‘ಜೈ ಶ್ರೀರಾಮ್‌’ ಅಂದ್ರೆ ಮಾತ್ರ ಅನ್ನ ಅನ್ನೋರು ಪಾಠ ಕಲಿಯೋದು ಯಾವಾಗ?

Date:

‘ಜೈ ಶ್ರೀರಾಮ್‌’ ಅಂದ್ರೆ ಮಾತ್ರ ಅನ್ನ ಅನ್ನೋರು ಪಾಠ ಕಲಿಯೋದು ಯಾವಾಗ ಅನ್ನೋ ಪ್ರಶ್ನೆ ಈಗ ಎದ್ದಿದೆ. ಅನ್ನವನ್ನ ಹಾಕೋದು ಅಂದ್ರೆ ಅದು ಅತೀ ಶ್ರೇಷ್ಟ. ಒಂದು ಹೊತ್ತಿನ ಊಟ ಸಿಕ್ಕರೆ ಸಾಕು ಅಂತ ಎಷ್ಟೋ ಜನ ಕಷ್ಟ ಪಡ್ತಿದ್ದಾರೆ. ಅಂತವರಿಗೆ ಒಂದು ಹೊತ್ತಿನ ಊಟ ಸಿಕ್ಕಿರೆ, ಎಷ್ಟು ಖುಷಿ ಆಗಬಹುದು. ಈಗಾಗಲೇ ಮುಸ್ಲಿಮರು ನಿಂತ್ರೂ ತಪ್ಪು ಕುಂತ್ರೂ ತಪ್ಪು ಅಂತ ಹೇಳೋ ರೀತಿ ಬಿಜೆಪಿ ಸರ್ಕಾರ ಜನರಿಗೆ ಕುಮ್ಮಕ್ಕು ನೀಡ್ತಾ ಇದೆ. ಆದ್ರೆ, ಈ ಎಲ್ಲ ಘರ್ಷಣೆಗಳ ಮಧ್ಯೆ ಒಂದು ವಿಡಿಯೋ ವೈರಲ್‌ ಆಗ್ತಾ ಇದೆ.

ಆ ವಿಡಿಯೋ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋದಲ್ಲಿ, ಮುಸ್ಲಿಂ ಮುಖಂಡರು ಯಾವುದೇ ಧರ್ಮವನ್ನ ನೋಡದೇ ಬಡವರ ಹೊಟ್ಟೆ ತುಂಬಿಸೋ ಕೆಲಸ ಮಾಡಿದ್ದಾರೆ. ಇಲ್ಲಿ ಅನ್ನ ಕೊಡ್ತಾ ಇರೋ ಮುಸ್ಲಿಂ ಧರ್ಮದವರು ‘ಅಲ್ಲಾ ಹು ಅಕ್ಬರ್‌’ ಅಂತ ಹೇಳಿ, ನಮಗೆ ಜೈಕಾರ ಹಾಕಿ ಅನ್ನೋ ಯಾವುದೇ ಷರತ್ತುಗಳನ್ನ ವಿಧಿಸದೇ ಹಸಿದು ಬಂದವರಿಗೆ ಊಟವನ್ನ ಕೊಡ್ತಿದ್ದಾರೆ. ಇದು ನಿಜವಾಗಿಯೂ ನಮ್ಮ ದೇಶದಲ್ಲಿ ಬೇಕಾದದ್ದು.. ಇದು ನಿಜವಾದ ಭಾರತ ಅಂತ ಹೇಳೊಕೆ ಹೆಮ್ಮೆ ಆಗತ್ತೆ.. ಭಾರತ ಸಾರ್ವಭೌಮ ರಾಷ್ಟ್ರ, ಭಾರತದ ನೂರಾರು ಸಂಸ್ಕೃತಿ, ಧರ್ಮ, ಭಾಷೆ ಆಚರಣೆ ಮಾಡೋ ಧೀಮಂತ ರಾಷ್ಟ್ರವೆಂದು ಆ ವಿಡಿಯೋ ನೋಡಿ ಹೆಮ್ಮೆಪಡಬಹುದು.

