ಜಿಜ್ಞಾಸೆ | ರಿಷಬ್ ಪಂತ್‌ಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ, ಸರ್ಕಾರಗಳ ಆದ್ಯತೆಗಳೇನು?

Date:

ಕ್ರಿಕೆಟಿಗ ರಿಷಬ್ ಪಂತ್ ಅಪಘಾತಕ್ಕೀಡಾಗಿ, ಅಷ್ಟೇ ವೇಗವಾಗಿ ಚೇತರಿಸಿಕೊಂಡು, ಮತ್ತೆ ಆಟವಾಡುತ್ತಿದ್ದಾರೆ. ಈತನಿಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ? ಸ್ವಾತಂತ್ರ್ಯದ ಇಷ್ಟು ದಶಕಗಳ ನಂತರವೂ ಸುಸಜ್ಜಿತ ಆಸ್ಪತ್ರೆಯನ್ನು ತಾಲೂಕ್ ಮಟ್ಟದಲ್ಲೇಕೆ ನಾವು ಕಟ್ಟಲಾಗಿಲ್ಲ? ಉತ್ತಮ ಶಾಲೆ, ಅತ್ಯಾಧುನಿಕ ಆಸ್ಪತ್ರೆಗಳಿಲ್ಲದ ಜನ ಅವುಗಳಿಗಾಗಿ ಬೇಡಿಕೆಯಿಡದೆ ಮಂದಿರ ಮಸೀದಿ ಚರ್ಚ್ ಕಟ್ಟಲು ಮುಂದಾಗುತ್ತಾರೆ ಏಕೆ?

ಇತ್ತೀಚಿಗೆ ಪಾಕಿಸ್ತಾನದ ವಿರುದ್ಧ ನಡೆದ T20 ವಿಶ್ವಕಪ್ ಪಂದ್ಯದಲ್ಲಿ ಭಾರತ ಜಯಗಳಿಸಿತು. ಅತ್ಯಂತ ಕಡಿಮೆ ರನ್ನುಗಳನ್ನು ಹೊಡೆದರೂ ಭಾರತ ಗೆಲುವು ಸಾಧಿಸಿತು. ಪಂದ್ಯದಲ್ಲಿ ರಿಷಬ್ ಪಂಥ್ ಅದ್ಭುತವಾಗಿ ಕೀಪಿಂಗ್ ಮಾಡಿದರು. ಅದೃಷ್ಟ ಅವರ ಪರವಾಗಿದ್ದ ಕಾರಣ ಬ್ಯಾಟಿಂಗಿನಲ್ಲೂ ಅವರು ಮಿಂಚಿದರು.

ಪಂದ್ಯದ ನಂತರ ರವಿಶಾಸ್ತ್ರಿ ರಿಷಬ್ ಅವರಿಗೆ ಪದಕ ನೀಡಿ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಮಾರಣಾಂತಿಕ ಅಪಘಾತದ ನಂತರ ರಿಷಬ್ ಕ್ರೀಡಾ ಬದುಕು ಮುಗಿದೇ ಹೋಯಿತು ಎನ್ನುವಷ್ಟು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಸತತ ಶ್ರಮ, ದೃಢತೆಯಿಂದ ಅಚ್ಚರಿಯ ಚೇತರಿಕೆ ಕಂಡರು. ಕ್ರೀಡಾಂಗಣಕ್ಕೆ ಮರಳಿ, ಭಾರತ ತಂಡಕ್ಕೂ ಆಯ್ಕೆಯಾದರು. ಇಂದೊಂದು ಅದ್ಭುತ ಸಾಧನೆ ಎರಡು ಮಾತಿಲ್ಲ.

