ಅಂಗನವಾಡಿ ಕೇಂದ್ರಗಳಲ್ಲಿ ಇಸಿಸಿಇ (ECCE) ಜಾರಿಗಾಗಿ ಒತ್ತಾಯಿಸಿ, ಕೂಸಿನ ಮನೆ ರದ್ದು ಮಾಡಲು ಆಗ್ರಹಿಸಿ, ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಪ್ರಾರಂಭ ಮಾಡುವ ಎಲ್ಕೆಜಿ-ಯುಕೆಜಿ ಆದೇಶ ರದ್ದತಿಗಾಗಿ ಕೋರಿ ಜೂನ್ 19ರಂದು ಅನಿರ್ಧಿಷ್ಟ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, “ಜೂನ್ 19ರಂದು ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ಇರುವ ನಿರ್ದೇಶಕರ ಕಚೇರಿ ಮುಂದೆ ಅನಿರ್ದಿಷ್ಟ ಹೋರಾಟ ಹಮ್ಮಿಕೊಳ್ಳಲಾಗಿದೆ. ನಿವೃತ್ತಿ ಆದವರಿಗೆ ಗ್ರಾಜ್ಯುಟಿ, ಬಿಡುಗಡೆ, ಚುನಾವಣಾ ಸಂದರ್ಭದ ಆಶ್ವಾಸನೆಯಂತೆ ವೇತನ ಹೆಚ್ಚಳ, ರೆಡಿಮೇಡ್ ಪೌಷ್ಠಿಕ ಆಹಾರ ಬದಲಾಯಿಸಬೇಕು ಎಂದು ಒತ್ತಾಯಿಸಲಾಗುತ್ತದೆ” ಎಂದು ಹೇಳಿದೆ.



