ಪಾಕ್‌ನೊಂದಿಗೆ ಕ್ರಿಕೆಟ್ ಪಂದ್ಯ: ಬಿಜೆಪಿ ಸರ್ಕಾರದ ದೇಶ ಪ್ರೇಮ ಕೇವಲ ಅಧಿಕಾರಕ್ಕೆ ಸೀಮಿತವಾಯಿತೇ?

Date:

ಭಾರತ – ಪಾಕಿಸ್ತಾನ ಕ್ರಿಕೆಟ್ ಪಂದ್ಯ ದೇಶದ ಭಾವನೆಗಳ ವಿರುದ್ಧ, ಕೇವಲ ಹಣ ಹಾಗೂ ರಾಜಕೀಯ ಲಾಭಕ್ಕಾಗಿ ನಡೆದಿರುವುದು ಸ್ಪಷ್ಟವಾಗಿದೆ. ಜನರನ್ನು ಪಾಕಿಸ್ತಾನ ದ್ವೇಷದ ಭಾವನೆಗಳಿಂದ ಪ್ರೇರೇಪಿಸಿ ಚುನಾವಣಾ ರಾಜಕೀಯದಲ್ಲಿ ಬಲವರ್ಧನೆ ಪಡೆಯುವ ಕೇಂದ್ರ ಸರ್ಕಾರವೇ, ಈಗ ಅದೇ ಪಾಕಿಸ್ತಾನ ಆಟಗಾರರ ಜೊತೆ ಕುಳಿತು ಹಾಸುಹೊಕ್ಕು ನಡೆಸುತ್ತಿರುವುದು ದೇಶಪ್ರೇಮದ ಹೆಸರಿನಲ್ಲಿ ನಡೆಸುತ್ತಿರುವ ನಾಟಕವಷ್ಟೇ ಎಂದು ಈ ಘಟನೆ ತೋರಿಸಿದೆ.

ಭಾರತ-ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಟಿ20 ಪಂದ್ಯವು ಕೇವಲ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಸ್ಪರ್ಧೆಯಲ್ಲ, ಬದಲಿಗೆ ರಾಜಕೀಯ ಹಿಪಾಕ್ರಿಸಿಯ ಮತ್ತು ಹಣದ ದುರಾಸೆಯ ಸಂಕೇತವಾಗಿ ಮಾರ್ಪಟ್ಟಿದೆ. ಬಿಸಿಸಿಐ ಮತ್ತು ಕೇಂದ್ರ ಸರ್ಕಾರದ ನಿಲುವುಗಳು ಈ ವಿವಾದಕ್ಕೆ ಮತ್ತಷ್ಟು ತಿರುವು ನೀಡಿವೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಕೃತ್ಯಗಳ ನಡುವೆಯೂ ಈ ಪಂದ್ಯ ನಡೆದಿರುವುದು ಸರ್ಕಾರದ ಇಬ್ಬಗೆ ನೀತಿಯನ್ನು ಬಯಲುಮಾಡಿದೆ. ಚುನಾವಣಾ ಪ್ರಚಾರಗಳಲ್ಲಿ, ರಾಜಕೀಯ ಸಭೆಗಳಲ್ಲಿ ಪಾಕಿಸ್ತಾನವನ್ನು ದ್ವೇಷಿಸಿ, ದೇಶಭಕ್ತಿಯ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ಬಿಜೆಪಿ ನೇತೃತ್ವದ ಸರ್ಕಾರ, ಕ್ರಿಕೆಟ್ ವೇದಿಕೆಯಲ್ಲಿ ಹಣದ ಆಸೆಗೆ ಮಣಿದು ಪಂದ್ಯಕ್ಕೆ ಅನುಮತಿ ನೀಡಿದೆ. ಪಹಲ್ಗಾಮ್ ದಾಳಿಯ ನಂತರದಲ್ಲಿ ಸೈನಿಕರ ಬಲಿದಾನವನ್ನು ಮರೆತು, ಪ್ರಸಾರ ಹಕ್ಕುಗಳಿಂದ ಬರುವ ಕೋಟ್ಯಂತರ ರೂಪಾಯಿಗಳಿಗಾಗಿ ದೇಶದ ಭಾವನೆಗಳನ್ನು ಕಡೆಗಣಿಸಿದ್ದು ಅತ್ಯಂತ ನಾಚಿಕೆಗೇಡಿನ ಸಂಗತಿ. ಬಿಸಿಸಿಐಯ ನಿರ್ಧಾರವು ಸರ್ಕಾರದ ಸಮ್ಮತಿಯಿಲ್ಲದೆ ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗಿದೆ, ಏಕೆಂದರೆ ಸರ್ಕಾರವೇ ಈ ಪಂದ್ಯಕ್ಕೆ ಹಸಿರು ನಿಶಾನೆ ತೋರಿಸಿದೆ. ಇದು ದೇಶಭಕ್ತಿಯ ಮುಖವಾಡದ ಹಿಂದೆ ಮರೆಯಾಗಿರುವ ದುರಾಸೆಯ ಚಿತ್ರಣವಷ್ಟೇ.

