ಬೀದರ್ ತಾಲೂಕಿನ ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ‘ಶುದ್ಧ ಶಕ್ತಿ; ಹಸಿರು ನಾಳೆ ‘ ಧ್ಯೇಯದೊಂದಿಗೆ ಟಾಟಾ ಪಾವರ್ ರಿನೊವೆಬಲ್ ಎನರ್ಜಿ ಉರ್ಜಾ ಮಿಲನ್-2025 ರಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ವಿವಿಧ ರಾಜ್ಯಗಳ ನೂರಾರು ಮಕ್ಕಳೊಂದಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಅಗಸ್ತ್ಯ ಇಂಟರ್ನ್ಯಾಷನಲ್ ಗೈಡ ಶಿಕ್ಷಕ ಹಾವಪ್ಪ ಅಬ್ಬೆಂದೆ, ವಿಜ್ಞಾನ ಶಿಕ್ಷಕ ಗೌತಮ್ ಕುದುರೆ, ಚಿತ್ರಕಲಾ ಶಿಕ್ಷಕ ಅಶೋಕ ರಾಠೋಡ ಅವರ ಮಾರ್ಗದರ್ಶನದಲ್ಲಿ ಪಾವಕಿ ಸಂಜೀವರೆಡ್ಡಿ ನವೀಕರಣ ಇಂಧನ ರಸಪ್ರಶ್ನೆ ಸ್ಪರ್ಧೆಯಲ್ಲಿ, ಸ್ನೇಹಾ ಶಿವಕುಮಾರ, ಶಿವಾನಿ ಶಾಂತಕುಮಾರ ಪರಿಸರ ರಕ್ಷಣೆ ನಮ್ಮ ಬದ್ಧತೆ ಪೋಸ್ಟರ್ ತಯಾರಿಕಾ ಸ್ಪರ್ಧೆಯಲ್ಲಿ, ಸಿದ್ದು ಸಂಗಪ್ಪ ಮತ್ತು ಡಿ. ಪ್ರಜ್ವಲ್ ಗುರುನಾಥ ಸ್ಮಾರ್ಟ್ ಅಗ್ರಿಕಲ್ಚರ್ ಸಿಸ್ಟಮ್ ವಿಜ್ಞಾನ ಮಾದರಿ ರಚನೆ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ
ವಿದ್ಯಾರ್ಥಿಗಳ ಸಾಧನೆಗೆ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಸುನಿತಾ ಪಟವಾಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಯೋಗೇಶ್ ಎಸ್ ಬಿ, ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ, ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ಜಿಲ್ಲಾ ಮುಖ್ಯಸ್ಥ ಬಾಬುರಾವ್, ಪ್ರಾಚಾರ್ಯ ಚನ್ನಬಸವ ಹೇಡೆ ಮತ್ತು ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಸಿದ್ದಾರೆ





