ಟಿ20 ಕ್ರಿಕೆಟ್ ಸರಣಿ | ಹೊಸ ಆಟಗಾರರಿಗೊಂದು ಉತ್ತಮ ಅವಕಾಶ

Date:

ಇದು ಭಾರತ ಕ್ರಿಕೆಟ್ ತಂಡಕ್ಕೆ ಸಂಕ್ರಮಣ ಕಾಲ. ಹಳಬರು ಹಿನ್ನೆಲೆಗೆ ಸರಿದು, ಹೊಸಬರಿಗೆ ಅವಕಾಶ ಮಾಡಿಕೊಡುವ ಕಾಲ. ಅದಕ್ಕೆ ಸೌತ್ ಆಫ್ರಿಕಾ ಎದುರಿನ ಟಿ20 ಸರಣಿ ಉತ್ತಮ ವೇದಿಕೆ ಒದಗಿಸಿಕೊಟ್ಟರೂ ಆಶ್ಚರ್ಯವಿಲ್ಲ. ಯಾರೆಲ್ಲ ಬಳಸಿಕೊಂಡು ಬೆಳೆಯುತ್ತಾರೋ, ಗೊತ್ತಿಲ್ಲ.

ನ್ಯೂಜಿಲೆಂಡ್ ತಂಡದಿಂದ ಸರಣಿ ಸೋತು ಗಾಯ ನೆಕ್ಕುತ್ತ ಕೂತಿರುವ ಭಾರತೀಯ ಕ್ರಿಕೆಟ್ ತಂಡ, ಅಭಿಮಾನಿಗಳ ಅವಕೃಪೆಗೊಳಗಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಲೇವಡಿಗೆ, ಟೀಕೆಗೆ ಗುರಿಯಾಗಿದೆ. ಹಾಗೆ ನೋಡಿದರೆ, ನ್ಯೂಜಿಲೆಂಡ್ ತಂಡದಲ್ಲಿ ಅಂತಹ ಸ್ಟಾರ್ ಆಟಗಾರರು ಯಾರೂ ಇರಲಿಲ್ಲ. ಬೌಲಿಂಗ್ ಕೂಡ ವಿಶೇಷವಾಗಿರಲಿಲ್ಲ. ಅದರಲ್ಲೂ ಸ್ಪಿನ್ ಮಾಂತ್ರಿಕರನ್ನು- ಪ್ರಸನ್ನರಿಂದ ಹಿಡಿದು ವಾಷಿಂಗ್ಟನ್ ಸುಂದರ್‍‌ವರೆಗೆ- ಮೈದಾನಕ್ಕಿಳಿಸುವಲ್ಲಿ ಖ್ಯಾತಿ ಗಳಿಸಿದ ಭಾರತೀಯ ಕ್ರಿಕೆಟ್ ತಂಡ, ನಮ್ಮಿಂದಲೇ ಕಲಿತ ನ್ಯೂಜಿಲೆಂಡ್ ಸ್ಪಿನ್ ದಾಳಿಗೆ ದಡ ದಡಾಂತ ಉರುಳಿಬಿದ್ದಿದ್ದು, ಹಾಸ್ಪಾಸ್ಪದವಾಗಿತ್ತು. ನೋಡುಗರಲ್ಲಿ ಸಿಟ್ಟು ತರಿಸಿ, ಪಿತ್ತ ಕೆರಳಿಸಿತ್ತು.   

ಅದರಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಎಂಬ ಸ್ಟಾರ್ ಬ್ಯಾಟ್ಸ್‌ಮನ್‌ಗಳ ಆಟವಂತೂ, ಮೈದಾನಕ್ಕಿಳಿದು ಕುಂಡೆ ಮೇಲೆ ಎರಡು ಕೊಟ್ಟು ಮನೆಗೆ ಕಳಿಸಬೇಕೆನಿಸುತ್ತಿತ್ತು. ಹಿರಿಯ ಬ್ಯಾಟ್ಸ್‌ಮನ್‌ಗಳ ಸೋಲು, ಹೊಸಬರಿಗೆ ಅಪೂರ್ವ ಅವಕಾಶ ಕಲ್ಪಿಸಿಕೊಟ್ಟಿತ್ತು. ಅವರು ಅದನ್ನು ಸದುಪಯೋಗಪಡಿಸಿಕೊಂಡು ಮಿಂಚಬಹುದಿತ್ತು. ತಂಡದಲ್ಲಿ ತಣ್ಣಗೆ ತಳವೂರಬಹುದಿತ್ತು. ಆದರೆ ಅವರೂ ಕೂಡ ಹಿರಿಯರ ಹಾದಿಯನ್ನೇ ತುಳಿದರು. ಇನ್ನು ನಮ್ಮ ತಂಡದ ಸ್ಪಿನ್ ಬೌಲರ್‍‌ಗಳಾದ ಅಶ್ವಿನ್ ಮತ್ತು ಜಡೇಜಾ- ಮಾಂತ್ರಿಕತೆ ಕಳೆದುಕೊಂಡ ಮಂಕುದಿಣ್ಣೆಗಳಾಗಿದ್ದರು. ಇದ್ದುದರಲ್ಲಿ ವಾಷಿಂಗ್ಟನ್ ಸುಂದರ್ ಪರ್ಫಾರ್ಮೆನ್ಸ್ ಪರವಾಗಿಲ್ಲ ಎನಿಸಿ, ಸಮಾಧಾನ ತರಿಸಿತ್ತು.

ಇದನ್ನು ಓದಿದ್ದೀರಾ?: ಮುಗಿಯಿತಾ ‘ವಿರಾಟ್’ ಪರ್ವ? 10 ವರ್ಷದಲ್ಲೇ ಕೊಹ್ಲಿ ಕಳಪೆ ರ್‍ಯಾಂಕಿಂಗ್; ಟಾಪ್‌-20ಯಿಂದ ಔಟ್!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಂಡದ ಆಟಗಾರರ ಕತೆ ಇದಾದರೆ, ತಂಡವನ್ನು ಹುರಿದುಂಬಿಸುವ, ಸಜ್ಜುಗೊಳಿಸುವ ಮುಖ್ಯ ಕೋಚ್ ಗೌತಮ್ ಗಂಭೀರ್, ಮುಖ ನೋಡಿದರೆ ಮಾತ್ರ ಗಂಭೀರ. ಆದರೆ ಅವರು ತರಬೇತುಗೊಳಿಸಿದ ಆಟಗಾರರ ಆಟ ಹಾಸ್ಯಾಸ್ಪದ. ಸೋಷಿಯಲ್ ಮೀಡಿಯಾದಲ್ಲಂತೂ ಗಂಭೀರ್ ಅವರನ್ನು ಹರಿದು ಚಿಂದಿ ಮಾಡಿಟ್ಟಿದ್ದರು. ಈ ಹಿಂದೆ ಇದ್ದ ರಾಹುಲ್ ದ್ರಾವಿಡ್ ಅವರ ನಡೆ, ನುಡಿ ಮತ್ತು ವಿನಯಗಳನ್ನು ಪ್ರಸ್ತಾಪಿಸಿ, ಗಂಭೀರ್ ಮೇಲೆ ಬಹಳ ಗಂಭೀರವಾಗಿಯೇ ಟೀಕೆಗಳ ಸುರಿಮಳೆ ಸುರಿಸಲಾಗಿತ್ತು.

ಇಂತಹ ಸಂದರ್ಭದಲ್ಲಿ- ಭಾರತ ಕ್ರಿಕೆಟ್ ತಂಡ ಪರಿವರ್ತನೆಯ ಹಾದಿಯಲ್ಲಿರುವಾಗ- ಇಂದಿನಿಂದ ಸೌತ್ ಆಫ್ರಿಕಾ ತಂಡದೊಂದಿಗೆ ಟಿ20 ಸರಣಿ ಆರಂಭವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯಲಿದೆ.

