ರಂಝಾನ್ ಕೇವಲ ಉಪವಾಸದ ತಿಂಗಳಲ್ಲದೆ ಸಾಮಾಜಿಕ ಸಾಮರಸ್ಯ ಉತ್ತೇಜಿಸುವ ಹಬ್ಬ

Date:

ರಂಝಾನ್ ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ತಿಂಗಳಾಗಿದ್ದು, ಈ ತಿಂಗಳಲ್ಲಿ ಉಪವಾಸ, ಪ್ರಾರ್ಥನೆ, ಧ್ಯಾನ ಮತ್ತು ಸಮುದಾಯದ ಹಾಗೂ ಸಮಾಜದ ಒಗ್ಗಟ್ಟನ್ನು ಕಾಣಬಹುದು.

ರಂಝಾನ್ ಪವಿತ್ರ ತಿಂಗಳ ಸಾರ

ರಂಝಾನ್ ಎಂಬುದು ಇಸ್ಲಾಮೀ ಚಂದ್ರ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಮತ್ತು ಮುಸಲ್ಮಾನ್ ಬಾಂಧವರಿಗೆ ಅತ್ಯಂತ ಪವಿತ್ರವಾದ ಸಮಯ. ಈ ತಿಂಗಳಲ್ಲಿ ಪವಿತ್ರ ಕುರ್‌ಆನ್ ಗ್ರಂಥವು ಪ್ರವಾದಿ ಮುಹಮ್ಮದ್ ಅವರಿಗೆ ದೇವದೂತ ಜಿಬ್ರೀಲ್ ಮೂಲಕ ಮೊದಲ ಬಾರಿಗೆ ಬಹಿರಂಗಗೊಂಡಿತೆಂದು ನಂಬಲಾಗಿದೆ. ಈ ಕಾರಣದಿಂದಾಗಿ, ರಂಝಾನ್ ತಿಂಗಳು ಆಧ್ಯಾತ್ಮಿಕ ಚಿಂತನೆ, ಸ್ವಯಂ ಶಿಸ್ತು ಮತ್ತು ದೇವರಿಗೆ ಸಮರ್ಪಣೆಯ ಸಂಕೇತ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉಪವಾಸದ ಮಹತ್ವ

ರಂಝಾನ್ ತಿಂಗಳಲ್ಲಿ ಮುಸಲ್ಮಾನ್ ಬಾಂಧವರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ (ರೋಝಾ) ಆಚರಿಸುತ್ತಾರೆ. ಈ ಉಪವಾಸವು ಕೇವಲ ಆಹಾರ ಮತ್ತು ಪಾನೀಯದಿಂದ ದೂರವಿರುವುದು ಮಾತ್ರವಲ್ಲ. ದುಷ್ಟ ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳಿಂದಲೂ ದೂರವಿರುವ ಸಂಕಲ್ಪವನ್ನು ಒಳಗೊಂಡಿದೆ.

ಇದು ತಾಳ್ಮೆ, ಸಹಾನುಭೂತಿ ಮತ್ತು ಕರುಣೆಯನ್ನು ಬೆಳೆಸುವ ಒಂದು ಮಾರ್ಗವಾಗಿದೆ. ಉಪವಾಸವು ಐದು ಪ್ರಮುಖ ಕರ್ತವ್ಯಗಳಲ್ಲಿ (ಫರ್ಜ್) ಒಂದಾಗಿದ್ದು, ಇದನ್ನು ಇಸ್ಲಾಂನ ಐದು ಆಧಾರ ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ದಿನಚರಿ ಮತ್ತು ಪ್ರಾರ್ಥನೆ

ರಂಝಾನ್ ಸಮಯದಲ್ಲಿ ಮುಸಲ್ಮಾನ್ ಬಾಂಧವರು ದಿನವನ್ನು ಸಹರ್ ಎಂಬ ಮುಂಜಾನೆಯ ಊಟದೊಂದಿಗೆ ಪ್ರಾರಂಭಿಸುತ್ತಾರೆ. ಈ ವೇಳೆ ಸೂರ್ಯೋದಯಕ್ಕೆ ಮುಂಚೆ ಆಹಾರವನ್ನು ಸೇವಿಸಲಾಗುತ್ತದೆ.

ಸೂರ್ಯಾಸ್ತದ ನಂತರ ಇಫ್ತಾರ್ ಎಂಬ ಉಪವಾಸ ಮುಕ್ತಾಯದ ಊಟವನ್ನು ಸಾಮಾನ್ಯವಾಗಿ ಖರ್ಜೂರದೊಂದಿಗೆ ಆರಂಭಿಸಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ತರಾವೀಹ್ ಎಂಬ ವಿಶೇಷ ರಾತ್ರಿ ಪ್ರಾರ್ಥನೆಗಳು ಮಸೀದಿಗಳಲ್ಲಿ ನಡೆಯುತ್ತವೆ. ಇದರಲ್ಲಿ ಕುರ್‌ಆನ್ ಪಠಣ ಮಾಡಲಾಗುತ್ತದೆ.

