ಚಿಕ್ಕಮಗಳೂರು | ಬಾಬಾ ಬುಡನ್ ಗಿರಿ: ಜಾತ್ಯತೀತ ಉರುಸ್ ಆಚರಣೆ ಅವಕಾಶ ನೀಡದ ಸರ್ಕಾರ ವಿರುದ್ಧ ಮಾ.5ಕ್ಕೆ ಪ್ರತಿಭಟನೆ

Date:

ಎಲ್ಲಾ ಧರ್ಮದವರು ಸೌಹಾರ್ದವಾಗಿ ಆಚರಿಸುವ ಆಚರಣೆ ಉರುಸ್, ಈ ಉರುಸ್ ಆಚರಣೆ ಸಂಬಂಧ ಪಟ್ಟಂತೆ 1989ರ ಆದೇಶ, 2002ರ ಆದೇಶ, 1947ರ ಮುಂಚಿನ ದಾಖಲೆಗಳು ಹಾಗೂ 1991ರ ಮುಂಚಿನ ನಿಯಮಗಳಂತೆ ಉರುಸ್ ಆಚರಣೆ ಮಾಡಬೇಕೆ ಎಂದು ದಾಖಲೆಗಳಲ್ಲಿ ಉಲ್ಲೇಖ ಕೂಡ ಆಗಿದೆ. ಆದರೇ, ಉರುಸ್ ಆಚರಣೆಗೆ ಬಂದಂತಹ ಜನರಿಗೂ ಕೂಡ ಈ ಸಲ ಅಸಮಾಧಾನವಿದೆ.

ಸರ್ಕಾರ ಆದೇಶಗಳಿಗೆ ವಿರುದ್ದವಾಗಿರುವುದಲ್ಲದೇ  ಧಾರ್ಮಿಕ ಭಾವನೆಗೆ ಹಾನಿಕರವಾಗಿದೆ. ಉರುಸ್ ಮೇಲ್ಕಂಡ ಅಧಿಕೃತ ಆದೇಶಗಳಂತೆ ಮಾತ್ರ ನಡೆಯಬೇಕು, ಹಿಂದಿನ ವರ್ಷದ ಪ್ರಕ್ರಿಯೆಯಂತೆ ನಡೆಸಲು ಯಾವುದೇ ಅಧಿಕೃತ ಆದೇಶ ಇದ್ದರೆ, ಜಿಲ್ಲಾಡಳಿತ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಪವಿತ್ರ ರಂಜಾನ್ ಮಾಸಕ್ಕೆ  ಹೊಂದಿರುವುದರಿಂದ, ರಂಜಾನ್ ಹಬ್ಬದ ನಿಯಮಗಳನ್ನು ಉರುಸ್ ವೇಳೆ ಪಾಲಿಸಬೇಕು. ಆದರೇ, ಅದನ್ನು ಬಿಟ್ಟು ಆಚರಣೆಗೆ ಜಿಲ್ಲಾಡಳಿತ ಅಡಚಣೆ ಮಾಡುತ್ತಿದೆ ಎಂದು ಬಾಬಾ ಬುಡನ್ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಈದಿನ.ಕಾಂ ಜೊತೆ ಮಾತಾಡಿದ್ದಾರೆ. 

