ಶಿವಮೊಗ್ಗದಲ್ಲಿ ರಘುನಂದನ ಅವರ ಕಾವ್ಯದ ಅರಿಕೆ: ದರದು ಅಸಲು

Date:

20 ಜನವರಿ 2026ರಂದು ಶಿವಮೊಗ್ಗದಲ್ಲಿ ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ನಾನು ಸತ್ತ ಮೇಲೆ ಕವನ ಸಂಗ್ರಹದ ಕವಿತೆಗಳ ಓದು ಮತ್ತು ಪರಿಚಯದ ಕಾರ್ಯಕ್ರಮ ನಡೆಯಲಿದೆ.

ದರದು ಅಸಲು ಎಂಬ ಈ ಕಾವ್ಯದ ಅರಿಕೆಯ ಕಾರ್ಯಕ್ರಮವನ್ನು ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಮತ್ತು ಪ್ರಜ್ಞಾ ಬುಕ್ ಗ್ಯಾಲರಿ, ಶಿವಮೊಗ್ಗ, ಇವರು ಏರ್ಪಡಿಸಿದ್ದು ಸಭೆ ಪ್ರಜ್ಞಾ ಬುಕ್ ಗ್ಯಾಲರಿ, ಸರಕಾರಿ ನೌಕರರ ಭವನ, ನೆಲಮಾಳಿಗೆ, ಹಳೇ ಆರ್.ಟಿ.ಒ. ರಸ್ತೆ, ಬಸವನಗುಡಿ, ಶಿವಮೊಗ್ಗ, ಇಲ್ಲಿಇಂದಿನ ಸಂಜೆ 5.30ಕ್ಕೆ ನಡೆಯಲಿದೆ.

ರಘುನಂದನ ಅವರೇ ತಮ್ಮ ಕವಿತೆಗಳನ್ನು ಅರಿಕೆ ಮಾಡುತ್ತಾರೆ. ಜೊತೆಗೆ, ಬೇಂದ್ರೆಯವರ ಕಾವ್ಯವನ್ನು ಕುರಿತ ಜಿಜ್ಞಾಸೆಯಿಂದ ತೊಡಗಿ ವಿಶಾಲವಾದ ಕಾವ್ಯಮೀಮಾಂಸೆ ಮತ್ತು ಲೋಕಮೀಮಾಂಸೆಯ ತೊಡಗುವ ತಮ್ಮ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಪುಸ್ತಕದ ಪರಿಚಯವನ್ನು ಕೂಡ ಮಾಡಿಕೊಡುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾನು ಸತ್ತ ಮೇಲೆ ಕವನಸಂಕಲನದಲ್ಲಿ ರಘುನಂದನ ಅವರ ಸ್ವರಚಿತ ಕವಿತೆಗಳಲ್ಲದೆ, ಅವರು ಕನ್ನಡಿಸಿರುವ ಬೇರೆ ಭಾಷೆಗಳ ಕೆಲವು ಕವಿತೆಗಳಿವೆ ಹಾಗೂ ಅವರು ನಾಟಕಗಳಿಗಾಗಿ ಬರೆದ ಹಾಡುಗಳು ಹಾಗೂ ಪದ್ಯ ಭಾಗಗಳು ಇವೆ. ರಘುನಂದನ ಅವರು ತಮ್ಮ ಕವಿತೆಗಳ ಅರಿಕೆಯನ್ನು ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಧಾರವಾಡ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಮಾಡಿದ್ದು, ಶಿವಮೊಗ್ಗದಲ್ಲಿ ನಡೆಯುತ್ತಿರುವುದು ಅವರ ಕಾವ್ಯಸಂಚಾರದ ಏಳನೆಯ ಕಾರ್ಯಕ್ರಮವಾಗಿದೆ.

ರಘುನಂದನ ಅವರ ಸಂಕೀರ್ಣ, ಸ್ನಿಗ್ಧವಾದ ಕವಿತೆ ಹಾಗೂ ಕಾವ್ಯಮೀಮಾಂಸೆಯು ಈಗಾಗಲೇ ಕಾವ್ಯ ಮತ್ತಿತರ ಸಾಹಿತ್ಯದ ಓದುಗರಲ್ಲಿ ಗಹನವಾದ ಚರ್ಚೆಗೆ ಒಳಗಾಗಿವೆ. ಅವರ ಕೆಲವು ಕವಿತೆಗಳು ಈದಿನ ತಾಣದಲ್ಲಿ ಪ್ರಕಟವಾಗಿವೆ. ಅವರ ಎರಡೂ ಪುಸ್ತಕಗಳ ಅರಿಕೆಯು ಈದಿನ ಹಾಗೂ ಅವಧಿ ಜಾಲತಾಣಗಳಲ್ಲಿ ಪ್ರಕಟವಾಗಿವೆ.

ಅವುಗಳ ಕೊಂಡಿ ಇಲ್ಲಿದೆ: https://eedina.com/opinion/theatre-personality-raghunandana-new-two-books-release-1004/2024-05-09/ಮತ್ತು https://tinyurl.com/mua295mp ಮತ್ತು https://tinyurl.com/49pws5f8

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...