ಲೈಲತುಲ್ ಖಾದ್ರ್

ರಂಝಾನ್ ಕೊನೆಯ ಹತ್ತು ದಿನಗಳಲ್ಲಿ ಬರುವ ‘ಲೈಲತುಲ್ ಖದ್ರ್’ ಅಥವಾ ‘ಶಕ್ತಿಯ ರಾತ್ರಿ’ ಎಂಬುದು ಅತ್ಯಂತ ಪವಿತ್ರವಾದ ರಾತ್ರಿಯಾಗಿದೆ. ಈ ರಾತ್ರಿಯಲ್ಲಿ ಮಾಡಿದ ಪ್ರಾರ್ಥನೆಗಳು ಮತ್ತು ಒಳ್ಳೆಯ ಕಾರ್ಯಗಳು ಸಾವಿರ ತಿಂಗಳಿಗಿಂತಲೂ ಅಧಿಕ ಕಾಲದಲ್ಲಿ ಮಾಡಿದ ಒಳ್ಳೆಯ ಕಾರ್ಯಗಳಿಗಿಂತಲೂ ಉತ್ತಮವೆಂದು ನಂಬಲಾಗಿದೆ. ರಂಝಾನ್ ತಿಂಗಳು ಮುಗಿದ ನಂತರ ಈದ್ ಉಲ್-ಫಿತ್ರ್ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಉಪವಾಸದ ಸಂಪೂರ್ಣತೆಯನ್ನು ಸಂತೋಷದಿಂದ ಆಚರಿಸುವ ಸಮಯವಾಗಿದ್ದು, ಜಕಾತ್ (ದಾನ) ನೀಡುವುದು, ಹೊಸಬಟ್ಟೆ ಧರಿಸುವುದು ಮತ್ತು ಸಮುದಾಯದೊಂದಿಗೆ ಸಂಭ್ರಮಿಸುವುದು ಆಚರಣೆಯ ಪ್ರಮುಖ ಭಾಗವಾಗಿದೆ.

ಸಾಮಾಜಿಕ ಮಹತ್ವ

ರಂಝಾನ್ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ. ಇದು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಬಡವರಿಗೆ ದಾನ ಮಾಡುವುದು, ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸುವುದು ಮತ್ತು ಸಹಾನುಭೂತಿಯನ್ನು ಹಂಚುವುದು ಈ ತಿಂಗಳ ಮುಖ್ಯ ಉದ್ದೇಶಗಳಾಗಿವೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಆಟೋ ಅಮ್ಮನಿಗೆ ಪ್ರತಿಷ್ಠಿತ ‘ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ‘ಪ್ರಶಸ್ತಿ ಗೌರವ

ರಂಝಾನ್ ಎಂಬುದು ಕೇವಲ ಉಪವಾಸದ ತಿಂಗಳು ಮಾತ್ರವಲ್ಲ. ಆತ್ಮ ಶುದ್ಧೀಕರಣ, ದೇವರೊಂದಿಗಿನ ಸಂಬಂಧವನ್ನು ಬಲಪಡಿಸುವ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಮಯವಾಗಿದೆ. ಇತ್ತೀಚಿಗೆ ಸೌಹಾರ್ದ ಇಫ್ತಾರ್ ಕೂಟ ಹೆಚ್ಚು ಪ್ರಚಲಿತ ಆಗುವುದರ ಜತೆಗೆ ಎಲ್ಲ ಧರ್ಮದ ಧಾರ್ಮಿಕ ಮುಖಂಡರು ಭಾಗಿಯಾಗುವ ಮೂಲಕ ಸಮಾಜದ ಸೌಹಾರ್ದ ನಿರ್ಮಾಣಕ್ಕೆ ಸಹಕಾರವಾಗುತ್ತಿರುವುದನ್ನು ಮತ್ತಷ್ಟು ಸಮಾಜದಲ್ಲಿ ಸಾಮರಸ್ಯ ಹೆಚ್ಚಾಗಲು ಸಹಕಾರಿಯಾಗುತ್ತಿದೆ.

ಧಾರ್ಮಿಕ ವೈಷಮ್ಯಗಳನ್ನು ಹುಟ್ಟಿಸುವ ಈ ರಾಜಕಾರಣಿಗಳ ನಡುವೆ ಯುಗಾದಿ, ರಂಝಾನ್ ಎರಡನ್ನೂ ನಾವೆಲ್ಲರು ಜೊತೆ ಸೇರಿ ಆಚರಿಸೋಣ. ಹಬ್ಬ ಹಬ್ಬವಾಗಿರಲಿ, ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಿಗುವ ಅವಕಾಶವಾಗದಿರಲಿ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...