ಚಿಕ್ಕಮಗಳೂರು | ಫೆ. 26ಕ್ಕೆ ರೈತ, ಕಾರ್ಮಿಕರಿಂದ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ; ಕರ್ನಾಟಕ ಜನಶಕ್ತಿ 

Date:

ಮಲೆನಾಡಿನ ರೈತ ಕಾರ್ಮಿಕರಿಗೆ ಹಕ್ಕು ಪತ್ರ ನೀಡದೆ ಸರ್ವೆ, ಮೀಸಲು ಅರಣ್ಯ ಮಾಡಲು ಹುನ್ನಾರ ನಡೆಸುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಕರ್ನಾಟಕ ಜನಶಕ್ತಿ ವತಿಯಿಂದ ಕೊಪ್ಪ ತಾಲೂಕು ಗಡಿಕಲ್ ಬಳಿ ಗುರುವಾರ ಪ್ರತಿಭಟನೆ ಜೊತೆಗೆ ಕಾಲ್ನಡಿಗೆ ಜಾಥಾ ಕೈಗೊಂಡಿದ್ದಾರೆ.

ಕಾಡು ಪ್ರಾಣಿಗಳು ದಾಳಿ ನಡೆಸಿ. ಆನೆ ತುಳಿದು ಹತ್ತಾರು ಜನ ರೈತ, ಕಾರ್ಮಿಕರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು, ಯಾವ ಸೂಚನೆ ನೀಡದೆ ನಾನಾ ಕಡೆಗಳಲ್ಲಿ ಸರ್ವೆ ಕಾರ್ಯ ಕೈಗೊಂಡಿರುವುದು. ಖಂಡನೀಯ. ರೈತ, ಕಾರ್ಮಿಕರು, ತಮ್ಮ ಭೂಮಿ. ವಸತಿಗಳನ್ನು ಕಳೆದುಕೊಳ್ಳುವ, ಹಾಗೂ ಎಲ್ಲಿ ತಮ್ಮನ್ನೆಲ್ಲಾ ಒಕ್ಕಲೆಬ್ಬಿಸುತ್ತಾರೋ ಎಂಬ ಆತಂಕದಲ್ಲಿ ದಿನ ದೂಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನಲ್ಲಿ ರೈತರು ಬೆಳೆದಿರುವ ಅತೀ ವೃಷ್ಟಿ ಮಳೆಯಿಂದ ಬೆಳೆದ ಅಡಿಕೆ, ಕಾಫಿ, ಕಾಳು ಮೆಣಸಿನ ಉತ್ಪತ್ತಿ ಅರ್ಧ ಭಾಗ ಕಡಿಮೆಯಾಗಿದೆ. ಈ ವಿಚಾರವಾಗಿ ರೈತರು ಕಂಗಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ  ಅರಣ್ಯ ಇಲಾಖೆ ಜನ ವಿರೋಧಿ, ರೈತ ವಿರೋಧಿ ಕಾಯ್ದೆ, ಕಾನೂನುಗಳು ಜನರನ್ನು ದಿಕ್ಕೇ ತೋಚದಂತೆ ಮಾಡಿದೆ.

ಸೆಕ್ಷನ್ 4(1), ಸೆಕ್ಷನ್ 17 ಮೂಲಕ ಮೀಸಲು ಅರಣ್ಯ ಮಾಡುವ ಅರಣ್ಯ ಇಲಾಖೆಯಿಂದ ಡೀಮ್ಸ್ ಫಾರೆಸ್ಟ್ ಸಮಸ್ಯೆ ಇತ್ಯರ್ಥವಾಗಿಲ್ಲ. ಇಲಾಖೆಯವರು ಕಾಡಿನ ನಡುವೆ ಗಿಡ ನೆಡುವ ಕೆಲಸ, ಸರ್ವೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಎಷ್ಟರ ಮಟ್ಟಿಗೆಂದರೆ, ಕಳೆದ 8-10 ತಿಂಗಳಲ್ಲಿ ಆನೆ ತುಳಿತಕ್ಕೆ ಬಲಿಯಾಗಿ 8 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೊನ್ನೆಯಷ್ಟೆ ಹುಣಸೇಹಳ್ಳಿ ಸಮೀಪದ ಹ್ಯಾರಂಬಿ ವ್ಯಾಪ್ತಿಯ ಪುರ ಎಂಬ ಗ್ರಾಮದಲ್ಲಿ ಒಂದು ಎಸ್ಟೇಟ್ ಕೆಲಸಕ್ಕೆ ಬಂದಿದ್ದ, ಹಾವೇರಿ ಮೂಲದ ಒಬ್ಬ ಕಾರ್ಮಿಕ ಆನೆ ತುಳಿತಕ್ಕೆ ಒಳಗಾಗಿ, ಜೀವ ಕಳೆದುಕೊಂಡಿದ್ದಾರೆ. ಕಾಡಾನೆ ಮಾನವ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿರುವ ಜೀವಗಳಿಗೆ ಬೇಲೇನೆ ಇಲ್ಲದ ರೀತಿಯಲ್ಲಿ ಅರಣ್ಯ ಇಲಾಖೆಯವರು, ಸರ್ಕಾರಗಳು ನಡೆದುಕೊಳ್ಳುತ್ತಿವೆ ಎಂದು ಕರ್ನಾಟಕ ಜನಶಕ್ತಿ ಮುಖಂಡರು ಈದಿನ. ಕಾಂ ಜೊತೆ ಮಾತಾಡಿದರು. ಅರಣ್ಯ ಇಲಾಖೆಯಿಂದ ಇತ್ತೀಚೆಗಷ್ಟೇ, ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ತಾಳು, ಬಂಗಾಡಿ, ನಕ್ತುಗೋಳಿ, ಹಂಚಿನ, ಕೊಡಿಗೆ ಹಳ್ಳಿಗಳ ಸಹಜ ಕಾಡಿನ ಗುಡ್ಡದ ತುಂಬೆಲ್ಲಾ ಗುಂಡಿ ಹೊಡೆದು. ಸಹಜ ಅರಣ್ಯದ ನಡುವೆ ಕೃತಕ ಕಾಡನ್ನು ಬೆಳೆಸುತ್ತೇವೆ ಎಂದು ಹೋಗಿ, ಅಲ್ಲಿನ ಜನರ ಪ್ರತಿಭಟನೆಯನ್ನು ಎದುರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Screenshot 2026 02 24 22 00 43 20 7352322957d4404136654ef4adb64504

