ನೆನಪು | ರಾಜೀವ್ ತಾರಾನಾಥ್ ಮತ್ತು ಗೋಧ್ರಾ

Date:

ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್, ಹಿಂದೊಮ್ಮೆ ಗೋಧ್ರಾ ಘಟನೆ ಕುರಿತು ಮಾತನಾಡಿದ್ದರು. ಒಡಲಾಳದಲ್ಲಿ ಅವಿತಿದ್ದ ಅಣೆಕಟ್ಟು ಒಡೆದು ಒಮ್ಮೆಲೆ ನುಗ್ಗತೊಡಗಿದ ಆ ಮಾತುಗಳು ಇಲ್ಲಿವೆ…

ಈ ಕ್ಷಣದಲ್ಲಿ ಏನೇಳೋದು… ಕತ್ತು ಬಗ್ಗಿಸಿಕೊಂಡು ಅನ್ಯಮನಸ್ಕರಾದರು ಕನ್ನಡದ ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್, ಕತ್ತೆತ್ತದೆ ತಾವು ತೊಟ್ಟಿದ್ದ ಕುರ್ತಾವನ್ನು ತದೇಕಚಿತ್ತದಿಂದ ದೃಷ್ಟಿಸುತ್ತಾ, ಬಟ್ಟೆಯನ್ನು ಬೆರಳಿನಿಂದ ಮೃದುವಾಗಿ ಸ್ಪರ್ಶಿಸುತ್ತಾ, ‘ಇದನ್ನು ಯಾರು ಮಾಡಿದ್ದು ಗೊತ್ತಾ…’ ಎಂದು ಎದುರಿದ್ದವರಿಗೆ ಪ್ರಶ್ನೆ ಎಸೆದರು. ಉತ್ತರ ಬರದಿದ್ದಾಗ, ಮೌನ ಆವರಿಸಿದಾಗ… ಒಡಲಾಳದಲ್ಲಿ ಅವಿತಿದ್ದ ಅಣೆಕಟ್ಟು ಒಡೆದು ಒಮ್ಮೆಲೆ ನುಗ್ಗತೊಡಗಿತು.

ಉಸ್ ಎಂಬ ಉಸಿರಿನಿಂದ ಅದನ್ನೆಲ್ಲ ಸಾವರಿಸಿಕೊಂಡು, ಜೇಬಲ್ಲಿದ್ದ ಪುಟ್ಟ ಹಳದಿ ಕಲರ್‌ನ ಒಂದು ಪಾಂಪ್ಲೆಟ್ ತೆಗೆದು, ‘ಹಿಮ್ಮತ್, ಹಿಮ್ಮತ್ ಅಂತ ಇದಕ್ಕೆ ಹೆಸರಿಟ್ಟಿದಾರೆ, ಗೋಧ್ರಾ ಕೇಳಿದ್ದೀರಾ… ಮೋದಿ, ಗುಜರಾತ್… ಕ್ಷಮೆ ಕೇಳೋ ಅಭ್ಯಾಸ್ವೇ ಇಲ್ಲ ನಮ್ಗೆ, ಪಶ್ಚಾತ್ತಾಪವಂತೂ ಇಲ್ವೇ ಇಲ್ಲ ಬಿಡಿ. ಕೃಷ್ಣ ಹೇಳ್ಲಿಲ್ವೆ ಸುಳ್ಳು, ಶ್ರೀರಾಮ ಮಾಡಲಿಲ್ವೇ ಮೋಸ… ಅವರೆಲ್ಲ ದೇವರು, ಅವರ ಅಪರಾವತಾರವೇ ನಾವು. ವಿ ಆರ್ ಗ್ರೇಟ್, ಗ್ರೇಟ್ ಇಂಡಿಯನ್ಸ್, ಗ್ರೇಟ್ ಹಿಂದೂಸ್… ಕಳಂಕ ತಂದ್ಬಿಟ್ರು, ರಾಮ ಅಂತನ್ನೋಕೆ ಅಸಹ್ಯ ಆಗುತ್ತೆ, ಹೇಳಿದ ಬಾಯನ್ನು, ಹೇಳಿದಾಕ್ಷಣ ಹುಣಸೇಹಣ್ಣಾಕಿ ತೊಳಕೊಬೇಕೆನ್ನಿಸುತ್ತೆ…

