ಕೊಹ್ಲಿಗೆ ವರದಾನವಾಗಿದ್ದು ಅಂಪೈರ್‌ ನಿರ್ಧಾರವಲ್ಲ, ಕ್ರಿಕೆಟ್‌ ಕಾನೂನು; ವೈಡ್‌ ನಿಯಮ ಏನು ಹೇಳುತ್ತದೆ?

Date:

ಬಾಂಗ್ಲಾದೇಶ ಮತ್ತು ಇಂಡಿಯಾ ನಡುವೆ ಪುಣೆಯಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಶತಕದ ಹೊಸ್ತಿಲಲ್ಲಿದ್ದಾಗ ಅಂಪೈರ್‌ ವೈಡ್‌ ನೀಡದೆ ಇದ್ದದ್ದು ಚರ್ಚೆಗೆ ಕಾರಣವಾಗಿದೆ ಮತ್ತು ಟ್ರೋಲರ್‌ಗಳಿಗೆ ಆಹಾರವಾಗಿದೆ.

ಕೊಹ್ಲಿ ಶತಕ ಪೂರೈಸಲು ಇನ್ನು ಮೂರು ರನ್‌ಗಳು ಬೇಕಾಗಿದ್ದವು. ಗೆಲುವಿಗೆ ಎರಡು ರನ್‌ಗಳು ಸಾಕಿದ್ದವು. ಈ ಸಂದರ್ಭದಲ್ಲಿ ಸ್ಪಿನ್ನರ್ ನಸುಮ್ ಅಹ್ಮದ್ ಲೆಗ್-ಸ್ಟಂಪ್‌ನ ಹೊರಗೆ ಬಾಲ್ ಬೌಲ್ ಮಾಡಿದರು. ಆದರೆ ಅಂಪೈರ್‌ ವೈಡ್‌ ಕೊಡಲಿಲ್ಲ. ನಂತರದಲ್ಲಿ ಕೊಹ್ಲಿ ಸಿಕ್ಸ್ ಭಾರಿಸುವ ಮೂಲಕ ಶತಕ ಪೂರೈಸಿದರು. ಇದು ಚರ್ಚೆಯನ್ನು ಹುಟ್ಟು ಹಾಕಿದೆ.

ಅಂಪೈರ್‌ ರಿಚರ್ಡ್ ಕೆಟಲ್‌ಬರೋ ಅವರು ಕೊಹ್ಲಿ ಪರ ಒಲವು ತೋರಿದರೆ? ವೈಡ್ ಬಾಲ್ ನೀಡದೆ ಇದ್ದದ್ದು ಏತಕ್ಕೆ? ಇತ್ಯಾದಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಜೊತೆಗೆ ಕೆಲವು ಅಭಿಮಾನಿಗಳು, ಪತ್ರಕರ್ತರು ಕೆಟಲ್‌ ಬರೋ ಅವರನ್ನು ಟೀಕಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಾಸ್ತವದಲ್ಲಿ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ವೈಡ್‌ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಕ್ರಿಕೆಟ್ ಕಾನೂನುಗಳನ್ನು ರೂಪಿಸುವ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) 2022ರಲ್ಲಿ ವೈಡ್ ನಿಯಮಗಳಲ್ಲಿ ತಿದ್ದುಪಡಿಗಳನ್ನು ತಂದಿದೆ. ಹೀಗಾಗಿ ಕಿಟಲ್‌ಬರೋ ಅವರು ’ವೈಡ್‌ ನೀಡದೆ ಇರುವ ನಿರ್ಧಾರ’ ಸರಿಯಾಗಿಯೇ ಇದೆ. ಕ್ರಿಕೆಟ್‌ ನಿಯಮಗಳನ್ನು ರೂಪಿಸುವ ಎಂಸಿಸಿ, 2022ರಲ್ಲಿ ವೈಡ್ ವಿಚಾರವಾಗಿ ಕೆಲವು ಮಾರ್ಪಾಡುಗಳನ್ನು ಮಾಡಿತು. ಬೌಲರ್‌ಗಳಿಗೆ ಅನುಕೂಲವಾಗಲೆಂದು ರೂಪಿಸಿದ ನಿಯಮ, ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್‌ ಕೊಹ್ಲಿಗೆ ವರದಾನವಾಯಿತು.

ನಿಯಮ ಏನು ಹೇಳುತ್ತದೆ?