ಕಳೆದ ನೂರಾರು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿರುವ ಆದಿವಾಸಿ ರೈತ ಸಮುದಾಯ, ನಾಗರ ಬನ, ದೇವರ ಬನ, ಹುಲ್ಲು ಬನ್ನೇ, ಸೊಪ್ಪಿನ ಗುಡ್ಡ. ಹೀಗೆ ಹಲವು ಹೆಸರುಗಳಲ್ಲಿ. ತಮ್ಮ ಸುತ್ತ ಮುತ್ತಲು ಇರುವ ಕಾಡನ್ನು ಉಳಿಸಿಕೊಂಡು, ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಇಂತಹ ಜನ ವಿರೋಧಿ ಯೋಜನೆಯಿಂದ ಮಲೆನಾಡಿಗರನ್ನೇ ನಿದ್ದೆಯನ್ನು ಕೆಡಿಸಿದೆ. ಈ ಕುರಿತು ಮಲೆನಾಡಿನ ಎಲ್ಲಾ ರೈತ ಕಾರ್ಮಿಕರ ಸಮಸ್ಯೆಯಾಗಿದೆ. ಗಂಭೀರತೆಯನ್ನು ಅರಿತು ಇದೇ ತಿಂಗಳು 26ಕ್ಕೆ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿದೆ.ಎಂದು ಕರ್ನಾಟಕ ಜನಶಕ್ತಿ ಮುಖಂಡರು ತಿಳಿಸಿದರು.

ಹಕ್ಕೊತ್ತಾಯಗಳು :

1) ಬದುಕಾಗಿ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತ, ಕಾರ್ಮಿಕರ ಜಮೀನು ಹಾಗೂ ವಸತಿಗಳಿಗೆ ಈ ಕೂಡಲೇ ಹಕ್ಕು ಪತ್ರ ನೀಡಬೇಕು. 2) ಎಲ್ಲಾ ಗ್ರಾಮಗಳಲ್ಲಿ 1980 ರಿಂದ ಈಚೆಗೆ ದಲಿತ,ಆದಿವಾಸಿಗಳಿಗೆ ಮೀಸಲಾಗಿಟ್ಟಿದ್ದ .(sc/st) ಗೆ ಸರ್ಕಾರವೇ ಮಂಜೂರು ಮಾಡಿರುವ ಭೂಮಿಗೆ ಹಲವರಿಗೆ ಪಹಣಿ, ಪಟ್ಟ ಕೆಲವರಿಗೆ ಇದ್ದು, ಇನ್ನೂ ಮಂಜೂರಾಗಿದ್ದು, ಪಹಣಿಯಲ್ಲಿ ದಾಖಲಾಗಿಲ್ಲದ,ಭೂಮಿಯನ್ನು, ಸೆಕ್ಷನ್ 4, ಮತ್ತು ಸೆಕ್ಷನ್ 17 ಎಂದು ಘೋಷಣೆ ಮಾಡುವ ತಯಾರಿ ನಡೆದಿದ್ದು, ಯಾವುದೇ ಕಾರಣಕ್ಕೂ ಮೀಸಲು ಅರಣ್ಯ ಎಂದು ಘೋ ಷಣೆ ಮಾಡಬಾರದು. 3) ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದೆ, ಯಾವುದೇ ಸರ್ವೆ ಕಾರ್ಯ ಮುಂದುವರಿಸಬಾರದು. 4) ಜನ ಪರಿಸರದ ಉಳಿವಿಗಾಗಿ ಮಲೆನಾಡಿನ ಜನಪರ ಹೋರಾಟಗಾರರು ಸಾಹಿತಿಗಳು, ಜನ ಪರಿಸರವಾದಿಗಳು, ಹಾಗು ಪರಿಸರ ತಜ್ಞರನ್ನೊಳಗೊಂಡ ಒಂದು ಅಧ್ಯಯನ ಸಮಿತಿಯನ್ನು ಈ ಕೂಡಲೇ ರಚಿಸಬೇಕು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...