ಈದಿನ.ಕಾಮ್‌ ಸಮೀಕ್ಷೆ 7: ಬಡವರ ಓಟು ಕಾಂಗ್ರೆಸ್‌ಗೆ, ಮೇಲ್ಜಾತಿಗಳ ಹೆಚ್ಚು ಓಟು ಬಿಜೆಪಿಗೆ

Date:

ಜನರ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಜೆಡಿಎಸ್‌ನ ಮತ ಪ್ರಮಾಣದಲ್ಲಿ ಹೆಚ್ಚೇನೂ ಬದಲಾವಣೆ ಆಗುವುದಿಲ್ಲ. ಆದರೆ, ಕಾಂಗ್ರೆಸ್‌ನ ಮತಗಳಿಕೆ ಕಡಿಮೆಯಾಗುತ್ತದೆ; ಬಿಜೆಪಿಯ ಮತಗಳಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ, ಬಡವರು ಹೆಚ್ಚಾಗಿ ಕಾಂಗ್ರೆಸ್‌ಗೆ ಮತ ನೀಡಿದರೆ, ಶ್ರೀಮಂತರು ಹೆಚ್ಚು ಬಿಜೆಪಿಗೆ ಮತ ನೀಡುತ್ತಾರೆ. ಇಷ್ಟಾದರೂ ಯಾವ ಸಮುದಾಯದ ಓಟೂ ಕೂಡ ಯಾವುದೇ ಒಂದು ಪಕ್ಷಕ್ಕೆ ಪರಿಮಿತಗೊಂಡಿಲ್ಲ.

ಮೊದಲಿಗೆ ಈ ಸಮೀಕ್ಷೆ ಏನೆಂದು ಅರಿಯಲು ಈ ವರದಿ ಓದಿ: ಚುನಾವಣೆ 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ ‘ಈ ದಿನ.ಕಾಮ್‌’ನ ಸಮೀಕ್ಷೆ

ಈದಿನ.ಕಾಮ್‌ ನಡೆಸಿದ ಕರ್ನಾಟಕದ ವಿಧಾನಸಭಾ ಚುನಾವಣೆ 2023ರ ಅತಿ ದೊಡ್ಡ ಸಮೀಕ್ಷೆಯ ಕಡೆಯ ಹಂತಕ್ಕೆ ಬರುತ್ತಿರುವ ಹಾಗೆ ಕೆಲವು ಸ್ವಾರಸ್ಯಕರ ಸಂಗತಿಗಳು ಗಮನಕ್ಕೆ ಬರುತ್ತಿವೆ. ಇಡೀ ರಾಜ್ಯದಲ್ಲಿ ಒಟ್ಟಾರೆ ಎಲ್ಲ ಮತದಾರರನ್ನು ಸೇರಿಸಿದರೆ ಯಾವ ಪಕ್ಷಕ್ಕೆ ಎಷ್ಟು ಮತ ಮತ್ತು ಎಷ್ಟು ಸೀಟುಗಳು ಎಂಬುದನ್ನು ನಾಳೆ ಕೊಡಲಾಗುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ಯಾವ ಜಾತಿ ಸಮುದಾಯಗಳು ಯಾವ ರೀತಿ ಓಟು ಹಾಕಲು (ಸಮೀಕ್ಷೆ ನಡೆದ ಅವಧಿಯಲ್ಲಿ) ಯೋಚಿಸಿದ್ದವು, ಆರ್ಥಿಕ ಸ್ಥಿತಿಗನುಗುಣವಾಗಿ (ಅಂದರೆ ಬಡವರು, ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗ, ಶ್ರೀಮಂತರು) ಯಾರ ಒಲವು ಯಾರ ಕಡೆಗಿದೆ ಎಂಬುದರ ಕುರಿತು ಇಂದು ಸ್ಪಷ್ಟವಾದ ಅಂಕಿ-ಅಂಶಗಳನ್ನು ಮುಂದಿಡಲಾಗಿದೆ.

ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿಯು ಲಿಂಗಾಯತರ ಪಕ್ಷವೆಂದೂ, ಜೆಡಿಎಸ್‌ ಅನ್ನು ಒಕ್ಕಲಿಗರ ಪಕ್ಷವೆಂದೂ, ನಿರ್ದಿಷ್ಟ ಜಾತಿಗಳ ಮತಗಳು ಇಂತಹ ಪಕ್ಷಕ್ಕೇ ಹೋಗುತ್ತವೆಂದೂ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅವೆಲ್ಲವೂ ಎಂದೂ ನಿಜವಾಗಿರಲಿಲ್ಲ. ಏಕೆಂದರೆ, ಇಡಿಯಾಗಿ ಅಥವಾ ಶೇ.90ರಷ್ಟು ಯಾವುದೇ ಸಮುದಾಯವೂ ಒಂದು ಪಕ್ಷಕ್ಕೆ ಮತ ಹಾಕುವುದಿಲ್ಲ. ತೀರಾ ಇತ್ತೀಚೆಗೆ ದಲಿತ ಸಮುದಾಯದಲ್ಲಿನ ಒಂದು ವಿಭಾಗ ಕಾಂಗ್ರೆಸ್‌ ಕಡೆಯಿಂದ ಬಿಜೆಪಿ ಕಡೆಗೆ ವಾಲುತ್ತಿದೆ ಎಂಬುದನ್ನು ಹೇಳಲಾಗುತ್ತಿತ್ತು. ಆದರೆ, ನಿರ್ದಿಷ್ಟ ಸರ್ವೆ ಮಾಡಿದಾಗ ಈ ವಿಚಾರದಲ್ಲಿ ಎಲ್ಲರೂ ಕಣ್ತೆರೆದು ನೋಡಬಹುದಾದ ಹಲವಾರು ಸಂಗತಿಗಳು ಗೋಚರವಾಗುತ್ತವೆ. ಅವೆಲ್ಲವನ್ನೂ ಒಂದೊಂದಾಗಿ ಇಲ್ಲಿ ನೀಡಲಾಗಿದೆ.

ಯಾರಿಗೆ ಮತ ಎಂದು ತೀರ್ಮಾನ ಮಾಡಿರದ ಸಮುದಾಯಗಳು

ಸಮೀಕ್ಷೆ ನಡೆದ ಅವಧಿಯಲ್ಲಿ ಶೇ.8ರಷ್ಟು ಮತದಾರರು ಯಾರಿಗೆ ಮತ ಹಾಕಬೇಕೆಂಬುದರ ಕುರಿತು ತೀರ್ಮಾನ ಮಾಡಿರಲಿಲ್ಲ. ಸಮೀಕ್ಷೆಯ ಹೆಚ್ಚಿನ ಭಾಗವು ಸಂಪೂರ್ಣ ಟಿಕೆಟ್‌ ವಿತರಣೆಗಿಂತ ಮುಂಚೆಯೇ ನಡೆದಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು. ವಿಶೇಷವೆಂದರೆ ಕೆಲವು ಸಮುದಾಯಗಳು/ಗುಂಪುಗಳಲ್ಲಿ ಈ ಪ್ರಮಾಣ ಮಿಕ್ಕವರಿಗಿಂತ ಹೆಚ್ಚಿದೆ. ಶೇ.8 ಎಂಬುದು ಯಾವುದೇ ಚುನಾವಣೆಯ ಫಲಿತಾಂಶವನ್ನು ಸಂಪೂರ್ಣ ಉಲ್ಟಾ ಮಾಡುವ ಪ್ರಮಾಣದ್ದು. ಹಾಗಾಗಿ ಇಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಸಂದೇಶವಿದೆ.

