ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ: ಅಫ್ಘಾನ್ ಜೊತೆ ಪಾಕ್ ದೋಸ್ತಿ ಹಳಸಿದ್ದೆಲ್ಲಿ?

Date:

ದಶಕಗಳಿಂದಲೂ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ತಾನು ಹೇಳಿದಂತೆ ನಡೆಯುವ ದೇಶವೆಂದೇ ಭಾವಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ತಾಲಿಬಾನ್‌ಗಳು ಪಾಕಿಸ್ತಾನದ ಕೈಗೊಂಬೆಯಾಗಿರಲು ನಿರಾಕರಿಸಿದ್ದೇ ಈ ಬಿರುಕಿಗೆ ಮೂಲ ಕಾರಣ.

ಒಂದು ಕಾಲದಲ್ಲಿ ಗುರು-ಶಿಷ್ಯರಂತಿದ್ದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಸಂಬಂಧವೀಗ ಬೂದಿ ಮುಚ್ಚಿದ ಕೆಂಡದಂತಾಗಿದೆ. 2021ರ ಆಗಸ್ಟ್‌ನಲ್ಲಿ ಅಮೆರಿಕ ಸೇನೆ ಕಾಬೂಲ್ ತೊರೆದು, ತಾಲಿಬಾನ್‌ಗಳು ಅಧಿಕಾರಕ್ಕೆ ಬಂದಾಗ ಅತಿ ಹೆಚ್ಚು ಸಂಭ್ರಮಿಸಿದ್ದು ಇದೇ ಪಾಕಿಸ್ತಾನ. ಕಾಬೂಲ್‌ನಲ್ಲಿ ತಮಗೆ ಬೇಕಾದ, ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರ ಬಂದಿದೆ ಎಂದೇ ಇಸ್ಲಾಮಾಬಾದ್ ಬೀಗಿತ್ತು. ಆದರೆ, ಕೇವಲ ಮೂರ್ನಾಲ್ಕು ವರ್ಷಗಳಲ್ಲಿ ಈ ಹಳೆಯ ದೋಸ್ತಿ ಸಂಪೂರ್ಣವಾಗಿ ಹಳಿತಪ್ಪಿದ್ದು, ಎರಡೂ ದೇಶಗಳ ನಡುವೆ ಈಗ ಅಕ್ಷರಶಃ ಯುದ್ಧದ ಕಾರ್ಮೋಡ ಕವಿದಿದೆ.

​ದಶಕಗಳಿಂದಲೂ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು ತಾನು ಹೇಳಿದಂತೆ ನಡೆಯುವ ದೇಶವೆಂದೇ ಭಾವಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ತಾಲಿಬಾನ್‌ಗಳು ಪಾಕಿಸ್ತಾನದ ಕೈಗೊಂಬೆಯಾಗಿರಲು ನಿರಾಕರಿಸಿದ್ದೇ ಈ ಬಿರುಕಿಗೆ ಮೂಲ ಕಾರಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉಭಯ ದೇಶಗಳ ನಡುವಿನ ಪ್ರಸ್ತುತ ಬಿಕ್ಕಟ್ಟಿಗೆ ಪ್ರಮುಖ ಕಾರಣ ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್'(ಟಿಟಿಪಿ). ಪಾಕಿಸ್ತಾನದಲ್ಲಿ ಶರಿಯಾ ಕಾನೂನು ಜಾರಿಗೆ ಆಗ್ರಹಿಸುತ್ತಿರುವ ಈ ಉಗ್ರ ಸಂಘಟನೆಗೆ ಅಫ್ಘಾನ್ ತಾಲಿಬಾನ್‌ಗಳು ಆಶ್ರಯ ನೀಡುತ್ತಿದ್ದಾರೆ ಎಂಬುದು ಪಾಕಿಸ್ತಾನದ ಗಂಭೀರ ಆರೋಪ. 2025ರ ಅಂಕಿಅಂಶಗಳ ಪ್ರಕಾರ, ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಶೇ. 34ರಷ್ಟು ಹೆಚ್ಚಾಗಿದ್ದು, ಕೇವಲ ಒಂದೇ ವರ್ಷದಲ್ಲಿ ಟಿಟಿಪಿ 600ಕ್ಕೂ ಹೆಚ್ಚು ಭೀಕರ ದಾಳಿಗಳನ್ನು ನಡೆಸಿದೆ. ಈ ದಾಳಿಗಳಿಗೆ ಅಫ್ಘಾನ್ ನೆಲವೇ ಮೂಲ ಎಂಬುದು ಪಾಕಿಸ್ತಾನದ ವಾದ. ಆದರೆ, ಇದನ್ನು ‘ಪಾಕಿಸ್ತಾನದ ಆಂತರಿಕ ಸಮಸ್ಯೆ’ ಎಂದು ತಳ್ಳಿಹಾಕಿರುವ ಕಾಬೂಲ್ ಸರ್ಕಾರ, ಉಗ್ರರಿಗೆ ತಾವು ಆಶ್ರಯ ನೀಡಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದೆ.

