿಲ್ಲ. ಜಾತ್ಯತೀತ ಪರಿಕಲ್ಪನೆ ನಮ್ಮ ದೇಶದ ಜನತೆಗೆ ಶಾಂತಿ, ಸೌಹಾರ್ದತೆ ಅತಿ ಮುಖ್ಯವಾದುದು. ಆದರೆ ಇತ್ತೀಚಿನ ವರ್ಷದಲ್ಲಿ ರಾಷ್ಟ್ರಾದ್ಯಂತ ಎಲ್ಲವೂ ತದ್ವಿರುದ್ಧವಾಗಿ ನಡೆಯುತ್ತಿದೆ.

1991ರ ಪೂಜಾಸ್ಥಳಗಳ ಕಾಯಿದೆ (ಪಿಒಡಬ್ಲ್ಯೂ-ದಿ ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್-1991) ನಿಜಕ್ಕೂ ಸವಾಲಾಗಿದೆ. 2019ರಲ್ಲಿ ಈ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಪೂಜಾಸ್ಥಳಗಳ ಕಾಯಿದೆ ನಮ್ಮ ಜಾತ್ಯತೀತ ತತ್ವಗಳ ಮೂಲಾಧಾರ ಹಾಗೂ ಇದು ನಮ್ಮ ಸಂವಿಧಾನದ ಮೂಲಸ್ವರೂಪದ ಭಾಗ ಎಂದು ಆದೇಶಿಸಿತ್ತು. ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿಯ ಆವರಣದಲ್ಲಿ ಕೆಳಹಂತದ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿರುವುದು ಪೂಜಾಸ್ಥಳಗಳ ಕಾಯ್ದೆಗೆ ಯಾವುದೇ ಅಧಿಕಾರವಿಲ್ಲ ಎನ್ನುವಂತಾಗಿದೆ. ಈ ಕಾಯ್ದೆಗೆ ಅಧಿಕಾರವಿಲ್ಲವೆಂದಾದರೆ ಯಾವುದೇ ಕೆಳಹಂತದ ನ್ಯಾಯಾಲಯವು ಮಸೀದಿಯ ನಂತರ ಚರ್ಚ್‌, ಅನಂತರ ಗುರುದ್ವಾರಗಳಿಗೆ ನೀಡುವ ಸಮೀಕ್ಷೆಯ ಆದೇಶವನ್ನು ಮತ್ತೆ ಯಾರು ತಡೆಯುತ್ತಾರೆ ಎಂಬುದು ಸದ್ಯದ ಪ್ರಮುಖ ವಿಷಯವಾಗಿದೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ನಾಯಕರು ದೇಶಾದ್ಯಂತ ಶಾಂತಿ ಸುವ್ಯವಸ್ಥೆಯೊಂದಿಗೆ ಅಭಿವೃದ್ಧಿಯತ್ತ ತೆಗೆದುಕೊಂಡುಹೋಗುವ ಬದಲು ಹಿಂದಿನ ಮುಸ್ಲಿಂ ಅರಸರು ನಮ್ಮ ಧರ್ಮ ಹಾಗೂ ದೇವಾಲಯಗಳನ್ನು ಅಪವಿತ್ರಗೊಳಿಸಿದರು ಎಂದು ದ್ವೇಷಭಾಷೆಯನ್ನು ಬಿತ್ತುತ್ತಿದ್ದಾರೆ. ಸಂವಿಧಾನದಲ್ಲಿ ಜಾತ್ಯತೀತ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಕಾರಣ ಭಾರತವು ಒಳಗೊಂಡಂತೆ ಅಭಿವೃದ್ಧಿ ಹೊಂದಿರುವ ಅಥವಾ ಹೊಂದುತ್ತಿರುವ ದೇಶಗಳು ಜಾಗತಿಕ ಮನ್ನಣೆ ಪಡೆದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ

ಸಂಭಲ್ ಶಾಹಿ ಮಸೀದಿ ವಿವಾದವು ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷಾಸೂಯೆ ಬಿತ್ತಲು ಜಾಣತನದಿಂದ ರೂಪಿಸಿದ ಷಡ್ಯಂತ್ರ ಎಂಬುದು ಯಾರಿಗೂ ತಿಳಿಯದ ವಿಷಯವಲ್ಲ. ಅರ್ಜಿಯನ್ನು ಸಲ್ಲಿಸಿದ ರೀತಿ ಮತ್ತು ಸಮೀಕ್ಷೆಗೆ ತುರ್ತಾಗಿ ನೀಡಿದ ಆದೇಶವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಅಯೋಧ್ಯೆಯ ರಾಮಮಂದಿರದ ವಿಚಾರದಲ್ಲಿ ಕಾನೂನಿನ ಗೆಲುವು ಗಳಿಸಿದರೂ ಜನ ಬೆಂಬಲ ವ್ಯಕ್ತವಾಗಿಲ್ಲ. ಈಗ ಕಾಶಿ ಹಾಗೂ ಮಥುರಾದ ಬಗ್ಗೆ ಹೆಚ್ಚು ಪ್ರಚಾರ ನಡೆಸಲಾಗುತ್ತಿದೆ. ಆದರೆ ಕಾಶಿ ಹಾಗೂ ಮಥುರಾದಿಂದ ಹೆಚ್ಚು ಪ್ರಯೋಜನವಾಗುತ್ತಿಲ್ಲ ಎಂಬುದನ್ನು ಅರಿತ ಸಂಘ ಪರಿವಾರದ ನಾಯಕರು ಸಂಭಲ್‌ನಂಥ ಮಸೀದಿಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ದೇಶದಲ್ಲಿರುವ ಹಲವಾರು ಜೀವಂತ ಸಮಸ್ಯೆಗಳಿಗಿಂತ ಮುಖ್ಯವಾಗಿ ಮಸೀದಿಗಳನ್ನು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ.     

