ಕನ್ನಡ ರಾಷ್ಟ್ರೀಯತೆಯನ್ನು ಕಟ್ಟಿದ ಮಹನೀಯ ರಾಜಕುಮಾರ್ : ಚ ಹ ರಘುನಾಥ ಅಭಿಮತ

Date:

“ಕುವೆಂಪು ರೀತಿಯಲ್ಲಿ ಕನ್ನಡ ರಾಷ್ಟ್ರೀಯತೆಯನ್ನು ಕಟ್ಟಿದ ಮಹನೀಯರಲ್ಲಿ ಡಾ.ರಾಜಕುಮಾರ್ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ. ಕುವೆಂಪು ಆಶಯ, ಬಸವಣ್ಣನ ಕಾಯಕ ಪ್ರಜ್ಞೆಯನ್ನು ರಾಜಕುಮಾರ್ ಅವರ ಅನೇಕ ಸಿನಿಮಾಗಳು ಮೈಗೂಡಿಸಿಕೊಂಡಿವೆ” ಎಂದು ಹಿರಿಯ ಪತ್ರಕರ್ತರಾದ ಚ ಹ ರಘುನಾಥ ಅಭಿಪ್ರಾಯಪಟ್ಟರು.

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರದಂದು (ಜ.10) ನಡೆದ ಡಾ.ಮಂಜುನಾಥ ಅದ್ದೆ ಅವರ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಮಾತನಾಡಿದರು.

“ರಾಜಕುಮಾರ್ ಕುರಿತು ವ್ಯಕ್ತಿ ನಿಷ್ಠವಾಗಿ ಅನೇಕ  ಕೃತಿಗಳು ಬಂದಿವೆ. ಆದರೆ ವಸ್ತು ನಿಷ್ಠವಾಗಿ ಇಲ್ಲಿಯವರೆಗೂ ಒಂದೂ ಕೃತಿ ಬಂದಿಲ್ಲ. ಜನರ ನಾಯಕನಾಗಿ ರಾಜಕುಮಾರ್ ಏರಿದ ಸ್ಥಾನವನ್ನು ಯಾರಿಗೂ ತಲುಪಲು ಸಾಧ್ಯವಿಲ್ಲ. ಶ್ರೀಮಂತರ ರಾಜಕುಮಾರ್ ಎಂದಿಗೂ ಬಡವರ ಕೇರಿಗೆ ಬರುವುದಿಲ್ಲ. ಆದರೆ ಬಡವರ ರಾಜಕುಮಾರ್ ಎಲ್ಲ ಕಡೆಯೂ ಇರುತ್ತಾರೆ. ರಾಜಕುಮಾರ್ ಬೇಕಿರುವುದು ಬಡವರಿಗಾಗಿಯೇ ಹೊರತು, ಉದ್ಯಮದವರಿಗಲ್ಲ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸಿನಿಮಾ ಕೇವಲ ಮನರಂಜನಾ ಮಾಧ್ಯಮವಲ್ಲ. ಅದಕ್ಕೆ ಕನ್ನಡದ ಸಂಸ್ಕೃತಿಯ ಹೊಣೆಗಾರಿಕೆ ಇದೆ ಅನ್ನುವುದನ್ನು ಮರೆಯಬಾರದು” ಎಂದರು.

WhatsApp Image 2026 01 10 at 8.55.21 PM

ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್ ಮಾತನಾಡಿ “ತಳಸಮುದಾಯದಿಂದ ಬಂದ ರಾಜಕುಮಾರ್ ವೈದಿಕ ಕುತಂತ್ರವನ್ನು ಮೆಟ್ಟಿನಿಂತು ಜನಮಾನಸದಲ್ಲಿ ಉಳಿದುಕೊಂಡರು. ಗೋಕಾಕ್ ಚಳುವಳಿಯ ವೇಳೆ ರಾಜಕುಮಾರ್ ಆ ವೇದಿಕೆಗೆ ಬರದಿದ್ದರೆ, ಇಂದಿನ ಕನ್ನಡ ಊಹಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.

“ನಮ್ಮ ತಾತನ (ರಾಜಕುಮಾರ್) ನಡವಳಿಕೆಯೇ ನಮಗೆ ಮಾದರಿ. ತಾತನ ಶ್ರಮ ಮತ್ತು ಅವರ ಶಿಸ್ತು ನಮ್ಮ ಬದುಕನ್ನು ಕಟ್ಟಿಕೊಟ್ಟಿದೆ” ಎಂದು ರಾಜಕುಮಾರ್ ಅವರ ಮೊಮ್ಮಗ ಹಾಗೂ ನಟ ವಿನಯ್ ರಾಜಕುಮಾರ್ ಹೇಳಿದರು.

