ಅನಾದಿ ಕಾಲದ ದುಃಖದ ಒಡನಾಡಿ ಮೊಗಳ್ಳಿ ಗಣೇಶ್

Date:

'ಸಾಹಿತ್ಯ ಒಂದು ಗೋಳಲ್ಲ, ರಗಳೆ ಅಲ್ಲ, ವಿಲಾಸ‌ ಅಲ್ಲ, ಸರಸ‌ ಅಲ್ಲ. ಅದು ಮನುಷ್ಯತ್ವದ ಹುಡುಕಾಟ, ಅದೇ ಪ್ರಾಣ' ಎಂದ, ಇತ್ತೀಚೆಗೆ ಇಲ್ಲವಾದ ಮೊಗಳ್ಳಿ ಗಣೇಶ್ ಕುರಿತ ಬರೆಹ...

ಕಾಲೇಜಿನ ಲೈಬ್ರರಿಯಲ್ಲಿ ಅಕಸ್ಮಾತ್ ಸಿಕ್ಕ ‘ತೊಟ್ಟಿಲು’ ಕಾದಂಬರಿ ಓದಿದಾಗ ಅಲ್ಲಿನ ಭಾಷೆಯ ಮಾಂತ್ರಿಕ ನಿರೂಪಣೆ ಬೆರಗುಗೊಳಿಸಿತ್ತು. ಕಾದಂಬರಿಯಲ್ಲಿ ರೇಡಿಯೋ ಆಲಿಸುತ್ತಾ ಕಾಲಾತೀತನಾಗಿ, ಅನೂಹ್ಯ ತರಂಗಗಳಲ್ಲಿ ಧ್ಯಾನಸ್ಥ ಸ್ಥಿತಿಗೆ ತಲುಪುವ ನಿರೂಪಕನ ಚಿಕ್ಕಪ್ಪನ ಪಾತ್ರ ಮಸುಕು-ಮಸುಕಾಗಿ ನೆನಪಿದೆ. ‘ಬುಗುರಿ’ ಕತೆಯಲ್ಲಿನ ‘ಹೇಲುಗುಂಡಿ’ ಭಿನ್ನ ಭಾವದ, ತಾರತಮ್ಯದ ಅಸ್ಪೃಶ್ಯ ಭಾರತದ ದರ್ಶನ ಮಾಡಿಸಿತು.‌ ಕತೆಗಾರನೊಬ್ಬ ಮುಗ್ಧ ಮನಸ್ಸಿನ ಹುಡುಗನೊಬ್ಬನ ಅವ್ಯಕ್ತವಾದ ನೋವು, ಸಮುದಾಯದ ಸಂಕಟಗಳಿಗೆ ನುಡಿಕೊಟ್ಟು ಅಕ್ಷರ ರೂಪದಲ್ಲಿ ಜೀವಂತಗೊಳಿಸಿದ.

‘ಒಂದು ಹಳೇ ಚಡ್ಡಿ’ ಕತೆಯು ಮನುಷ್ಯನ ಕ್ಷುಲ್ಲಕ ವರ್ತನೆ, ಕುಟುಂಬವೊಂದರ ದುರಂತ ಅಂತ್ಯದಲ್ಲಿ ಕೊನೆಯಾಗುವ ಗಾಢ ವಿಷಾದವನ್ನು ಬಿಂಬಿಸುತ್ತದೆ. ‘ಅಲ್ಲಿ ಆ ಆಳು ಈಗಲೂ’, ‘ನನ್ನಜ್ಜನಿಗೊಂದಾಸೆಯಿತ್ತು’ ಕಳೆದ ಕಾಲದ ಕವಣೆಕಲ್ಲಿನ ಬೀಸಿನಲ್ಲಿ ಭಗ್ನಗೊಂಡು, ಎಲ್ಲರಿಂದ ದೂರಾದ ತಬ್ಬಲಿಗಳ ಬದುಕಿನ ದುಃಸ್ವಪ್ನದಂತಿದೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಮಾನವೀಯಗೊಳಿಸುವ ನಿಲುವಿನ ಬಿ. ಬಸವಲಿಂಗಪ್ಪನವರ ‘ಬೂಸಾ’ ಹೇಳಿಕೆಯ ವಿಸ್ತರಣೆಯಂತೆ ಮೊಗಳ್ಳಿಯವರ ‘ತಕರಾರು’ ಲೇಖನಗಳನ್ನು ಓದಬಹುದು. ಸಾಹಿತ್ಯದಲ್ಲಿ ಅಂತರ್ಗತವಾಗಿರುವ ಹಿಂದೂ ವೈದಿಕ ಪ್ರಜ್ಞೆ, ಜಾತಿಸೂತಕದಿಂದ ರೋಗಗ್ರಸ್ತವಾಗಿರುವುದಕ್ಕೆ ತಮ್ಮ ‘ಜಾತಿ ಮೀಮಾಂಸೆ’ ಬರಹಗಳ ಮೂಲಕ ಅಲಕ್ಷಿತ ಸಂವೇದನೆಯ ಅಸ್ತಿತ್ವವನ್ನು ಅವರು ಹಕ್ಕೊತ್ತಾಯದಲ್ಲಿ ಮಂಡಿಸಿದರು.

