ಮಂಗಳೂರು ಜೈಲು ಕ್ರಿಮಿನಲ್‌ಗಳ ಸ್ವರ್ಗ!; ಇಲ್ಲಿದೆ ಸಣ್ಣ ಅಪರಾಧಿಗೆ ದೊಡ್ಡ ಅಪರಾಧಿಯಾಗುವ ಅವಕಾಶ

Date:

ಜೈಲುಗಳು ಕೈದಿಗಳ ಮನ ಪರಿವರ್ತನಾ ಕೇಂದ್ರ ಆಗಬೇಕೆಂಬ ಮಾತಿದೆ. ಒಮ್ಮೆ ಜೈಲಿಗೆ ಹೋದಾತ ಇನ್ನೆಂದೂ ಜೈಲಿಗೆ ಹೋಗಲಾರೆ ಎಂಬ ನಿರ್ಧಾರಕ್ಕೆ ಬರುವ ಮಟ್ಟದಲ್ಲಿ ಜೈಲುಗಳು ಇರಬೇಕಾಗಿದೆ. ಆದರೆ ಮಂಗಳೂರು ಜೈಲು ಕ್ರಿಮಿನಲ್ ಗಳಿಗೆ ಮತ್ತಷ್ಟು ಕ್ರಿಮಿನಲ್ ಚಟುವಟಿಕೆ ನಡೆಸಲು ಪ್ರೇರಣೆ ನೀಡುವ ಕೇಂದ್ರವಾಗಿದೆ. ಕ್ರಿಮಿನಲ್ ಗಳನ್ನು ಸೃಷ್ಟಿಸುವ ಪೂರಕ ವ್ಯವಸ್ಥೆ ಇರುವ ಕೇಂದ್ರ ಎಂಬ ಆರೋಪ ಮಂಗಳೂರು ಜೈಲಿನ ಬಗ್ಗೆ ಆಗಾಗ ಕೇಳಿ ಬರುತ್ತಿದೆ.

ಹಿಂದೂ ಕೈದಿಗಳಿಗೆ ಒಂದು ಬ್ಲಾಕ್, ಮುಸ್ಲಿಮ್ ಕೈದಿಗಳಿಗೆ ಮತ್ತೊಂದು ಬ್ಲಾಕ್. ದೇಶದ ಯಾವುದೇ ಜೈಲಿನಲ್ಲಿ ಇರದ ಇಂಥದೊಂದು ವ್ಯವಸ್ಥೆ ಮಂಗಳೂರು ಜೈಲಿನಲ್ಲಿದೆ. ಎ ಬ್ಲಾಕ್ ನಲ್ಲಿ ಹಿಂದೂ ಕೈದಿಗಳನ್ನು ಇರಿಸಿದರೆ, ಬಿ ಬ್ಲಾಕ್‌ನಲ್ಲಿ ಮುಸ್ಲಿಮ್ ಕೈದಿಗಳನ್ನು ಇರಿಸಲಾಗುತ್ತದೆ. ಈ ಪ್ರತ್ಯೇಕ ವ್ಯವಸ್ಥೆಯ ಬಗ್ಗೆ ಆಗಾಗ ಅಪಸ್ವರಗಳು ಕೇಳಿ ಬಂದಿದೆ. “ನಾವು ಕೈದಿಗಳನ್ನು ಹಿಂದೂ, ಮುಸ್ಲಿಮ್ ಎಂದು ಪ್ರತ್ಯೇಕಿಸಿಲ್ಲ. ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕೈದಿಗಳ ಭದ್ರತೆಯ ಹಿತದೃಷ್ಟಿಯಿಂದ ಎರಡು ಪ್ರತ್ಯೇಕ ಬ್ಲಾಕ್ಗಳ ಮಾಡಲಾಗಿದೆ.” ಎಂಬುದು ಸರ್ಕಾರದ ಸಮರ್ಥನೆ. ಒಂದು ಮಟ್ಟಿಗೆ ಈ ವಾದ ಸರಿಯಿದೆ. ಪ್ರತ್ಯೇಕ ಬ್ಲಾಕ್ ಇಲ್ಲದಿರುತ್ತಿದ್ದರೆ ಮಂಗಳೂರು ಜೈಲಿನಲ್ಲಿ ನಡೆಯುವ ಅನಾಹುತವನ್ನು ಊಹಿಸಲೂ ಸಾಧ್ಯವಿಲ್ಲ.