‘ಟ್ರೈನ್‌ಗೆ ಬೆಂಕಿ ಹಚ್ಚೋದು, ಬಸುರಿಯನ್ನು ಎಳೆದಾಡೋದು, ಕತ್ತಿಯಿಂದ ಭ್ರೂಣನ ಎತ್ತಿಹಿಡಿದು ಕೇಕೆ ಹಾಕೋದು… ಜುಟ್ಟು ಹಿಡಿದು ಅತ್ತಿಂದಿತ್ತ ಎಳೆದಾಡಿ ಜೈ ಶ್ರೀರಾಮ್ ಅನ್ನು ಅಂತ ಬಲವಂತ ಮಾಡೋದು… ಛೇ, ಛೇ, ಛೇ ಏನಿದೆಲ್ಲ? ನಾಚಿಕೆಯಾಗಬೇಕು ನಮ್ಗೆ. ಅವರು ಮಾಡಿದ್ದಾದ್ರು ಏನು? ಅವರೂ ನಮ್ಮಂತೆ ಜನ ಅಲ್ವಾ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಕೈ, ಕಾಲು, ಕುಟುಂಬಗಳನ್ನು ಕಳೆದುಕೊಂಡು ಅನಾಥರಾಗಿರುವ ಅವರನ್ನೆಲ್ಲ ಮಹಾನ್ ಮೋದಿ ಒಂದಡೆ ಹಾಕಿದ್ದಾರೆ- ಬದುಕಲಾಗದ ಜಾಗಕ್ಕೆ. ಅವರು ಅಂತಹ ಸ್ಥಿತಿಯಲ್ಲೂ ತಾಳ್ಮೆ ಕಳಕೊಳ್ಳದೆ, ಎದೆಗುಂದದೆ ತಮ್ಮ ಕೈಯಿಂದಾನೆ ಈ ಬಟ್ಟೆ ತಯಾರಿಸಿ, ದೇಶದ ಅನೇಕ ಕಡೆಗೆ ಹೋಗಿ ಮಾರಾಟ ಮಾಡ್ತಿದಾರೆ. ಬಂದ ಅಲ್ಪಸ್ವಲ್ಪ ದುಡ್ಡಲ್ಲಿ ಕಳೆದುಹೋದ ಬದುಕನ್ನು ಕಟ್ಟಿಕೊಳ್ತಿದಾರೆ. ಮೊನ್ನೆ ಬೆಂಗಳೂರಿಗೂ ಬಂದಿದ್ರು… ಅಂಥವರನ್ನು ಯಾರು ಕರಸ್ತಾರೆ, ಅಂತಃಕರಣವುಳ್ಳ ಕ್ರಿಶ್ಚಿಯನ್ ಸಮುದಾಯದವರು ಯಾವುದೋ ಚರ್ಚ್‌ನಲ್ಲಿ ಜಾಗ ಮಾಡಿಕೊಟ್ಟಿದ್ರು, ನಾನು ಕೊನೆ ದಿನ ಹೋದೆ, ನಾಲ್ಕು ಮಾತ್ರ ಉಳಿದಿದ್ವು, ಒಂದು ನನ್ನಳತೆದಿತ್ತು, ತಗೊಂಡು ಎಷ್ಟು ಅಂದೆ, 750 ಅಂದ್ರು, ಜೇಬಿಗೆ ಕೈಹಾಕಿ 1500 ಕೊಟ್ಟು, ನೆಕ್ಟ್ಸ್ ಟೈಮ್ ಬಂದ್ರೆ ನನ್ಗೆ ಮೊದ್ಲೆ ಇನ್‌ಫರ್ಮ್ ಮಾಡಿ ಅಂದೆ. ಆಮೇಲೆ ಅದ್ಯಾಕೋ ತಡೆಯೋಕ್ಕಾಗ್ಲಿಲ್ಲ ಅವರ ಕಾಲಿಗೆ ಬಿದ್ದು, ನಮ್ಮ ಜನ ಮಾಡಿರೋ ಪಾಪದ ಕೆಲ್ಸಕ್ಕೆ ನಾನು ಕ್ಷಮೆ ಕೇಳ್ತೀನಿ ಅಂದೆ. ಮನಸ್ಸು ಹಗುರವಾಯಿತು…’

ಗೋಧ್ರಾ ಘಟನೆ ಭಾರತೀಯರ ಘನತೆಗೆ ಧಕ್ಕೆ ತರುವಂಥಾದ್ದು. ಮನುಷ್ಯರು ಮಾಡದಂಥಾದ್ದು. ಆದರೆ, ಇವತ್ತಿನ ಸಂದರ್ಭದಲ್ಲಿ ಎಷ್ಟು ಜನ ಹೀಗೆ ಯೋಚಿಸುತ್ತಾರೆ?

