ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಯಶ್ವಂತ್ ಕಂಚಿವರ ಮೇಲೆ ನೀಡಿರುವ ಸುಳ್ಳು ದೂರನ್ನು ಮುಕ್ತಾಯಗೊಳಿಸಿ, ಸುಳ್ಳು ದೂರು ನೀಡಿರುವ ಮೂರು ಜನ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ದಲಿತ ಸಂಘಟನೆ ಹೆಸರನ್ನು ಉಪಯೋಗಿಸಿಕೊಂಡು ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟ ಸಂಘಟನೆಯ ರಾಜ್ಯಾಧ್ಯಕ್ಷರ ಮೇಲೆ ಸುಳ್ಳು ದೂರು ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಅಖಿಲ ಕರ್ನಾಟಕ ಯುವಜನ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ ಹೇಮಂತ್ ಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಬ್ಲೂ ಆರ್ಮಿ ಶೂದ್ರ ಶ್ರೀನಿವಾಸ್, ರಾಘವೇಂದ್ರ, ಮತ್ತು ಗಿರೀಶ್ ಎಂಬ ಈ ಮೂವರು ವ್ಯಕ್ತಿಗಳಿಗೂ ದಲಿತ ಸರ್ಕಾರಿ ನೌಕರರಿಗೂ ಯಾವುದೇ ಸಂಬಂಧವಿಲ್ಲ, ಶೂದ್ರ ಶ್ರೀನಿವಾಸ್ ಎಂಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಇನ್ನೊಂದು ಸಂಘಟನೆಯ ರಾಜ್ಯಾಧ್ಯಕ್ಷರನ್ನು ತೇಜೋವಧೆ ಮಾಡಲು ದಲಿತ ಸರ್ಕಾರಿ ನೌಕರರ ಪರ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಈ ವ್ಯಕ್ತಿ ಮಾಡಿರುವ ಆರೋಪದಂತೆ ವಸತಿ ನಿಲಯಗಳಿಗೆ ರಾಜ್ಯಾಧ್ಯಕ್ಷರು ಭೇಟಿ ನೀಡಿದ್ದೇ ಆಗಿದ್ದಲ್ಲಿ ವಸತಿ ನಿಲಯದಲ್ಲಿರುವ ಅಧಿಕಾರಿಗಳು ದೂರು ದಾಖಲಿಸಬೇಕಾಗಿತ್ತು, ಆದರೆ ಯಾವುದೇ ದೂರು ನೀಡಿಲ್ಲ, ಸಂಬಂಧವಿಲ್ಲದ ವ್ಯಕ್ತಿ ಸುಳ್ಳು ಆರೋಪ ಮಾಡಿರುವುದು ಕಾನೂನಿಗೆ ವಿರೋಧವಾಗಿದೆ ಎಂದರು.
ಅನಗತ್ಯವಾಗಿ ನಮ್ಮ ರಾಜ್ಯಾಧ್ಯಕ್ಷರು ವಸತಿ ನಿಲಯಗಳಿಗೆ ಭೇಟಿ ನೀಡುವಷ್ಟು ಕಾಲಾವಕಾಶ ಅವರ ಬಳಿ ಇಲ್ಲ, ಕಾರಣ ರಾಜ್ಯದ್ಯಂತ ಯುವಜನ ವಿದ್ಯಾರ್ಥಿ ಒಕ್ಕೂಟದ ತಂಡ ಕಟ್ಟಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವಲ್ಲೇ ಸಮಯ ಸಾಕಾಗುತ್ತಿಲ್ಲ ಅಂದಮೇಲೆ ವಸತಿ ನಿಲಯಗಳಿಗೆ ಭೇಟಿ ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ನಮ್ಮ ಸಂಘಟನೆಯು ದಿನೇ ದಿನೇ ಪ್ರಬುದ್ಧ ಮಾನಕ್ಕೆ ಬರುತ್ತಿರುವುದು ಮತ್ತು ನಮ್ಮ ಏಳಿಗೆಯನ್ನು ಸಹಿಸದೇ ಇರುವುದು ಮತ್ತು ನಿಜವಾದ ದಲಿತ ಯುವಪಡೆ ವಿದ್ಯಾರ್ಥಿ ಒಕ್ಕೂಟದ ಪರವಾಗಿ ಧ್ವನಿ ಎತ್ತುತ್ತಿರುವ ನಮ್ಮ ರಾಜ್ಯಾಧ್ಯಕ್ಷರಾದ ಯಶವಂತ್ ಕಂಚಿವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಸುಳ್ಳು ದೂರನ್ನ ದಾಖಲಿಸಿದ್ದಾರೆ ಎಂದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕೇಂದ್ರ,ರಾಜ್ಯ ಅರಣ್ಯ ಕಾಯ್ದೆ: ರೈತ, ಕಾರ್ಮಿಕರಿಗೆ ಸಂಕಷ್ಟ; ಮಲೆನಾಡು ರೈತ, ಕಾರ್ಮಿಕ ಹಿತರಕ್ಷಣಾ ಸಮಿತಿ
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸುನಿಲ್, ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್, ರಾಘವೇಂದ್ರ, ಚೇತನ್, ಪ್ರತಾಪ್, ಕಾರ್ತಿಕ್, ಮದನ್, ನಿತಿನ್, ಕಾರ್ತಿಕ್, ಸುಜಯ್, ಭರತ್, ಮದನ್, ದೀಕ್ಷಯ, ಪ್ರತಾಪ್, ಪ್ರದೀಪ್, ಮುಂತಾದವರು ಉಪಸ್ಥಿತರಿದ್ದರು.





