ಕರ್ನಾಟಕ ರಾಜ್ಯದ ನದಾಫ್ ಪಿಂಜಾರ ಸಂಘದ ಸಂಸ್ಥಾಪನಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಸಮಾವೇಶ, ಸಾಧಕರ, ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಮತ್ತು ವಕೀಲರ ಸಮಾವೇಶ ಚಿತ್ರದುರ್ಗ ನಗರದ ಮುರುಘಾ ಮಠದ ಅನುಭವ ಮಂಟಪದ ಒಳಾಂಗಣ ಅವರಣದಲ್ಲಿ 25 ಅಕ್ಟೋಬರ್ 2025 ರ ಶನಿವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ.
ನದಾಫ್ ಪಿಂಜಾರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮಗಳ ವೇದಿಕೆಗೆ ಭಾವೈಕ್ಯತೆಗೆ ಹೆಸರಾದ ಜಗಳೂರಿನ ಮಹಮದ್ ಇಮಾಮ್ ಎಂದು ಹೆಸರಿಡಲಾಗಿದೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಸಚಿವ ಶಿವರಾಜ್ ತಂಗಡಗಿ, ಸಂಸದ ಗೋವಿಂದ ಕಾರಜೋಳ ಭಾಗವಹಿಸಲಿದ್ದಾರೆ.
ಅನುಭವ ಮಂಟಪದ ಆವರಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕರ್ನಾಟಕದ ಏಕೀಕರಣದ ಹುತಾತ್ಮ ಬಳ್ಳಾರಿಯ ಪೈಲ್ವಾನ್ ಸಾಬ್ ರವರ ಕುರಿತು ಸಿದ್ರಾಮ ಕಲ್ಮಠ ವಿರಚಿತ ಪುಸ್ತಕದ ಮೂರನೇ ಆವೃತ್ತಿ ಬಿಡುಗಡೆಯಾಗಲಿದೆ.
ಕಾರ್ಯಕ್ರಮದಲ್ಲಿ ಸಮಾಜದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕಾರ್ಯಕ್ರಮವಿರಲಿದ್ದು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕಾನೂನು ನೆರವು ಮತ್ತು ವಿಷಯ ಪ್ರಸ್ತುತಪಡಿಸಲು ವಕೀಲರ ಸಮಾವೇಶ ಕೂಡ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಖ್ಯಮಂತ್ರಿ ಬದಲಾವಣೆ ವಿಚಾರ; ಯತೀಂದ್ರಗೆ ನೋಟೀಸ್ ಏಕಿಲ್ಲ? ಶಾಸಕ ಬಸವರಾಜ್ ಶಿವಗಂಗಾ ಪ್ರಶ್ನೆ
ಕಾರ್ಯಕ್ರಮದಲ್ಲಿ ಶಾಸಕ ರಘುಮೂರ್ತಿ, ಶಾಸಕ ಗೋವಿಂದಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಮಾಜಿ ಸಚಿವ ಆಂಜನೇಯ, ಸಂಘದ ರಾಜ್ಯಾಧ್ಯಕ್ಷ ಜಲೀಲ್ ಸಾಬ್, ಜಿಲ್ಲಾಧ್ಯಕ್ಷ ರಷೀದ್, ಉಪಾಧ್ಯಕ್ಷ ಷಫಿವುಲ್ಲಾ, ಮಹಮದ್ ಇಮಾಮ್ ಕಾರ್ಯದರ್ಶಿ ಅಲೀಪೀರ್, ಅಕ್ಬರ್ ಭಾಷಾ, ಖಜಾಂಚಿ ದಾದಾಪೀರ್, ರಾಜ್ಯ ಉಪಾಧ್ಯಕ್ಷ ಜಿಡಿ ನದಾಫ್, ಮೌಲಾಸಾಬ್ ಬೆಂಡಿಗೇರಿ, ಮುಖಂಡರಾದ ರಿಯಾಜ್ ನಾಗ್ತೆ, ಶಬಾಬುದ್ದೀನ್ ಕೊಪ್ಪಳ, ದಾದಾ ಕಲಂದರ್, ಲಾಲ್ ಸಾಬ್ ನದಾಫ್, ಎಸ್ ಹೆಚ್ ಮುದಕವಿ, ಪ್ರೊ. ಸನಾವುಲ್ಲ, ಮೆಹಬೂಬ್ ಅಲಿ, ಶಬಾನ
ಸೇರಿದಂತೆ ಚಿತ್ರದುರ್ಗ ಮತ್ತು ಎಲ್ಲಾ ಜಿಲ್ಲೆಗಳ ತಾಲೂಕುಗಳ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹತ್ತು ಸಾವಿರ ಸಮುದಾಯದ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
“