ವಿಶ್ವ ಹಿಂದೂ ಪರಿಷತ್‌ ನಾಯಕರು ಭಾರತದಲ್ಲಿ ದೇವಾಲಯಗಳ ಕೆಡವಿ 40 ಸಾವಿರಕ್ಕೂ ಹೆಚ್ಚು ಮಸೀದಿಗಳನ್ನು ನಿರ್ಮಿಸಲಾಗಿದೆ ಎಂದು ಬಡಬಡಿಸುತ್ತಾರೆ. ವಿಹೆಚ್‌ಪಿಯ ಈ ಹೇಳಿಕೆಗಳಿಗೆ ಯಾವುದೇ ಪುರಾವೆಯಿಲ್ಲದಿದ್ದರೂ ಈಗಿನ ಆಕ್ರೋಶ ಹೇಗಿದೆಯೆಂದರೆ ವಸಾಹತುಶಾಹಿ ಆಳ್ವಿಕೆಯಲ್ಲಿ ತನ್ನ ಪೂರ್ವಜರ ಅಪರಾಧಗಳಿಗಾಗಿ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಪ್ರವಾಸಿಗರನ್ನು ಬಂಧಿಸಿದಂತಿದೆ. ಪ್ರಸ್ತುತ ಭಾರತದ ಮುಸ್ಲಿಂ ಸಮುದಾಯ ಮೊಘಲ್‌ ಅರಸರಿಗಿಂತ ಪ್ರವಾದಿ ಮೊಹಮ್ಮದ್, ಸೂಫಿ ಸಂತರು ಹಾಗೂ ಭಾರತೀಯ ಪರಂಪರೆಯಿಂದ ಹೆಚ್ಚು ಗುರುತಿಸಿಕೊಳ್ಳಲು ಬಯಸುತ್ತದೆ.

ಹಿಂದೂ-ಮುಸ್ಲಿಂ ಸೌಹಾರ್ದತೆ ವಿಷಯಕ್ಕೆ ಬಂದರೆ, ಭಾರತರತ್ನ ಮೌಲಾನಾ ಆಜಾದ್ ಅವರು “ವೇದಗಳು” ಮತ್ತು ಇಸ್ಲಾಮಿಕ್ ತತ್ವವಾದ “ವ್ಹಾದತ್‌-ಎ-ದೀನ್” ನಡುವೆ ಅಂತರ ಕಾಯ್ದುಕೊಂಡಿದ್ದರು. ಅವರಿಗೆ ಧರ್ಮಕ್ಕಿಂತ ದೇಶ ಮುಖ್ಯವಾಗಿತ್ತು. ಅವರ ಏಕೈಕ ಉದ್ದೇಶ ಉಜ್ವಲ ಮತ್ತು ಉತ್ತಮ ಭಾರತಕ್ಕಾಗಿ ಹಿಂದೂಗಳು ಮತ್ತು ಮುಸ್ಲಿಮರನ್ನು ಒಗ್ಗೂಡಿಸುವುದಾಗಿತ್ತು.

ಭಾರತದಲ್ಲಿ ಆಳ್ವಿಕೆ ನಡೆಸಿದ ಆಂಗ್ಲರ ಏಕೈಕ ಉದ್ದೇಶ ಹಿಂದೂ – ಮುಸ್ಲಿಮರ ನಡುವೆ ದ್ವೇಷವನ್ನುಂಟು ಮಾಡಿ ತಾವು ಸುಗಮವಾಗಿ ಆಳ್ವಿಕೆ ನಡೆಸುವುದಾಗಿತ್ತು. ಇಂದಿನ ಬಹುತೇಕ ರಾಜಕೀಯ ನಾಯಕರ ತತ್ವವು ಇದೇ ರೀತಿಯ ಆಶಯವನ್ನು ಹೊಂದಿದೆ. ಹೆಸರಿಗಷ್ಟೆ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಎಂದು ಹೇಳುತ್ತಾರೆ. ಆದರೆ ರಾಜಕಾರಣದಲ್ಲಿ ಮಾತ್ರ ಮತ್ಸರವನ್ನು ಉಂಟು ಮಾಡುವ ಕೆಲಸ ಮಾಡುತ್ತಾರೆ. ಸದ್ಯ ಸಂಭಲ್‌ ಉರಿಯುತ್ತಿದೆ. ಮುಂದೆ ರಾಜಕೀಯ ನಾಯಕರ ಬಂಡವಾಳಕ್ಕಾಗಿ ದೇಶದ ಹಲವೆಡೆ ಹತ್ತಿ ಉರಿಯಲಿದೆ. ಆದರೆ ಬೆಲೆ ತೆತ್ತುವವರು ಮಾತ್ರ ಅಮಾಯಕ ಜನತೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...