ರಾಷ್ಟ್ರೀಯ ರೈತ ಮುಖಂಡರಾದ ಜಗಜಿತ್ ಸಿಂಗ್ ದಲ್ಲೆವಾಲ್ ಪಾತ್ರಕಾಗೋಷ್ಠಿ ನಡೆಸಿ, ತಮಿಳುನಾಡಿನ ಉಚ್ಚ ನ್ಯಾಯಾಲಯ ಪ್ರಕರಣದ ಸಂಬಂಧ ತಡೆಯಾಜ್ಞೆ ನೀಡಿದ್ದು, ರೈತ ಮುಖಂಡ ಪಿ.ಆರ್. ಪಾಂಡಿಯನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಸ್ವಾಗತಿಸಿ, ಅಭಿನಂದಿಸಿದ್ದಾರೆ.
ತಮಿಳುನಾಡು ಸೆಷನ್ ನ್ಯಾಯಾಲಯ ರೈತ ಮುಖಂಡ ಪಿ.ಆರ್. ಪಾಂಡಿಯನ್ ಅವರನ್ನು 13 ವರ್ಷಗಳ ಶಿಕ್ಷೆಗೆ ಗುರಿಪಡಿಸಿ, ಜೈಲಿಗೆ ಕಳುಹಿಸಿದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ರೈತ ನಾಯಕ ಪಿ.ಆರ್. ಪಾಂಡಿಯನ್ ತಮ್ಮ ಇಡೀ ಜೀವನವನ್ನು ರೈತ ಸಮುದಾಯದ ಉನ್ನತಿಗಾಗಿ ಮುಡುಪಾಗಿಟ್ಟಿದ್ದಾರೆ. 2013 ರಲ್ಲಿ, ಓ ಎನ್ ಜಿ ಸಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕರಿಯ ಮಂಗಲಂ ನಲ್ಲಿ ರಾಜ್ಯ ಸರ್ಕಾರವು ‘ಸಂರಕ್ಷಿತ ಕೃಷಿ ಭೂಮಿ’ ಎಂದು ಘೋಷಿಸಿದ ಪ್ರದೇಶದಲ್ಲಿ ಉತ್ಖನನ ಮತ್ತು ನೆಲ ಕೊರೆಯುವ ಕೆಲಸವನ್ನು ನಡೆಸುತ್ತಿತ್ತು.
2013ರಲ್ಲಿ ಈ ಪ್ರದೇಶದಲ್ಲಿ ಅನಿಲ ಸೋರಿಕೆಯೂ ಸಂಭವಿಸಿದ್ದು, ಸ್ಥಳೀಯ ನಿವಾಸಿಗಳ ಜೀವ ಮತ್ತು ಆಸ್ತಿ ಅಪಾಯದ ಬಗ್ಗೆ ಭಯವನ್ನು ಸೃಷ್ಟಿಸಿತು. ಸಂರಕ್ಷಿತ ಪ್ರದೇಶ ಸ್ಥಳದಲ್ಲಿ ಓ ಎನ್ ಜಿ ಸಿ ಕೆಲಸ ಮುಂದುವರಿಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿತು. ಇದರ ಹೊರತಾಗಿಯೂ, ಆ ಪ್ರದೇಶದಲ್ಲಿ ಕೆಲಸ ನಿಲ್ಲಿಸುವ ಬದಲು, ಓ ಎನ್ ಜಿ ಸಿ ಸ್ಥಳೀಯ ಜೀವಗಳಿಗೆ ಅಪಾಯವನ್ನುಂಟು ಮಾಡುವ ಕೆಲಸವನ್ನು ಮುಂದುವರಿಸಿತು.