ರಾಜ್ಯದ ಉಳಿದ ಭಾಗಗಳಲ್ಲಿ ಇನ್ನೂ ತೀರ್ಮಾನ ಮಾಡಿರದ ಮತದಾರರ ಪ್ರಮಾಣ ಎಷ್ಟಿತ್ತೋ, ಬೆಂಗಳೂರು ಮಹಾನಗರದಲ್ಲಿ ಅದರ ಪ್ರಮಾಣ ಎರಡು ಪಟ್ಟು ಹೆಚ್ಚಿತ್ತು. ಮುಂಬಯಿ ಕರ್ನಾಟಕದಲ್ಲೂ ಮತದಾರರು ಸ್ವಲ್ಪ ಹೆಚ್ಚು ಗೊಂದಲದಲ್ಲಿದ್ದಂತೆ ಕಂಡುಬರುತ್ತದೆ. ಸಾಮಾನ್ಯವಾಗಿ ಒಂದಲ್ಲಾ ಒಂದು ಪಕ್ಷದ ಕಡೆಗೆ ವಾಲಿಕೊಂಡಂತೆ ಭಾವಿಸಲಾಗುವ ಸಮುದಾಯಗಳು – ಬ್ರಾಹ್ಮಣರು, ಒಕ್ಕಲಿಗರು, ಮುಸ್ಲಿಮರು – ತಮ್ಮ ಮತ ಯಾರಿಗೆ ಎಂಬುದರ ಕುರಿತು ಸ್ಪಷ್ಟವಾಗಿದ್ದರೆ, ಎಸ್‌ ಟಿ (ಪರಿಶಿಷ್ಟ ಪಂಗಡ) ಮತದಾರರು ಮಿಕ್ಕವರಿಗಿಂತ ಹೆಚ್ಚು ಗೊಂದಲದಲ್ಲಿದ್ದಂತೆ ಕಂಡುಬಂದಿದ್ದಾರೆ.

ಮಹಿಳೆಯರು ಪುರುಷರಿಗಿಂತ ಶೇ.2ರಷ್ಟು ʼತೀರ್ಮಾನ ಮಾಡಿರದʼ ಗುಂಪಿನಲ್ಲಿದ್ದಾರೆ. ಮಹಿಳೆಯರ ಪ್ರಮಾಣ ಒಟ್ಟೂ ಜನಸಂಖ್ಯೆಯ ಅರ್ಧದಷ್ಟಿರುವುದರಿಂದ ಈ ಶೇ.2 ಸಹ ದೊಡ್ಡ ಬದಲಾವಣೆಯನ್ನು ತರಬಲ್ಲದು; ಹಾಗಾಗಿ ಮುಂದಿನ ದಿನಗಳ ಪ್ರಚಾರವು ಮಹಿಳೆಯರ ದೃಷ್ಟಿಯಿಂದ ಹೆಚ್ಚು ಮಹತ್ವದ್ದು. ವಯೋಮಾನವಾರು ನೋಡುವುದಾದರೆ ಅತ್ಯಂತ ಯುವ ಮತದಾರರು (18-25 ವರ್ಷ) ಉಳಿದವರಿಗಿಂತ ಹೆಚ್ಚು ʼಇನ್ನೂ ತೀರ್ಮಾನ ಮಾಡಿರದʼ ಗುಂಪಿನಲ್ಲಿದ್ದಾರೆ; ಹಾಗೆಯೇ ಬಡವರು ಮತ್ತು ಅನಕ್ಷರಸ್ಥರೂ ಸಹ.

