ಕರ್ನಾಟಕದ 62 ಸೇತುವೆಗಳಿಗೆ ಬಲವರ್ಧನೆ ಅಗತ್ಯ: ಪಿಆರ್‌ಎಎಂಸಿ ವರದಿ

Date:

ಕರ್ನಾಟಕದಲ್ಲಿ ಕನಿಷ್ಠ 62 ಸೇತುವೆಗಳ ಬಲವರ್ಧನೆಯ ಅಗತ್ಯವಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರ (ಪಿಆರ್‌ಎಎಂಸಿ) ಈ ಸಮಸ್ಯೆಯ ಬಗ್ಗೆ ವರದಿ ನೀಡಿದ್ದರೂ ಸರ್ಕಾರವು ಪುನಶ್ಚೇತನ ಕಾಮಗಾರಿಗೆ ಅನುಮೋದನೆ ನೀಡಿಲ್ಲ.

2022 ರಲ್ಲಿ ಸುಮಾರು 56 ಸೇತುವೆಗಳನ್ನು ಮರು ಬಲಪಡಿಸುವ ಅಗತ್ಯವಿದೆ ಎಂದು ಪಿಆರ್‌ಎಎಂಸಿ ವರದಿ ನೀಡಲಾಗಿದೆ. ಇನ್ನು ಕೆಲವನ್ನು 2020ರ ಆರಂಭದಲ್ಲಿ ಗುರುತಿಸಲಾಗಿದೆ. ಪಿಆರ್‌ಎಎಂಸಿ ಸಂಸ್ಥೆ ಮಣ್ಣಿನ ಅಧ್ಯಯನವನ್ನು ನಡೆಸಿ ವಿವರವಾದ ಕಾರ್ಯಸಾಧ್ಯತೆಯ ವರದಿಯನ್ನು(ಡಿಎಫ್‌ಆರ್) ಕಳುಹಿಸಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

“ಪಿಆರ್‌ಎಎಂಸಿ ವರದಿಯ ಆಧಾರದ ಮೇಲೆ, ನಾವು ಮಣ್ಣಿನ ಪರೀಕ್ಷೆ ಮತ್ತು ಸಂಚಾರ ಸಾಂದ್ರತೆಯ ವಿಶ್ಲೇಷಣೆಯನ್ನು ನಡೆಸಿದ್ದೇವೆ. ಸೇತುವೆಯ ಸ್ಥಿತಿಯ ಆಧಾರದ ಮೇಲೆ, ನಾವು ವಿವಿಧ ಸೇತುವೆಗಳಿಗೆ ವಿಭಿನ್ನವಾದ ದುರಸ್ತಿಯ ಬಗ್ಗೆ ಸೂಚಿಸಿದ್ದೇವೆ. ನೂತನ ವಾಹನ ಮಾರ್ಗಗಳ ಸೇರ್ಪಡೆಯಿಂದ ಸಣ್ಣ ಬಲವರ್ಧನೆ ಕೆಲಸಗಳವರೆಗೆ, ಹಲವಾರು ತಾಂತ್ರಿಕ ದುರಸ್ತಿಗಳನ್ನು ಸೂಚಿಸಲಾಗಿದೆ” ಎಂದು ಕೆಆರ್‌ಡಿಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾಳಿ ನದಿಯ ಮೇಲಿನ ಸೇತುವೆಯ ಒಂದು ಭಾಗವು ಕುಸಿದಿರುವ ಇತ್ತೀಚಿನ ಘಟನೆಯನ್ನು ಪರಿಗಣಿಸಿ, ಕಾಮಗಾರಿಗಳು ಎಷ್ಟು ನಿರ್ಣಾಯಕವಾಗಿವೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ “ಅವುಗಳಲ್ಲಿ ಕೆಲವು ನಿರ್ಣಾಯಕವಾಗಿವೆ ಮತ್ತು ತಕ್ಷಣ ಗಮನ ಹರಿಸಬೇಕಾಗಿದೆ ಎಂದು ಪಿಆರ್‌ಎಎಂಸಿ ಮೂಲಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭರ್ಜಿಯ ಕೊನೆಗೆ ಪ್ರೀತಿಯ ಮುಳ್ಳು ಚುಚ್ಚಿದ ತಾಯಂದಿರು – ಆಲಿಸಲಿ ‘ಮಕ್ಕಳು’

“ಈ ಸೇತುವೆಗಳಲ್ಲಿ ಕೆಲವು ಸ್ವಲ್ಪ ಸಮಯದವರೆಗೆ ಸಂಚಾರ ದಟ್ಟಣೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರಬಹುದು. ಆದರೆ, ಅವುಗಳಲ್ಲಿ ಕೆಲವು ಖಂಡಿತವಾಗಿಯೂ ತಕ್ಷಣ ಗಮನಹರಿಸಬೇಕಾಗಿದೆ ಮತ್ತು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. ಕನಿಷ್ಠ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗಳನ್ನು ಈ ಸೇತುವೆಗಳಿಗೆ ಮಾಡಬೇಕು. ಪುನರ್ವಸತಿ ಕಾರ್ಯಗಳನ್ನು ತಕ್ಷಣವೇ ಕೈಗೊಳ್ಳಲು ಸಾಧ್ಯವಾಗದಿದ್ದರೆ ಸಂಚಾರಕ್ಕೆ ಈ ಸೇತುವೆಗಳನ್ನು ಮುಚ್ಚಬೇಕಿದೆ” ಎಂದು ಪಿಆರ್‌ಎಎಂಸಿ ಮೂಲಗಳು ತಿಳಿಸಿವೆ.