ಇದನ್ನು ಓದಿದ್ದೀರಾ?: ಗತದ ಗೆಳೆಯ ಗಣೇಶ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಇಹದ ಈ ಎಲ್ಲಾ ವಿಕೃತಿಗಳಿಂದ ವಿಮೋಚನೆಗೊಳ್ಳುವುದೇ ಸಾಹಿತ್ಯದ ಪ್ರಾಣತತ್ವ. ಸಾಹಿತ್ಯ ಒಂದು ಗೋಳಲ್ಲ, ರಗಳೆ ಅಲ್ಲ, ವಿಲಾಸ‌ ಅಲ್ಲ, ಸರಸ‌ ಅಲ್ಲ. ಅದು ಮನುಷ್ಯತ್ವದ ಹುಡುಕಾಟ, ಅದೇ ಪ್ರಾಣ” ಎಂದು ಮೊಗಳ್ಳಿ ತಮ್ಮ ಕೊನೆಯ ಸಂದರ್ಶನದಲ್ಲಿ (ಮಯೂರ, ಅಕ್ಟೋಬರ್, 2025) ಹೇಳಿದ್ದಾರೆ. ಅನಾದಿ ಕಾಲದಿಂದಲೂ ಇರುವ ಈ ಎಲ್ಲಾ ವಿಕಾರಗಳನ್ನು ನೀಗಿಸುವ ಧಾವಂತದಲ್ಲಿ ಅವರ ಸೃಜನಶೀಲತೆಯು ವಿಸ್ತರಿಸಿಕೊಂಡಿದೆ.

‘ನಾನೆಂಬುದು ಕಿಂಚಿತ್’ ಆತ್ಮಕಥನ ಬಾಲ್ಯದಲ್ಲಿ ಕಂಡುಂಡ ಹಿಂಸೆ, ಕ್ರೌರ್ಯದ ನರಕ ದರ್ಶನ. ಬದುಕಿನ ಏರಿಳಿತಗಳಲ್ಲಿ ಮನುಷ್ಯರ ಕೇಡಿನಿಂದ ಸಂಭವಿಸುವ ತಲ್ಲಣಗಳು, ವಿಫಲತೆಯಿಂದ ಅನುಭವಿಸುವ ಯಾತನೆಗಳ ವಿರಾಟ ಕಥನ. ‘ದೇಶಿ’, ‘ಅವ್ಯಕ್ತ ಚರಿತ್ರೆ’, ‘ದಲಿತ ಜಾನಪದ’ ಕೃತಿಗಳ ಮೂಲಕ ಜೀವವಿರೋಧಿ, ಲೋಕ ಕಂಟಕವಾಗಿರುವ ಬ್ರಾಹ್ಮಣ್ಯಕ್ಕೆ, ವೈದಿಕ ಪ್ರಜ್ಞೆಯ ಸಿದ್ಧಮಾದರಿಗಳಿಗೆ ಪರ್ಯಾಯವಾಗಿ ಮೌಖಿಕ ಪರಂಪರೆಯ ನೆಲಮೂಲದ ಲಯದಿಂದ ಒಡಮೂಡುವ, ಸಮಷ್ಟಿ ಪ್ರಜ್ಞೆಯ ಹೊಕ್ಕುಳು ಬಳ್ಳಿಯಂತೆ ಬೆಸೆದುಕೊಂಡಿರುವ ಆದಿಮ ಸಂವೇದನೆಯನ್ನು, ದಮನಿತ ಸಮುದಾಯಗಳ ಒಡಲಾಳದಿಂದ ಹೊಮ್ಮುವ ನಾದದಂತೆ ಮೊಗಳ್ಳಿ ನಿರೂಪಿಸಿದ್ದಾರೆ.