ಕೋಷ್ಟಕ 1: ಯಾರಿಗೆ ಮತ ಎಂದು ತೀರ್ಮಾನ ಮಾಡಿರದ ಸಮುದಾಯಗಳು

ಚುನಾವಣಾ ಸಮೀಕ್ಷೆ

ಜಾತಿವಾರು ನೋಡುವುದಾದರೆ, ಯಾವುದೇ ಜಾತಿ ನೂರಕ್ಕೆ 80ರಷ್ಟು ಒಂದು ಪಕ್ಷದ ಪರವಾಗಿ ಇಲ್ಲ ಎಂಬುದು ಈ ಚುನಾವಣೆಯಲ್ಲೂ ಸಾಬೀತಾಗುತ್ತದೆ. ಹಾಗಾಗಿ ಹೆಚ್ಚಿನ ಒಲವು ಯಾವ ಪಕ್ಷದ ಕಡೆಗಿದೆ ಎಂಬುದಷ್ಟೇ ಮುಖ್ಯವಾಗುತ್ತದೆ. ದಲಿತ ಸಮುದಾಯದ ಮತಗಳು ಇಂದಿಗೂ ಬಹುತೇಕ ಕಾಂಗ್ರೆಸ್ಸಿನ ಪರವಾಗಿಯೇ ಇವೆ ಮತ್ತು ಎಡಗೈ ಹಾಗೂ ಬಲಗೈ ಮತಗಳಲ್ಲಿ ಈ ವಿಚಾರದಲ್ಲಿ ಇರುವ ವ್ಯತ್ಯಾಸ ಬಹಳ ಕಡಿಮೆ. ಮೇಲ್ಜಾತಿ ಸಮುದಾಯಗಳು, ಲಿಂಗಾಯತರು, ಮರಾಠರು ಮತ್ತು ಈಡಿಗರು ಹೆಚ್ಚಾಗಿ ಬಿಜೆಪಿಯನ್ನು ಬೆಂಬಲಿಸುವುದು ಕಂಡುಬರುತ್ತದೆ. ಆದರೆ ಉಳಿದ ಸಮುದಾಯಗಳು ಹೇಗೆ ಕಾಂಗ್ರೆಸ್ಸಿನ ಜೊತೆಗಿವೆಯೋ ಆ ರೀತಿ ಲಿಂಗಾಯತರ ಪೂರ್ಣ ಪ್ರಮಾಣದ ಬೆಂಬಲ ಬಿಜೆಪಿಗಿಲ್ಲ.

ಕೋಷ್ಟಕ 1A: ಯಾವ ಸಮುದಾಯ ಯಾವ ಪಕ್ಷದ ಪರ ಎಷ್ಟು ಒಲವು ಹೊಂದಿದೆ?

ಕುರುಬರು, ಇತರ ಹಿಂದುಳಿದ ವರ್ಗಗಳು, ಎಸ್‌ ಸಿ ಬಲಗೈ, ಎಸ್‌ ಸಿ ಎಡಗೈ, ಇತರ ಎಸ್‌ ಸಿ, ಎಸ್‌ ಟಿ, ಮುಸ್ಲಿಂ, ಕ್ರಿಶ್ಚಿಯನ್ನರ ಹೆಚ್ಚು ಬೆಂಬಲ ಕಾಂಗ್ರೆಸ್ಸಿಗಿದೆ. ಇಲ್ಲಿಯೂ ಸಹ ಮುಸ್ಲಿಮರನ್ನೂ ಒಳಗೊಂಡಂತೆ ಯಾರೂ ಒಂದು ಪಕ್ಷಕ್ಕೆ ನೂರಕ್ಕೆ ನೂರರಷ್ಟು ಬೆಂಬಲ ಕೊಡಲು ತೀರ್ಮಾನಿಸಿಲ್ಲ.

ಚುನಾವಣಾ ಸಮೀಕ್ಷೆ

ಕೋಷ್ಟಕ 1B: ಬಡವರು, ಶ್ರೀಮಂತರ ಪೈಕಿ ಪಕ್ಷಗಳ ಆಯ್ಕೆ

ಚುನಾವಣಾ ಸಮೀಕ್ಷೆ

ಇನ್ನು ಉಳಿದ ಸಮುದಾಯಗಳಿಗೆ ಹೋಲಿಸಿದರೆ ಜೆಡಿಎಸ್‌ ಗೆ ಹೆಚ್ಚಿನ ಬೆಂಬಲ ಇರುವುದು ಒಕ್ಕಲಿಗರಿಂದ ಮಾತ್ರ. ಒಕ್ಕಲಿಗರೂ ಸಹ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಹಂಚಿಹೋಗಿದ್ದಾರೆ. ಬಿಜೆಪಿಯ ಮತ ಗಳಿಕೆಯು ಸಾಪೇಕ್ಷವಾಗಿ (ಹಿಂದಿನ ಇತರ ಸಂಸ್ಥೆಗಳ ಸಮೀಕ್ಷೆಗಳಿಗೆ ಹೋಲಿಸಿದರೆ) ಹೆಚ್ಚಾಗಿರುವುದನ್ನು ನೋಡಬಹುದು.

