‘ಇದರಲ್ಲಿ ಹಲವು ಸಂಗತಿಗಳು ತಪ್ಪಾಗಿದೆ’: ರೋಹಿತ್ ನಾಯಕತ್ವ ಬದಲಾವಣೆ ಬಗ್ಗೆ ಪತ್ನಿ ಮಾತು

Date:

ರೋಹಿತ್ ಶರ್ಮಾ ಅವರನ್ನು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆಯ ಬಗ್ಗೆ ಕೋಚ್‌ ಮಾರ್ಕ್‌ ಬುಚರ್‌ ಹೇಳಿಕೆಗೆ ಪತ್ನಿ ರಿತಿಕಾ ಸಜ್ದೇಹ್ ನೀಡಿದ ಪ್ರತಿಕ್ರಿಯೆ ವಿವಾದವುಂಟಾಗಿದೆ. ಪ್ರತಿಕ್ರಿಯೆ ನೀಡಿದ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಅಳಿಸಿಹಾಕಲಾಗಿದ್ದು. ಪೋಸ್ಟ್‌ನ ಭಾವಚಿತ್ರ ಈಗ ಎಲ್ಲಡೆ ವೈರಲ್ ಆಗುತ್ತಿದೆ.

ರೋಹಿತ್‌ ಶರ್ಮಾ ಅವರನ್ನು ಬದಲಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನನ್ನಾಗಿ ಮಾಡಿರುವುದರ ಬಗ್ಗೆ ಸ್ಮಾಶ್‌ಸ್ಪೋರ್ಟ್ಇಂಕ್ ಎಂಬ ಪಾಡ್‌ಕಾಸ್ಟ್‌ಗೆ ಮುಂಬೈ ತಂಡದ ಕೋಚ್ ಮಾರ್ಕ್ ಬುಚರ್ ಸಂದರ್ಶನ ನೀಡಿದ್ದರು.

ಸಂದರ್ಶನದಲ್ಲಿ, ಇದು ಕ್ರಿಕೆಟ್ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಅವರು ಒಬ್ಬ ಆಟಗಾರನಾಗಿ ಉತ್ತಮವಾದ ಕೊಡುಗೆ ನೀಡಲು ಎಂದು ನಾನುಭಾವಿಸುತ್ತೇನೆ.ಅವರನ್ನು ಖುಷಿಯಾಗಿ ಉತ್ತಮ ರನ್‌ಗಳನ್ನು ಸ್ಕೋರ್‌ ಮಾಡಲು ಬಿಡಿ ಎಂದು ಹೇಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಪಾಡ್‌ಕಾಸ್ಟ್ ಲಿಂಕ್‌ಗೆ ಪ್ರತಿಕ್ರಿಯೆ ನೀಡಿದ್ದ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್, ಇದರಲ್ಲಿ ಹಲವು ಸಂಗತಿಗಳು ತಪ್ಪಾಗಿವೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗರ ರಥ, ರಕ್ತ ಮತ್ತು ಭಾರತ ರತ್ನ

“ಇದು ಸಂಪೂರ್ಣವಾಗಿ ಕ್ರಿಕೆಟ್‌ನ ನಿರ್ಧಾರವಾಗಿತ್ತು. ಹಾರ್ದಿಕ್ ಆಡಿದ ಹಿಂದಿನ ಆಟಗಳನ್ನು ನಾವು ನೋಡಿದ್ದೇವೆ. ನನಗೆ ಇದು ಬದಲಾವಣೆಯ ಹಂತವಾಗಿದೆ. ಭಾರತದಲ್ಲಿ ಬಹುತೇಕ ಜನರು ಇದರ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಜನರು ಸಾಕಷ್ಟು ಭಾವುಕರಾಗುತ್ತಾರೆ. ಆದರೆ ನೀವು ಭಾವನೆಗಳಿಂದ ಕೆಲವೊಂದು ವಿಷಯಗಳನ್ನು ದೂರವಿಡುತ್ತೀರಾ. ಇದು ಕ್ರಿಕೆಟ್‌ನ ನಿರ್ಧಾರವಾಗಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ರೋಹಿತ್ ಅವರ ನಾಯಕತ್ವವು ಅವರ ಬ್ಯಾಟಿಂಗ್‌ ಅವರ ಮೇಲೆ ಅವಲಂಬಿತವಾಗಿದೆ” ಎಂದು ಮಾರ್ಕ್ ಬುಚರ್ ತಿಳಿಸಿದ್ದರು.

“ರೋಹಿತ್‌ ಇನ್ನೂ ಭಾರತ ತಂಡದ ನಾಯಕರಾಗಿದ್ದಾರೆ. ಆದರೆ ಐಪಿಎಲ್‌ಗೆ ಕಾಲಿಟ್ಟಾಗ ಇಲ್ಲಿನ ನಾಯಕತ್ವದ ಮೇಲೆ ಇನ್ನು ಹೆಚ್ಚು ಒತ್ತಡ ಬೀಳುತ್ತದೆ. ಆದ ಕಾರಣ ಕೇವಲ ಆಟಗಾರನಾಗಿ ಅವರಿಂದ ಉತ್ತಮವಾದುದನ್ನು ಪಡೆಯಬಹುದು. ಐಪಿಎಲ್‌ ಪರಿಸ್ಥಿತಿಯೇ ಬೇರೆ ಇರುತ್ತದೆ” ಎಂದು ಬುಚರ್ ಹೇಳಿದ್ದರು.

ರೋಹಿತ್ ಶರ್ಮಾ ಇತ್ತೀಚಿನ ಕೆಲವು ಐಪಿಎಲ್ ಆವೃತ್ತಿಗಳಲ್ಲಿ ಬ್ಯಾಟಿಂಗ್ ಹಾಗೂ ತಂಡವನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವುದಕ್ಕೆ ಹೆಣಗಾಡುತ್ತಿದ್ದಾರೆ. 2023ರ ಆವೃತ್ತಿಯಲ್ಲಿ 16 ಪಂದ್ಯಗಳಿಂದ 332 ರನ್ ಗಳಿಸಿದ್ದರೆ, 2022ರಲ್ಲಿ 14 ಪಂದ್ಯಗಳಿಂದ 268 ರನ್‌ ಮಾತ್ರ ಬಾರಿಸಿದ್ದು. ವೈಯಕ್ತಿಕ ಆಟ ಗಳಿಕೆ ಕೂಡ 20ಕ್ಕಿಂತ ಕಡಿಮೆ ಇತ್ತು.

2015 ರಿಂದ 2021ರವರೆಗೆ ಮುಂಬೈ ಇಂಡಿಯನ್ಸ್ ಐದು ಬಾರಿ ಟ್ರೋಫಿ ಜಯಿಸಿದ್ದು, ಪಾಂಡ್ಯ ನಾಲ್ಕು ಟ್ರೋಫಿಗಳಲ್ಲಿ ತಂಡದ ಭಾಗವಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...