‘ನಾನು ಯಾವನಿಗೂ, ಒಂದು ಗಳಿಗೆಯೂ ಗುಲಾಮ ಆದವನಲ್ಲ. ಸತ್ಯದ ಜೀತಗಾರ’ ಎಂದು ತನ್ನ ಬಗ್ಗೆ ತಾನೇ ಆತ್ಮಪ್ರತ್ಯಯದಲ್ಲಿ ಬರೆದುಕೊಂಡಿರುವ ಲೇಖಕ ಮೊಗಳ್ಳಿ ಗಣೇಶ್. ಮೊಗಳ್ಳಿ ತೀರಿಕೊಂಡಾಗ ಅವರ ಗುಣ, ಸ್ವಭಾವ, ದೋಷ, ಸಿಟ್ಟು, ವ್ಯಸನ, ಸಾಧನೆ ಇವುಗಳ ಬಗ್ಗೆ ಅವರ ಸಮಕಾಲೀನರು, ಸ್ನೇಹಿತರು ಬರೆದಿದ್ದಾರೆ.‌ ತನ್ನ ಹುಟ್ಟೂರಿನ ದಟ್ಟ ಅನುಭವವನ್ನು ಮೊಗೆದು, ಸೃಜನಶೀಲತೆಯಲ್ಲಿ ಬಸಿದು ಕನ್ನಡಕ್ಕೆ ಅನನ್ಯವಾದ ಕತೆಗಳನ್ನು ಕೊಟ್ಟ ಮೊಗಳ್ಳಿಯವರಲ್ಲಿ ಇನ್ನೂ ಹುಟ್ಟುತ್ತಿದ್ದ ಕತೆಗಳು, ಕೃತಿಗಳು ಎಷ್ಟಿದ್ದವೋ? ಗೊತ್ತಿಲ್ಲ…

ಆದರೆ, ಕಾಲ ನಮ್ಮ ಲೆಕ್ಕಾಚಾರವನ್ನು, ನಿಸರ್ಗ ನಮ್ಮ ಎಲ್ಲಾ ನಿರೀಕ್ಷೆಗಳನ್ನು ಪೂರ್ಣಗೊಳಿಸುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಬದುಕಿದ್ದಾಗ ಕೆಲವರ ಪಾಲಿಗೆ ಏಕಾಂಗಿಯಂತೆ, ವಿಕ್ಷಿಪ್ತನಂತೆ, ಸಿಡುಕಿನ ವ್ಯಕ್ತಿಯಂತೆ, ಅಪ್ರಿಯನಂತೆ ಕಂಡ ಲೇಖಕನೊಬ್ಬ ತಾನು ಇಲ್ಲದಿರುವ ಶೂನ್ಯಗಳಿಗೆಯಲ್ಲಿ, ಆತನ ಸಾಹಿತ್ಯ ಮುಕ್ತವಾಗಿ ಓದುಗನಲ್ಲಿ ರೂಪಾಂತರಗೊಳ್ಳಬಹುದು. ಆ ಮೂಲಕ ಲೇಖಕ ಓದುಗನ ಗ್ರಹಿಕೆಯಲ್ಲಿ ಹೊಸದಾಗಿ ಮರುಹುಟ್ಟು ಪಡೆಯಬಹುದು. ಅದೇ ಲೇಖಕ-ಓದುಗರ ಪಾಲಿನ ಜೀವಂತ‌ ಗಳಿಗೆಯೂ ಆಗಿರಬಹುದು…

WhatsApp Image 2025 11 17 at 3.19.56 PM
ಆರ್. ಶ್ರೀಧರ್
+ posts

ಲೇಖಕರು, ಸಹಾಯಕ ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಆರ್. ಶ್ರೀಧರ್
ಆರ್. ಶ್ರೀಧರ್
ಲೇಖಕರು, ಸಹಾಯಕ ಪ್ರಾಧ್ಯಾಪಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...