ಜೈಲುಗಳು ಕೈದಿಗಳ ಮನ ಪರಿವರ್ತನಾ ಕೇಂದ್ರ ಆಗಬೇಕೆಂಬ ಮಾತಿದೆ. ಒಮ್ಮೆ ಜೈಲಿಗೆ ಹೋದಾತ “ಇನ್ನೆಂದೂ ಜೈಲಿಗೆ ಹೋಗಲಾರೆ” ಎಂಬ ನಿರ್ಧಾರಕ್ಕೆ ಬರುವ ಮಟ್ಟದಲ್ಲಿ ಜೈಲುಗಳು ಇರಬೇಕಾಗಿದೆ. ಆದರೆ ಮಂಗಳೂರು ಜೈಲು ಕ್ರಿಮಿನಲ್ ಗಳಿಗೆ ಮತ್ತಷ್ಟು ಕ್ರಿಮಿನಲ್ ಚಟುವಟಿಕೆ ನಡೆಸಲು ಪ್ರೇರಣೆ ನೀಡುವ ಕೇಂದ್ರವಾಗಿದೆ. ದುಡ್ಡು ಕೊಟ್ಟರೆ ಮಂಗಳೂರು ಜೈಲಿನಲ್ಲಿ ಏನು ಬೇಕಾದರೂ ಸಿಗುತ್ತದೆ. ಹಾಗಾಗಿ ಮಂಗಳೂರು ಜೈಲು ಕ್ರಿಮಿನಲ್‌ಗಳ ಸ್ವರ್ಗ. ಕ್ರಿಮಿನಲ್ ಗಳನ್ನು ಸೃಷ್ಟಿಸುವ ಪೂರಕ ವ್ಯವಸ್ಥೆ ಇರುವ ಕೇಂದ್ರ ಎಂಬ ಆರೋಪ ಮಂಗಳೂರು ಜೈಲಿನ ಬಗ್ಗೆ ಆಗಾಗ ಕೇಳಿ ಬರುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜೈಲಿನ ವ್ಯವಸ್ಥೆ ಸುಧಾರಣೆಯಾಗದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವುದು ಸಾಧ್ಯವಿಲ್ಲ. ಯಾವುದಾದರೂ ಸಣ್ಣ ಪುಟ್ಟ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ ಆರೋಪಿಗಳು, ಜೈಲಿನಿಂದ ಹೊರಬಂದ ಬಳಿಕ ಕೊಲೆಯಂತಹ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡುಬರುತ್ತಿದೆ. ಇದಕ್ಕೆ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ಬಾಡೂಟ, ಮಾದಕ ವಸ್ತು ಮೊದಲಾದ ಸಕಲ ಸವಲತ್ತುಗಳು ಸಲೀಸಾಗಿ ದೊರೆಯುವುದು, ಹೊಸಬರಿಗೆ ಹಳೆ ರೌಡಿಗಳ ಪರಿಚಯವಾಗುವುದು ಮೊದಲಾದ ಅವ್ಯವಸ್ಥೆಗಳೇ ಕಾರಣವಾಗಿದೆ. ಅಲ್ಲದೆ ಜೈಲಿನಲ್ಲಿ ರೌಡಿ ಶೀಟರ್‌ಗಳಿಗೆ ಇತರ ಕೈದಿಗಳಿಂದ ಸಿಗುವ ʼರಾಜಮರ್ಯಾದೆʼ, ಜೈಲು ಸಿಬ್ಬಂದಿಗಳ ನಡುವೆ ಇರುವ ಅನ್ಯೋನ್ಯತೆ ನೋಡುವ ಹೊಸ ಕೈದಿಗಳು “ನಾವು ಕೂಡಾ ಈ ರೀತಿಯಾಗಬೇಕು” ಎಂಬ ನಿರ್ಧಾರಕ್ಕೆ ಬರುತ್ತಾರೆ. ಜೈಲಿನಿಂದ ಹೊರ ಬಂದ ಬಳಿಕ ಅವರು ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡುತ್ತದೆ.