ಬ್ರಿಟಿಷರ ಕಾಲದಲ್ಲಿ (1893) ಎಳೆಯಲಾದ 2,640 ಕಿ.ಮೀ ಉದ್ದದ ‘ಡ್ಯುರಾಂಡ್ ಗಡಿ ರೇಖೆ’ಯನ್ನು ಅಫ್ಘಾನಿಸ್ತಾನವು ಐತಿಹಾಸಿಕವಾಗಿ ಒಪ್ಪಿಕೊಂಡಿಲ್ಲ. ಇದು ಪಶ್ತೂನ್ ಬುಡಕಟ್ಟು ಜನಾಂಗವನ್ನು ವಿಭಜಿಸುತ್ತದೆ ಎಂಬುದು ಅವರ ವಾದ. ಇತ್ತೀಚಿನ ದಿನಗಳಲ್ಲಿ ಈ ಗಡಿಯುದ್ದಕ್ಕೂ ನಿರಂತರ ಗುಂಡಿನ ಚಕಮಕಿ ನಡೆಯುತ್ತಿದೆ. 2025ರ ಅಕ್ಟೋಬರ್ ಮತ್ತು 2026ರ ಆರಂಭದಲ್ಲಿ ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ ಖೋಸ್ಟ್, ಪಕ್ಟಿಕಾ ಮುಂತಾದ ಪ್ರಾಂತ್ಯಗಳೊಳಗೆ ನುಗ್ಗಿ ವೈಮಾನಿಕ ದಾಳಿಗಳನ್ನು  ನಡೆಸಿದೆ. ಇದರಿಂದಾಗಿ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದು, ಇದು ತಮ್ಮ ಸಾರ್ವಭೌಮತ್ವದ ನೇರ ಉಲ್ಲಂಘನೆ ಎಂದು ತಾಲಿಬಾನ್ ತೀವ್ರವಾಗಿ ತಿರುಗೇಟು ನೀಡಿದೆ.

ಇದನ್ನು ಓದಿದ್ದೀರಾ? ಅಸ್ಸಾಂ ಮಹಾಸಮರ | ಕಾಂಗ್ರೆಸ್‌ಗೆ ಮತ್ತೆ ವೈಭವದ ದಿನಗಳು ಬರಲಿವೆಯೇ?