ಬಡವರ ಓಟು ಕಾಂಗ್ರೆಸ್ಸಿಗೆ; ಶ್ರೀಮಂತರ ಓಟು ಬಿಜೆಪಿಗೆ!!

ಆರ್ಥಿಕ ಸ್ಥಿತಿಗತಿಗನುಗುಣವಾಗಿ ಮತದಾರರ ಒಲವು-ನಿಲುವುಗಳನ್ನು ನೋಡಿದರೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆರ್ಥಿಕ ಸ್ಥಿತಿ ಹೆಚ್ಚಾಗುತ್ತಾ ಹೋದಂತೆ ಜೆಡಿಎಸ್‌ನ ಮತ ಪ್ರಮಾಣದಲ್ಲಿ ಹೆಚ್ಚೇನೂ ಬದಲಾವಣೆಯಾಗುವುದಿಲ್ಲ. ಆದರೆ, ಕಾಂಗ್ರೆಸ್‌ನ ಮತಗಳಿಕೆ ಕಡಿಮೆಯಾಗುತ್ತದೆ; ಬಿಜೆಪಿಯ ಮತಗಳಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ, ಬಡವರು ಮತ್ತು ಕೆಳಮಧ್ಯಮ ವರ್ಗಗಳು ಹೆಚ್ಚಾಗಿ ಕಾಂಗ್ರೆಸ್ಸಿಗೆ ಮತ ನೀಡಿದರೆ, ಶ್ರೀಮಂತರು ಹೆಚ್ಚು ಬಿಜೆಪಿಗೆ ಮತ ನೀಡುತ್ತಾರೆ. ಇದಂತೂ ಸಂದೇಹಕ್ಕೇ ಎಡೆಯಿಲ್ಲದ ಹಾಗೆ ಕೆಳಗಿನ ಕೋಷ್ಟಕ ನೋಡಿದರೆ ತಿಳಿಯುತ್ತದೆ.

(ವಿ.ಸೂ:ಪ್ರತಿಕ್ರಿಯೆ ನೀಡಿದವರ ಆರ್ಥಿಕ ಸ್ಥಿತಿಗತಿಯನ್ನು ಆ ಕುಟುಂಬದಲ್ಲಿ ಸಂಪಾದನೆ ಮಾಡುವ ಮುಖ್ಯ ವ್ಯಕ್ತಿಯ ಉದ್ಯೋಗ, ಸಂಪಾದನೆ ಮತ್ತು ಆಸ್ತಿಯ ಆಧಾರದ ಮೇಲೆ ತೀರ್ಮಾನಿಸಲಾಗಿದೆ)

ಒಟ್ಟು ಮತಪ್ರಮಾಣ ಯಾರಿಗೆ ಎಷ್ಟು ಎಂಬುದನ್ನು ಮತ್ತು ಯಾರಿಗೆಷ್ಟು ಸೀಟು ಎಂಬುದನ್ನು ನಾಳೆ ಪ್ರಕಟಿಸಲಾಗುವುದು.

ಈ ಸಮೀಕ್ಷಾ ವರದಿಯನ್ನೂ ಓದಿ: ಈದಿನ.ಕಾಮ್ ಸಮೀಕ್ಷೆ-6: ಬಿಜೆಪಿ ಶಾಸಕರ ವಿರುದ್ಧ ಉಳಿದವರಿಗಿಂತ ಹೆಚ್ಚು ಆಡಳಿತ ವಿರೋಧಿ ಅಲೆ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...