ಮಂಗಳೂರು ಜೈಲಿನಲ್ಲಿ 10 ಮಹಿಳಾ ಮತ್ತು 200 ಪುರುಷ ಕೈದಿಗಳನ್ನು ಇರಿಸುವಷ್ಟು ಮಾತ್ರ ವ್ಯವಸ್ಥೆ ಇದೆ. ಒಟ್ಟು 210 ಮಂದಿ ಕೈದಿಗಳಿಗೆ ಸ್ಥಳವಾಕಾಶ ಇರುವ ಮಂಗಳೂರು ಜೈಲಿನಲ್ಲಿ ಇದೇ ಮೇ 8ರ ಲೆಕ್ಕ ಪ್ರಕಾರ ಒಟ್ಟು 308 ಕೈದಿಗಳು ಇದ್ದಾರೆ. ಹಿಂದೆ 350ಕ್ಕೂ ಹೆಚ್ಚಿನ ಕೈದಿಗಳನ್ನು ಇರಿಸಿದ ಉದಾಹರಣೆಗಳೂ ಇವೆ. ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸುವುದರಿಂದ ಕೈದಿಗಳ ನಿಯಂತ್ರಣ ಮಾಡುವುದು ಕೂಡಾ ಜೈಲಿನ ಸಿಬ್ಬಂದಿಗೆ ಕಷ್ಟಕರವಾಗಿದೆ. ಇದರಿಂದ ಹತ್ತು ಹಲವು ಸಮಸ್ಯೆಗಳನ್ನು, ಸವಾಲುಗಳನ್ನು ಮಂಗಳೂರು ಜೈಲು ಎದುರಿಸುವಂತಾಗಿದೆ.

ಮಂಗಳೂರು ಜೈಲು
ಜೈಲಿನ ಗೋಡೆಯ ಹೊರಗಿನ ರಸ್ತೆಯಿಂದ ವಸ್ತುವನ್ನು ಎಸೆಯುತ್ತಿರುವ ದೃಶ್ಯ

ಕೈದಿಗಳ ನಡುವಿನ ಹೊಡೆದಾಟ, ಕೊಲೆ, ಜೈಲಿನೊಳಗೆ ಮಾರಕಾಸ್ತ್ರ, ಗಾಂಜಾ ಸಹಿತ ಅಮಲು ಪದಾರ್ಥಗಳನ್ನು ಎಸೆಯುವುದು, ಜೈಲಿನಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಸುವುದು, ಬಾಡೂಟ ಪಾರ್ಟಿ ಮಾಡುವುದು ಮೊದಲಾದ ವಿಷಯಗಳಿಗೆ ಮಂಗಳೂರು ಜೈಲು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಮಂಗಳೂರು ನಗರದ ಹೃದಯ ಭಾಗದಲ್ಲೇ ಜೈಲು ಇರುವುದರಿಂದ ರಸ್ತೆಯಲ್ಲಿ ನಿಂತು ಆಯುಧ, ಅಮಲು ಪದಾರ್ಥ, ಮೊಬೈಲ್ ಫೋನ್‌ಗಳನ್ನು ಸಲೀಸಾಗಿ ಜೈಲಿನ ಒಳಗೆ ಎಸೆಯಬಹುದಾಗಿದೆ. ಈ ರೀತಿ ಎಸೆಯುವ ಫೋಟೊ, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಹರಿದಾಡುತ್ತಿರುತ್ತದೆ.