ಆದ್ರೆ, ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅನ್ನದಾನ ಮಾಡುತ್ತಿದ್ದ ಹಿಂದು ವ್ಯಕ್ತಿಯೊಬ್ಬ ಮುಸ್ಲಿಮರೊಂದಿಗೆ ನಡೆದುಕೊಂಡ ರೀತಿ, ಹಸಿವಿನ ಪ್ರಜ್ಞೆ ಇದ್ದವರ ಕಣ್ಣಲ್ಲಿ ನೀರು ಬರಿಸುತ್ತದೆ. ಹಸಿವು ಅಂತ ತಿನ್ನೋಕೆ ಬಂದವರನ್ನ ಈ ರೀತಿಯಾಗಿ ನಡೆಸಿಕೊಳ್ಳಿ ಅಂತ ಆಗಲೀ, ಅಥವಾ ಜೈಶ್ರೀರಾಮ್‌ ಅಂದವರಿಗೆ ಮಾತ್ರ ಅನ್ನ ಕೊಡಿ ಅಂತ ಆಗಲೀ ಯಾವುದೇ ಹಿಂದೂ ಧರ್ಮದ ಗ್ರಂಥಗಳಲ್ಲಿ ಬರೆದಿಲ್ಲ. ಹಿಂದೂ ಧರ್ಮದ ಶಾಸ್ತ್ರ ಪುರಾಣದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಹಸಿವು ಅಂತ ಬಂದಾಗ ಆತನಿಗೆ ಹೊಟ್ಟೆ ತುಂಬಾ ಊಟ ಕೊಟ್ಟು ಕಳಿಸಿ ಅನ್ನೋದನ್ನೇ ಹಿಂದೂ ಧರ್ಮ ಹೇಳೊದು. ಕೇಲವ ಹಿಂದೂ ಧರ್ಮ ಒಂದೇ ಅಲ್ಲ, ಎಲ್ಲಾ ಧರ್ಮಗಳಲ್ಲೂ ಕೂಡ ಇದೇ ಮಾತಿರೋದು..

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದ್ರೆ, ಟಾಟಾ ಹಾಸ್ಪಿಟಲ್‌ ಹೊರಗೆ ಅನ್ನದಾನ ಕಾರ್ಯಕ್ರಮ ನಡೆಯುತ್ತಿತ್ತು. ಇಲ್ಲಿ ಅನ್ನ ಬಡಿಸುವ ಒಬ್ಬ ವ್ಯಕ್ತಿ ಆ ಮುಸ್ಲಿಂ ಮಹಿಳೆ ಜೊತೆ ನಡೆದುಕೊಂಡು ರೀತಿ ಅತ್ಯಂತ ಹೀನ ಮತ್ತು ಖಂಡನೀಯ. ಹಸಿವು ಎಲ್ಲರಿಗೂ ಒಂದೇ. ಹಸಿದವ್ರಿಗೆ ಊಟ ಕೊಟ್ಟು ಸ್ವಲ್ಪ ಗೌರವ ಕೊಡೊದನ್ನ ಪ್ರತಿಯೊಬ್ಬರೂ ಕಲಿಯಬೇಕು.

ಮತ್ತೊಂದು ವಿಡಿಯೋದಲ್ಲಿ, ಒಬ್ಬ ಹಿಂದೂ ಮಹಿಳೆ ಮಸೀದಿ ಹೊರಗಡೆ ಹಣ್ಣುಗಳನ್ನ ಮಾರಾಟ ಮಾಡ್ತಿದ್ದಾರೆ. ಅವರ ಪ್ರಕಾರ ಮುಸ್ಲಿಮರು ಅವರಿಗೆ ಸಹಾಯ ಮಾಡುತ್ತಾರೆ ಮತ್ತು ಎಂದಿಗೂ ತೊಂದರೆ ಅಥವಾ ತಾರತಮ್ಯ ಮಾಡುವುದಿಲ್ಲ. ರಂಜಾನ್‌ನಲ್ಲಿ ಅವರ ವ್ಯಾಪಾರ ಚೆನ್ನಾಗಿ ನಡೀತಾ ಇದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಆದ್ರೆ ಒಂದಿಷ್ಟು ದೇವಸ್ಥಾನದ ಹೊರಗೆ ಮುಸ್ಲಿಮರಿಗೆ ವ್ಯಾಪಾರ ಮಾಡೋ ಅವಕಾಶವೇ ಇಲ್ಲ.