“ರಾಜಕುಮಾರ್ ಅವರ ಅನೇಕ ಸಿನಿಮಾಗಳನ್ನು ನೋಡಿ ಬೆಳೆದಿದ್ದೇನೆ. ಅದೇ ರೀತಿ ನನ್ನ ಪರಿಶ್ರಮ, ಹೋರಾಟ, ಬೆವರನ್ನು ನಂಬಿ ಬದುಕುತ್ತಿದ್ದೇನೆ. ಇತ್ತೀಚೆಗೆ ತುಂಬಾ ಇಷ್ಟಪಟ್ಟು ಓದುತ್ತಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು” ಎಂದು ನಟ ದುನಿಯಾ ವಿಜಯ್ ಹೇಳಿದರು.

Screenshot 2026 01 10 at 8.45.28

“ಕರ್ನಾಟಕದಲ್ಲಿ ಸಿನಿಮಾ ಕ್ಷೇತ್ರದಲ್ಲಿ ರಾಜಕುಮಾರ್ ಅವರ ಸಿನಿಮಾಗಳು ದೊಡ್ಡ ಕ್ರಾಂತಿಯನ್ನೇ ಮಾಡಿವೆ. ಅದೇ ರೀತಿಯಲ್ಲಿ ರಾಜಕುಮಾರ್ ಅವರು ಬದುಕಿದ್ದ ಕಾಲಘಟ್ಟದಲ್ಲಿ ನಾವೆಲ್ಲ ಬದುಕಿದ್ದೆವು ಎನ್ನುವುದೇ ನಮ್ಮ ಸೌಭಾಗ್ಯ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ವೇದಿಕೆಯ ಮೇಲೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ, ಕೃತಿಯ ಕರ್ತೃ ಡಾ.ಮಂಜುನಾಥ್ ಅದ್ದೆ, ಕೌದಿ ಪ್ರಕಾಶನದ ಮುಖ್ಯಸ್ಥರಾದ ಡಾ.ಮಮತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಧನಲಕ್ಷ್ಮೀ ದೇವರಾಜ್ ನಿರೂಪಣೆ ಮಾಡಿದರು.

Screenshot 2026 01 11 at 6.31.57
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದಿನಿಂದ ಪ್ಲಾಟ್‌ಫಾರ್ಮ್‌ ದರ ಏರಿಕೆ: ಗ್ರಾಹಕರಿಗೆ ಸ್ವಿಗ್ಗಿ, ಜೊಮಾಟೊ ಶಾಕ್‌!

ಜೊಮಾಟೊ ತನ್ನ ಪ್ಲಾಟ್‌ಫಾರ್ಮ್‌ ಬೆಲೆಯನ್ನು 19% ಹಚ್ಚಿಸಿದೆ. ಈ ಮೂಲಕ ಪ್ರತಿ...

ಕಲ್ಯಾಣ ಕರ್ನಾಟಕ | 3 ವರ್ಷ, 5,100 ಪ್ರಕರಣ; ಮಹಿಳೆಯರ ನಾಪತ್ತೆ ಹಿಂದೆ ಕಳ್ಳಸಾಗಣೆಯ ಕರಿನೆರಳು?!

ನಾಪತ್ತೆಯಾದ ಪ್ರತಿ ಜೀವವೂ ಮರಳಿ ತನ್ನ ಮನೆ ಸೇರುವಂತಾಗಲು ಮತ್ತು ಮುಂದಿನ...

ಹಾಸನ ಮಣ್ಣಿನ ಹೆಣ್ಣು ದನಿಗಳು | ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ,...

ರಸರೆಕ್ಷನ್: ಇಂದ್ರಿಯಗಳ ಮೂಲಕ ಒಂದು ಶತಮಾನದ ಸಿನೆಮಾ ಪಯಣ ಬಿಡಿಸಿಡುವ ಚಿತ್ರ

'ರಸರೆಕ್ಷನ್' ಸಿನಿಮಾ ಅಂತಿಮವಾಗಿ ಹೇಳುವುದೇನೆಂದರೆ ಬದುಕು ಎಷ್ಟೇ ದೀರ್ಘವಾಗಿದ್ದರೂ, ಕನಸುಗಳಿಲ್ಲದಿದ್ದರೆ ಅದು...