ದೃವ ರಾಠಿ, ಜನಪ್ರಿಯ ಯೂಟ್ಯೂಬರ್ ಮತ್ತು ಸಾಮಾಜಿಕ ಕಾರ್ಯಕರ್ತ, ತಮ್ಮ ಇತ್ತೀಚಿನ ವಿಡಿಯೋದಲ್ಲಿ ಈ ಹಿಪಾಕ್ರಿಸಿಯನ್ನು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಅವರು ಹೇಳುವಂತೆ, ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರನ್ನು ಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಕೇವಲ ಕುಟುಂಬ ರಾಜಕಾರಣದ ಉದಾಹರಣೆಯಲ್ಲ, ಬದಲಿಗೆ ಕ್ರಿಕೆಟ್ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪದ ಸಾಕ್ಷಿ. ರಾಠಿ ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಮುಂತಾದ ಕ್ರಿಕೆಟ್ ದಿಗ್ಗಜರ ಮೌನವನ್ನು ಟೀಕಿಸಿದ್ದಾರೆ. “ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ನಿಮ್ಮ ಮೌನವನ್ನು ನಿಲ್ಲಿಸಿ. ಸೌರವ್ ಗಂಗೂಲಿ, ನೀವು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಹಣ ಗಳಿಸುತ್ತೀರಿ, ಆದರೆ ಬಿಸಿಸಿಐಗೆ ಭಯಪಟ್ಟು ಏಕೆ ಮೌನವಹಿಸುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಮೋದಿ ಸರ್ಕಾರವು ಪಂದ್ಯವನ್ನು ನಿಲ್ಲಿಸಬಹುದಾಗಿದ್ದರೂ ಮಾಡದಿರುವುದು ಹಣದ ದುರಾಸೆಯಿಂದಾಗಿದೆ ಎಂದು ರಾಠಿ ಆರೋಪಿಸಿದ್ದಾರೆ. ಅವರ ವಿಡಿಯೋದಲ್ಲಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಹೊಗಳುವ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಟಿವಿ ಮಾಧ್ಯಮವನ್ನು ಉಲ್ಲೇಖಿಸಿ, ಮೋದಿ ಅಥವಾ ಬಿಜೆಪಿಯನ್ನು ಟೀಕಿಸದೆ ಬಿಸಿಸಿಐ ಮತ್ತು ಆಟಗಾರರ ಮೇಲೆ ಮಾತ್ರ ದಾಳಿ ಮಾಡುತ್ತಿರುವುದನ್ನು ಬಯಲುಮಾಡಿದ್ದಾರೆ. ರಾಠಿ ಅವರ ವಿಶ್ಲೇಷಣೆಯು ಸರ್ಕಾರದ “ಅಂಧ ಭಕ್ತರನ್ನು” “ಮೂರ್ಖರು” ಎಂದು ಕರೆದು, ಅವರನ್ನು ಎಚ್ಚರಿಸುವಂತಿದೆ.