ಸಮಾಧಾನದ ಸಂಗತಿ ಎಂದರೆ, ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕನಲ್ಲ. ಹಾರ್ದಿಕ್ ಪಾಂಡ್ಯನೂ ಅಲ್ಲ. ಬದಲಿಗೆ ಸೂರ್ಯಕುಮಾರ್ ಯಾದವ್ ಸಾರಥ್ಯ ತಂಡಕ್ಕಿದೆ. ತಂಡದಲ್ಲಿ ಹಲವು ಯುವ ಪ್ರತಿಭಾನ್ವಿತರಿದ್ದಾರೆ. ಅದರಲ್ಲೂ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ.

ನಾಯಕ ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿದರೆ ಕ್ರಿಕೆಟ್ ಪ್ರೇಮಿಗಳ ಪಾಲಿಗದು ಹಬ್ಬ. ಬ್ಯಾಟಿಡಿದು ಬಾರಿಸಲು ಶುರು ಮಾಡಿದರೆ, 360 ಡಿಗ್ರಿಗೂ ಬ್ಯಾಟ್ ತಿರುಗಿಸಬಲ್ಲ ಚತುರ. ಬಿರುಸಿನ ಹೊಡೆತಗಳ ಬಲಗೈ ಬ್ಯಾಟರ್ ಯಾದವ್, ಯಶಸ್ವಿ ಟಿ20 ಕ್ಯಾಪ್ಟನ್ ಎಂಬ ಹೆಸರು ಪಡೆದಿದ್ದಾರೆ. 2023ರಿಂದ ಟಿ20 ಕ್ಯಾಪ್ಟನ್ ಆಗಿರುವ ಯಾದವ್, ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 4-1 ಅಂತರದ ಸರಣಿ ಗೆದ್ದು, ಗಟ್ಟಿಗ ಎನಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 13 ಟಿ20 ಪಂದ್ಯಗಳನ್ನಾಡಿ, 11 ಪಂದ್ಯಗಳನ್ನು ಗೆಲ್ಲಲಾಗಿದೆ. ಸೋತ ಎರಡು ಪಂದ್ಯಗಳು ಕೂಡ, ಒಂದು ಲಾಸ್ಟ್ ಬಾಲ್ ವಿಕ್ಟರಿಯಾದರೆ, ಮತ್ತೊಂದು ಡಿಎಲ್ಎಸ್ ನಿಯಮದಿಂದ ಸೋತಿದ್ದಾಗಿದೆ. ಹಾಗೆಯೇ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಬಲಿಷ್ಠ ತಂಡಗಳೊಂದಿಗೆ ಗೆದ್ದು, ತಾನೊಬ್ಬ ಸಮರ್ಥ ನಾಯಕ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ 42 ಬಾಲಿಗೆ 80 ರನ್ ಬಾರಿಸಿ, ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದಿದ್ದರು. ಇನ್ನು ಬಾಂಗ್ಲಾ ವಿರುದ್ಧ ಪಂದ್ಯವೊಂದರಲ್ಲಿ 35 ಬಾಲ್‌ಗಳಲ್ಲಿ 75 ರನ್ ಬಾರಿಸಿ, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.

