ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್ ಕ್ರಿಕೆಟ್ ಸೂಪರ್ ಫೋರ್ ವಿಭಾಗದ ಕೊನೆಯ ಪಂದ್ಯದಲ್ಲಿ ಸೆಣಸಿದ ಭಾರತ ಮತ್ತು ಶ್ರೀಲಂಕಾ ನಡುವೆ ಸಾಕಷ್ಟು ರೋಚಕಗಳು ಕ್ಷಣಗಳು ನಡೆದು, ಕೊನೆಗೆ ನಡೆದ ಸೂಪರ್ ಓವರ್’ನಲ್ಲಿ ಭಾರತ ಜಯ ಸಾಧಿಸಿತು.
ಈ ಮೂಲಕ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು 2025ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯುದ್ದಕ್ಕೂ ಅಜೇಯವಾಗುಳಿಯಿತು.
ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ ಶರ್ಮಾ ಅವರ ಮಿಂಚಿನ ಅರ್ಧಶತಕ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 202 ರನ್ ಗಳಿಸಿತು.
ಈ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸುವ ಮೂಲಕ ಪಂದ್ಯ ಟೈ ಆಯಿತು. ಹೀಗಾಗಿ ವಿಜೇತರನ್ನು ನಿರ್ಧರಿಸಲು ನಡೆದ ಸೂಪರ್ ಓವರ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎರಡು ರನ್ ಗೆ ನಿಯಂತ್ರಿಸಿದ ಭಾರತ ಗೆಲುವು ದಾಖಲಿಸಿತು.
ಭಾರತದ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿ ತಲಾ ಅರ್ಧಶತಕ ಸಿಡಿಸಿ ಭಾರತದ ಬೃಹತ್ ಮೊತಕ್ಕೆ ಕಾರಣರಾದರು. ಅಭಿಷೇಕ್ ಶರ್ಮಾ ಕೇವಲ 31 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 61 ರನ್ ಪೇರಿಸಿದರೆ, ಇತ್ತ ತಿಲಕ್ ವರ್ಮಾ ಕೂಡ 34 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ಅಜೇಯ 49 ರನ್ ಚಚ್ಚಿದರು. ಆ ಮೂಲಕ ಕೇವಲ 1 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.
ಲಂಕಾದ ಆರಂಭಿಕ ಆಟಗಾರ ನಿಸಾಂಕ ಅವರು ಭಾರತದ ಎಲ್ಲ ಬೌಲರ್ಗಳನ್ನೂ ದಂಡಿಸಿದರು. ಇನಿಂಗ್ಸ್ನ ಮೊದಲ ಓವರ್ನಲ್ಲಿಯೇ ಹಾರ್ದಿಕ್ ಎಸೆತವನ್ನು ಆಡುವಾಗ ಕುಸಾಲ ಮೆಂಡಿಸ್ ಔಟಾದರು. ನಿಸಾಂಕ ಅವರಿಗೆ ಕುಸಾಲ ಪೆರೆರಾ ಉತ್ತಮ ಜೊತೆ ನೀಡಿದರು. ಎರಡನೆ ವಿಕೆಟ್ ಜೊತೆಯಾಟದಲ್ಲಿ127 ರನ್ ಸೇರಿಸಿದರು. 13ನೇ ಓವರ್ನಲ್ಲಿ ಪೆರೆರಾ ಅವರನ್ನು ಸ್ಪಿನ್ನರ್ ವರುಣ್ ಚಕ್ರವರ್ತಿ ಔಟ್ ಮಾಡಿದರು. ನಿಸಾಂಕ ಕೊನೆಯ ಓವರ್ನಲ್ಲಿ ಔಟಾದರು.
ಭಾರತ: 20 ಓವರ್ಗಳಲ್ಲಿ 5ಕ್ಕೆ202 (ಅಭಿಷೇಕ್ ಶರ್ಮಾ 61, ತಿಲಕ್ ವರ್ಮಾ ಔಟಾಗದೇ 49, ಸಂಜು ಸ್ಯಾಟ್ಸನ್ 39, ಅಕ್ಷರ್ ಪಟೇಲ್ ಔಟಾಗದೇ 21, ಮಹೀಷ ತೀಕ್ಷಣ 36ಕ್ಕೆ1, ದುಷ್ಮಂತಾ ಚಾಮೀರ 40ಕ್ಕೆ1, ವಣಿಂದು ಹಸರಂಗಾ 371).
ಶ್ರೀಲಂಕಾ: 20 ಓವರ್ಗಳಲ್ಲಿ 5 ವಿಕೆಟ್ಗೆ 202 (ಪಥುಮ್ ನಿಸಾಂಕ 107, ಕುಶಾಲ್ ಪೆರೆರಾ 58, ದಸುನ್ ಶನಾಕಾ ಔಟಾಗದೇ 22; ಹಾರ್ದಿಕ್ ಪಾಂಡ್ಯ 7ಕ್ಕೆ 1, ಕುಲದೀಪ್ ಯಾದವ್ 31ಕ್ಕೆ 1, ವರುಣ್ ಚಕ್ರವರ್ತಿ 31ಕ್ಕೆ 1).
ಭಾರತ ತಂಡವು ಫೈನಲ್ ಪ್ರವೇಶಿಸಿದ್ದು, ಭಾನುವಾರ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.





