ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ನ್ಯೂಜಿಲೆಂಡ್ ತಂಡ ಬೌಲಿಂಗ್ ಆಯ್ದುಕೊಂಡಿದ್ದು, ಭಾರತಕ್ಕೆ ಬ್ಯಾಟಿಂಗ್ ಆಹ್ವಾನಿಸಿದೆ. ಉತ್ತಮ ಆರಂಭ ಪಡೆದಿದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಅವರ ರೂಪದಲ್ಲಿ ಆರಂಭಿಕ ಆಘಾತ ಎದುರಾಗಿದೆ.
ನ್ಯೂಜಿಲೆಂಡ್ ನಾಯಕ ಮೈಕೆಲ್ ಬ್ರೇಸ್ವೆಲ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಗಾಯಾಳು ವಾಷಿಂಗ್ಟನ್ ಸುಂದರ್ ಬದಲಿಗೆ ಭಾರತ ತಂಡದಲ್ಲಿ ಯುವ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಸ್ಥಾನ ನೀಡಲಾಗಿದೆ. ನ್ಯೂಜಿಲೆಂಡ್ ಪರ ಜೇಡನ್ ಲೆನಾಕ್ಸ್ ಪಾದಾರ್ಪಣೆ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಎಚ್ಚರಿಕೆಯ ಹಾಗೂ ಭದ್ರ ಬುನಾದಿ ಹಾಕಿಕೊಟ್ಟರು. ಆರಂಭದಲ್ಲಿ ನಿಧಾನಗತಿಯಲ್ಲಿದ್ದ ರನ್ ಗಳಿಕೆ ನಂತರ ವೇಗ ಪಡೆದುಕೊಂಡಿತು. ಈ ಜೋಡಿ ಮೊದಲ ವಿಕೆಟ್ಗೆ 70 ರನ್ಗಳ ಜೊತೆಯಾಟ ನೀಡಿತು.
ಇದನ್ನು ಓದಿದ್ದೀರಾ? ವಿಶ್ವವಿಜೇತನ ಟ್ರೋಫಿಗಳೆಲ್ಲ ಅಮ್ಮನ ಕಪಾಟಿನಲ್ಲಿ ಭದ್ರ: ಕೊಹ್ಲಿ ಯಶಸ್ಸಿನ ಹಿಂದಿನ ‘ಸರೋಜ’ ವಾತ್ಸಲ್ಯ
ಆದರೆ, 13ನೇ ಓವರ್ನಲ್ಲಿ ದಾಳಿಗಿಳಿದ ಕಿವೀಸ್ ಬೌಲರ್, ಭಾರತಕ್ಕೆ ಆಘಾತ ನೀಡಿದ್ದಾರೆ. ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ (24 ರನ್) ವಿಕೆಟ್ ಒಪ್ಪಿಸುವುದರೊಂದಿಗೆ ಭಾರತದ ಮೊದಲ ವಿಕೆಟ್ ಪತನವಾಗಿದೆ.
ರೋಹಿತ್ ನಿರ್ಗಮನದ ನಂತರ, ಈಗ ಕ್ರೀಸ್ನಲ್ಲಿರುವ ನಾಯಕ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಮೇಲೆ ದೊಡ್ಡ ಮೊತ್ತದ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಇದೆ. ರಾಜ್ಕೋಟ್ ಪಿಚ್ ಬ್ಯಾಟಿಂಗ್ಗೆ ನೆರವಾಗುವುದರಿಂದ ಭಾರತ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಸ್ಕೋರ್ :
ಭಾರತ: 90/1 (16 ಓವರ್)
ಶುಭಮನ್ ಗಿಲ್: 52 (ಬ್ಯಾಟಿಂಗ್)
ವಿರಾಟ್ ಕೊಹ್ಲಿ: 9 (ಬ್ಯಾಟಿಂಗ್)