2015ರಲ್ಲಿ, ಪಿ.ಆರ್. ಪಾಂಡಿಯನ್ ನೇತೃತ್ವದ ರೈತರು ಓ ಎನ್ ಜಿ ಸಿ ಯೋಜನೆಯು ಕೃಷಿ ಮತ್ತು ಪರಿಸರದ ಮೇಲೆ ಭೀಕರ ಪರಿಣಾಮಗಳನ್ನು ಬೀರುವ ಭಯದಿಂದ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಆದಾಗ್ಯೂ, ಓ ಎನ್ ಜಿ ಸಿ ತನ್ನ ಸ್ವಂತ ಹಿತಾಸಕ್ತಿಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಪಿತೂರಿ ನಡೆಸಿ, ಸುಳ್ಳು ಸಾಕ್ಷ್ಯಗಳ ಆಧಾರದ ಮೇಲೆ ಸುಳ್ಳು ಪ್ರಕರಣ ದಾಖಲಿಸಿತು. ಡಿಸೆಂಬರ್. 6, 2025 ರಂದು, ತಿರುವರೂರು ಜಿಲ್ಲೆಯ ತ್ವರಿತ ನ್ಯಾಯಾಲಯವು ರೈತ ನಾಯಕ ಪಿ.ಆರ್. ಪಾಂಡಿಯನ್ ಮತ್ತು ಸೆಲ್ವರಾಜ್ ಅವರಿಗೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಅಂದಿನಿಂದ, ಇಬ್ಬರೂ ರೈತ ನಾಯಕರು ಜೈಲಿನಲ್ಲಿದ್ದರು. ಇದು ದೇಶದಾದ್ಯಂತ ರೈತರ ಕೋಪಕ್ಕೆ ಕಾರಣವಾಗಿದೆ.
ದೇಶದ ಎಲ್ಲಾ ರೈತರ ಪರವಾಗಿ, ದೇಶದ ಅತ್ಯುನ್ನತ ನಾಗರಿಕರಾಗಿ ವಿಷಯವನ್ನು ಅರಿತುಕೊಳ್ಳಬೇಕು. ಸುಳ್ಳು ಪ್ರಕರಣದಲ್ಲಿ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸುವ ಮೂಲಕ ಅಥವಾ ಪರಿಸ್ಥಿತಿಗೆ ಕಾನೂನು ಪರಿಹಾರವನ್ನು ಕಂಡುಕೊಳ್ಳಬೇಕು. ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ನಡೆಸಿದ್ದ ಷಡ್ಯಂತರಕ್ಕೆ ಉಚ್ಚ ನ್ಯಾಯಾಲಯ ತಡೆನೀಡಿದೆ, ರೈತ ನಾಯಕರಾದ ಪಿ.ಆರ್. ಪಾಂಡಿಯನ್ ಮತ್ತು ಸೆಲ್ವರಾಜ್ ಅವರನ್ನು ಬಿಡುಗಡೆ ಮಾಡಿರುವುದನ್ನು ಸಂಯುಕ್ತ ಕಿಸಾನ್ ಮಾರ್ಚ್ (ರಾಜಕೀಯೇತರ) ಸಂಘಟನೆಯು ಸ್ವಾಗತಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹೀಲಿಯಂ ಗ್ಯಾಸ್ ಸ್ಫೋಟ ಪ್ರಕರಣ; ಮೃತರ ಸಂಖ್ಯೆ 3ಕ್ಕೆ ಏರಿಕೆ: ತನಿಖೆಗೆ ಎನ್ಐಎ ತಂಡ
ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತಾ ಕಿಸಾನ್ ಮೋರ್ಚಾದ ಹರಿಯಾಣದ ರಾಜ್ಯದ ರೈತ ನಾಯಕ ಅಭಿಮನ್ಯು ಕೋಹಾರ್, ತಮಿಳುನಾಡಿನ ಕೃಷ್ಣಗಿರಿ ರಾಮಾಗೌಂಡರ್, ಕೊಯಮತ್ತೂರಿನ ಎ.ಎಸ್. ಬಾಬು, ಕರ್ನಾಟಕದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ತುಮಕೂರಿನ ಸುರೇಂದರ್ ಸೇರಿದಂತೆ ಹಲವರು ಇದ್ದರು.