ಇದನ್ನು ಓದಿದ್ದೀರಾ?: ಹಣದ ಅಮಲು ಹಾಗೂ ಭಾರತೀಯ ಕ್ರಿಕೆಟ್ ತಂಡದ ಗರ್ವಭಂಗ

ಈಗ ಸೌತ್ ಆಫ್ರಿಕಾದೊಂದಿಗೆ ಇಂದಿನಿಂದ ಶುರುವಾಗಿರುವ ಟಿ20 ಸರಣಿ, ಒಂದು ರೀತಿಯಲ್ಲಿ ಎರಡೂ ತಂಡಗಳಿಗೂ ಸವಾಲಿನ ಪಂದ್ಯವಾಗಲಿದೆ. ಕಳೆದ ಜೂನ್‌ನಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಈ ಎರಡು ತಂಡಗಳು ಎದುರಾಗಿದ್ದು, ಸೌತ್ ಆಫ್ರಿಕಾ ತಂಡ ಅಲ್ಪ ಅಂತರದಿಂದ ಸೋತಿತ್ತು. ಆ ಸೋಲಿನಲ್ಲಿ ಸೂರ್ಯಕುಮಾರ್ ಯಾದವ್ ಪಾತ್ರ ಹಿರಿದಾಗಿತ್ತು. ಅವರು ಬೌಂಡರಿ ಲೈನ್‌ನಲ್ಲಿ ಹಿಡಿದ ಕ್ಯಾಚ್- ಅವಿಸ್ಮರಣೀಯ ಕ್ಯಾಚ್ ಆಗಿ, ಪಂದ್ಯದ ಗತಿಯನ್ನೇ ಬದಲಿಸಿತ್ತು. ಸೌತ್ ಆಫ್ರಿಕಾ ತಂಡ ಫೈನಲ್‌ವರೆಗೆ ಬಂದು, ತಮ್ಮ ಮೇಲಿದ್ದ ‘ಸೋತಾಫ್ರಿಕಾ’ ಅಪವಾದವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದರು. ಆ ಸಿಟ್ಟು ಮತ್ತು ಸೇಡು ಈ ಸರಣಿಯಲ್ಲಿ ಚುಕ್ತ ಆಗಹುದಾ, ನೋಡಬೇಕು.

ಟಿ20 ಕ್ರಿಕೆಟ್1

ಹಾಗೆಯೇ, ಇದೀಗತಾನೆ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಸೋತು ಕಳೆಗುಂದಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ, ಈ ಟಿ20 ಸರಣಿ ಒಂದು ರೀತಿಯಲ್ಲಿ ಸವಾಲಿನ ಪಂದ್ಯವಾಗಲಿದೆ. ಗೆದ್ದರೆ, ಆತ್ಮಸ್ಥೈರ್ಯ ತುಂಬಿಕೊಂಡು ಪುಟಿದೇಳಲಿದೆ. ಸೂರ್ಯಕುಮಾರ್ ಯಾದವ್ ಜೊತೆಗೆ ಬ್ಯಾಟಿಂಗ್ ಬಲ ತುಂಬಲು ಎಡಗೈ ಬ್ಯಾಟರ್‍‌ಗಳಾದ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಜೊತೆಯಾಗಲಿದ್ದಾರೆ. ಬ್ಯಾಟಿಗೆ ಸಾಣೆ ಹಿಡಿದು ಸಂಜು ಸ್ಯಾಮ್ಸನ್ ಕೂಡ ಕಾಯುತ್ತಿದ್ದಾರೆ.

ಹಾಗೆ ನೋಡಿದರೆ ಇದು ಭಾರತ ಕ್ರಿಕೆಟ್ ತಂಡಕ್ಕೆ ಸಂಕ್ರಮಣ ಕಾಲ. ಹಳಬರು ಹಿನ್ನೆಲೆಗೆ ಸರಿದು, ಹೊಸಬರಿಗೆ ಅವಕಾಶ ಮಾಡಿಕೊಡುವ ಕಾಲ. ಅದಕ್ಕೆ ಸೌತ್ ಆಫ್ರಿಕಾ ಎದುರಿನ ಟಿ20 ಸರಣಿ ಉತ್ತಮ ವೇದಿಕೆ ಒದಗಿಸಿಕೊಟ್ಟರೂ ಆಶ್ಚರ್ಯವಿಲ್ಲ. ಯಾರೆಲ್ಲ ಬಳಸಿಕೊಂಡು ಬೆಳೆಯುತ್ತಾರೋ, ಗೊತ್ತಿಲ್ಲ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...