ಆದರೆ ಈ ಘಟನೆಯ ಇನ್ನೊಂದು ಮುಖದ ಪರಿಚಯ ಮಾಡಿಕೊಳ್ಳೋಣ. ರಸ್ತೆಯ ವಿಭಜಕಕ್ಕೆ ಪಂಥ್ ಕಾರು ಡಿಕ್ಕಿ ಹೊಡೆದಾಗ ಬೆಂಝ್ ಕಾರಿನಲ್ಲಿದ್ದರು. ಕಾರು ವಿಭಜಕಕ್ಕೆ ಗುದ್ದಿದ ರಭಸಕ್ಕೆ ರಿಷಬ್ ಬದುಕುಳಿದಿದ್ದೇ ಹೆಚ್ಚು. ಬಹುಶಃ ದುಬಾರಿ ಬೆಂಝ್ ಕಾರು ಅವರ ಜೀವ ಉಳಿಸಿತ್ತು ಎಂದರೆ ತಪ್ಪಾಗಲಾರದು. ಭಾರತದ ಜನಸಾಮಾನ್ಯರು ಓಡಿಸುವ ಕಾರು ಅದಾಗಿದ್ದಾರೆ ಪ್ರಾಣ ತಕ್ಷಣ ಹಾರಿ ಹೋಗಿರುತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತದಲ್ಲಿ ಅಪಘಾತವಾದವರಿಗೆ rehabilitation – ಪುನಸ್ಚೈತನ್ಯ ಕಾರ್ಯಕ್ರಮ ಅನ್ನೋದು ಒಂದು ಮರೀಚಿಕೆ. ಅಪಘಾತವಾದವರು ಆಘಾತಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಭಾರತದಲ್ಲಿ ಡಿಸಬಿಲಿಟಿ ಬಗ್ಗೆ ಇರುವ stigma ಬಗ್ಗೆ ಅರಿಯಬೇಕಾದರೆ ಪ್ರೀತಿ ಶ್ರೀನಿವಾಸನ್ ಅವರು ನೀಡಿರುವ – Desigmatising Disability ಎಂಬ ಟೆಡ್ ಟಾಕ್ ಒಮ್ಮೆ ಕೇಳಿ.

ಸರಿಯಾದ ಚಿಕಿತ್ಸೆ ಇಲ್ಲದೆ ಸಾಯುವವರ ಸಂಖ್ಯೆ ಒಂದುಕಡೆಯಾದರೆ, ಬದುಕುಳಿದವರು ವ್ಯಾಕುಲತೆಗೆ ಒಳಗಾಗಿ ಇದ್ದರೂ ಸತ್ತಂತೆ ಜೀವಿಸುವವರ ಸಂಖ್ಯೆ ಇನ್ನೊಂದೆಡೆ. ಇಂದಿಗೂ ಭಾರತದ ಹಳ್ಳಿಗಳಲ್ಲಿ, ಪುಟ್ಟ ಪಟ್ಟಣದಲ್ಲಿ ಅಪಘಾತಕ್ಕೆ ಸಾಮಾನ್ಯ ಜನರು ತುತ್ತಾದರೆ ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ. ಆಂಬುಲೆನ್ಸ್ ಸಿಗಲ್ಲ. ಸಿಕ್ಕರೂ ಮಹಾನಗರಗಳಿಗೆ ಬರುವ ಹೊತ್ತಿಗೆ ಗೋಲ್ಡನ್ hour ಕಳೆದು ಹೋಗಿರುತ್ತದೆ! ರಿಷಬ್ ಅದೃಷ್ಟ ಚೆನ್ನಾಗಿತ್ತು ಪ್ರಥಮ ಚಿಕಿತ್ಸೆಯ ನಂತರ ಡೆಹ್ರಾಡೂನಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಾಖಲಾದರು. ಬಿಸಿಸಿಐ ಪ್ರತಿಕ್ಷಣ ಅವರನ್ನು ಮಾನಿಟರ್ ಮಾಡಿತು!

