ನೋಡಬೇಕಾದ ಚಿತ್ರ: ಅಲೆಕ್ಸಾಂಡ್ರೆ ಕೊಬೆರಿಡ್ಜೆ ಅವರ ‘ಡ್ರೈ ಲೀಫ್’

Date:

'ಡ್ರೈ ಲೀಫ್' ಚಿತ್ರದಲ್ಲಿ ಫುಟ್‌ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ಬದುಕಿನ ರೂಪಕ. ಗಾಳಿಯಲ್ಲಿ ತೇಲುತ್ತಾ ಅನಿರೀಕ್ಷಿತವಾಗಿ ದಿಕ್ಕು ಬದಲಿಸುವ ಫುಟ್‌ಬಾಲ್‌ನಂತೆ, ಈ ಚಿತ್ರದ ಕಥೆಯೂ ಸಹ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತದೆ. 

ಡ್ರೈ ಲೀಫ್(Dry Leaf)- ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFES) ಪ್ರದರ್ಶನವಾದ ಚಿತ್ರ. ಜಾರ್ಜಿಯನ್ ಮೂಲದ ನಿರ್ದೇಶಕ ಅಲೆಕ್ಸಾಂಡ್ರೆ ಕೊಬೆರಿಡ್ಜೆ ನಿರ್ದೇಶನದ ಮೂರನೇ ಚಿತ್ರ.

ಅಲೆಕ್ಸಾಂಡ್ರೆ ಕೊಬೆರಿಡ್ಜೆ ನಿರ್ದೇಶನದ ‘ಡ್ರೈ ಲೀಫ್'(2025), ಒಂದು ಕಲಾತ್ಮಕ ಮತ್ತು ಪ್ರಾಯೋಗಿಕ ‘ರೋಡ್ ಮೂವಿ’. ಈ ಚಿತ್ರವು ತನ್ನ ನಾಪತ್ತೆಯಾದ ಮಗಳು ಲಿಸಾಳನ್ನು ಹುಡುಕುತ್ತಾ ಹೊರಡುವ ತಂದೆ ಇರಾಕ್ಲಿಯ (ನಿರ್ದೇಶಕರ ತಂದೆ ಡೇವಿಡ್ ಕೊಬೆರಿಡ್ಜೆ ಈ ಪಾತ್ರ ಮಾಡಿದ್ದಾರೆ) ಭಾವನಾತ್ಮಕ ಪಯಣವನ್ನು ಬಿಂಬಿಸುತ್ತದೆ. ಕ್ರೀಡಾ ಛಾಯಾಗ್ರಾಹಕಿಯಾಗಿದ್ದ ಲಿಸಾ, ತನ್ನನ್ನು ಯಾರೂ ಹುಡುಕಬಾರದೆಂದು ಪತ್ರ ಬರೆದಿಟ್ಟು ನಿಗೂಢವಾಗಿ ಮಾಯವಾಗಿದ್ದಾಳೆ. ಜಾರ್ಜಿಯಾದ ಹಳ್ಳಿಗಳಲ್ಲಿರುವ, ಹಳೆಯ ಮತ್ತು ಪರಿತ್ಯಕ್ತ ಫುಟ್‌ಬಾಲ್ ಮೈದಾನಗಳನ್ನು ಫೋಟೋ ತೆಗೆಯುವ ಯೋಜನೆಯಲ್ಲಿ ತೊಡಗಿದ್ದಾಗ ಅವಳು ಕೊನೆಯದಾಗಿ ಕಾಣಿಸಿಕೊಂಡಿರುತ್ತಾಳೆ. ಲಿಸಾಳ ಗೆಳೆಯ ಲೇವಾನಿಯ ಜೊತೆಗೂಡಿ ಇರಾಕ್ಲಿ ಮಗಳ ಹೆಜ್ಜೆಗುರುತುಗಳನ್ನು ಹುಡುಕುತ್ತಾ ಶಾಂತ ಹಳ್ಳಿಗಳು ಮತ್ತು ಹಚ್ಚಹಸಿರಿನ ಪ್ರಕೃತಿಯ ನಡುವೆ ಸಾಗುತ್ತಾನೆ. ವಿಶೇಷವೆಂದರೆ, ಲೇವಾನಿ ಈ ಸಿನಿಮಾದಲ್ಲಿ ಒಂದು ಅದೃಶ್ಯ ಪಾತ್ರವಾಗಿ ಕಾಣಿಸಿಕೊಳ್ಳುತ್ತಾನೆ. ಹಳೆಯ ಫೋನ್ ಮೂಲಕ ಚಿತ್ರೀಕರಿಸಲಾದ ಈ ಸಿನಿಮಾ, ಮಬ್ಬಾದ ದೃಶ್ಯಗಳ ಮೂಲಕ ಮರೆಯಾಗುತ್ತಿರುವ ಸಂಪ್ರದಾಯಗಳು ಮತ್ತು ನೆನಪುಗಳ ಬಗ್ಗೆ ಆಳವಾಗಿ ಚರ್ಚಿಸುತ್ತದೆ. ‘ಡ್ರೈ ಲೀಫ್’ ಎಂಬುದು ಫುಟ್‌ಬಾಲ್ ಕ್ರೀಡೆಯ ಒಂದು ವಿಶಿಷ್ಟ ಕಿಕ್ ತಂತ್ರವಾಗಿದೆ. ಇದರಲ್ಲಿ ಚೆಂಡು ಅನಿರೀಕ್ಷಿತ ಪಥದಲ್ಲಿ ಸಾಗುತ್ತದೆ. ಈ ಚಿತ್ರವೂ ಕೂಡ ಒಂದು ಫುಟ್‌ಬಾಲ್ ಮೈದಾನದಿಂದ ಮತ್ತೊಂದು ಫುಟ್‌ಬಾಲ್ ಮೈದಾನಕ್ಕೆ ಸಾಗುವ ಈ ಪಯಣವು ಕೇವಲ ಹುಡುಕಾಟವಾಗಿ ಉಳಿಯದೆ, ನೆನಪು, ಸಾವು ಮತ್ತು ಕಾಲಚಕ್ರದ ಬಗ್ಗೆ ಒಂದು ಆಪ್ತವಾದ ದೃಶ್ಯ ಸಂಕಥನವಾಗಿ ಪರಿಣಮಿಸುತ್ತದೆ.

