ನಟ ಶಿವರಾಜ್ ಕುಮಾರ್ ಅವರು ಸಂಸತ್ತಿಗೆ ಹೋಗಬೇಕಿದೆ. ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಸಿನಿಮಾ ಮಾಡೋದು ಇದ್ದೇ ಇದೆ. ಸಂಸತ್ತಿಗೆ ಹೋಗೋದು ತಡೆಯಾಗಬಾರದು ಎಂದಿದ್ದೇನೆ. ಅವರು ಎಲ್ಲಿ ಟಿಕೆಟ್ ಕೇಳುತ್ತಾರೋ ಅಲ್ಲಿ ಟಿಕೆಟ್ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರ್ಯ ಈಡಿಗ ಸಮಾವೇಶದಲ್ಲಿ ಮಾತನಾಡಿದ ಅವರು, “ನಿಮಗೆಲ್ಲ ಒಳ್ಳೆಯದಾಯಿತು ಎಂದರೆ ನಮಗೆ ಒಳ್ಳೆಯದಾಯಿತು ಅಂತ ಅರ್ಥ. ವಿದ್ಯೆಯಿಂದ ವಿವೇಕರಾಗಬೇಕು, ಸಂಘಟನೆಯಿಂದ ಬಲವಂತರಾಗಬೇಕು ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ನಾವು ಸಿದ್ದರಾಮಯ್ಯನವರ ಸರ್ಕಾರದ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ನೀಡಿದ್ದೀರಿ. ಚಪ್ಪಾಳೆ ಹೊಡೆಸಿಕೊಳ್ಳಲು ನಾವು ಬಂದಿಲ್ಲ. ನಿಮ್ಮ ಜೊತೆಗೆ ಇದ್ದೇವೆ ಎಂಬುದನ್ನು ತಿಳಿಸಲು ಬಂದಿದ್ದೇವೆ. ಸಹಕಾರ ಮಾಡಿದವರನ್ನು ಮರೆಯಲ್ಲ. ಅನೇಕ ಶಾಸಕರನ್ನು ಗೆಲಿಸಿಕೊಟ್ಟಿದ್ದೀರಿ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಮಗೆ ಸಹಾಯ ಮಾಡುವ ಮಾತುಕೊಟ್ಟಿದ್ದೇವೆ, ಉಳಿಸಿಕೊಳ್ಳುತ್ತಿದ್ದೇವೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಅಂದು ಗನ್ ಹಿಡಿದಿದ್ದ ನಕ್ಸಲೈಟ್, ಇಂದು ಕ್ಯಾಬಿನೆಟ್ ಮಿನಿಸ್ಟರ್; ಸೀತಕ್ಕನ ರೋಚಕ ಪಯಣ
“ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದು ಬಂಗಾರಪ್ಪನವರ ಸಂಪುಟದಲ್ಲಿ. ಮಧು ಬಂಗಾರಪ್ಪ ಸ್ವಲ್ಪ ಬೇರೆ ಕಡೆ ಕಾಲು ಇಟ್ಟಿದ್ದ. ಗಾಳ ಹಾಕಿ ಗಾಳ ಹಾಕಿ ಆತನನ್ನು ಕಾಂಗ್ರೆಸ್ಗೆ ಕರೆತಂದೆ” ಎಂದು ಡಿಸಿಎಂ ಹೇಳಿದರು.
ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಈಡಿಗ ಸಮುದಾಯದ ಪಾತ್ರವೂ ಮಹತ್ವದ್ದಾಗಿದೆ. ಅದಕ್ಕೆ ನಾನು ಆಭಾರಿಯಾಗಿದ್ದು, ಈಡಿಗ… pic.twitter.com/XSA1uc9R0g
— DK Shivakumar (@DKShivakumar) December 10, 2023
ಈ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, “ನಮ್ಮ ಉದ್ದೇಶ ಏನು? ಆಗ ಆಗಬೇಕಿತ್ತು ಈಗ ಆಗಬೇಕಿತ್ತು, ಯಾರಿಂದ ಆಯಿತು, ಯಾರು ಮಾಡಿದರು ಎಂಬುದನ್ನು ಮುಖ್ಯವಲ್ಲ. ಯಾರಿಗಾಗಿ ಮಾಡಿದರು ಎಂಬುದು ಮುಖ್ಯ. ನಾನು ಯಾವಾಗಲು ನಿಮ್ಮಲ್ಲಿ ಒಬ್ಬ. ನೀವೆಲ್ಲ ಬೆಳೆಸಿದ್ದಕ್ಕೆ ನಾವು ಇಲ್ಲಿದ್ದೇನೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಕಾರ್ಯಕ್ರಮಗಳು ಆಗಬೇಕು” ಎಂದು ಹೇಳಿದರು.
“ನಮ್ಮ ಸಂಘದ ಅಮೃತ ಮಹೋತ್ಸವಕ್ಕೆ ಮೆರಗು ತಂದಿದ್ದಾರೆ. ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಇರಬೇಕಿತ್ತು. ಅವರು ಇಲ್ಲಿ ಹಾಜರಿರದಿದ್ದರೂ ಇದ್ದಾರೆಂದು ಭಾವಿಸಿದ್ದೇವೆ. ಸಿದ್ದರಾಮಯ್ಯನವರ ಸರ್ಕಾರದಿಂದ ಸಮುದಾಯದ ಕೆಲಸಗಳು ಆಗುತ್ತವೆ ಎಂಬ ಭರವಸೆ ಇದೆ” ಎಂದರು.
“ಚುನಾವಣೆಗೆ ಶಿವಣ್ಣನವರು ರೆಡಿಯಾಗಲಿ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದರು. ಬಣ್ಣ ಹಚ್ಚೋದು ನಮ್ಮ ವೃತ್ತಿ. ನನ್ನ ಪತ್ನಿ ರಾಜಕಾರಣದಲ್ಲಿದ್ದಾರೆ. ಅವರ ಆಯ್ಕೆ ಮಾಡಿಕೊಂಡಿದ್ದನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಅವರ ಇಚ್ಛೆಗೆ ಬದ್ಧರಾಗಿದ್ದೇನೆ. ನನ್ನ ಸಪೋರ್ಟ್ ಅವರಿಗೆ ಇದ್ದೇ ಇರುತ್ತದೆ” ಎಂದು ಪ್ರತಿಕ್ರಿಯಿಸಿದರು.
ಹಿರಿಯ ನಟಿ ಲೀಲಾವತಿಯವರ ನಿಧನಕ್ಕೆ ಒಂದು ನಿಮಿಷದ ಮೌನಾಚಣೆಯನ್ನು ಶಿವಣ್ಣ ಅವರು ಸಮಾವೇಶದಲ್ಲಿ ನೆರವೇರಿಸಿದರು.





