ಐಪಿಎಲ್ 2023 | ಪ್ಲೇಆಫ್ ತಲುಪಿದ ಲಖನೌ; ರಿಂಕು ಸಿಂಗ್ ರೋಚಕ ಆಟದಲ್ಲಿ 1 ರನ್‌ನಿಂದ ಕೆಕೆಆರ್‌ಗೆ ಸೋಲು

Date:

ಕೊನೆಯ ಎಸೆತದವರೆಗೂ ಕೆಕೆಆರ್ ಗೆಲುವಿಗಾಗಿ ಹೋರಾಟ ನಡೆಸಿದ ರಿಂಕು ಸಿಂಗ್‌ ತಂಡವನ್ನು ಪ್ಲೇಆಫ್ ಹಂತಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಆದರೆ ಪ್ರೇಕ್ಷಕರ ಹೃದಯವನ್ನು ಗೆಲ್ಲದೆ ಬಿಡಲಿಲ್ಲ. ಈ ಮೊದಲು ಒಂದೇ ಓವರ್‌ನಲ್ಲಿ ಐದು ಸಿಕ್ಸ್ ಪೇರಿಸಿ ತಂಡವನ್ನು ಗೆಲ್ಲಿಸಿದ್ದ ರಿಂಕು, ಇಂದು ಕೂಡ ಅಮೋಘ ಆಟವಾಡಿ ಸೋಲಿನಲ್ಲೂ ಎದುರಾಳಿ ತಂಡದ ಆಟಗಾರರ ಮನವನ್ನು ಗೆದ್ದರು.

ಲಖನೌ ಸೂಪರ್‌ ಜೈಂಟ್ಸ್‌ ನೀಡಿದ 176 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್‌ ರೈಡರ್ಸ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್‌ ಗಳಿಸಿ ಕೇವಲ ಒಂದು ರನ್‌ಗಳಿಂದ ಸೋಲನ್ನೊಪ್ಪಿಕೊಂಡಿತು.

ಕೋಲ್ಕತ್ತಾದ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 16ನೇ ಆವೃತ್ತಿಯ 68ನೇ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಯಗಳಿಸಿ ಪ್ಲೇಆಫ್ ಹಂತ ಪ್ರವೇಶಿಸಿತು. ತಂಡ ಸೋತರು ಸ್ಫೋಟಕ ಆಟವಾಡಿದ ಉದಯೋನ್ಮುಕ ಆಟಗಾರ ರಿಂಕು ಸಿಂಗ್ 33 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 6 ಆಕರ್ಷಕ ಬೌಂಡರಿಯೊಂದಿಗೆ ಅಜೇಯ 67 ರನ್‌ ಬಾರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಿಂಕು ಬಿಟ್ಟರೆ ಉತ್ತಮವಾಗಿ ಆಟವಾಡಿದ್ದು ಜೇಸನ್‌ ರಾಯ್ (45) ಹಾಗೂ ವೆಂಕಟೇಶ್ ಅಯ್ಯರ್(24). ಲಖನೌ ಪರ ರವಿ ಬಿಷ್ಣೋಯ್ 23/2 ಹಾಗೂ ಯಶ್‌ ಠಾಕೂರ್ 31/2 ವಿಕೆಟ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಲಖನೌ ಸೂಪರ್ ಜೈಂಟ್ಸ್ ಮಧ್ಯಮ ಕ್ರಮಾಂಕದ ನಿಕೋಲಸ್ ಪೂರನ್ ಅವರ ಭರ್ಜರಿ ಅರ್ಧಶತಕದ ಆಟದ ನೆರವಿನಿಂದ ನಿಗದಿತ ಓವರ್ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

ದೀಪಕ್ ಹೂಡಾ ಬದಲಾಗಿ ಕರಣ್ ಶರ್ಮಾ ಇಂದು ತಂಡದಲ್ಲಿ ಆರಂಭಿಕರಾಗಿ ಡಿ ಕಾಕ್ ಜೊತೆಗೆ ಕಣಕ್ಕಿಳಿದರು. ಆದರೆ 3 ರನ್‌ಗೆ ಹರ್ಷಿತ್ ರಾಣಾಗೆ ವಿಕೆಟ್ ನೀಡಿದರು. ಇವರ ನಂತರ ಕ್ರೀಸ್‌ಗೆ ಬಂದ ಪ್ರೇರಕ್ ಮಂಕಡ್ ಮತ್ತೊಬ್ಬ ಆರಂಭಿಕ ಡಿ ಕಾಕ್‌ಗೆ  ಜೊತೆಯಾದರು. ಈ ಜೋಡಿ 3ನೇ ವಿಕೆಟ್‌ಗೆ 41 ರನ್ ಜೊತೆಯಾಟ ನೀಡಿತು. 26 ರನ್‌ಗಳಿಸಿ  ಪ್ರೇಕ್ ಮಂಕಡ್ ಔಟ್ ಆದರೆ ಅವರ ಬೆನ್ನಲ್ಲೇ  28 ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಕೂಡಾ ವಿಕೆಟ್ ಒಪ್ಪಿಸಿದರು.

ನಂತರ ಬಂದ ಮಾರ್ಕಸ್ ಸ್ಟೋಯ್ನಿಸ್ ಸೊನ್ನೆಗೆ ವಿಕೆಟ್ ಕಳೆದುಕೊಂಡರೆ , ನಾಯಕ ಕೃನಾಲ್ ಪಾಂಡ್ಯ 9 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ಈ ಐದು ವಿಕೆಟ್ ಪತನದ ನಂತರ 6ನೇ ವಿಕೆಟ್‌ಗೆ ಒಂದಾದ ಆಯುಷ್ ಬದೋನಿ ಮತ್ತು ಪೂರನ್ 74 ರನ್‌ ಜೊತೆಯಾಟವಾಡಿದರು. ವಿಕೆಟ್ ಬೀಳುತ್ತಿದ್ದ ಪಿಚ್‌ನಲ್ಲಿ ಪೂರನ್ ಸ್ಫೋಟಕ ಆಟವನ್ನೇ ಆಡಿದರು.

21 ಚೆಂಡುಗಳಲ್ಲಿ 25 ರನ್ ಗಳಿಸಿದ್ದ ಬದೋನಿ ನರೈನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ, ನಿಕೋಲಸ್ ಪೂರನ್ ಅವರು 30 ಎಸೆತಗಳಲ್ಲಿ 5 ಸಿಕ್ಸ್ ಮತ್ತು 4 ಬೌಂಡರಿಯಿಂದ 58 ರನ್‌ಗಳ ಸ್ಫೋಟಕ ಆಟವಾಡಿ ಶಾರ್ದೂಲ್ ಠಾಕೂರ್‌ಗೆ ಬೌಲಿಂಗ್‌ನಲ್ಲಿ ಔಟಾದರು. ಪೂರನ್ ಅಬ್ಬರದ ಆಟದ ನೆರವಿನಿಂದ ಲಖನೌ 8 ವಿಕೆಟ್ ನಷ್ಟಕ್ಕೆ  176 ರನ್‌ ಕಲೆ ಹಾಕಿತು.

ಇನ್ನು ಈ ಗುರಿಯನ್ನು ಕೇವಲ 8.5 ಓವರ್ ಒಳಗೆ ಕೊಲ್ಕತ್ತಾ ನೈಟ್ ರೈಡರ್ಸ್ ಚೇಸ್ ಮಾಡಿದರೆ ಅಂಕಪಟ್ಟಿಯಲ್ಲಿ 14 ಅಂಕಗಳನ್ನು ಪಡೆದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆಯುತ್ತಿತ್ತು.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...