Screenshot 2026 03 04 19 29 03 09 680d03679600f7af0b4c700c6b270fe7

ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವುದು ಎರಡು ಸಮುದಾಯದ ಸಮಾನವಾಗಿ ಆಚರಣೆ ಮಾಡಲು ಅವಕಾಶ ಕಲ್ಪಿಸಬೇಕು. ಆದರೇ, ಮೊದಲ ದಿನ ಊರೂಸ್ ಆಚರಣೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವೈಫಲ್ಯ ಕಂಡು ಬಂದಿದೆ. ಸೌಹಾರ್ದವಾಗಿ ಆಚರಿಸುವ ಹಬ್ಬ ಊರುಸ್, ಇಲ್ಲಿ ಬರುವ ಜನರಿಗೆ ಅನೇಕ ರೀತಿಯ ಅಡೆತಡೆಗಳು. ಮುಸ್ಲಿಂ ಸಮುದಾಯದವರಿಗೆ ಹಬ್ಬವನ್ನು ಆಚರಿಸುವಾಗ ಸಂಪ್ರದಾಯಕ್ಕೆ ಕಡಿವಾಣ ಹಾಕಿದೆ.ಇಲ್ಲಿನ ಶಾಕ್ ಆದ್ರಿ ಕುಟುಂಬಸ್ಥರು ಹಾಗೂ ಬಾಬಾ ಬುಡನ್ ಗಿರಿಗೆ ಬರುವಂತ ಭಕ್ತಾದಿಗಳಿಗೆ ರೂಢಿಯಲ್ಲಿರುವ ಆಚರಣೆಗಳನ್ನು ಮಾಡಲು ಬಿಡುತ್ತಿಲ್ಲ. ಈ ನಡೆ ಖಂಡನೀಯ ಈ ಕುರಿತು ಮಾ. 5ರಂದು ಜಿಲ್ಲಾಡಳಿತ ಕಛೇರಿ ಎದುರು ಪ್ರತಿಭಟನೆ ನಡೆಯುತ್ತದೆ ಎಂದು ಸಾಮಾಜಿಕ ಹೋರಾಟಗಾರ ಕೆ. ಎಲ್ ಅಶೋಕ್ ಈದಿನ.ಕಾಂ ಗೆ ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಸೀದಿಯಲ್ಲಿ ನಮಾಜ್ ವ್ಯವಸ್ಥೆ, ಸಹೆರಿ ಹಾಗೂ ಇಫ್ತಿಯಾರ್ ವ್ಯವಸ್ಥೆ ಇರಬೇಕು, ಚಿಕ್ಕಮಗಳೂರು ನಗರದಿಂದ ಇನಾಮ್ ದತ್ತ ಪೀಠ ಗ್ರಾಮದ ಬಾಬಾ ಬುಡನ್ ದರ್ಗಾಕ್ಕೆ ಬಸ್ ವ್ಯವಸ್ಥೆ ರೂಪಿಸಬೇಕು, ಪ್ರವಾಸಿಗರಿಗೆ ಚೆಕ್ ಪೋಸ್ಟ್ ತೆರೆಯವಿರಬೇಕು. ಉರುಸ್ ಕಾರ್ಯಕ್ರಮ ಐತಿಹಾಸಿಕ ಮತ್ತು ಕಾನೂನು ದಾಖಲೆಗಳಂತೆ ಮಾತ್ರ ನಡೆಯಬೇಕೆಂದು ನಾಗಮೋಹನ್ ದಾಸ್ ವರದಿ ಹೇಳಿದೆ ಅದನ್ನು ಬಿಟ್ಟು ಎಲ್ಲಾ ಆಚರಣೆಗೆ ಅಡ್ಡಿ ಪಡಿಸುತ್ತಿರುವ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನೀತಿ ಖಂಡನೀಯ ನಾಗಮೋಹನ್ ದಾಸ್ ಆಯೋಗವನ್ನು ರಚಿಸಿದ್ದೇ ಕಾಂಗ್ರೆಸ್ ಸರ್ಕಾರ ಆಯೋಗದ ವರದಿಯಂತೆಯೇ ಅವಕಾಶವನ್ನು ಕೂಡ ಕೊಡುತ್ತಿಲ್ಲ. ನ್ಯಾಯಾಲಯ 1989 ರ ಆದೇಶದಂತೆ ಯಾವ ಆಚರಣೆಗಳು ರೂಢಿಯಲ್ಲಿದ್ದವು ಅದೇ ರೀತಿಯಲ್ಲಿ ಇರಬೇಕೆಂದು ಆದೇಶಿಸಿದ್ದರು ಅದಕ್ಕೆ ಅವಕಾಶ ಕಲ್ಪಿಸಿಕೊಡುತ್ತಿಲ್ಲ. 