​ತಾಲಿಬಾನ್‌ಗಳನ್ನು ಬಗ್ಗಿಸಲು ಪಾಕಿಸ್ತಾನ ಬಳಸಿದ ಮತ್ತೊಂದು ಅಸ್ತ್ರವೆಂದರೆ ‘ನಿರಾಶ್ರಿತರ ಉಚ್ಚಾಟನೆ’. ದಶಕಗಳಿಂದ ಪಾಕಿಸ್ತಾನದಲ್ಲಿ ನೆಲೆಸಿದ್ದ ಸುಮಾರು 1.7 ದಶಲಕ್ಷಕ್ಕೂ ಹೆಚ್ಚು ದಾಖಲೆರಹಿತ ಅಫ್ಘಾನ್ ನಿರಾಶ್ರಿತರನ್ನು ಬಲವಂತವಾಗಿ ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಪಾಕಿಸ್ತಾನ ತೀವ್ರಗೊಳಿಸಿದೆ. ಮಾನವೀಯತೆಯ ದೃಷ್ಟಿಯನ್ನು ಬದಿಗೊತ್ತಿ, ಪ್ರತಿದಿನ ಸಾವಿರಾರು ಅಫ್ಘನ್ನರನ್ನು ಗಡಿಯಾಚೆ ದೂಡಿದ್ದು ಉಭಯ ದೇಶಗಳ ನಡುವಿನ ಕಂದಕವನ್ನು ಮತ್ತಷ್ಟು ವಿಸ್ತರಿಸಿದೆ.

​ಪಾಕಿಸ್ತಾನವು ಆಗಾಗ ತೋರ್ಖಾಮ್ ಮತ್ತು ಚಮನ್ ಗಡಿಗಳನ್ನು ಮುಚ್ಚುವ ಮೂಲಕ ಅಫ್ಘಾನಿಸ್ತಾನದ ಆರ್ಥಿಕತೆಗೆ ಪೆಟ್ಟು ನೀಡಲು ಯತ್ನಿಸುತ್ತಿದೆ. ಆದರೆ, ಇದಕ್ಕೆ ಪ್ರತಿಯಾಗಿ ತಾಲಿಬಾನ್ ಸರ್ಕಾರವು ಪ್ರತ್ಯೇಕ ವಿದೇಶಾಂಗ ನೀತಿಯನ್ನು ರೂಪಿಸುತ್ತಿದ್ದು, ಭಾರತ ಮತ್ತು ಇರಾನ್‌ನತ್ತ ಒಲವು ತೋರುತ್ತಿದೆ. ನವದೆಹಲಿಯೊಂದಿಗಿನ ಅಫ್ಘಾನಿಸ್ತಾನದ ಬೆಳೆಯುತ್ತಿರುವ ವ್ಯವಹಾರಿಕ ಸಂಬಂಧಗಳು ಇಸ್ಲಾಮಾಬಾದ್‌ನ ನಿದ್ದೆಗೆಡಿಸಿವೆ.

ತಾನು ಸಾಕಿ ಬೆಳೆಸಿದ ಸಂಘಟನೆಗಳೇ ಇಂದು ತನ್ನ ಪಾಲಿಗೆ ಕಂಟಕವಾಗಿರುವುದನ್ನು ಪಾಕಿಸ್ತಾನ ಅರಗಿಸಿಕೊಳ್ಳಲಾಗುತ್ತಿಲ್ಲ. ಗುರು-ಶಿಷ್ಯ ಎಂಬ ಮನಸ್ಥಿತಿಯಿಂದ ಹೊರಬಂದು, ಅಫ್ಘಾನಿಸ್ತಾನವನ್ನು ಒಂದು ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರವಾಗಿ ನೋಡಲು ಪಾಕಿಸ್ತಾನ ವಿಫಲವಾಗಿರುವುದೇ ಈ ಹಳೆಯ ಹಾದಿ ತಪ್ಪಲು ಪ್ರಮುಖ ಕಾರಣ. ಗಡಿ ವಿವಾದ ಮತ್ತು ಪರಸ್ಪರ ನಂಬಿಕೆಯ ತೀವ್ರ ಕೊರತೆಯಿಂದಾಗಿ ಅಫ್ಘಾನ್-ಪಾಕ್ ಸಂಬಂಧವೀಗ ಸರಿಪಡಿಸಲಾಗದಷ್ಟು ಬಿರುಕು ಬಿಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...