ಇದನ್ನು ಓದಿದ್ದೀರಾ?: ಪಬ್‌ಜಿ, ಬ್ಲೂ ವೇಲ್, ಕೊರಿಯನ್‌ ಲವ್‌ ಗೇಮ್:‌ ʼಆನ್‌ಲೈನ್‌ʼ ಇಂದ್ರಜಾಲಕ್ಕೆ ಸಿಲುಕೀರಿ ಜೋಕೆ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚಿತ್ರವು ಉದ್ದೇಶಪೂರ್ವಕವಾಗಿಯೇ ಅತಿ ಕಡಿಮೆ ರೆಸಲ್ಯೂಶನ್‌ನಲ್ಲಿದೆ. ಆಧುನಿಕ ತಂತ್ರಜ್ಞಾನದ ಅಬ್ಬರವನ್ನು ವಿರೋಧಿಸಲು ನಿರ್ದೇಶಕರು ಮಾಡಿದ ಕಲಾತ್ಮಕ ಪ್ರಯತ್ನವಾಗಿದೆ. ಆಧುನಿಕ ಸಿನೆಮಾ ಜಗತ್ತು 4K ಮತ್ತು 8K ರೆಸಲ್ಯೂಶನ್ ಬೆನ್ನತ್ತಿರುವ ಕಾಲದಲ್ಲಿ, ಹಳೆಯ ಮೊಬೈಲ್ ಫೋನ್ ಬಳಸಿ ಸಿನಿಮಾ ಮಾಡಿರುವುದು ನಿಜಕ್ಕೂ ಒಂದು ಕ್ರಾಂತಿಕಾರಿ ಹೆಜ್ಜೆ. ಕೊಬೆರಿಡ್ಜೆ ಈ ಇಡೀ ಮೂರು ಗಂಟೆಗಳ ಚಿತ್ರವನ್ನು ತಾವು ಬಳಸುವ 2008ರ ಹಳೆಯ ಮಾಡೆಲ್ Ericsson W595 ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದಾರೆ. ಇದರ ಮೂಲ ರೆಸಲ್ಯೂಶನ್ ಕೇವಲ 176×144 ಪಿಕ್ಸೆಲ್‌ಗಳು (144p). ಹಳೆಯ ಫೋನ್ ಅನ್ನು ಕುಂಚದಂತೆ ಬಳಸುವ ಮೂಲಕ, ಕೊಬೆರಿಡ್ಜೆ ಅವರು ಕ್ಲಾಡ್ ಮೊನೆ (Claude Monet) ಅಥವಾ ಪಾಲ್ ಸೆಜಾ (Paul Cezanne) ಪ್ರಸಿದ್ಧ ಚಿತ್ರಕಾರರ ವರ್ಣಚಿತ್ರಗಳಂತೆ ಕಾಣುತ್ತದೆ. ಸಿನೆಮಾ ಎಂದರೆ ಬರಿ ಸ್ಪಷ್ಟತೆಯಲ್ಲ, ಅದು ಭಾವನೆಗಳ ಸಂಕಲನ ಎಂದು ತೋರಿಸಿಕೊಟ್ಟಿದ್ದಾರೆ. BIFFESನ ಪ್ರದರ್ಶನದ ವೇಳೆ ಪ್ರೊಜೆಕ್ಷನ್‌ನಲ್ಲಿ ಯಾವುದೋ ತಾಂತ್ರಿಕ ದೋಷವಿದೆ ಎಂದು ಭಾವಿಸಿ, ಜನರು ಅರಿವಿಲ್ಲದೆಯೇ ಚಿತ್ರಮಂದಿರದಿಂದ ಹೊರನಡೆದರು.