ಕೈದಿಗಳ ನಡುವಿನ ಹೊಡೆದಾಟಕ್ಕೆ ಮಂಗಳೂರು ಜೈಲು ಕುಖ್ಯಾತಿ ಪಡೆದಿದೆ. 2015ರ ನವೆಂಬರ್ 2ರಂದು ಕೈದಿಗಳ ತಂಡವೊಂದು ರೌಡಿ ಶೀಟರ್ ಮಾಡೂರು ಯೂಸುಫ್ ನನ್ನು ತಲವಾರುಗಳಿಂದ ದಾಳಿ ನಡಿಸಿ ಕೊಲೆ ಮಾಡಿತ್ತು. ಈ ವೇಳೆ ಮಾಡೂರು ಯೂಸುಫ್ ಮೇಲಿನ ದಾಳಿ ತಡೆಯಲು ಯತ್ನಿಸಿದ ಗಣೇಶ್ ಶೆಟ್ಟಿ ಎಂಬಾತ ಕೂಡಾ ತಂಡದ ದಾಳಿಯಿಂದ ಕೊಲೆಯಾಗಿದ್ದ. ಈ ಘಟನೆಯಿಂದ ಮಂಗಳೂರು ಜೈಲು ಭಾರೀ ಸುದ್ಧಿಯಾಗಿತ್ತು. ಈ ಕೊಲೆಗೆ ಆಯುಧಗಳನ್ನು ಜೈಲಿನ ಕಾಂಪೌಂಡ್ ಪಕ್ಕದ ರಸ್ತೆಯಲ್ಲಿ ನಿಂತು ಒಳಗೆ ಎಸೆಯಲಾಗಿತ್ತು ಎಂಬುದು ಬಳಿಕ ತನಿಖೆಯಿಂದ ತಿಳಿದು ಬಂದಿತ್ತು.

ಜೈಲಿನಲ್ಲಿ ಅಳವಡಿಸಿದ ಜಾಮರ್ ನಿಂದ ನಮಗೆ ನೆಟ್ವರ್ಕ್‌ ಸಿಗುತ್ತಿಲ್ಲ ಎಂಬುದು ಜೈಲಿನ ಸುತ್ತಮುತ್ತಲಿರುವ ಅಂಗಡಿ, ಮಳಿಗೆಗಳು, ಅಪಾರ್ಟ್‌ಮೆಂಟ್ಗಳ ಜನರ ಆರೋಪ. ಈ ಬಗ್ಗೆ ಹಲವು ಪ್ರತಿಭಟನೆಗಳು, ಜೈಲಿಗೆ ಮುತ್ತಿಗೆ ಕೂಡಾ ನಡೆದಿವೆ. ಆದರೆ ಜೈಲಿನ ಒಳಗೆ ಮೊಬೈಲ್ ನೆಟ್ವರ್ಕ್‌ ಗೆ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ ಕೈದಿಗಳು ತಮ್ಮ ಮನೆಯವರೊಂದಿಗೆ, ಕ್ರಿಮಿನಲ್‌ಗಳು ಅವರ ಗ್ಯಾಂಗ್‌ ಸದಸ್ಯರೊಂದಿಗೆ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಮಾತುಕತೆ ನಡೆಸುತ್ತಾರೆ. ಜೈಲಿಗೆ ದಿಢೀರ್ ತಪಾಸಣೆಗೆ ತೆರಳಿದ ಪೊಲೀಸ್ ಅಧಿಕಾರಿಗಳಿಗೆ ಕೈದಿಗಳಲ್ಲಿ ಮೊಬೈಲ್ ಫೋನ್ಗಳು ಸಿಕ್ಕಿರುವುದು ಇದಕ್ಕಿರುವ ಸಾಕ್ಷಿಯಾಗಿದೆ.

ಬಂಟ್ವಾಳ ತಾಲೂಕಿನ ಮುಡಿಪು ಸಮೀಪ ಹೊಸ ಜೈಲು ನಿರ್ಮಾಣಕ್ಕೆ 63 ಎಕರೆ ಜಾಗ ಗುರುತಿಸಿ 2018ರಲ್ಲಿ 110 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆದಿದೆ. ಎರಡನೇ ಹಂತದ ಕಾಮಗಾರಿಗೆ 195 ಕೋಟಿ ರೂಪಾಯಿ ಅಗತ್ಯ ಇದೆ ಎಂದು ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಗೃಹಸಚಿವ ಡಾ ಜಿ ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