ಬೌಲರ್‌ ಓಟ ಶುರು ಮಾಡುವ ವೇಳೆ ಬ್ಯಾಟ್ಸ್‌ಮನ್ ತಾನು ನಿಂತಿದ್ದ ಸ್ಥಾನದಿಂದ ಹಿಂದಕ್ಕೆ ಅಥವಾ ಮುಂದಕ್ಕೆ ಚಲಿಸುವುದು ಸಾಮಾನ್ಯ. ಇದಕ್ಕೆ ಸಂಬಂಧಿಸಿದಂತೆ 2022ರ ಮಾರ್ಚ್‌ನಲ್ಲಿ ಎಂಸಿಸಿ ಒಂದು ಕಾನೂನನ್ನು ರೂಪಿಸಿತು. ಬಾಲ್‌ ಎಸೆಯುವ ಮುನ್ನ ಬ್ಯಾಟರ್‌ ಎಲ್ಲಿ ನಿಂತಿರುತ್ತಾನೆ ಎಂಬುದನ್ನು ಗಣನೆಗೆ ತೆಗೆದುಕೊಂಡು ವೈಡ್‌ ನಿರ್ಧಾರ ಮಾಡಲಾಗುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ ತಾವು ನಿಂತಿದ್ದ ಜಾಗದಿಂದ ಕೊಂಚ ಮುಂದಕ್ಕೆ ಸರಿಯುವುದನ್ನು ಅಕ್ಟೋಬರ್‌ 19ರಂದು ನಡೆದ ಪಂದ್ಯದಲ್ಲಿ ಗಮನಿಸಬಹುದು. ಕೊಹ್ಲಿ ತಾವು ಸ್ಟ್ರೈಕ್‌ ಮಾಡಲು ನಿಂತಿದ್ದಲ್ಲಿಯೇ ಇದ್ದಿದ್ದರೆ ನಸುಮ್‌ ಎಸೆದ ಬಾಲ್‌‌ ಕೊಹ್ಲಿಯ ಕಾಲು ಅಥವಾ ತೊಡೆಯ ಮೇಲೆ ಬೀಳುತ್ತಿತ್ತು. ಹೀಗಾಗಿ ಕೆಟಲ್‌ಬರೋ ವೈಡ್‌ ನೀಡಲಿಲ್ಲ. ಇದು ಎಂಸಿಸಿ ರೂಪಿಸಿದ ಕಾನೂನಿಗೆ ಬದ್ಧವಾದ ನಿರ್ಧಾರವಾಗಿದೆ.

ಬೌಲರ್‌ ಬಾಲ್ ಎಸೆಯುವ ಮುನ್ನವೇ ಇತ್ತೀಚಿನ ವರ್ಷಗಳಲ್ಲಿ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಅತ್ತಿಂದಿತ್ತ ಚಲಿಸುವುದನ್ನು ಎಂಸಿಸಿ ಉಲ್ಲೇಖಿಸುತ್ತದೆ. ಬಾಲ್ ಎಸೆಯುವ ಮುನ್ನ ತಾನು ನಿಂತಿದ್ದ ಜಾಗದಿಂದ ಮುಂದಕ್ಕೆ ಸರಿದಾಗ, ಬಾಲು ಆ ದಿಕ್ಕಿನಲ್ಲಿ ಹಾದಿ ಹೋದರೆ ಅದನ್ನು ವೈಡ್ ಎನ್ನುವುದು ನ್ಯಾಯೋಚಿತವಲ್ಲ ಎನ್ನುತ್ತದೆ ಎಂಸಿಸಿ.

ಬೌಲರ್‌ ಓಡಿ ಬರುವ ಮುನ್ನ ಬ್ಯಾಟರ್‌ ಎಲ್ಲಿ ನಿಂತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದು ಎಂಸಿಸಿಯ 22.1ನೇ ನಿಯಮ ಹೇಳುತ್ತದೆ. ಹೀಗಾಗಿ ಕೊಹ್ಲಿ ಪರವಾಗಿ ಕೆಟಲ್‌ಬರೋ ಪಕ್ಷಪಾತಿಯಾಗಿ ನಡೆದುಕೊಂಡಿಲ್ಲ. ಹೊರತಾಗಿ ಕ್ರಿಕೆಟ್ ನಿಯಮವನ್ನು ಪಾಲಿಸಿದ್ದಾರೆಂಬುದು ಕ್ರೀಡಾ ತಜ್ಞರ ಅಭಿಪ್ರಾಯ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...