ಶ್ರೀಲಂಕಾ ತಂಡ ಟಿ20 ವಿಶ್ವಕಪ್ನ ಸೂಪರ್ 8 ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಗೆಲ್ಲದೆ ಸರಣಿಯಿಂದ ಹೊರಬಿದ್ದ ನಂತರ ಮುಖ್ಯ ಕೋಚ್ ಹುದ್ದೆಗೆ ಸನತ್ ಜಯಸೂರ್ಯ ರಾಜೀನಾಮೆ ನೀಡಿದ್ದಾರೆ.
“ಈಗ ಇನ್ನೊಬ್ಬರಿಗೆ ಅವಕಾಶ ನೀಡುವ ಸಮಯ ಬಂದಿದೆ. ಎರಡು ತಿಂಗಳ ಹಿಂದೆಯೇ ಇಂಗ್ಲೆಂಡ್ ಸರಣಿಯ ವೇಳೆ ನಾನು ಈ ನಿರ್ಧಾರ ತೆಗೆದುಕೊಂಡಿದ್ದೆ. ವಿಶ್ವಕಪ್ನಲ್ಲಿ ಚೆನ್ನಾಗಿ ಆಡಿ ಹೊರಡಬೇಕು ಎಂದು ಬಯಸಿದ್ದೆ. ಆದರೆ ಸಾಧ್ಯವಾಗಲಿಲ್ಲ. ಇದಕ್ಕೆ ನನಗೆ ತುಂಬಾ ದುಃಖವಾಗಿದೆ” ಎಂದು ಜಯಸೂರ್ಯ ಹೇಳಿದ್ದಾರೆ.
ಅವರ ಒಪ್ಪಂದ ಜೂನ್ವರೆಗೆ ಇದ್ದರೂ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಇನ್ನೂ ಅಧಿಕೃತ ರಾಜೀನಾಮೆ ಪತ್ರ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ. ಕೋಚ್ ಆಗಿ ನೇಮಕಗೊಂಡ ನಂತರ ಜಯಸೂರ್ಯ ಅವರು ತಂಡವನ್ನು ಗಮನಾರ್ಹವಾಗಿ ಸುಧಾರಣೆ ತಂದಿದ್ದಾರೆ. ಭಾರತ ವಿರುದ್ಧ 27 ವರ್ಷಗಳ ನಂತರ ODI ಸರಣಿ ಗೆಲುವು, ಇಂಗ್ಲೆಂಡ್ನಲ್ಲಿ ಟೆಸ್ಟ್ ಜಯ, ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 2-0 ಟೆಸ್ಟ್ ಸರಣಿ ಗೆಲುವು – ಇವು ಅವರ ಜಯಸೂರ್ಯ ಅವರ ಪ್ರಮುಖ ಸಾಧನೆಗಳು.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ಈ ಅವಧಿಯಲ್ಲಿ ಏಕದಿನ ರ್ಯಾಂಕಿಂಗ್ನಲ್ಲಿ ತಂಡ 4ನೇ ಸ್ಥಾನಕ್ಕೆ, ಟೆಸ್ಟ್ನಲ್ಲಿ 6ನೇ ಸ್ಥಾನಕ್ಕೆ ಏರಿದೆ. ಆದರೆ T20 ಮಾದರಿಯಲ್ಲಿ ತಂಡ ನಿರಾಸೆಯ ಪ್ರದರ್ಶನ ನೀಡಿದೆ. ತವರಿನಲ್ಲಿ ನಡೆದ ವಿಶ್ವಕಪ್ನಲ್ಲಿ 4 ಸತತ ಸೋಲುಗಳು, ಏಷ್ಯಾ ಕಪ್ ಹಾಗೂ ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯಲ್ಲೂ ಸೋಲುಗಳು ತಂಡ ಕಳಪೆಯಾಗಿರುವುದನ್ನು ತೋರಿಸಿದೆ. ಈ ಹಿನ್ನೆಲೆಯಲ್ಲಿ ಜಯಸೂರ್ಯ ಅವರು ಹುದ್ದೆ ಬಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುಂಚೆ ಎರಡು ಬಾರಿ ರಾಷ್ಟ್ರೀಯ ತಂಡದ ಮುಖ್ಯ ಆಯ್ಕೆಗಾರರಾಗಿಯೂ ಕೆಲಸ ನಿರ್ವಹಿಸಿದ್ದ ಜಯಸೂರ್ಯ ಅವರು, ಇದೇ ಸಂದರ್ಭದಲ್ಲಿ ತಮ್ಮ ಸಹಾಯಕ ಸಿಬ್ಬಂದಿಗೆ ಕೂಡ ಧನ್ಯವಾದ ಅರ್ಪಿಸಿದ್ದಾರೆ.