ಆದರೆ ಮೊದಲ ಹಂತದ ಕಾಮಗಾರಿ ಮುಗಿದ ಬಳಿಕ ಎರಡನೇ ಹಂತದ ಕಾಮಗಾರಿ ಮುಂದುವರಿಯದೆ ನಿರ್ಮಾಣ ಕಾರ್ಯ ನಿಂತು ಹೋಗಿದೆ. ಹೊಸ ಜೈಲಿನಲ್ಲಿ ಸಾವಿರಕ್ಕೂ ಅಧಿಕ ಕೈದಿಗಳನ್ನು ಇರಿಸುವ ವ್ಯವಸ್ಥೆ ಇದೆ. ಈ ಹೊಸ ಜೈಲು ಕಾರ್ಯಾರಂಭ ಆದರೆ ಪ್ರಸಕ್ತ ಮಂಗಳೂರು ಜೈಲು ಎದುರಿಸುವ ಹತ್ತು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಒಂದಷ್ಟು ಪರಿಹಾರ ದೊರಕಿದಂತೆ ಆಗಬಹುದು.

ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ, “ಹೊಸ ಜೈಲಿನ ನಿರ್ಮಾಣ ಕಾರ್ಯ ಪೂರ್ತಿಯಾಗಿದೆ. ಜೈಲಿನ ಕ್ವಾಟ್ರಸ್ ನಿರ್ಮಾಣದ ಕಾರ್ಯ ಬಾಕಿ ಇದೆ. ಕ್ವಾಟ್ರಸ್ ನಿರ್ಮಾಣ ಕಾರ್ಯ ಮುಗಿಯುವವರೆಗೆ ಕಾಯದೆ ಹೊಸ ಜೈಲು ಕಾರ್ಯಾರಂಭ ಮಾಡಬೇಕು ಎಂದು ನಾವು ಆಗ್ರಹಿಸಿದ್ದೇವೆ. ಮುಂದಿನ ಆರು ತಿಂಗಳಲ್ಲಿ ಹೊಸ ಜೈಲು ಕಾರ್ಯಾರಂಭ ಆಗಲಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಪ್ರಸಕ್ತ ಜೈಲಿನಲ್ಲಿ ಅಳವಡಿಸಿರುವ ಜಾಮರ್‌ನಿಂದ ಮಂಗಳೂರಿನ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹೊಸ ಜೈಲು ಕಾರ್ಯಾರಂಭ ಮಾಡಿದರೆ ಹಲವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಕೈದಿಗಳ ಮನಪರಿವರ್ತನೆಗೆ ಸರಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ” ಎಂದರು.

“ಜೈಲಿನ ಭದ್ರತೆ ವಿಷಯದಲ್ಲಿ ರಾಜಿ ಮಾಡಬಾರದು. ಸರಕಾರ ಮತ್ತು ಜೈಲು ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೊರಗಿನ ಯಾವುದೇ ವಸ್ತುಗಳು ಜೈಲಿನೊಳಗೆ ಹೋದರೆ ಅದರಿಂದ ಕೈದಿಗಳಿಗೆ ಅನುಕೂಲವಾಗಲಿದೆ. ಇದರಿಂದ ಅವರು ಮತ್ತೆ ಮತ್ತೆ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸಲು ಪ್ರೇರೇಪಿಸಿದಂತೆ ಆಗುತ್ತದೆ. ಜೊತೆಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗುವ ಪ್ರಕ್ರಿಯೆ ನಡೆಯಬೇಕು. ಇದರಿಂದ ಸಮಾಜದಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯವಿದೆ” ಎಂದು ಮಂಗಳೂರಿನ ನಿವೃತ್ತ ಪೊಲೀಸ್ ಅಧಿಕಾರಿ ಹರೀಶ್ ಪದವಿನಂಗಡಿ ಹೇಳುತ್ತಾರೆ.

ಇದನ್ನೂ ಓದಿ ಧರ್ಮಸ್ಥಳದ ಸೌಜನ್ಯ ಹಿಂದೂ ಅಲ್ಲವೇ ಶೋಭಾ ಮೇಡಂ? ; ಈ ಪ್ರಕರಣವನ್ನು ಮರು ತನಿಖೆಗೆ ಯಾಕೆ ಒತ್ತಾಯಿಸುತ್ತಿಲ್ಲ?

WhatsApp Image 2025 05 08 at 16.45.05 70e5a46e
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...