ಪರಸ್ಪರ ಸಾಮರಸ್ಯ, ಬಾಂಧವ್ಯ, ಸಹೋದರತೆ ಇನ್ನು ಕೂಡ ಜೀವಂತವಾಗಿವೆ ಎಂಬುದಕ್ಕೆ ಮಸೀದಿ ಮುಂದೆ ವ್ಯಾಪಾರ ಮಾಡುವ ಆ ಮಹಿಳೆ ಸಾಕ್ಷಿ. ಈ ಹಿಂದೆ ಮೊಘಲ್ ಭಾರತದಲ್ಲಿ, ಚಕ್ರವರ್ತಿ ಅಕ್ಬರ್ ಹಿಂದು-ಮುಸ್ಲಿಂ ಐಕ್ಯತೆಯನ್ನು ಪ್ರತಿಪಾದಿಸಿದ್ದರು, ಹಿಂದುಗಳು ಮತ್ತು ಮುಸ್ಲಿಮರನ್ನು ತನ್ನ ನ್ಯಾಯಾಲಯದಲ್ಲಿ ಅಧಿಕಾರಿಗಳನ್ನಾಗಿ ನೇಮಿಸಿದ್ದರು. ಅಕ್ಬರ್, ಹಿಂದು ಧರ್ಮ ಮತ್ತು ಇಸ್ಲಾಂನ ಹಬ್ಬ, ಎರಡೂ ಹಬ್ಬಗಳನ್ನು ಪ್ರಚಾರ ಮಾಡಿದ್ದರು ಹಾಗೂ ಎರಡೂ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು.

ಮುಘಲರು, ಅವಧ್ ಮುರ್ಷಿದಾಬಾದ್ ನವಾಬ್ ಮತ್ತು ಟಿಪ್ಪು ಸುಲ್ತಾನ್ ಮುಂತಾದ ಮುಸ್ಲಿಂ ರಾಜರು ಸಂಪೂರ್ಣವಾಗಿ ಜಾತ್ಯತೀತರಾಗಿದ್ದರು. 1916ರ ಲಕ್ನೋ ಒಪ್ಪಂದವನ್ನು ಭಾರತದ ಸ್ವಾತಂತ್ರ್ಯ ಚಳುವಳಿಯ ಯುಗದಲ್ಲಿ ‘ಹಿಂದು-ಮುಸ್ಲಿಂ ಐಕ್ಯತೆಯನ್ನು ಸಾಧಿಸುವಲ್ಲಿ ಪ್ರಮುಖ ಹೆಜ್ಜೆ’ ಅಂತ ಪರಿಗಣಿಸಲಾಗಿದೆ. ಮುಹಮ್ಮದ್ ಅಲಿ ಜಿನ್ನಾ ಅವರು ತಮ್ಮ ರಾಜಕೀಯ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಹಿಂದು-ಮುಸ್ಲಿಂ ಏಕತೆಯನ್ನು ಪ್ರತಿಪಾದಿಸಿದ್ದರು.

1857ರ ಭಾರತೀಯ ದಂಗೆಯಲ್ಲಿ ಭಾರತದಲ್ಲಿನ ಅನೇಕ ಹಿಂದುಗಳು ಮತ್ತು ಮುಸ್ಲಿಮರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಲು ಭಾರತೀಯರಾಗಿ ಒಗ್ಗೂಡಿದ್ದರು. ಇಷ್ಟೆಲ್ಲ ಇತಿಹಾಸ ಇರೋ ಈ ನಾಡಲ್ಲಿ ಈಗ ದಿನದಿಂದ ದಿನಕ್ಕೆ ಕೋಮು ಗಲಭೆಗಳು ಜಾಸ್ತಿ ಆಗ್ತಾ ಇದೆ. ಇದಕ್ಕೆ ಕಡಿವಾಣ ಹಾಕಬೇಕಾದವರು ಯಾರು? ನಾವು, ಭಾರತೀಯರು.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...