ಇದನ್ನು ಪ್ರಶ್ನಿಸುವ ಇತರ ಗಣ್ಯರಲ್ಲಿ ಸುನಿಲ್ ಗವಾಸ್ಕರ್ ಪ್ರಮುಖರು. ಅವರು ಹೇಳುವಂತೆ, “ಇದು ಮೋದಿ ಸರ್ಕಾರದ ನಿರ್ಧಾರ. ಬಿಸಿಸಿಐ ಅಥವಾ ಆಟಗಾರರು ಏನೂ ಮಾಡಲಾರರು” ಎಂದಿದ್ದಾರೆ. ವ್ಯಂಗ್ಯಚಿತ್ರಕಾರ  ಸತೀಶ್ ಅಚಾರ್ಯ ಅವರು ತಮ್ಮ ವ್ಯಂಗ್ಯಚಿತ್ರದಲ್ಲಿ ಮೂರನೇ ಅಂಪೈರ್ ರೂಪದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ವ್ಯಂಗ್ಯವಾಗಿ ಚಿತ್ರಿಸಿದ್ದಾರೆ. ಮತ್ತೊಬ್ಬ ಪತ್ರಕರ್ತ ಮೊಹಮ್ಮದ್ ಝುಬೈರ್, ಅರ್ನಬ್ ಗೋಸ್ವಾಮಿಯ ವಿಡಿಯೋದಲ್ಲಿ ಮೋದಿಯನ್ನು ದೂಷಿಸದೆ ಬಿಸಿಸಿಐಯನ್ನು ಮಾತ್ರ ಗುರಿ ಮಾಡುತ್ತಿರುವುದನ್ನು ಎತ್ತಿ ತೋರಿಸಿದ್ದಾರೆ. ಇದೆಲ್ಲದರ ನಡುವೆ, ಪಂದ್ಯದ ಸಂದರ್ಭದಲ್ಲಿ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಅಫ್ರಿದಿ ಸೇರಿದಂತೆ ಪಾಕ್ ಆಟಗಾರರೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದರು. ಅನುರಾಗ್ ಠಾಕೂರ್ ಸಹ ಅದೇ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಇದು ಸರ್ಕಾರದ ದೇಶಪ್ರೇಮದ ಮುಖವಾಡವನ್ನು ಕಿತ್ತೆಸೆದಿದೆ. ಅಫ್ರಿದಿ ಅವರು ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸಿ, ಮೋದಿಯ ವಿರುದ್ಧ ದ್ವೇಷದ ಮಾತುಗಳನ್ನಾಡಿದ್ದರೂ, ಜಯ್ ಶಾ ಅವರು ಅವರೊಂದಿಗೆ ಸ್ನೇಹದಂತೆ ವರ್ತಿಸುತ್ತಿರುವುದು ಅತ್ಯಂತ ಹಾಸ್ಯಾಸ್ಪದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಕ್ರಿಸ್‌ ಗೇಲ್‌ಗೆ ಐಪಿಎಲ್‌ನಲ್ಲಿ ಕಹಿ ಅನುಭವ: ಕಣ್ಣೀರಿಟ್ಟು ತಂಡ ತೊರೆದಿದ್ದ ದಿಗ್ಗಜ ಆಟಗಾರ

ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರ್ಕಾರ “ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ” ಎಂದು ಘೋಷಿಸಿತ್ತು. ಆದರೆ ಇದೀಗ ಹಣದ ದುರಾಸೆಗೆ ಎಲ್ಲವನ್ನೂ ಮರೆತುಬಿಟ್ಟಿದೆ. ಬಿಸಿಸಿಐಯು ಪ್ರಸಾರ ಹಕ್ಕುಗಳಿಂದ ಬರುವ ಲಾಭಕ್ಕಾಗಿ ಪಂದ್ಯವನ್ನು ನಡೆಸಿದ್ದು, ಸರ್ಕಾರದ ಒಪ್ಪಿಗೆಯೊಂದಿಗೆಯೇ. ಇದು ದೇಶದ ಸೈನಿಕರ ಬಲಿದಾನಕ್ಕೆ ಅವಮಾನ. ಸಾಮಾಜಿಕ ಜಾಲತಾಣಗಳಲ್ಲಿ #BoycottINDvPAK ಅಭಿಯಾನ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರ ಮತ್ತು ಬಿಸಿಸಿಐ ಇದನ್ನು ಕಡೆಗಣಿಸಿವೆ. ಈ ಪಂದ್ಯವು ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಅಲ್ಲ, ಬದಲಿಗೆ ಬಿಸಿಸಿಐ ವರ್ಸಸ್ ಪಾಕಿಸ್ತಾನ, ಏಕೆಂದರೆ ನಿಜವಾದ ಟೀಮ್ ಇಂಡಿಯಾ ಭಯೋತ್ಪಾದಕ ರಾಷ್ಟ್ರದೊಂದಿಗೆ ಆಡುವುದಿಲ್ಲ. ಸರ್ಕಾರದ ಈ ನಿಲುವು ದೇಶದ ಭಾವನೆಗಳನ್ನು ಧಿಕ್ಕರಿಸಿದ್ದು, ರಾಜಕೀಯ ಲಾಭಕ್ಕಾಗಿ ದೇಶಭಕ್ತಿಯನ್ನು ಮಾರಾಟ ಮಾಡಿದ್ದು ಸಾಬೀತಾಗಿದೆ. ಇಂತಹ ಹಿಪಾಕ್ರಸಿಯ ನಡುವೆ ಕ್ರಿಕೆಟ್ ಕೇವಲ ವ್ಯಾಪಾರವಾಗಿ ಮಾರ್ಪಟ್ಟಿದೆ, ಮತ್ತು ಸರ್ಕಾರದ ದೇಶಪ್ರೇಮ ಕೇವಲ ಮತಗಳ ಆಟವಷ್ಟೇ ಆಗಿದೆ.

ಭಾರತ – ಪಾಕಿಸ್ತಾನ ಕ್ರಿಕೆಟ್ ಪಂದ್ಯ ದೇಶದ ಭಾವನೆಗಳ ವಿರುದ್ಧ, ಕೇವಲ ಹಣ ಹಾಗೂ ರಾಜಕೀಯ ಲಾಭಕ್ಕಾಗಿ ನಡೆದಿರುವುದು ಸ್ಪಷ್ಟವಾಗಿದೆ. ಜನರನ್ನು ಪಾಕಿಸ್ತಾನ ದ್ವೇಷದ ಭಾವನೆಗಳಿಂದ ಪ್ರೇರೇಪಿಸಿ ಚುನಾವಣಾ ರಾಜಕೀಯದಲ್ಲಿ ಬಲವರ್ಧನೆ ಪಡೆಯುವ ಕೇಂದ್ರ ಸರ್ಕಾರವೇ, ಈಗ ಅದೇ ಪಾಕಿಸ್ತಾನ ಆಟಗಾರರ ಜೊತೆ ಕುಳಿತು ಹಾಸುಹೊಕ್ಕು ನಡೆಸುತ್ತಿರುವುದು ದೇಶಪ್ರೇಮದ ಹೆಸರಿನಲ್ಲಿ ನಡೆಸುತ್ತಿರುವ ನಾಟಕವಷ್ಟೇ ಎಂದು ಈ ಘಟನೆ ತೋರಿಸಿದೆ. ಜನರ ವಿಶ್ವಾಸಕ್ಕೆ ದ್ರೋಹ ಮಾಡುವ ಈ ದ್ವಂದ್ವ ನೀತಿಗೆ ಜನ ಮುಂದಿನ ದಿನಗಳಲ್ಲಿ ಖಂಡಿತಾ ಪಾಠ ಕಲಿಸದೆ ಇರಲಾರರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...