“ಪಿಆರ್‌ಎಎಂಸಿ ರಾಜ್ಯಾದ್ಯಂತ ಸೇತುವೆಗಳ ಸಾಮರ್ಥ್ಯ ಮತ್ತು ಸ್ಥಿರತೆಯನ್ನು ವಿಶ್ಲೇಷಿಸಲು ನಿಯಮಿತ ತಪಾಸಣೆ ನಡೆಸುತ್ತದೆ. ಸೇತುವೆಯ ಬಲವನ್ನು ನಿರ್ಧರಿಸಲು ನಾವು ಸೇತುವೆ ತಪಾಸಣೆ ವಾಹನಗಳನ್ನು ಮೀಸಲಿಟ್ಟಿದ್ದೇವೆ. ನಾವು ಸೇತುವೆಗಳ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಶಕ್ತಿಯನ್ನು ನಿರ್ಧರಿಸಲು ವಿವಿಧ ಪರೀಕ್ಷೆಗಳನ್ನು ನಡೆಸಿದ್ದೇವೆ” ಎಂದು ಪಿಆರ್‌ಎಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಆರ್‌ಡಿಸಿಎಲ್‌ನ ಕರಡು ಅಂದಾಜಿನ ಪ್ರಕಾರ ಈ ಎಲ್ಲ ಸೇತುವೆಗಳನ್ನು ಬಲಪಡಿಸಲು 1,380 ಕೋಟಿ ರೂ. ಭಾರಿ ಪ್ರಮಾಣದ ಹಣದ ಅಗತ್ಯವಿರುವುದರಿಂದ ಯೋಜನೆ ವಿಳಂಬವಾಗಿರಬಹುದು. ಪುನರ್ವಸತಿ ಯೋಜನೆಯು ಈಗಾಗಲೇ ವಿಳಂಬವಾಗಿದ್ದರೂ, ಕೆಲಸವು ಪೂರ್ಣಗೊಳ್ಳಲು ಮೂರು ವರ್ಷಗಳಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಎಂಜಿನಿಯರ್‌ಗಳು ಬಹಿರಂಗಪಡಿಸಿದ್ದಾರೆ.

ಜಿಲ್ಲೆಗಳ ನಡುವಿನ ಸಂಪರ್ಕವನ್ನು ಖಾತ್ರಿಪಡಿಸುವಲ್ಲಿ ಈ ಸೇತುವೆಗಳು ನಿರ್ಣಾಯಕವಾಗಿರುವುದರಿಂದ ಪ್ರಯಾಣಿಕರಿಗೆ ಅಪಾಯವನ್ನುಂಟುಮಾಡುವ ಹಲವು ಸೇತುವೆಗಳು ತೆರೆದಿರುತ್ತವೆ. ತುಂಗಾ ನದಿಗೆ ಅಡ್ಡಲಾಗಿ ಮತ್ತು ತೀರ್ಥಹಳ್ಳಿಯ ಶರಾವತಿ ಮತ್ತು ಹಿರೇಕೆರೂರಿನ ಕುಮುದಾವತಿ ನದಿಯ ಹಿನ್ನೀರಿನ ಮೇಲೆ ಸೇರಿದಂತೆ ಅನೇಕ ಸೇತುವೆಗಳು ರಾಜ್ಯದ ಕರಾವಳಿ ಮತ್ತು ಉತ್ತರ ಭಾಗದಲ್ಲಿ ಹರಡಿಕೊಂಡಿವೆ. ಹಲವು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಡಿಯಲ್ಲಿ ಬರುತ್ತವೆ.

ಆಗಸ್ಟ್ 7 ರಂದು ಕುಸಿದು ಬಿದ್ದ ಸೇತುವೆಯಿಂದ 10 ಕಿ.ಮೀ ದೂರದಲ್ಲಿರುವ ಸದಾಶಿವಗಡದಿಂದ ಔರಾದ್‌ಗೆ ಸಂಪರ್ಕ ಕಲ್ಪಿಸುವ ಕಾಳಿ ನದಿಗೆ ಅಡ್ಡಲಾಗಿರುವ ಸೇತುವೆಗಳ ಪೈಕಿ ಒಂದು ಸೇತುವೆಯನ್ನು ಬಲಪಡಿಸುವ ತುರ್ತು ಅಗತ್ಯವಿದೆ.

ಕೆಲವು ಸೇತುವೆಗಳು ಗಂಭೀರ ಸ್ಥಿತಿಯಲ್ಲಿವೆ ಮತ್ತು ತಕ್ಷಣದ ಗಮನದ ಅಗತ್ಯವಿದೆ. ಅವುಗಳಲ್ಲಿ ಕೆಲವು ಸ್ವಲ್ಪ ಸಮಯದವರೆಗೆ ಸಂಚಾರ ದಟ್ಟಣೆಯನ್ನು ತಡೆದುಕೊಳ್ಳಬಹುದು. ತಕ್ಷಣದ ದುರಸ್ತಿ ಸಾಧ್ಯವಾಗದಿದ್ದರೆ, ಸಂಚಾರವನ್ನು ಪರ್ಯಾಯ ರಸ್ತೆಗಳಿಗೆ ತಿರುಗಿಸಬೇಕು ಎಂದು ಪಿಆರ್‌ಎಎಂಸಿ ಮೂಲಗಳು ತಿಳಿಸಿವೆ.

ಮೂಲ: ಡಿಎಚ್‌ ವರದಿ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...