ಆದರೆ ಸಂಘ ಪರಿವಾರಗಳಿಗೆ ಮಾತ್ರ ಆಚರಣೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ಪ್ರತಿ ತಿಂಗಳು ಹುಣ್ಣಿಮೆ ಪೂಜೆಗೆಂದು ಹೋಗುತ್ತಾರೆ, ಮೊದಲು ದತ್ತ ಜಯಂತಿ ಒಂದೇ ಇದ್ದಿದ್ದು ಕೆಲವೇ ಜನ ಬಂದು ಭಾಗವಹಿಸುತ್ತಿದ್ದರು. ಈಗ ಶೋಭ ಯಾತ್ರೆ, ದತ್ತ ಜಯಂತಿ, ಅನುಸೂಯ ಜಾತ್ರೆ, ಅನುಸೂಯ ಜಯಂತಿ ಎಂದು ಆಚರಣೆಗೆ ಅವಕಾಶ ನೀಡುತ್ತಾರೆ. ಆದರೇ, ಮುಸ್ಲಿಂ ಭಾಂದವರಿಗೆ ಮಾತ್ರ ಉರುಸ್ ಆಚರಣೆಯನ್ನು ಆಚರಿಸಲು ಸರಿಯಾದ ಅವಕಾಶ ನೀಡದೆ ಗಂಧ ಹಾಗೂ ಹಸಿರು ಹೊದಿಕೆಯನ್ನು ಹಾಕಲು ಅವಕಾಶ ನೀಡುವುದಿಲ್ಲವೆಂದರೆ ಅದೇಷ್ಟು ಸರಿ?ದತ್ತಾಪೀಠ ದೇವಸ್ಥಾನ ಸಂರಕ್ಷಣ ಸಮಿತಿಯ ಸದಸ್ಯ ಎಂದು ಯೋಗೇಶ್ ರಾಜ ಅರಸ್ ಎಂಬಾತ ಕೋರ್ಟ್ ಅಲ್ಲಿ ಸ್ಟೈ ತೆಗೆದುಕೊಂಡು ಬರುತ್ತಾರೆ. ಅವನಿಗೆ ಇದಕ್ಕೂ ಯಾವುದೇ ಸಂಬಂಧವಿರುವುದಿಲ್ಲ, ಮಧುರಾವ್ ಎಂಬುವರು ಎರಡು ಸಮಿತಿಯ ಆಚರಣೆ ಮಾಡಬೇಕು ಎಂದು ಸಮಿತಿಗೆ ಎಂಟು ಜನರನ್ನು ಒಳಗೊಳ್ಳುವಂತೆ ರಚಿಸಲಾಯಿತು. ಆದರೇ, ಜಿಲ್ಲಾಡಳಿತ ಏಳು ಜನ ಹಿಂದೂ ಸಮುದಾಯದವರನ್ನು, ಕಾಲಪಾಷ ಎಂಬ  ಒಬ್ಬರು ಮುಸ್ಲಿಂ ಸಮುದಾಯದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಬೇಕಾದಂತಹ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಅವಕಾಶ ಕೊಟ್ಟು ಮಲ ತಾಯಿ ಧೋರಣೆ ತೋರುತ್ತಿದ್ದಾರೆ.ಈ ಸರ್ಕಾರವೇ ಬಂದ ಮೇಲೆ ಆಯೋಗ ರಚಿಸಿದ್ದು, ಭರವಸೆಯನ್ನು ಕೂಡ ಕೊಟ್ಟಿದ್ದರು. ಈಗ ನಮಗೆ ಸಂಬಂಧವಿಲ್ಲ ಹಾಗೆ ಇದ್ದಾರೆಂದು ಎದ್ದೇಳು ಕರ್ನಾಟಕ ಗೌಸ್ ಮೋಹಿದ್ದಿನ್ ಈದಿನ.ಕಾಂ ಜೊತೆ ಮಾತಾಡಿದ್ದಾರೆ.

ಎರಡು ಸಮುದಾಯದವರಿಗೆ ಸಮಾನವಾಗಿ ಆಚರಣೆಗಳನ್ನು ಆಚರಿಸಬೇಕು ಎಂದು ನಾಗಮೋಹನ್ ದಾಸ್ ವರದಿ ಹೇಳಿದೆ. ಈ ಕುರಿತು ನ್ಯಾಯಾಲಯದಲ್ಲಿ ಕೂಡ ತಿಳಿಸಿದೆ. ಆದರೇ, ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕುದೆ. ಸಂಘ ಪರಿವಾರದವರಿಗೆ ಎಲ್ಲಾ ಆಚರಣೆಗೆ ಅವಕಾಶ ಕೂಡುತ್ತಾರೆ, ಆದರೇ ಉರುಸ್ ಆಚರಣೆಗೆ ಅಡ್ಡಿ ಪಡಿಸಿದ್ದಾರೆ. ಜನರಿಗೆ ಸರಿಯಾದ ಸೌಲಭ್ಯವಿಲ್ಲ, ಹಾಗೆಯೇ, ಹಸಿರು ಬಟ್ಟೆ, ಗಂಧ ಲೇಪನಕ್ಕೂ ಅವಕಾಶ ಮಾಡಿ ಕೊಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಇದ್ದು ಈ ನಡೆ ತೂರುವುದು ಸರಿಯಲ್ಲ. ಈ ಪಕ್ಷ ಕೂಡ ಸಂಘ ಪರಿವಾರಗಳ ಜೊತೆ ಸೇರಿದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಸಾಮಾಜಿಕ ಹೋರಾಟಗಾರ ಡಾ. ಕಲ್ಕುಳಿ ವಿಠಲ್ ಹೆಗ್ಡೆ ಈದಿನ.ಕಾಂ ಗೆ ತಿಳಿಸಿದ್ದಾರೆ.