ಇದನ್ನು ಓದಿದ್ದೀರಾ?: ನೆನಪು । ರಾಜೀವ್ ತಾರಾನಾಥ್ ಕುರಿತು ರಹಮತ್ ತರೀಕೆರೆ ಬರೆಹ

ಈ ದೇಶದ ಜಾಯಮಾನವೇ ಅಂಥಾದ್ದು- ರಾಜೀವ್ ತಾರಾನಾಥ್‌ರಂತಹವರೂ ಇರುತ್ತಾರೆ. ಹೂ ಅರಳಿದಷ್ಟೇ ಸಹಜವಾಗಿ, ತಮ್ಮಿಂದಲೇ ಆದ ಅನಾಹುತವೆಂಬಂತೆ ಕೊರಗಿ ಕ್ಷಮೆ ಕೇಳುತ್ತಾರೆ. ಕೋಲ್ಕತಾದ ಉಸ್ತಾದ್ ಅಲಿ ಅಕ್ಬರ್ ಖಾನ್‌ರಿಂದ ಸರೋದ್‌ ಕಲಿತದ್ದು, ಸ್ವತಂತ್ರ ಹೋರಾಟದ ಗಾಂಧಿಯ ಪ್ರಭಾವಕ್ಕೊಳಗಾಗಿದ್ದು, ಕಾಸ್ಮೋ ಕಲ್ಚರ್‍‌ನ ಒಳಗೊಳಿಸಿಕೊಂಡಿದ್ದು, ಹೈದರಾಬಾದ್‌ನಲ್ಲಿ ಇಂಗ್ಲಿಷ್ ಟೀಚ್ ಮಾಡಿದ್ದು, 70ರ ದಶಕದ ಸಂವೇದನಾಶೀಲ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದು, ನವ್ಯ ಸಾಹಿತಿಗಳೊಂದಿಗೆ ಒಡನಾಡಿದ್ದು- ಎಲ್ಲವೂ ರಾಜೀವರ ಆ ಕ್ಷಣದ ಮಾತುಗಳಲ್ಲಿ ಮೈದುಂಬಿಕೊಂಡಿತ್ತು.

ಹನುಮಂತನಗರದ ಅಭಿನಯ ತರಂಗದ ವಿದ್ಯಾರ್ಥಿಗಳು ಶಾಂತಚಿತ್ತರಾಗಿ ರಾಜೀವರ ಮಾತುಗಳನ್ನು ಆಲಿಸುತ್ತಾ ಕೂತಿದ್ದರು. ಮತ್ತಷ್ಟು ಕೇಳಲು ಕಾತುರರಾಗಿದ್ದರು. ಆದರೆ ರಾಜೀವರು ಅಷ್ಟೇ ಅಂತ ಎದ್ದರು.

ಅಷ್ಟಕ್ಕೂ ರಾಜೀವರು ಬಂದದ್ದು ಎ.ಎಸ್.ಮೂರ್ತಿಗಳ ಕರೆಯ ಮೇರೆಗೆ, ಎ.ಎಂ.ಪ್ರಕಾಶ್ ನಿರ್ದೇಶನದ ‘ಸೂರ್ಯಕಾಂತಿ’ ಎಂಬ ದೃಶ್ಯಕಾವ್ಯವನ್ನು ನೋಡಲು. ಅವರ ಜೊತೆಗೂಡಿದವರು ನಿರ್ದೇಶಕ ಚೈತನ್ಯ, ಯುವ ಗೀತ ರಚನಕಾರ ಹೃದಯಶಿವ ಮತ್ತು ನಾನು.

‘ಸೂರ್ಯಕಾಂತಿ’ -ವಿಶ್ವವಿಖ್ಯಾತ ಕಲಾಕಾರ ವಿನ್ಸೆಂಟ್ ವ್ಯಾನ್‌ಗೋನ ವಿಕ್ಷಿಪ್ತ ಬದುಕನ್ನು ಕುರಿತ ಡಾಕ್ಯು ಡ್ರಾಮ. ಸ್ವತ ಕಲಾಕಾರರೂ ಆದ ರಾಜೀವ್ ತಾರಾನಾಥರು, ನಾಟಕ ನೋಡಿ ‘ಎಕ್ಸಲೆಂಟ್, ಚೆನ್ನಾಗಿ ಮಾಡಿದ್ದೀಯ’ ಅಂದು ತಮಗನ್ನಿಸಿದ ಕೆಲ ಬದಲಾವಣೆಗಳನ್ನು ಹೇಳುತ್ತ ಕಲೆಯೊಳಗೆ ಬಣ್ಣದಂತೆ ಬೆರೆತುಹೋದರು. ಅದೆಷ್ಟೋ ವರ್ಷಗಳ ಹಿಂದೆ ಕಲಾಮಂದಿರದಲ್ಲಿ ತಾವೇ ರಚಿಸಿದ ಪೇಂಟಿಂಗನ್ನು ನೆನಪಿಗೆ ತಂದುಕೊಂಡು, ಹೀಗೀಗೇ ಇತ್ತು ಎಂದು ಬಿಡಿಸಿಟ್ಟೇಬಿಟ್ಟರು.

ಬರಿ ಮಾತನಾಡುವವರಿಂದ ದೂರ ಇರುವ, ಮೌನವನ್ನು ಮೆಚ್ಚುವ, ಮಾನವೀಯತೆಗಾಗಿ ತುಡಿಯುವ ರಾಜೀವ್ ತಾರಾನಾಥ್- ಅಪರೂಪದ ಅಪ್ಪಟ ಮನುಷ್ಯ.

(2008ರಲ್ಲಿ ಬರೆದದ್ದು)

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...