dry leaf

‘ಡ್ರೈ ಲೀಫ್’ ಚಿತ್ರಕ್ಕೂ ಮುನ್ನವೇ ಅಲೆಕ್ಸಾಂಡ್ರೆ ಕೊಬೆರಿಡ್ಜೆ ತಮ್ಮ ವಿಶಿಷ್ಟ ದೃಶ್ಯ ರೂಪಕಗಳ ಮೂಲಕ ಜಾಗತಿಕ ಸಿನೆಮಾ ಪ್ರಿಯರ ಗಮನ ಸೆಳೆದಿದ್ದರು. ವಿಶೇಷವಾಗಿ 2021ರ ಅವರ ‘ವಾಟ್ ಡು ವಿ ಸೀ ವೆನ್ ವಿ ಲುಕ್ ಅಟ್ ದ ಸ್ಕೈ?’ (What Do We See When We Look at the Sky?) ಚಿತ್ರವು ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮನ್ನಣೆ ತಂದುಕೊಟ್ಟಿತು. ತಾಂತ್ರಿಕ ಮಿತಿಗಳನ್ನು ಮೆಟ್ಟಿ ನಿಂತ ‘ಡ್ರೈ ಲೀಫ್’, ಪಿಕ್ಸೆಲ್‌ಗಳ ಚಮತ್ಕಾರದ ಮೂಲಕ ಹೊಸ ಕಥಾಲೋಕವನ್ನೇ ಸೃಷ್ಟಿಸಿದೆ. ಇವರ ಸಿನಿಮಾಗಳಲ್ಲಿ ಕಥೆಗಿಂತ ಹೆಚ್ಚಾಗಿ ‘ಭಾವ’ ಮತ್ತು ‘ಸ್ಥಳದ ಅಸ್ಮಿತೆ’ (Sense of place) ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ.

ಈ ಚಿತ್ರದಲ್ಲಿ ಸಂಗೀತ ಮತ್ತು ಧ್ವನಿಯ ಬಳಕೆ ಪರಿಣಾಮಕಾರಿಯಾಗಿದೆ. ಸಂಭಾಷಣೆಗಳು ಕಡಿಮೆ. ಆದರೆ ಸುತ್ತಮುತ್ತಲ ಶಬ್ದಗಳು (Ambient noise) ಮತ್ತು ಮೌನವೇ ಒಂದು ಲಯವನ್ನು ಸೃಷ್ಟಿಸುತ್ತದೆ. ಮಸುಕಾದ ದೃಶ್ಯಗಳಿಗೆ ಧ್ವನಿಯು ಒಂದು ರೀತಿಯ ‘ಟೆಕ್ಸ್ಚರ್’ ನೀಡುತ್ತದೆ.

ಈ ಚಿತ್ರದಲ್ಲಿ ಫುಟ್‌ಬಾಲ್ ಕೇವಲ ಒಂದು ಆಟವಲ್ಲ, ಅದೊಂದು ಬದುಕಿನ ರೂಪಕ. ಗಾಳಿಯಲ್ಲಿ ತೇಲುತ್ತಾ ಅನಿರೀಕ್ಷಿತವಾಗಿ ದಿಕ್ಕು ಬದಲಿಸುವ ಫುಟ್‌ಬಾಲ್‌ನಂತೆ, ಈ ಚಿತ್ರದ ಕಥೆಯೂ ಸಹ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತದೆ. ಚಿತ್ರದ ಕೊನೆಯಲ್ಲಿ ಮೈದಾನವಿಲ್ಲದಿದ್ದರೂ ‘ಎಲ್ಲೆಡೆ ಆಡುತ್ತೇವೆ’ ಎನ್ನುವ ಹುಡುಗನ ಮಾತು, ಮನುಷ್ಯನ ಅಚಲವಾದ ಆಶಾವಾದ ಮತ್ತು ಬದುಕುವ ಛಲವನ್ನು ಪ್ರತಿಬಿಂಬಿಸುತ್ತದೆ.

ಈ ಚಿತ್ರವು ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಸೈಟ್ ಅಂಡ್ ಸೌಂಡ್ (Sight & Sound) 2025ರ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ ಮತ್ತು ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ Special mention ಪಡೆದಿದೆ. ಮೌನಕ್ಕಾಗಿ ಕಾತರಿಸುವವರು ನೋಡಬೇಕಾದ ಚಿತ್ರ.

Babu Eshwar Prasad
ಬಾಬು ಈಶ್ವರ್ ಪ್ರಸಾದ್
+ posts

ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಬಾಬು ಈಶ್ವರ್ ಪ್ರಸಾದ್
ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...