ವಿವಾದಿತ ಹೇಳಿಕೆ: ಹರ್ಷ ಭೋಗ್ಲೆ, ಸೈಮನ್ ಡೌಲ್ ಐಪಿಎಲ್ ವೀಕ್ಷಕ ವಿವರಣೆಕಾರ ಹುದ್ದೆಯಿಂದ ನಿಷೇಧ!

Date:

ಹೆಸರಾಂತ ಕ್ರಿಕೆಟ್ ವೀಕ್ಷಕ ವಿವರಣೆಕಾರರಾದ ಹರ್ಷ ಭೋಗ್ಲೆ ಮತ್ತು ಸೈಮನ್ ಡೌಲ್ ಅವರನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಪಂದ್ಯಗಳ ಕುರಿತು ವ್ಯಾಖ್ಯಾನಕಾರರಾಗಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಲಾಗಿದೆ.

ಇವರಿಬ್ಬರನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಪಂದ್ಯಗಳ ಕುರಿತು ವ್ಯಾಖ್ಯಾನಕಾರರಾಗಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಿ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಪತ್ರ ಬರೆದಿತ್ತು. ಕುತೂಹಲ ಸಂಗತಿ ಎಂದರೆ ಸೋಮವಾರ ನಡೆದ ಕೆಕೆಆರ್‌ ಹಾಗೂ ಗುಜರಾತ್ ಟೈಟಾನ್ಸ್‌ ಪಂದ್ಯದಲ್ಲಿ ಇವರಿಬ್ಬರು ವೀಕ್ಷಕ ವಿವರಣೆಕಾರರಾಗಿ ಕಾಣಿಸಿಕೊಂಡಿರಲಿಲ್ಲ.

ಫ್ರಾಂಚೈಸಿಯ ಬೇಡಿಕೆಗಳಿಗೆ ಅನುಗುಣವಾಗಿ ಪಿಚ್‌ಗಳನ್ನು ಸಿದ್ಧಪಡಿಸುವಲ್ಲಿ ತವರು ಕ್ಯುರೇಟರ್ ಸಹಕಾರ ನೀಡುತ್ತಿಲ್ಲ ಎಂದು ಡೌಲ್ ಮತ್ತು ಹರ್ಷ ಭೋಗ್ಲೆ ಟೀಕಿಸಿದ ನಂತರ ಸಿಎಬಿ ಈ ಮನವಿ ಮಾಡಿತ್ತು. ಕೆಕೆಆರ್ ತಂಡಕ್ಕೆ ಬೇಕಾದ ಪಿಚ್ ತಯಾರಿಸಲು ಕ್ಯುರೇಟರ್ ಸಹಾಯ ಮಾಡದಿದ್ದರೆ, ತಂಡವು ಬೇರೆಡೆಗೆ ಸ್ಥಳಾಂತರಗೊಳ್ಳಬೇಕು ಎಂದು ಸೈಮನ್ ಡೌಲ್ ಸಲಹೆ ನೀಡಿದ್ದರು. ಹರ್ಷ ಭೋಗ್ಲೆ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಿಂದ ಕೆರಳಿದ ಸಿಎಬಿ, ಈ ಇಬ್ಬರು ವ್ಯಾಖ್ಯಾನಕಾರರನ್ನು ಈಡನ್ ಗಾರ್ಡನ್ಸ್‌ನಲ್ಲಿ ಕಮೆಂಟರಿ ಮಾಡದಂತೆ ನಿಷೇಧಿಸಲು ಬಿಸಿಸಿಐಗೆ ಪತ್ರ ಬರೆಯಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಂಗಾಳ ಕ್ರಿಕೆಟ್ ಸಂಸ್ಥೆ, ಬಿಸಿಸಿಐಗೆ ಪತ್ರ ಬರೆದು, ಹರ್ಷ ಭೋಗ್ಲೆ ಮತ್ತು ಸೈಮನ್ ಡೌಲ್ ಅವರನ್ನು ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಯಾವುದೇ ಪಂದ್ಯಗಳಿಗೆ ವ್ಯಾಖ್ಯಾನಕಾರರಾಗಿ ಬರದಂತೆ ತಡೆಯಲು ಒತ್ತಾಯಿಸಿತ್ತು.

ಈ ಸುದ್ದಿ ಓದಿದ್ದೀರಾ? ಐಪಿಎಲ್‌ನಲ್ಲಿ ಮೋಸದಾಟದ ಘಾಟು: ಫ್ರಾಂಚೈಸಿ ತಂಡಗಳು, ಆಟಗಾರರಿಗೆ ಬಿಸಿಸಿಐ ಖಡಕ್‌ ಎಚ್ಚರಿಕೆ

ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸೈಮನ್ ಡೌಲ್ ‘ತಂಡದ ಮಾಲೀಕರು ಕ್ಯುರೇಟರ್‌ಗೆ ಹಣ ನೀಡುತ್ತಾರೆ. ಆದರೂ, ಅವರು ತಂಡಕ್ಕೆ ಬೇಕಾದ ಪಿಚ್ ತಯಾರಿಸದಿದ್ದರೆ, ಕೆಕೆಆರ್ ಬೇರೆಡೆಗೆ ಹೋಗುವುದು ಉತ್ತಮʼ ಎಂದು ಹೇಳಿದ್ದರು. ಅಂದರೆ, ‘ಕ್ಯುರೇಟರ್, ಆತಿಥೇಯ ತಂಡದ ಮಾತನ್ನು ಕೇಳದಿದ್ದರೆ, ಅವರು ಕ್ರೀಡಾಂಗಣದ ಶುಲ್ಕವನ್ನು ಪಾವತಿಸುತ್ತಾರೆ. ಐಪಿಎಲ್‌ನಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಹಣ ನೀಡುತ್ತಾರೆ. ಆದರೂ ಅವರು ಆತಿಥೇಯ ತಂಡದ ಮಾತನ್ನು ಕೇಳದಿದ್ದರೆ, ಫ್ರಾಂಚೈಸ್ ಅನ್ನು ಬೇರೆಡೆಗೆ ಸ್ಥಳಾಂತರಿಸಿ. ಆಟದ ಬಗ್ಗೆ ಅಭಿಪ್ರಾಯ ಹೇಳುವುದು ಅವರ ಕೆಲಸವಲ್ಲ. ಅದಕ್ಕಾಗಿ ಅವರಿಗೆ ಹಣ ನೀಡಲಾಗುವುದಿಲ್ಲʼ ಎಂದು ಡೌಲ್ ಅಭಿಪ್ರಾಯಪಟ್ಟಿದ್ದರು.

ಹರ್ಷ ಭೋಗ್ಲೆ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದರು. ‘ತಮ್ಮ ಬೌಲರ್‌ಗಳಿಗೆ ಸೂಕ್ತವಾದ ಪಿಚ್ ಅನ್ನು ಆತಿಥೇಯ ತಂಡವು ಪಡೆಯಬೇಕು. ಅವರು ಮನೆಯಲ್ಲಿ (ತವರು ಮೈದಾನ) ಆಡುತ್ತಿದ್ದರೆ, ಅವರ ಬೌಲರ್‌ಗಳಿಗೆ ಸೂಕ್ತವೆಂದು ಅವರು ಭಾವಿಸುವ ಪಿಚ್‌ಗಳನ್ನು ಪಡೆಯಬೇಕು. ಕೆಕೆಆರ್ ಕ್ಯುರೇಟರ್ ಹೇಳಿದ್ದರ ಬಗ್ಗೆ ನಾನು ನೋಡಿದೆʼ ಎಂದು ಭೋಗ್ಲೆ ಹೇಳಿದ್ದರು.

ಆದರೆ, ಸಿಎಬಿ ಕ್ಯುರೇಟರ್ ಮುಖರ್ಜಿ ಅವರ ಪರವಾಗಿ ನಿಂತಿದೆ. ‘ಅವರು ಯಾವುದೇ ತಪ್ಪು ಮಾಡಿಲ್ಲ. ಬಿಸಿಸಿಐ ನಿಯಮಗಳ ಪ್ರಕಾರವೇ ಅವರು ಪಿಚ್ ತಯಾರಿಸುತ್ತಿದ್ದಾರೆ. ಯಾವುದೇ ಫ್ರಾಂಚೈಸಿ, ಪಿಚ್ ಹೇಗೆ ತಯಾರಾಗಬೇಕು ಎಂದು ಹೇಳಲು ಸಾಧ್ಯವಿಲ್ಲʼ ಎಂಬುದು ಬಿಸಿಸಿಐ ನಿಯಮ. ಕ್ಯುರೇಟರ್ ವಿಕೆಟ್ ಅನ್ನು ಹೇಗೆ ತಯಾರಿಸಬೇಕೆಂಬ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ ಎಂದು ಸಿಎಬಿ ಅಭಿಪ್ರಾಯಪಟ್ಟಿದೆ.

ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ಸ್ಪಿನ್ ಬೌಲಿಂಗ್‌ಗೆ ನೆರವಾಗುವ ಪಿಚ್ ತಯಾರಿಸಲು ಮುಖರ್ಜಿ ಅವರನ್ನು ಕೇಳಿದ್ದರು. ಇದರಿಂದ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಅವರಂತಹ ಸ್ಪಿನ್ನರ್‌ಗಳಿಗೆ ಅನುಕೂಲವಾಗುತ್ತದೆ ಎಂಬುದು ಅವರ ಆಶಯವಾಗಿತ್ತು. ಆದರೆ, ಪಿಚ್ ವೇಗದ ಬೌಲಿಂಗ್‌ಗೆ ಹೆಚ್ಚು ನೆರವಾಗುವಂತೆ ತಯಾರಿಸಲಾಗಿತ್ತು. ಇದರಿಂದ ಹೆಚ್ಚು ರನ್ ಗಳಿಸುವ ಪಂದ್ಯಗಳು ನಡೆದವು. ಈ ಬಗ್ಗೆ ನಾಯಕ ಅಜಿಂಕ್ಯಾ ರಹಾನೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...