ಇದನ್ನು ಓದಿದ್ದೀರಾ?: ನೆನಪು । ರಾಜೀವ್ ತಾರಾನಾಥ್ ಕುರಿತು ರಹಮತ್ ತರೀಕೆರೆ ಬರೆಹ

ಇನ್ನು ರಿಷಬ್ ಅವರ ರಿಹಬಿಲಿಟೇಷನ್ ಹೇಗಿತ್ತು ಅಂತೀರಾ. ಜಗತ್ತಿನ ಶ್ರೇಷ್ಠ ವೈದ್ಯರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಅವರ ಚೇತರಿಕೆಯ ಹಾದಿ ಸುಗಮವಾಯಿತು. ಬಿಸಿಸಿಐ ನಾಸಾದಿಂದ (anti-gravity) ಗುರುತ್ವಾಕರ್ಷಣೆ ಇಲ್ಲದ ಟ್ರೆಡ್ ಮಿಲ್ ಅನ್ನು ತರಿಸಿಕೊಟ್ಟಿತು. ಅಂತರಿಕ್ಷಯಾನಿಗಳು ವ್ಯಾಯಾಮಕ್ಕೆಂದು ಬಳಸುವ ಯಂತ್ರವದು. ಬಿಸಿಸಿಐ ಯಂತ್ರವೊಂದಕ್ಕೆ 8 ಕೋಟಿ ಖರ್ಚು ಮಾಡಿತು. ಹಗಲು ಇರುಳೆನ್ನದೆ ತಂಡವೊಂದು ರಿಷಬ್ ಪುನಶ್ಚೇತನ ಕಾರ್ಯಕ್ರಮದಲ್ಲಿ ಶ್ರಮಿಸಿತು. ಅವರೆಲ್ಲರ ಶ್ರಮದಿಂದ, ಸರಿಯಾದ ಸಮಯಕ್ಕೆ ಸಿಕ್ಕ ಸಲಹೆ, ದೊರೆತ ಸೌಲಭ್ಯಗಳಿಂದ ರಿಷಬ್ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನಿಜವಾಗಿಯೂ ಆತನ ಸಾಧನೆ ಅಪೂರ್ವ. ಅದರಾಚೆಗೆ ಅಪಘಾತಕ್ಕೆ ಸಿಲುಕುವವರಿಗೆಲ್ಲಾ ಇಂತಹ ಅತ್ಯಾಧುನಿಕ ಸೌಲಭ್ಯ ಬಿಡಿ, ಕನಿಷ್ಠ ಪ್ರಾಣ ಉಳಿಸಿಕೊಳ್ಳುವ ಅವಕಾಶವನ್ನಾದರು ನಮ್ಮ ದೇಶದ ಆರೋಗ್ಯ ವ್ಯವಸ್ಥೆ ನೀಡುತ್ತದೆಯೇ? ಅಪಘಾತದಲ್ಲಿ ಬದುಕುಳಿದವರ, ಅಂಗವಿಕಲರಾದವರ ಮನಸ್ಥಿತಿ ಹೇಗಿರುತ್ತದೆ? ಭಾರತದಲ್ಲಿರುವ ಪುನಸ್ಚೈತನ್ಯ ಕಾರ್ಯಕ್ರಮಗಳು ಯಾವುವು? ಸ್ವಾತಂತ್ರ್ಯದ ಇಷ್ಟು ದಶಕಗಳ ನಂತರವೂ ಸುಸಜ್ಜಿತ ಆಸ್ಪತ್ರೆಯನ್ನು ತಾಲೂಕ್ ಮಟ್ಟದಲ್ಲೇಕೆ ನಾವು ಕಟ್ಟಲಾಗಿಲ್ಲ? ಉತ್ತಮ ಶಾಲೆ, ಅತ್ಯಾಧುನಿಕ ಆಸ್ಪತ್ರೆಗಳಿಲ್ಲದ ಜನ ಅವುಗಳಿಗಾಗಿ ಬೇಡಿಕೆಯಿಡದೆ ಮಂದಿರ ಮಸೀದಿ ಚರ್ಚ್ ಕಟ್ಟಲು ಮುಂದಾಗುತ್ತಾರೆ ಏಕೆ? Do we care about lives at all???

WhatsApp Image 2025 11 17 at 5.29.17 PM
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...