ಈ ಸಲ ಬೆಳಗಾಂನಿಂದ ಊರು ಆಚರಣೆಗೆ ಆಚರಿಸಲು ನಾವು ಮತ್ತು ನಮ್ಮ ಸ್ನೇಹಿತರು ಬಂದಿದ್ದೆವು. ಎಲ್ಲೆ ನೋಡಿದರೂ ಪೊಲೀಸರು ಮತ್ತು ಪೊಲೀಸ್ ವಾಹನಗಳು ನಿಂತಿದ್ದವು ಬಿಟ್ಟರೆ ಹೆಚ್ಚಿನದಾಗಿ ಜನ ಕೂಡ ಭಾಗವಹಿಸಲು ಅವಕಾಶ ಕೂಡ ಇಲ್ಲ ಎಂದು ನಮಗೆ ಸುತ್ತಮುತ್ತ ನೋಡಿದಾಗ ತಿಳಿಯಿತು ಎಂದು ಬೆಳಗಾಂ ಮೂಲದ ಉರುಸ್ ಗೆ ಬಂದಿದ್ದ ವ್ಯಕ್ತಿ ಈ ದಿನ. ಕಾಂ ಜೊತೆ ನೇರವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕಾನೂನು ದಾಖಲೆಗಳಂತೆಯೇ ಉರುಸು ಆಚರಣೆ ನಡೆಯಬೇಕು; ಸೈಯದ್ ಫಕ್ರುದ್ದೀನ್ ಶಾ ಖಾದ್ರಿ

ಏನೇ ಆದರೂ ಎರಡು ಸಮುದಾಯಕ್ಕೆ ಸೇರಿರುವ ಗುರು ದತ್ತಾತ್ರೇಯ ಬಾಬಾಬುಡನ್ ಗಿರಿಯಲ್ಲಿ ಯಾವುದೇ ಆಚರಣೆಗಳನ್ನು ಆಚರಿಸಲು ಸರಿಯಾದಂತಹ ಸಮಾನತೆಯವಾಗಿ ಆಚರಣೆ ಮಾಡಲು ಜಿಲ್ಲಾಡಳಿತ ಹಾಗೂ ಸರ್ಕಾರ ಅವಕಾಶ ಮಾಡಿಕೊಡಬೇಕಾಗಿತ್ತು . ಆದರೆ, ನೆರೆದಿರುವ ಜನರಿಗೂ ಕೂಡ ಈ ಕುರಿತು ಅಸಮಾಧಾನ ಮೂಡಿದೆ. ಇನ್ನ ಮುಂದಾದರೂ ಇಂತಹ ಘಟನೆಗಳಿಗೆ ಕಡಿವಾಣ ಹಾಕಿ ಮುಂದೆ ಎಲ್ಲರಿಗೂ ಸರಿಯಾದಂತಹ ಸೌಹಾರ್ದವಾಗಿ ಯಾವುದೇ ಹಬ್ಬವನ್ನು ಆಚರಣೆಯನ್ನು ಆಚರಿಸಲು ಅವಕಾಶ ಮಾಡಿಕೊಡುವುದರಿಂದ ಬೇರೆ ಬೇರೆ ಜಿಲ್ಲೆ ರಾಜ್ಯಗಳಿಂದ ಬರುವಂತಹ ಭಕ್ತಾದಿಗಳಿಗೂ ಕೂಡ ಸಮಾಧಾನಕರವಾಗಿ ಸಂತೋಷದಿಂದ ಭಾಗವಹಿಸುತ್ತಾರೆ.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...