ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕರ್ನಾಟಕದಲ್ಲಿ ಕಾಡ್ಗಿಚ್ಚಿನ ಘಟನೆಗಳು ಕಡಿಮೆಯಾಗಿವೆ. ಈ ಬಾರಿ ಬೇಸಿಗೆಯ ಶಾಖ ಮತ್ತು ತಾಪಮಾನದ ಏರಿಕೆಯಿಂದಾಗಿ ಕಾಡ್ಗಿಚ್ಚಿನ ತೀವ್ರತೆ ಮಾತ್ರ ಕಡಿಮೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ಪ್ರಕಾರ, ಕರ್ನಾಟಕದಲ್ಲಿ 2020 ರಿಂದ 2024ರವರೆಗೆ 20,933 ಕಾಡ್ಗಿಚ್ಚಿನ ಘಟನೆಗಳು ನಡೆದಿರುವುದನ್ನು ಉಪಗ್ರಹಗಳ ಮೂಲಕ ಪತ್ತೆ ಮಾಡಲಾಗಿದೆ. ಇದರಲ್ಲಿ 2023ರಲ್ಲಿ 6,888 ಘಟನೆಗಳು ನಡೆದಿದೆ. ಈ ವರ್ಷ (2024) ಏಪ್ರಿಲ್ ಅಂತ್ಯದವರೆಗೆ 4,245 ಘಟನೆಗಳು ದಾಖಲಾಗಿವೆ. ಅದಾಗ್ಯೂ, ಏಪ್ರಿಲ್ 16ರ ನಂತರದಲ್ಲಿ ಕಾಡ್ಗಿಚ್ಚು ಇಳಿಮುಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ ಅಂತ್ಯ ಮತ್ತು ಮೇ ಮೊದಲ ವಾರದ ನಡುವೆ ಬೆಳಗಾವಿ, ತುಮಕೂರು, ಬಳ್ಳಾರಿ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 33 ಅಗ್ನಿ ಅವಘಡಗಳು ವರದಿಯಾಗಿವೆ. ”ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕಾಡ್ಗಿಚ್ಚು ಕಡಿಮೆಯಾಗಿದೆ. ಆದಾಗ್ಯೂ, ಹೆಚ್ಚಿನ ಪ್ರಕರಣಗಳು ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಸಂಭವಿಸಿವೆ” ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷ, ಕಾಡುಗಳು ಒಣ ಹುಲ್ಲು ಮತ್ತು ಸುಡುವ ವಸ್ತುಗಳು ಹೆಚ್ಚಾಗಿದ್ದವು. ಅವುಗಳು 2023 ಕಾಡ್ಗಿಚ್ಚಿನಲ್ಲಿ ಸುಟ್ಟುಹೋಗಿವೆ. ಹೀಗಾಗಿಯೇ, ಈ ವರ್ಷ ಕಾಡ್ಗಿಚ್ಚು ಕಡಿಮೆಯಾಗಿದೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಪರಿಸರದಲ್ಲಿ ಒಂದು ಪ್ರವೃತ್ತಿ ಮತ್ತು ಚಕ್ರವಿದೆ ಎಂದು ಅವರು ವಿವರಿಸಿದ್ದಾರೆ.
2018–19ರಲ್ಲಿ ಬಂಡೀಪುರ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಕಳೆದ ವರ್ಷ ದೊಡ್ಡ ಕಾಡ್ಗಿಚ್ಚಿನ ಘಟನೆಗಳು ನಡೆದಿವೆ. ಈ ವರ್ಷ, ಕಾಡಿನ ಬೆಂಕಿಯ ಘಟನೆಗಳು ಕಡಿಮೆಯಾಗಿವೆ. ಆದರೆ, ಹೆಚ್ಚಿನ ಬೇಸಿಗೆಯ ಶಾಖ ಮತ್ತು ಉಷ್ಣತೆಯಿಂದಾಗಿ ಶಾಖದ ತೀವ್ರತೆ ಮತ್ತು ಜ್ವಾಲೆಯನ್ನು ನಂದಿಸಲು ತೆಗೆದುಕೊಂಡ ಸಮಯವು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಹೆಸರಘಟ್ಟ ಕೆರೆ ನೀರು ಸರಬರಾಜು ನಿರ್ಧಾರ ಮರುಪರಿಶೀಲನೆ: ಜಲಮಂಡಳಿ ಅಧ್ಯಕ್ಷ
ಕಾಡ್ಗಿಚ್ಚನ್ನು ತಡೆಯಲು ಈ ವರ್ಷ ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಲಾಗಿತ್ತು. ಹೀಗಾಗಿ, ಘಟನೆಗಳ ಸಂಖ್ಯೆಯು ಅರಣ್ಯ ಪ್ರದೇಶಗಳ ಒಳಗೆ ಕಡಿಮೆಯಾಗಿದೆ. ಆದರೆ, ಅರಣ್ಯದ ಗಡಿ ಮತ್ತು ಹೊರಗೆ ಹೆಚ್ಚಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.
“ರಾಜ್ಯದಾದ್ಯಂತ ಹಲವು ಕಾಡ್ಗಿಚ್ಚು ಘಟನೆಗಳು ನಡೆದಿವೆ. ಬೆಂಕಿಯನ್ನು ನಂದಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ದಿನಗಳನ್ನು ತೆಗೆದುಕೊಂಡಿತು. ಪ್ರತಿ ಬೆಂಕಿಯ ವಿವರವಾದ ವರದಿಯೊಂದಿಗೆ ಇಲಾಖೆಯು ಡೇಟಾವನ್ನು ಸಾರ್ವಜನಿಕಗೊಳಿಸಬೇಕು. ಸಂಪೂರ್ಣ ಮೂರನೇ ವ್ಯಕ್ತಿಯ ತನಿಖೆಯ ಅಗತ್ಯವಿದೆ, ”ಎಂದು ಸಂರಕ್ಷಣಾವಾದಿ ಹೇಳಿದರು.




